Friday, 21 October 2016

ಇವರು ಮಾಡಿದ ತಪ್ಪಾದರೂ ಏನು?



   ಬದುಕು ಎಷ್ಟೋಂದು ಸೂಚಿಗ ನೋಡಿ, ತುತ್ತು ಅನ್ನಕ್ಕಾಗಿ, ಮೈ ಮುಚ್ಚೋ ಬಟ್ಟೆಗಾಗಿ, ಸಾವಧಾನವೇ ಇಲ್ಲದೆ ಹಗಲಿರುಳು ದುಡ್ಡಿಗಾಗಿ ಧನ ದುಡಿದ ಹಾಗೆ ಇದ್ದ ಬದ್ದ ಒತ್ತಡವನ್ನು ಮೈ ಮೇಲೆ ಹಾಕಿಕೊಂಡು ದುಡಿಯುತ್ತಿವೆ. ಇದೇಲ್ಲಾ ಯಾರಿಗೊಸ್ಕರ ಅಂತ ಹಾಗೆ ದುಡಿಯುವವರನ್ನ ಒಂದು ಮಾತು ಕೇಳಿ ಅವರು ನೀಡುವ ಉತ್ತರ ಒಂದೇ  ಈನ್ಯಾರಿಗೆ ನಮ್ಮ ವೃದ್ದಾಫ್ಯದಲ್ಲಿ ನಮ್ಮನ್ನ ನೋಡಿಕೊಳ್ಳೊ ಮಕ್ಕಳಿಗೆ  ಎಂಬ ಉತ್ತರ ನೀಡುವದು ಗ್ಯಾರಂಟಿ. ಆದರೆ ಆ ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಂದಿರನ್ನ ಎಷ್ಟರ ಮಟ್ಟಿಗೆ ಚನ್ನಾಗಿ ನೋಡ್ಕೋಳ್ತಾರೋ! ಆ ದೇವರಿಗೆ ಗೊತ್ತು. ಆದರೆ ಕೆಲವೊಂದಿಷ್ಟು ಮಕ್ಕಳು ತಮ್ಮ ಸಾಕಿದ ತಂದೆ-ತಾಯಿಗಳನ್ನು  ಕಾಲ ಕಸವನ್ನಾಗಿಸಿ ಮನೆ ಬಿಟ್ಟು ಹಾಕುತ್ತಾರೆ. ಪಾಪಾ ಆ ಮುಗ್ದ ಜೀವಗಳು ವಿಧಿಯಿಲದ್ಲೆ ಶಹರಗಳ ಕಡೆ ಮುಖ ಮಾಡಿ ಈ ರೀತಿ ಜೀವನ ಸಾಗಿಸುತ್ತಿರುವದು ಕೆದರಕ.
  ಹೌದು! ಇಂತಹ ಜನರು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಆದರೆ ಇವರು ಯಾರು? ಎಲ್ಲಿಂದ ಬಂದವರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಹೀಗೆ ಮಹಾನಗರಗಳಿಗೆ ಬರುವವರು ವೃದ್ದರೇ ಹೆಚ್ಚಾಗಿದ್ದಾರೆ. ಆದರೆ ಜನರನ್ನು ಕಾಡುವ ಪ್ರಶ್ನೆಗಳು ಎರಡು. ಇವರನ್ನು ಇಲ್ಲಿ ತಂದು ಬಿಡುತ್ತಿರುವವರು ಯಾರು? ಅದರಲ್ಲೂ ವೃದ್ದರನ್ನು ತಂದು ಬಿಡುತ್ತಿರುವುದು ಯಾಕೆ? ಇಂತಹ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಪ್ರಶ್ನೆಗಳು ಪ್ರಶ್ನೆಗಳೇ ಆಗಿ ಉಳಿದಿವೆ.
   ಆದರೆ ವೃದ್ದರನ್ನು ತಂದು ಬಿಡುತ್ತಿರುವುದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ವಯಸ್ಸಾದವರ ಜೊತೆ ಎಲ್ಲಿ ಇರುವದು, ಅವರ ಕಾಟ ಹೇಗೆ ಸಹಿಸಿಕೊಳ್ಳುವುದು ಎಂದು ಹೆತ್ತ ಮಕ್ಕಳು ಅಥವಾ ಸಂಬಂಧಿಕರೆ ತಂದು ಬಿಡುತ್ತಿದ್ದಾರೆ ಎಂಬ ವಾದ ಒಂದು ಕಡೆ ಕೇಳಿ ಬರುತ್ತಿರುವುದು ಮಾತ್ರ ನಿಜ. ಮಕ್ಕಳನ್ನು ಹೆತ್ತು-ಹೊತ್ತು, ಸಾಕಿ, ಸಲುಹಿ, ಅವರು ಮಾಡಿದ ಅದೆಷ್ಟೋ ತಪ್ಪುಗಳನ್ನು ಮನ್ನಿಸಿ, ಅವರಿಗೊಂದು ಉಜ್ವಲವಾದ ಭವಿಷ್ಯ ನಿರ್ಮಾಣ ಮಾಡಿರುತ್ತಾರೆ. ಅದೇ ಮಕ್ಕಳು ದೊಡ್ಡವರಾದ ಮೇಲೆ ತಂದೆ-ತಾಯಿ ತಮಗೊಸ್ಕರ ಮಾಡಿದ ತ್ಯಾಗ ಮರೆತು, ಅವರು ಮಾಡಿದ ಸಣ್ಣ-ಪುಟ್ಟ ತಪ್ಪುಗಳಿಗೂ ಬೈದು,ಹಿಯಾಳಿಸಿ, ಮನೆ ಬಿಟ್ಟು ಹೊರಹಾಕುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಇಂತಹವುಗಳಿಗೆ ಜ್ವಲಂತ ಸಾಕ್ಷಿ ಎಂಬಂತೆ ನಗರದ ಪ್ರತಿಯೊಂದು ಗಲ್ಲಿ,ಗಲ್ಲಿಗಳಲೂ ಇಂತಹ ವೃದ್ದರು ಕಾಣಸಿಗುತ್ತಾರೆ.
 ವೃದ್ದರನ್ನು ಮಹಾನಗರಗಳಲ್ಲಿ ಬಿಟ್ಟು ಹೋದ ಸಂಬಂಧಿಕರು ಅಥವಾ ಮಕ್ಕಳು ಆ ಮೇಲೆ ಅವರು ಏನಾದರೂ ಎಂದು ತಲೆಹಾಕಿಕೂಡ ನೋಡುವುದಿಲ್ಲ. ಆದರೆ ಗೊತ್ತು-ಗುರಿಯಿಲ್ಲದ ಊರಿಗೆ ಬಂದ ವೃದ್ದರೂ ಏನು ಮಾಡಬೇಕೆಂದು ತಿಳಿಯದೆ, ಮಾನಸಿಕವಾಗಿ ಕುಗ್ಗಿ ಮಾನಸಿಕ ರೋಗಿಗಳಾಗಿ, ಜಗತ್ತಿನ ಸಂಪರ್ಕ ಕಳೆದುಕೊಂಡು ನಮ್ಮದೇ ಲೋಕದಲ್ಲಿ ಇದ್ದು ಬಿಡುತ್ತಿದ್ದಾರೆ.
  ಇವರ ಈ ಸ್ಥಿತಿ ನೋಡಿ ಜನರು ಅಯ್ಯೋ ಪಾಪವೆಂದು 1 ರೂ ಅಥವಾ 2 ರೂ, ಹಾಕಿ ಹೋಗುತ್ತಾರೆ, ಇನ್ನೂ ಕೆಲವರು ಇವರ ಮುಂದೆ ಹಾದು ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ತಾಸು ಗಂಟಲೇ ಹೋಟೆಲ್ ಮುಂದೆ ನಿಂತರೆ, ಅವರು ನೀಡುವ ಹಳಸಿದ ಊಟವೇ ಇವರಿಗೆ ಮೃಷ್ಟಾನ್ನವಾಗಿರುತ್ತದೆ. ಇವರಿಗೆಂದು ಒಂದು ಸೂರು ಇಲ್ಲ. ಎಲ್ಲೆಂದರಲ್ಲಿ ಮಲಗಿ ಏಳುತ್ತಾರೆ. ಇನ್ನೂ ಮೈತುಂಬ ಗಾಯಗಳಾಗಿದ್ದರು, ಅದೇ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.
   ಇಂತಹ ಜನರ ಸ್ಥಿತಿ ನೋಡಿ, ಎಂತವರ ಹೃದಯ ಕೂಡಾ ಮರುಗದೇ ಇರದು, ಆದರೇ ಪ್ರಜ್ಞಾವಂತ ಜನರ ಪ್ರಶ್ನೆ ಇವರು ಮಾಡಿದ ತಪ್ಪಾದರೂ ಏನು? ಎಂಬುದು.
 ಮಂಜುನಾಥ ಗದಗಿನ
8050753148

 

Tuesday, 11 October 2016

ಮತ್ತೆ ಹುಟ್ಟಿ ಬಾ ನನ್ನಪ್ಪ ..


ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯೇಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೆ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತಿರುಗುತ್ತಿದ್ದ. ಆದರೆ, ಈಗ ಅಪ್ಪ ನನ್ನೊಟ್ಟಿಗಿಲ್ಲ. ಆದರೆ, ಅಪ್ಪ ಕೊಟ್ಟು ಹೋದ ನೆನಪುಗಳು ಮಾತ್ರ ಎಡಬಿಡದೇ ಕಾಡುತ್ತಿವೆ.
ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೆ ಪಾರ್ಶ್ವವಾಯು ಹೊಡು ಮೂಲೆ ಗುಂಪಾಗಿ ಹೋದದ್ದು ಈಗ ಇತಿಹಾಸ ಮಾತ್ರ. ಪಾಶ್ವವಾಯು ತಗುಲಿ ಬರೋಬ್ಬರಿ 12 ವರ್ಷ ನನ್ನಪ್ಪ ನನ್ನೊಟ್ಟಿಗೆ ಇದ್ದದ್ದು ಮಾತ್ರ ವಿಸ್ಮಯ. ಹೌದು! ನಮ್ಮ ಊರಲ್ಲೇ ಪಾರ್ಶ್ವವಾಯು ತಗುಲಿ 12 ವರ್ಷ ಜೀವಿಸಿದ್ದ ಒಂದೇ ಒಂದು ಕುರುಹುಗಳು ಸಿಗುವುದಿಲ್ಲ. ಹೀಗಂತ ಊರಿನವರೇ ಮಾತನಾಡಿಕೊಳ್ಳುತ್ತಿದ್ದರು. ಅಪ್ಪನ ನಂತರ ನಾಲ್ಕೈದು ಜನರಿಗೆ ಪಾರ್ಶ್ವವಾಯು ಹೊಡೆಯಿತು. ಅವರ‌್ಯಾರು ಬಹುದಿನ ಬದುಕದೇ ಶಿವನ ಪಾದ ಸೇರಿಕೊಂಡರು. ಆದರೆ, ಅಪ್ಪನದ್ದು ಗಟ್ಟಿ ಜೀವ.
ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು,  ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಃಖಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ.
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ. ಈಗ ಊರಿಗೆ ಹೋದರೆ, ಹಸನ್ಮುಖಿಯಾಗಿ ಕುರ್ಚಿ ಮೇಲೆ ಕುಳಿತು ಸ್ವಾಗತಿಸಲು ನನ್ನಪ್ಪ ನನ್ನೊಟ್ಟಿಗಿಲ್ಲ. ಅಪ್ಪ ಇಲ್ಲದ ಬದುಕು ಇಂದೇಕೋ ಬರಿದಾಗಿ ಕಾಣಿಸುತ್ತಿದೆ. ಅಪ್ಪನ ನೆನೆಪುಗಳು ಮೈಯಲ್ಲ ಅಪ್ಪಿಕೊಂಡು ಕಾಡಿ, ಅರೆಬರೆ ನೆನೆಪುಗಳನ್ನು ಕೆಣಕುತ್ತಿವೆ. ಏನೇ ಆಗಲಿ ಮತ್ತೆ ಅಪ್ಪ ಮತ್ತೆ ಹುಟ್ಟಿ ಬಾ..
ಮಂಜುನಾಥ ಗದಗಿನ
8050753148 

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...