ಭಾರತ ಸಂಗೀತ, ಸಾಹಿತ್ಯ,ಸಿನಿಮಾ, ಜಾನಪದ,ಕಲೆ, ಸಾಹಿತ್ಯ ಹೀಗೆ ಹಲವಾರು ರೀತಿಯ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ,ಅದರಲ್ಲಿ ರಂಗಭೂಮಿಯು ಹೊರತಗಿಲ್ಲ. ರಂಗಭೂಮಿ ಕೇವಲ ನಾಟಕವಾಗಿ ಪರಿವರ್ತನೆಗೊಳ್ಳದೇ, ಸ್ವಾತಂತ್ರ್ಯದ ಕಲ್ಪನೆ ಮೂಡಿಸಲು ಮತ್ತು ನಾಗರಿಕ ಸಮಾಜವನ್ನು ಬೆಳೆಸಲು ಧಾರ್ಮಿಕ ಪೌರಣಿಕ ನಾಟಕಗಳನ್ನು ಆಡಿ ಜನರ ಪರಿವರ್ತನೆ ಮಾಡುವುದರಲ್ಲಿ ರಂಗಭೂಮಿ ಸಾಕಷ್ಟು ಯಶಸ್ವಿಯಾಗಿದೆ. ಇಂದಿನ ದಿನಗಳಲ್ಲಿ ಅವಸಾನದ ಹಾದಿ ಹಿಡಿದಿರುವ ರಂರಭೂಮಿಗೆ ರಂಗು ತರಲು ಹೊರಟಿದೆ ಬಳ್ಳಾರಿಯ ರಂಗತೋರಣ ಬಳಗ.
ಹೌದು! ಬಳ್ಳಾರಿಯ ರಂಗತೋರಣ ಸಂಸ್ಥೆ ಕಳೆದ ಒಂದು ದಶಕಗಳಿಂದ ತನ್ನ ರಂಗಭೂಮಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. ವಿಶೇಷವಾಗಿ ವಿದ್ಯಾರ್ಥಿ ಯುವ ಜನರಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ, ಕಾಳಜಿ, ಹುರುಪು, ಹುಮ್ಮಸ್ಸು, ಚೈತನ್ಯ ಮೂಡಿಸಲು ವಿವಿಧ ರಂಗ ಚಟುವಟಿಗಳನ್ನು ನಡೆಸಿಕೊಂಡು ಹಲವಾರು ಯುವ ರಂಗ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ.
ವಿವಿಧ ರಂಗ ಚಟುವಟಿಕೆಗಳು
ಯುವ ಜನರರಲ್ಲಿ ಸೃಜನಶೀಲ ರಂಗಾಸಕ್ತಿಯನ್ನು ಬೆಳೆಸುವ ಸಲುವಾಗಿ ಬಳ್ಳಾರಿಯ ರಂಗತೋರಣ ಬಳಗ ವರ್ಷವೀಡಿ ಹಲವಾರು ರಂಗ ಚಟುವಟಿಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದವರಿಗೆ ರಂಗ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ರಂಗಭೂಮಿಯ ನಟನೆಯ ಬಗ್ಗೆ ತರಬೇತಿಯನ್ನು ನೀಡುತ್ತಿದೆ. ರಂಗ ಸವಾರಿ, ಸಂಕ್ರಾಂತಿ ರಂಗ ಸಂಭ್ರಮ, ರಂಗ ಚಾವಡಿ, ರಂಗ ಕಮ್ಮಟ, ರಂಗ ಮುಂಗಾರು ಹೀಗೆ ರಂಗಭೂಮಿಗೆ ಸಂಬಂಧಪಟ್ಟಂತೆ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ರಂಗಭೂಮಿಗೆ ಮತ್ತೆ ರಂಗನ್ನ ತರಲು ಹೊರಟಿದೆ.ರಂಗತೋರಣದಲ್ಲಿ ಹೊಸ ರಂಗು.
ರಂಗತೋರಣ ಬಳಗ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಯನ್ನು ಉಳಿಸುವ ಕಾರ್ಯದಲ್ಲಿ ತಲ್ಲೀಣವಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಈ ಬಾರಿ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 10ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸಿ ಯಶಸ್ವಿಯಾಗಿದೆ. ಈ ನಾಟಕೋತ್ಸವದಲ್ಲಿ ವಿನೂತನ ಪ್ರಯೋಗಳನ್ನು ರಂಗಾಸಕ್ತರು ಕಾಣಬಹುದು.ಕಲಾತೋರಣ..
ಇದು ರಂಗಭೂಮಿಗೆ ಸಂಬಂಧಪಟ್ಟಂತಹ ವಸ್ತು ಪ್ರದರ್ಶನ. ಪ್ರತಿವರ್ಷವೂ ರಂಗತೋರಣದ ಆವರಣದಲ್ಲಿ ಈ ಕಲಾತೋರಣವನ್ನು ಆಯೋಜಿಸುತ್ತಾರೆ. ಅಷ್ಟೇ ಅಲ್ಲದೇ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ. ಇನ್ನೊಂದು ಈ ಕಲಾತೋರಣ ವೈಶಿಷ್ಟತೆ ಎಂದರೆ ಇಲ್ಲಿ ವಿದ್ಯಾರ್ಥಿಗಳು ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಕಲಾತೋರಣದಲ್ಲಿ ಪ್ರದರ್ಶನಗೊಂಡರೆ ಅವರಿಗೆ 1000ರೂ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ರಂಗಭೂಮಿಯ ಕಡೆಗೆ ಆಸಕ್ತಿ ತೋರಲಿ ಎಂಬುದೇ ಈ ಪ್ರದರ್ಶನದ ಸದಾಶಯ.ರಂಗಚಾವಡಿ..
ವೇದಿಕೆಯ ಮೇಲೆ ನಟನೆ ಮಾಡಿದ ನಟನಾಕಾರರು, ತಮ್ಮ ನಟನೆಯ ಬಗ್ಗೆ ಹಾಗೂ ರಂಗಭೂಮಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ವೇದಿಕೆಯೆ ರಂಗಚಾವಡಿ. ಇದರ ಒಂದು ವಿಶೇಷತೆ ಎಂದರೆ ವೇದಿಕೆಯ ಮೇಲೆ ತಮ್ಮ ನಟನೆ ಮುಗಿದ ನಂತರ ಅದೇ ಉಡುಪಿನಲ್ಲಿ ಈ ವೇದಿಕೆಗೆ ಬಂದು ತಮ್ಮ ಅನುಭವನ್ನು ಹಂಚಿಕೊಳ್ಳಬೇಕು. ಬಣ್ಣ ಮಾಸುವ ಮುನ್ನ ಒಂದು ಅನುಭವ.
ರಂಗಬೆಳದಿಂಗಳು..
ನಾಟಕ ನೋಡಿ ದಣಿದ ಮನಸ್ಸುಗಳಿಗೆ ಒಂದು ಹುಮ್ಮಸ್ಸು ತರಲು ಹಾಗೂ ಪಾತ್ರಧಾರಿಗಳ ಬಹುಮುಖ ಪತ್ರಿಭೆಗಯನ್ನು ತೋರ್ಪಡಿಸಲು ರಂಗತೋರಣದ ಆವರಣದಲ್ಲಿ ಇಳಿಸಂಜೆಯಲ್ಲಿ ಆಯೋಜಿಸುವ ಫೈರಕ್ಯಾಂಫ್. ಇಲ್ಲಿ ಹಾಡು, ನೃತ್ಯ, ಅಭಿನಯ, ಮಿಮಿಕ್ರಿಯೆ, ಕವನಗಳು, ಹೀಗೆ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸುತ್ತಲೂ ನೆರೆದಿದ್ದ ಜನರ ನಡುವೆ ಬೆಂಕಿಯನ್ನು ಹಾಕಿ ಅದರ ಸುತ್ತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.ವೈಭವ ಯಾತ್ರೆ.
ನಾಟಕೋತ್ಸವದ ಸರ್ವಾಧ್ಯಕ್ಷರನ್ನು ಆನೆ ಅಂಬಾರಿಗಳ ಮೂಲಕ ನಾನಾ ಕಲಾತಂಡಗಳ ಮೂಲಕ ಅವರನ್ನು ಕರೆ ತರುವ ಒಂದು ಯಾತ್ರೆಯೇ ವೈಭವ ಯಾತ್ರೆ. ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಈ ಯಾತ್ರೆಗಳಲ್ಲಿ ನಾನಾ ವೇಷಭೂಷಣಗಳನ್ನು ತೊಟ್ಟುಕೊಂಡು ಸುತ್ತಲೂ ನೆರೆದಿದ್ದ ಜನರನ್ನು ರಂಜಿಸುತ್ತಾರೆ. ವೈಭವ ಯಾತ್ರೆಯಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ತೊರುತ್ತದೆಯೋ ಆ ತಂಡಕ್ಕೆ ಬಹುಮಾನವನ್ನು ನೀಡಲಾಗುತ್ತದೆ. ಇದರ ಆಯ್ಕೆಯನ್ನು ನೆರೆದಿದ್ದ ಜನರೆ ಮಾಡುತ್ತಾರೆ. ಈ ಯಾತ್ರೆಯನ್ನು ನೋಡುವುದು ಒಂದೇ ಮೈಸೂರು ದಸರೆಯನ್ನು ನೋಡುವುದು ಒಂದೆ.ಒಟ್ಟಾರೆಯಾಗು ರಂಗತೋರಣ ಬಳಗ ರಂಗಭೂಮಿಯಲ್ಲಿ ವಿಭಿನ್ನ , ವಿಶಿಷ್ಟ ಪ್ರಯೋಗಳನ್ನು ಮಾಡುತ್ತಾ, ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ, ರಂಗ ಕಲೆಯನ್ನು ಉಳಿಸಿ ಬೆಳೆಸುತ್ತಿದೆ. ಈ ಕಾರ್ಯದ ಹಿಂದೆ ಅದೇಷ್ಟೂ ಕೈಗಳು ಅವಿರತವಾಗಿ ಶ್ರಮಿಸುತ್ತಿವೆ. ಅಂತಹ ಕಾಣದ ಕೈಗಳಿಗೆ ನಮ್ಮದೊಂದು ನಮನ. ಇವರ ಈ ಕಲಾ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ನಮ್ಮ ರಂಗಭೂಮಿ ಮತ್ತೆ ರಂಗಾಗಲಿ ಎಂಬುದೇ ಜನರ ಆಶಯ.
ಮಂಜುನಾಥ ಗದಗಿನ
8050753148