Wednesday, 25 September 2019

"ಪೈಲ್ವಾನ್" ಅಖಾಡದಲ್ಲಿ ರಾಮದುರ್ಗ ನಗೆ ಟಾನಿಕ್


"ಪೈಲ್ವಾನ್" ಕಿಚ್ಚ ಸುದೀಪ ಅಭಿನಯದ ಸದ್ಯದ ಬಾಕ್ಸ್ ಆಫೀಸನಲ್ಲಿ ಧೂಳ್ ಎಬ್ಬಿಸುತ್ತಿರುವ ಚಿತ್ರ. ಇಂತಹ ದೊಡ್ಡ ಚಿತ್ರದಲ್ಲಿ ಹಳ್ಳಿಯಿಂದ ಬಂದ ಪ್ರತಿಭೆಯೊಂದು ಕರುನಾಡಿನ ಜನರನ್ನು ತನ್ನ ಅಮೋಘ ಅಭಿನಯದ ಮೂಲಕ ನಗೆಗಡಲಿ ತೇಲುವಂತೆ ಮಾಡಿದೆ.
ಹೌದು!ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ.
ರಂಗಭೂಮಿಯಿಂದ ಬಂದ ಪ್ರತಿಭೆಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯದ ಮೂಲಕ ಛಾಪು ಮೂಡಿಸುತ್ತಿದೆ ಅಂದ್ರೆ ಸಣ್ಣ ಮಾತಲ್ಲ. ಪೈಲ್ವಾನ್ ಚಿತ್ರದಲ್ಲಿ ಸುದೀಪ ಪ್ರಥಮ ಹಿರೋ ಆಗಿ ನಟಿಸಿದ್ದರೆ, ಅಪ್ಪಣ್ಣ ಆ ಚಿತ್ರದ ಎರಡನೇ ಹಿರೋ ಆಗಿ ಎಲ್ಲರ ಮನಸ್ಸು ಗೆದ್ದು ನಾಡಿನ ಮನೆ ಮನದ ಮಾತಾಗಿದ್ದಾರೆ. "ಪಂಚ ಡೈಲಾಗ್ ಮೂಲಕ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಿರ್ದೇಶಕ ಕೃಷ್ಣ ಅವರು ನನಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದು, ಸುದೀಪ್ ಸರ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದು ನನ್ನ ಬದುಕಿನ ಸಾರ್ಥಕತೆ ಅಂತಾ ಭಾವಿಸುತ್ತೇನೆ ಎನ್ನು ಇವರ ಮಾತುಗಳೇ ಹೇಳುತ್ತವೆ ಇವರ ಹೃದಯ ವೈಶಾಲತೆ ಹಾಗೂ ಅದ್ಭುತ್ ನಟ ಎಂದು.
ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.

ಧಾರಾವಾಹಿ, ಸಿನಿಮಾದಲ್ಲಿ ನಟನೆ:

ತರ‌್ಲೆ ತುಂಟಾಟಗಳಿಂದ ಎಲ್ಲರ ಕಾಲೆಳೆಯುತ್ತಾ, ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗಿದ್ದ ಒಬ್ಬ ಯುವಕ ಧಾರವಾಹಿ, ಸಿನಿಮಾದಲ್ಲಿ ನಟನೆ ಮಾಡುವುದು ಎಂದರೆ ಸಾಮಾನ್ಯದ ಮಾತಲ್ಲ. ಆದರೆ, ಅಪ್ಪಣ್ಣ ಮಾತ್ರ ಇದಕ್ಕೆ ವಿರುದ್ಧ. ತನ್ನ ಋಣಾತ್ಮಕ ಶಕ್ತಿಯನ್ನೇ ಧನಾತ್ಮಕ ಶಕ್ತಿಯನ್ನಾಗಿಸಿಕೊಂಡು ಪ್ರಿನ್ಸ್‌ನಂತೆ ಮೇಲೆದ್ದು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚು ಹರಿಸುತ್ತಾ, ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳಲ್ಲಿ ರಾಮದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತಕ್ಕೆ ಹಾರಿಸುತ್ತಿದ್ದಾರೆ. ಅಪ್ಪಣ್ಣ ಆಕಾಶದೀಪ, ಮೀನಾಕ್ಷಿ ಮದುವೆ, ಪಾರ್ವತಿ ಪರಮೇಶ್ವರ ಎಂಬ ಸಿರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧ್ವಜ, ರವಿಹಿಸ್ಟ್ರಿ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಮೂರು ಚಿತ್ರಗಳು ಮುಂದಿನ ತಿಂಗಳು ಬಿಡುಗಡೆಯಾಗಲಿವೆ.

ಈಗಲು ತಾಯಿ ಬಾಳೆಹಣ್ಣ ಮಾರಾಟ:

ಅಪ್ಪಣ್ಣ ಅವರ ತಾಯಿ ಖಾಲಿ ಕುಳಿತುಕೊಳ್ಳುವವರು ಅಲ್ಲ. ಸದಾ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಪ್ಪಣ್ಣ ದೊಡ್ಡ ಕಲಾವಿದರಾಗಿದ್ದು ಸಹಿತ ಅವರ ಬಡತನ ಮಾತ್ರ ದೂರವಾಗಿಲ್ಲ. ತಾಯಿ ಮಾತ್ರ ಈಗಲೂ ರಾಮದುರ್ಗದಲ್ಲಿ ಬಾಳೇಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ(ಸಹೋದರ) ಗೌಂಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಪ್ಪಣ್ಣ ಅವರು ಮಾತ್ರ ಕಲಾ ಪೋಷಕರಾಗಿ ಎಲ್ಲರನ್ನು ನಕ್ಕು-ನಗಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಈ ನಟನೆ ಇನ್ನು ಹೆಚ್ಚು ಬೆಳೆಯಲಿ ಕುಂದಾನಗರಿಯ ಹೆಸರು ಪಸರಿಸಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಅಪ್ಪಣ್ಣ ಅಪ್ಪಟ ಪ್ರತಿಭೆಗೆ ಅರಸಿ ಬರಲಿ.

Tuesday, 3 September 2019

ಕಂಡಕ್ಟರ್ ಮೂಗಿನಿಂದ ಕೊಳಲು ನಾದ!!!!

ಮಂಜುನಾಥ ಗದಗಿನ
 ಇವರು ಕೊಳಲು ವಾದನದಲ್ಲಿ ಎತ್ತಿದ ಕೈ. ಆದರೆ, ಎಲ್ಲರಂತೆ ಇವರು ಬಾಯಿಯಲ್ಲಿ ಕೊಳಲು ನುಡಿಸಿ ಸೈ ಅನಿಸಿಕೊಂಡವರಲ್ಲ. ಬದಲಾಗಿ ಮೂಗಿನಿಂದ ಕೊಳಲು ನುಡಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡವರು.
ಹೌದು! ಅವರೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ, ಸದ್ಯ ಸಂಕೇಶ್ವರ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಷರ್ ಆಗಿ ಕಾರ್ಯ ನಿರ್ವಹಿ

ಸುತ್ತಿರುವ ಡಿ.ಆರ. ನದಾಫ್. ವೃತ್ತಿಯಲ್ಲಿ ಕಂಡಕ್ಷರ್ ಆದರೂ ನಾಸಿಕ ಕೊಳಲು ವಾದನ ಮೂಲಕ ಇದೀಗ ನಾಡಿನ ಮನೆ, ಮನದ ಮಾತಾಗಿದ್ದಾರೆ.
೩ನೇ ವಯಸಲ್ಲೆ ಆಸಕ್ತಿ:
ಅದೊಂದು ದಿನ ಮನೆಗೆ ಇವರ ಅಣ್ಣ ಕೊಳಲು ತಂದು ಕೊಳಲು ಕಲಿಯಲು ಪ್ರಯತ್ನ ಪಟ್ಟರು. ಆದರೆ, ಅದರಲ್ಲಿ ಅವರು ವಿಫಲರಾದರೂ, ಆದರೆ, ದಸ್ತಗಿರಿ ಅವರು ದನ, ಕುರಿ ಕಾಯುತ್ತಲೆ ಅದೇ ಕೊಳಲಿನಿಂದ ಪ್ರತಿದಿನ ಆಟವಾಡುತ್ತಾ, ಕೊಳಲು ನುಡಿಸುವುದನ್ನು ಕಲಿತುಕೊಂಡರು. ಆಗ ಅವರಿಗೆ ಕೇವಲ ಮೂರು ವರ್ಷ. ನಂತರ ದಿನಗಳಲ್ಲಿ ಕೊಳಲಿನಲ್ಲಿ ಪಾರಂಗತರಾಗಿ ಕೊಳಲು ವಾದನದಲ್ಲಿ ಮಿಂಚುತ್ತಿದ್ದಾರೆ. ಆದರೆ, ಕಳೆದ ೧೫ ವರ್ಷಗಳಿಂದ ಮೂಗಿನಿಂದ ಅದ್ಭುತ್ ನಾದ ಮೊಳಗಿಸುವ ಮೂಲಕ ಕಂಡಕ್ಟರ್‌ಕ್ಕೂ ಸೈ, ಕೊಳಲು ನುಡಿಸಲು ಜೈ ಅನ್ನುತ್ತಾರೆ, ಸಾಧನೆಯ ಶಿಖರ ಹತ್ತಿದ್ದಾರೆ.
ಚಿತ್ರಿಗೀತೆಗಳ ನಾದ:
ಈಗ ಮೂಗಿನಿಂದ ಚಿತ್ರಗೀತೆ, ಭಕ್ತಿ, ಜನಪದ, ತತ್ವ್ವಪದಗಳನ್ನು ನುಡಿಸುವುದೆಂದರೆ ಅತೀ ಸಲಿಸು. ಅಷ್ಟರ ಮಟ್ಟಿಗೆ ನೆರೆದ ಜನತೆರನ್ನು ನಾದಲೋಕಕ್ಕೆ ಕೊಂಡೈಯುವ ಶಕ್ತಿ ಇವರ ನಾಸಿಕ ಕೊಳಲು ನಾದಕ್ಕೆ ಇದೆ. ಇದೇ ಕಾರಣಕ್ಕೆ ಇವರು ನಾಡಿನ ಹಲವು ಕಡೆಗಳಲ್ಲಿ ಹೋಗಿ ನಾಸಿಕ ಕೊಳಲು ನಾದ ಪ್ರದರ್ಶನ ನೀಡಿ ಶಬ್ಬಾಷ ಅನಿಸಿಕೊಂಡಿದ್ದಾರೆ.
ಮೂಗಿನ ಒಂದು ಹೊಳ್ಳೆ ಮುಚ್ಚಿ, ಇನ್ನೊಂದು ಹೊಳ್ಳೆಯಿಂದ ನಾದ ಹೊರಡಿಸುವುದು ಎಂದರೆ ಸಾಮಾನ್ಯದ ಮಾತಾಲ್ಲ. ಆದರೆ, ದಸ್ತಗಿರಿ ಅವರಿಗೆ ಅದು ಕರಗತವಾಗಿದೆ. ಹೀಗಾಗಿಯೇ ಅವರು ಸಲಿಸಾಗಿ ಡಾ. ರಾಜಕುಮಾರ ಅವರ ಆಡಿಸಿ, ನೋಡು, ಬೀಳಿಸಿ ನೋಡು, ಹುಟ್ಟಿದರೆ ಕನ್ನಡ ನಾಡಲ್ಲಿ, ನಾನಿರುವುದು ನಿಮಗಾಗಿ ಇತ್ಯಾದಿ ಜನಪ್ರಿಯ ಚಲನಚಿತ್ರ ಗೀತೆಯ ಸಾಲುಗಳಾದ ಕಾಣದಂತೆ ಮಾಯವಾದನೋ, ನಮ್ಮ ಶಿವಾ, ನಾನಿರುವುದೇ ನಿಮಗಾಗಿ ಹೀಗೆ ರಾಜಕುಮಾರರ ಬಹುತೇಕ ಚಿತ್ರಗೀತೆಗಳನ್ನು ಕೊಳಲನ್ನು ನಾಸಿಕದ ಮೂಲಕ ನುಡಿಸುತ್ತಾರೆ.
ಭಕ್ತಿ, ದೇಶಪ್ರೇಮ ನಾದ:
ಸಂತ ಶಿಶುನಾಳ ಶರೀಫ ತತ್ವ ಪದಗಳನ್ನು ಅತೀ ಮಾರ್ಮಿಕವಾಗಿ ಭಕ್ತಿಯ ಅಲೆಯಲ್ಲಿ ತೇಲುವ ಹಾಗೇ ನುಡಿಸುತ್ತಾರೆ ಕಂಡಕ್ಟರ್ ನದಾಫ್ ಸರ್. ಅಷ್ಟೇ ಅಲ್ಲದೇ ನಂಬಿದೆ ನಿನ್ನಾ ನಾಗಾಭರಣ, ಕಾಯೋ ಹರಣ, ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ ಎಂಬಿತ್ಯಾದಿ ಭಕ್ತಿಗೀತೆ, ಹಾವು ತುಳಿದೀನಿ, ಬಿದ್ದಿಯಬ್ಬೇ ಮುದುಕಿ, ಹಾವು..ತರವಲ್ಲ ತಗಿ ನಿನ್ನ ತಂಬೂರಿ ಎಂಬ ಇತ್ಯಾದಿ ಇತ್ಯಾದಿ ಜನಪ್ರಿಯ ಗೀತೆಗಳು ಇವರು ನಾಸಿಕದ ಧ್ವನಿಯಲ್ಲಿ ಕೇಳುಗಳು ಕರ್ಣಗಳು ಪಾವನಗೊಳ್ಳುತ್ತವೆ. ನಾಡಗೀತೆ, ದೇಶಭಕ್ತಿ ಹಾಗೂ ರಾಷ್ಟ್ರಗೀತೆಗಳನ್ನು ಸಹಿತ ಇವರು ಕೊಳಲನ್ನು ನಾಸಿಕದ ಮೂಲಕ ನುಡಿಸಿ ನೆರೆದ ಜನರಲ್ಲಿ ದೇಶ ಪ್ರೇಮ ಉಕ್ಕಿಸುವ ಕೆಲವನ್ನು ಇವರು ಮಾಡುತ್ತಿದ್ದಾರೆ.
ಕನ್ನಡದೊಟ್ಟಿಗೆ ಹಿಂದಿ ಚಲನಚಿತ್ರ ಗೀತೆಗಳಾದ ಮನ್ ಡೋಲಿರೆ, ಆನೆ ಸೇ ಉಸ್ಕೆ ಆಯೆ ಬರ್ಹಾ, ತೆರೆ, ಮೇರೆ ಬೀಚ್ ಮೇ ಕೈಸಾ ಹೈ ಬಂಧನ್ ಸೇರಿದಂತೆ ಇತರೆ ಹಿಂದಿ ಚಿತ್ರಗೀತೆಗಳನ್ನು ನುಡಿಸುತ್ತಾರೆ.
ಎಲ್ಲೆಲ್ಲಿ ಪ್ರದರ್ಶನ:
ಇವರ ನಾಸಿಕ ಕೊಳಲು ವಾದನ ಸದ್ದು ನಾಡು, ಹೊರ ರಾಜ್ಯದ ವಿವಿಧೆಡೆ ಪಸರಿಸಿದೆ. ಬೆಳಗಾವಿ, ರಾಯಚೂರು, ಬೆಂಗಳೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ಹೀಗೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ  ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರ ಉತ್ಸವ, ಧಾರವಾಡದ ಕೃಷಿ ವಿವಿಯ ಕೃಷಿ ಮೇಳ ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿಯು ನಮ್ಮ ನಾಸಿಕ ಕೊಳಲು ನಾದದ ನಿನಾದವರನ್ನು ಹರಡಲು ಸನ್ನದ್ಧರಾಗಿದ್ದಾರೆ.
ನಾಸಿಕ ನಾದಕ್ಕೆ ಬಂದ ಪ್ರಶಸ್ತಿಗಳು:
ಚಿಕ್ಕೋಡಿ ತಾಲೂಕಿನ ದುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಕೊಳಲು ಕಿಶೋರ ಪ್ರಶಸ್ತಿ ಹಾಗೂ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ಕರ್ನಾಟಕ ರತ್ನಶ್ರೀ ಪ್ರಶಸ್ತಿಗಳು ಇವರ ನಾದಕ್ಕೆ ಮನಸೋತು ಬಂದಿವೆ. ಹೀಗೆ ಇವರ ನಾದ ಅರಸಿ ಮತ್ತಷ್ಟು ಪ್ರಶಸ್ತಿಗಳು ಬರಲಿ ಎಂಬುವುದು ಎಲ್ಲರ ಆಶಯ. ಇವರ ಈ ಕಲೆಗೆ ಸಾರಿಗೆ ಇಲಾಖೆ ಕೂಡಾ ಸಾಥ್ ನೀಡುತ್ತಿದ್ದು, ಬೇಕೆಂದಾಗ ರಜೆ ನೀಡಿ ಕಳುಹಿಸುತ್ತಾರೆ, ಕಲೆಗೆ ಪ್ರೋತ್ಸಾಹ ತುಂಬುತ್ತಿದೆ. ಕಂಡಕ್ಟರ್ ವೃತ್ತಿ ಒತ್ತಡದ ವೃತ್ತಿ. ಈ ಒತ್ತಡ ವೃತ್ತಿಯ ಮಧ್ಯೆಯೂ ಒಂದು ವಿಶಿಷ್ಟ ಕಲೆಯ ಮೂಲಕ ನಾಡಿನಲ್ಲಿ ಮಾತಾಗಿರುವುದು ವಿಶಿಷ್ಟವೇ ಸರಿ.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...