Monday, 8 February 2016

ಸಾವಿರ ವರ್ಷದ ಇತಿಹಾಸದ ಹಳೆಹುಬ್ಬಳ್ಳಿ ದೇಗುಲ


ಬರಹ: ಮಂಜುನಾಥ ಗದಗಿನ
ರಾಜ್ಯದ ಪ್ರಮುಖ ನಗರಿಗಳಲ್ಲೊಂದಾಗಿರುವ ಹುಬ್ಬಳ್ಳಿಯಲ್ಲಿ ಐತಿಹಾಸಿಕ ದೇವಾಲಯಗಳು ಅಗೋಚರವಾಗಿ ಉಳಿದಿರುವುದು ಇತಿಹಾಸ ಪ್ರಜ್ಞೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯಲ್ಲಿಯೂ ಇಷ್ಟೊಂದು ಹಳೇಯದಾದ ದೇಗುಲಗಳು ಇವೆ ಎಂಬುದು ಬಹುತೇಕ ಜನರಿಗೆ ಅರಿವು ಇದ್ದರೂ ಅವುಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡುವಲ್ಲಿ ಅಡಳಿತ ಮತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಸಾವಿರ ವರ್ಷಗಳ ಇತಿಹಾಸವುಳ್ಳ ದೇವಾಲಯವೊಂದು ಹುಬ್ಬಳ್ಳಿಯ ಮೂಲಸ್ಥಾನವಾದ ಹಳೇಹುಬ್ಬಳ್ಳಿಯ ಕಿಲ್ಲೆಯಲ್ಲಿ ಇದೆ ಎಂಬುದು ಅಲ್ಲಿರುವ ಜನರಿಗೆ ತಿಳಿಯದ ಸಂಗತಿಯಾಗಿದೆ.
ಹುಬ್ಬಳ್ಳಿಯ ಹಳೇಬಸ್ ನಿಲ್ದಾಣದಿಂದ 3ಕಿ.ಮೀ ದೂರದಲ್ಲಿರುವ ಹಳೇಹುಬ್ಬಳ್ಳಿಯ ಇಂಡಿಪಂಪ ಸರ್ಕಲ್ ಹತ್ತಿರದ ದಿಡ್ಡಿ ಓಣಿ ಪ್ರವೇಶಿಸಿ ಸ್ಪಲ್ಪ ಮುಂದೆ ಸಾಗಿದರೆ, ಕಾಣಸಿಗುವುದೇ ಸಾವಿರ ವರ್ಷ ಇತಿಹಾಸವುಳ್ಳ ಭವಾನಿಶಂಕರ ಎಂಬ ಭವ್ಯ ದೇವಾಲಯ.
ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಈ ದೇವಾಲಯವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೂ ಈ ದೇವಾಲಯವನ್ನು ಗಮನಿಸಿದರೆ  ಇದು ಪ್ರಾಚ್ಯವಸ್ತು ಇಲಾಖೆಗೆ ಸೇರೆದೇಯೇ? ಎಂಬ ಅನುಮಾನ ಕಾಡುತ್ತದೆ. ಇಲ್ಲಿ ‘ಇಲ್ಲ’ಗಳದ್ದೇ ದರ್ಬಾರು. ಒಂದು ಕೌಂಪೌಂಡ್ ಇಲ್ಲ, ದೇವಾಲಯದ ರಕ್ಷಣೆಗೆ ಯಾವುದೇ ಸಿಬ್ಬಂದಿ ಇಲ್ಲ, ಸೂಕ್ತ ನಿರ್ವಹಣೆ ಹಾಗೂ ಸೌಲಭ್ಯಗಳು ಇಲ್ಲದೇ ದೇವಾಯಲ ಹಾಳುಕೊಂಪೆಯಾಗಿರುವುದೇ ಇದಕ್ಕೆ ಸಾಕ್ಷಿ.
ಮಾರ್ಗಸೂಚಿಗಳಿಲ್ಲ..
ದೇವಾಲಯ ಇರುವಿಕೆಯನ್ನು ತೋರಿಸಬೇಕಾದ ಮಾರ್ಗಸೂಚಿಗಳೆ ಈ ದೇವಾಲಯಕ್ಕೆ ಇಲ್ಲದೇ ಇರುವಾಗ, ಈ ದೇವಾಲಯ ಹೊರ ಜಗತ್ತಿಗೆ ಹೇಗೆ ಪರಿಚಯವಾಗಬೇಕು? ಮಾರ್ಗಸೂಚಿ ಫಲಕ ಹಾಕಿ ಐತಿಹಾಸಿಕ ದೇವಾಲಯವೊಂದು ಈ ಪ್ರದೇಶದಲ್ಲಿದೆ ಎಂದು ತಿಳಿಸಬೇಕಾದ ಮಹಾನಗರ ಪಾಲಿಕೆ, ಪ್ರಾಚ್ಯವಸ್ತು ಇಲಾಖೆ ಜಾಣಮೌನ ವಹಿಸಿರುವುದು ಐತಿಹಾಸಿಕ ದೇವಾಲಯ ನೇಪಥ್ಯಕ್ಕೆ ಸರಿದಿದೆ.
ಎಲ್ಲೆಂದರಲ್ಲಿ ಕಸ..
ಇತಿಹಾಸ ಸಾರಬೇಕಾದ ದೇವಾಲಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೇ, ದೇವಾಸ್ಥನ ಆವರಣ ಕಸದಿಂದ ತುಂಬಿಕೊಂಡು ಮಲಿನವಾಗಿದೆ. ಇನ್ನೂ ಕಂಪೌಂಡ್ ಇಲ್ಲದೇ ಇರುವುದರಿಂದ ಹಂದಿ, ನಾಯಿಗಳಿಗೆ ಇಲ್ಲಿ ಮುಕ್ತ ಪ್ರವೇಶವಿದೆ. ಅವುಗಳು ಕೂಡ ತಮ್ಮ ಕ್ರಿಯೆಗಳನ್ನು ಆವರಣದಲ್ಲೆ ಮಾಡತ್ತಿವೆ. ಆವರಣದ ಸುತ್ತಲೂ ಗಿಡ ಗಂಟೆಗಳು ಬೆಳೆದು ನಿಂತಿರುವುದು ದೇವಾಲಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂಬುದನ್ನು ಸಷ್ಟಪಡಿಸುತ್ತದೆ.
ಅವಶೇಷಗಳ ಅವ್ಯವಸ್ಥೆ
ಇತಿಹಾಸವನ್ನು ಅನಾವರಣ ಮಾಡುವ  ಈ ದೇವಾಲಯದ ಅವಶೇಷಗಳು ಗಿಡ-ಗಂಟೆಗಳಲ್ಲಿ ಅನಾಥವಾಗಿ ಬಿದ್ದಿವೆ. ಈ ಅವಶೇಷಗಳನ್ನು ಸಂರಕ್ಷಿಸುವ ಕೆಲಸವನ್ನು ಯಾರು ಮಾಡುವರು ಎಂದು ಆ ಭವಾನಿ ಶಂಕರನನ್ನೇ ಕೇಳಬೇಕು.  ದೇವಾಲಯವು ತನ್ನದೇ ಟ್ರಸ್ಟ್ ಹೊಂದಿದ್ದು, ಅದು ಹೆಸರಿಗೆ ಮಾತ್ರ ಟ್ರಸ್ಟ ಎಂಬಂತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ವಿಶಿಷ್ಟ ದೇವಾಲಯ
ಸುಮಾರು 1000 ವರ್ಷಗಳ ಹಿಂದೆ ಬಾದಾಮಿ ಚಾಲುಕ್ಯರ ಭುವನೇಕ ಮಲ್ಲನೆಂಬಅರಸ ಈ ದೇವಾಲಯಕ್ಕೆ ಭೂಮಿಧಾನ ಮಾಡಿದ್ದಾನೆ ಎಂದು ಶಿಲಾಶಾಸನವೊಂದು ಉಲ್ಲೇಖಿಸಿದೆ(ಈಗ ಈ ಶಾಸನ ಮುಂಬಯಿನ ಪ್ರಿನ್ಸ್ ಆಫ್‌ವೇಲ್ಸ ವಸ್ತು ಸಂಗ್ರಹಾಲಯದಲ್ಲಿ ಇದೆಯಂತೆ). ಈ ದೇವಾಯಲವನ್ನು ಯಾರು? ಯಾವಾಗ? ಕಟ್ಟಿಸಿದರು ಎಂಬ ಮಾಹಿತಿಗಳು ದೊರಕಿಲ್ಲ. ಇದು ಮೂರು ಶಿಖರಗಳುಳ್ಳ ತ್ರಿಕೂಟ ಹಾಗೂ ಪಂಚಾಯತನ್(ಈಶ್ವರ, ನಾರಾಯಣ, ವಿಷ್ಣು, ಗಣಪತಿ, ಸೂರ್ಯ, ಪಾರ್ವತಿ ಇರುವ) ದೇವಾಲಯದ ತ್ರಿಕೂಟದ ಕೆಳಗೆ ಮೂರು ಗರ್ಭಗಳಿದ್ದು ಅಲ್ಲಿ ಈಶ್ವರ, ನಾರಾಯಣ, ಗಣಪತಿ ದೇವರುಗಳನ್ನು  ಪ್ರತಿಪ್ಠಾಪಿಸಲಾಗಿದೆ. ಸಪ್ತ ಮಾತೃಕೆಯರಾದ ಬ್ರಾಹ್ಮಿ, ವೈಷ್ಣವಿ, ಮಹೇಶ್ವರಿ, ಇಂದ್ರಾಣಿ, ಕಾತ್ಯಾಯನಿ, ಚಾಮುಂಡಿ ಶಕ್ತಿ ದೇವತೆಗಳನ್ನು ಒಂದೇ ಸೂರಿನಲ್ಲಿ ಕಾಣಬಹುದು.  ದೇಶದಲ್ಲೆ ಅಪರೂಪವಾದ ಸೂರ್ಯ ದೇವರ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ಗರ್ಭಗುಡಿಯ ಬಾಗಿಲುಗಳ ಮೇಲೆ ರಂಜು(ಹಗ್ಗ), ರತ್ನ,ಮಧ್ಯದಲ್ಲಿ ಗಜಲಕ್ಷ್ಮಿಯರನ್ನು ಸುಂದರವಾಗಿ ಕೆತ್ತಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ಜಕಣಾಚಾರ್ಯ ಶೈಲಿ ಎಂದು ಕರೆಯುತ್ತಾರೆ. ಎರಡು ವರ್ಷಗಳ ಹಿಂದೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಈ ದೇವಾಯಲಕ್ಕೆ 11ಲಕ್ಷ ರೂ. ಗಳನ್ನು ನೀಡಿ ಜೀರ್ಣೋದ್ದಾರ ಮಾಡಿಸಿದ್ದಾರೆ. ವರ್ಷದ ಹಿಂದೆ ಪ್ರಾಚ್ಯವಸ್ತು ಇಲಾಖೆ 40 ಲಕ್ಷ ರೂ ವೆಚ್ಚದಲ್ಲಿ ಮುಖಮಂಟಪ, ದ್ವಾರ ನಿರ್ಮಿಸಿದೆ ಎಂದು ಸ್ಥಳೀಯ ಹಿರಿಯರಾದ ಲಕ್ಷ್ಮೇಶ್ವರ ಅವರು ಹೇಳುತ್ತಾರೆ.
ನೋಟಿ ನೀಡಲಾಗಿದೆ
ದೇವಸ್ಥಾನ ಸುತ್ತಲೂ ಇರುವ ಜಾಗೆಯನ್ನು ಅನೇಕರು ಅತಿಕ್ರಮಿಸಿಕೊಂಡಿದ್ದಾರೆ.  ಇವರಿಗೆ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಎರಡು ವರ್ಷಗಳ ಹಿಂದೆ, ಅತಿಕ್ರಮಣ ಮಾಡಿರುವ ಜಾಗೆಯನ್ನು ತೆರವುಗೊಳಿಬೇಕೆಂದು ಸಂಬಂಧಿಸಿದವರಿಗೆ ನೋಟಿಸ ನೀಡಿದೆ.  ನೋಟಿಸ್ ನೀಡಿ ಎರಡು ವರ್ಷಗಳು ಗತಿಸಿದರು, ಅತಿಕ್ರಮಣಕಾರರು ತೆರವುಗೊಳಿಸದೇ ಇರುವುದು ಮತ್ತು ಇಲಾಖೆ ಮೌನ ಜನರ  ಅನುಮಾನಗಳಿಗೆ ಕಾರಣವಾಗಿದೆ.
ಉತ್ಸವಗಳ ಮೂಲಕ ಬೆಳಕಿಗೆ ಬರಲಿ
ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಉತ್ಸವದ ಕಾರ್ಯಕ್ರಮಗಳಿಗೆ ಆಯ್ಕೆ ಮಾಡದೇ ಇರುವುದ ಜಿಲ್ಲಾಡಳಿತ ಮತು ಕನ್ನಡ ಸಂಸ್ಕೃತಿ ಇಲಾಖೆ ಉದ್ದೇಶಪೂರ್ವಕ ನಿರ್ಲಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಮುಂಬರುವ ಉತ್ಸವದಲ್ಲಿ ಈ ದೇವಾಲಯಗಳನ್ನೂ ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ ಪಡೆಯುವುದಲ್ಲದೇ ಇತಿಹಾಸಕ್ಕೆ ಹೊಸ ಮೆರಗು ತರುವುದರಲ್ಲಿ ಎರಡು ಮಾತಿಲ್ಲ.
----
ಹಂಪಿ ಗುಡಿಗಳ ಸಾಲಿಗೆ ಸೇರಿದ ಈ ದೇವಾಯಲವು, ಮೂರು ಶಿಖರ ಹಾಗೂ ಪಂಚಾಯತನ್ ದೇವರುಗಳನ್ನು ಹೊಂದಿರುವ ರಾಜ್ಯದ ಅಪರೂಪ ದೇವಾಲಯವಾಗಿದ್ದು, ದೇಶದಲ್ಲೆ ವಿರಳವಾಗಿ ಕಾಣಸಿಗುವ ಸೂರ್ಯ ದೇವರನ್ನು ಇಲ್ಲಿ ಕಾಣಬಹುದಾಗಿದೆ.

Sunday, 7 February 2016

ಅನಿವಾರ್ಯತೆ ಕಲಿಸಿದ ಪಾಠ!

  ಅನಿವಾರ್ಯತೆಗಳು ಮನುಷ್ಯನ ಜೀವನವನ್ನು ಏಷ್ಟೊಂದು ಬದಲಾಯಿಸುತ್ತವೆ ಅಲ್ವಾ? ಈ ಶಿಕ್ಷಣವೆಂಬ ಅನಿವಾರ್ಯತೆಗೆ ಕಟ್ಟು ಬಿದ್ದು, ತಿಂದುಂಡು, ಆಡಿ ಬೆಳೆದ ಮನೆ, ಪಾರ್ಶ್ವವಾಯು ಪೀಡಿತ ಅಪ್ಪ, ಕಷ್ಟಗಳಲ್ಲೇ ಕೈತೊಳೆಯುತ್ತಿರುವ ಅವ್ವ, ನನ್ನ ಕಷ್ಟಕ್ಕೆ ಹೆಗಲೊಡ್ಡಿ ಸಾಂತ್ವಾನ ಹೇಳುತ್ತಿದ್ದ ಗೆಳೆಯರು, ಅಕ್ಕರೇಯ ಪ್ರೀತಿ ತೋರಿದ ಚಿಗವ್ವ, ಕಾಕಾನನ್ನು ಬಿಟ್ಟು  ಶಹರದಲ್ಲಿ ಎಲ್ಲವೂ ಇದ್ದು ಏನು ಇಲ್ಲ ಎಂಬಂತೆ ಬದುಕಿದ್ದೇನೆ.
   ನೂರಾರು ಆಸೆ, ಆಕಾಂಕ್ಷೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಪ್ಯಾಟೆ ಎಂಬ ಪರದೇಶಕ್ಕೆ ಪ್ರವೇಶಿಸಿದೆ. ಶಹರ ಜೀವನ ಬಡವರಿಗಲ್ಲ, ಅದು ದುಡ್ಡಿದ್ದವರ ದುನಿಯಾ ಎಂಬ ಮಾತು ನಮ್ಮ ಹಳ್ಳಿಯಲ್ಲಿ ಪದೇ ಪದೇ ಕೇಳಿ ಬರುತ್ತಿತ್ತು. ಆದರೆ ಆ ಮಾತುಗಳಿಗೆ ಜೀವ ಬಂದದ್ದು, ಶಹರದ ಆರಂಭದ ದಿನಗಳಲ್ಲೆ. ಹಳ್ಳಿಯಲ್ಲಿ ಒಂದು ರೂಪಾಯಿ ಕೊಟ್ಟು ಟೀ ಕೂಡಿಯುತ್ತಿದ್ದ ನಾನು ಶಹರದಲ್ಲಿ ಐದು ರೂಪಾಯಿ ಕೊಟ್ಟು ಟೀ ಕುಡಿಯಲು ಪ್ರಾರಂಭಿಸಿದೆ. ಇನ್ನೂ ಒಂದೊತ್ತಿನ ನಾಸ್ಟಾ, ಊಟಗಳಗಳ ಬೆಲೆ ನಮ್ಮೂರಿನ ಒಂದು ವಾರದ ಸಂತೆಯ ಖರ್ಚಿಗೆ ಸಮವಾಗಿತ್ತು. ಆದರೂ ಒಂದು ಇದ್ದೋ, ಇನ್ನೊಂದು ಇಲ್ಲದೇಯೇ ಶಹರ ಜೀವನಕ್ಕೆ ಒಗ್ಗಿಕೊಂಡೆ. ಯಾಕಂದ್ರೆ ಇದು ಬದುಕಿನ ಅನಿವಾರ್ಯತೆ.
   ಇನ್ನೂ ದಿನ ಬೆಳಗಾದ್ರೆ ಸಾಕು, ಕಾಲೇಜು, ಪ್ರಯಾಣ, ಆ ದೂರದ ದಾರಿ, ಲೆಕ್ಚರ ಹೇಳುವ ಕ್ಲಾಸುಗಳಲ್ಲಿ ಏನಿಲ್ಲವೆಂದರೂ ಹಾಜರಾತಿಗಾಗಿ ಕುಳಿತು ಕೇಳಬೇಕಾದ ಪರಸ್ಥಿತಿ. ಕಾಡು ದೇವರ ಕಾಟ ಕಳೆಯುವ ಹಾಗೆ ಮಾಡುವ ಸಮೀನಾರಗಳು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬರೆಯುವ ಟೆಸ್ಟಗಳು, ಕಾರಣಗಳೇ ಇಲ್ಲದೇ ಗೆಳೆಯರೊಂದಿಗೆ ಮಾಡುವ ತರ‌್ಲೆಗಳು, ವಿನಾಃ ಕಾರಣ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಪರಸ್ಥಿತಿಗಳು, ಗೊತ್ತಿದ್ದೋ..ಗೋತ್ತಿಲ್ಲದೇಯೋ.. ಹುಡ್ಗಿಯನ್ನು ಹಿಂಬಾಲಿಸುವ ಮನಸ್ಸು, ಪ್ರತಿದಿನ ಕಣ್ಣಂಚಲಿ ಮೂಡುವ ಅವ್ವ ನೆನಪುಗಳು ನನ್ನ ಬದುಕು ಸೃಷ್ಠಿಸಿರುವ ಅನಿವಾರ್ಯತೆಗಳು.
  ರಜೆಗೆಂದು ಊರಿಗೆ ಹೋದಾ, ಇನ್ನೂ ನಿಂದು ಸಾಲಿ ಕಲಿಯೋದು ಮುಗಿದಿಲ್ಲ, ಏನ್. ಹಂಗ್ ಎಷ್ಟ ವರಷ ಸಾಲಿ ಕಲ್ತಿ. ಪಾಪಾ ನಿಮ್ಮ ಅವ್ವ ಹಂಗ್ ಎಷ್ಟ ವರುಷ ನಿಮ್ಮಪ್ಪ ಚಾಕರಿ ಮಾಡ್ಕೊಂತ ಇರ‌್ಬೇಕು. ಪಾಪಾ ಆ ಜೀವಕ್ಕ ಸುಖ ಅನ್ನೋದೆ ಇಲ್ಲ. ನಿಮ್ಮಪ್ಪ ನೋಡಿದ್ರ ದಿನ ಬೆಳಗಾದ್ರ ಸಾಕ, ಅವಳ್ನ ಕಾಡ್ತಾಯಿರ‌್ತಾನ. ಇನ್ನ ನಿಮ್ಮವ್ವ ಅತ್ತಗ ನಿಮ್ಮಪ್ಪನ ಚಾಕರಿನು ಮಾಡ್ಬೇಕು. ಇತ್ತಾಗ ದುಡಕಿನು ಮಾಡ್ಬೇಕು. ಎಂದು ಜನರ ಹೇಳಿದಾಗ ಕಣ್ಣುಗಳು ಒದ್ದೆಯಾಗುತ್ತವೆ. ಅವರ ಪ್ರಶ್ನೆಗಳಿಗೆ ಉತ್ತರಿಸದೇ ಸುಮ್ಮನಾಗುತ್ತೇನೆ ಯಾಕಂದ್ರೆ ಇದು ನನ್ಗೆ ನಾನೇ ತಂದುಕೊಂಡ ಅನಿವಾರ್ಯತೆ.
  ಇನ್ನೂ ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ಜೀವನ ಕೊನೆಯಾಗುತ್ತಿದೆ. ಇನ್ನೇನಿದ್ದರೂ ಬದುಕು ಕಲಿಸುವ ಪಾಠ ಕಲಿಯಲು ಸಿದ್ಧವಾಗಬೇಕಾಗಿದೆ. ಅಷ್ಟೇ ಅಲ್ಲದೇ ಭವಿಷ್ಯದ ಬಗೆಗಿನ ಸಾವಿರಾರು ಆಸೆಗಳು, ಆಕಾಂಕ್ಷೆಗಳು ಕೈಗೂಡುವ ಸಮಯ. ಆದರೆ ಈಗ ನನ್ನ ಬದುಕಿಗೆ ಅನಿವಾರ್ಯವಾದದ್ದು ಒಂದು ಉತ್ತಮ ಕೆಲಸ ಅದು ಸುದ್ದಿ ಮನೆಯಲ್ಲಿ ಸದ್ದು ಮಾಡುವ ಕೆಲಸ.ಈ  ಕೆಲಸಕ್ಕಾಗಿ ಎಂತಹ ಅನಿವಾರ್ಯತೆಗಳನ್ನು ಸೃಷ್ಠಿಸಲು ಸಿದ್ಧ, ಎದುರಿಸಲು ಸಿದ್ಧ ಯಾಕಂದ್ರೆ ಅನಿವಾರ್ಯತೆಗಳು ನನ್ನನ್ನು ಗಟ್ಟಿಯಾಗಿಸಿವೆ.
ಮಂಜುನಾಥ ಗದಗಿನ
8050753148





ಜಟ್ಟು ಬೀಡುವದು ಈಗ ಫ್ಯಾಶನ್ ಕಣ್ರೀ!!


ಇದು ಮೊದಲೇ ಆಧುನಿಕತೆಯ ಕಾಲ. ಇಲ್ಲಿಯ ಆಚಾರ, "ಚಾರಗಳಲ್ಲಿ , ಉಡುಗೆ-ತೊಡುಗೆಗಳಲ್ಲಿ ಫ್ಯಾಶನ್ ಎಂಬ ಮಾಯಾ" ಹೊಕ್ಕಿಕೊಂಡಿದೆ. ಅದು ಹುಡುಗಿ ಹುಡುಗರ ಡ್ರೆಸ ಹಾಕ್ಕೊಂಡು ಹುಡ್ಗುರ ಕುಲವೇ ನಾಚಿಸುವ ಹಾಗೆ ರಸ್ತೆ ಮಧ್ಯ ಹೋಗ್ತಾುದ್ರೆ. ಇದು ಹುಡ್ಗಾನಾ!? ಹುಡ್ಗಿನಾ!? ಎಂಬ ಅನುಮಾನ ಕಾಡುವುದು ಇಂದಿನ ಫ್ಯಾಶನ ಖದರ. ಇನ್ನೂ ಹುಡಗಿಯರಿಗೆ ಅಷ್ಟೇ ಸೀ"ುತವಾಗಿದ್ದ ಕಿ"ಯೊಲೆ, ಕೈಬಳೆ, ಹಾರಗಳು ಇಂದು ಹುಡ್ಗರ ಫ್ಯಾಶನ ವಸ್ತುಗಳಾಗಿವೆ.
  ಹ್ಞೂ! ಇಲ್ಲೇಲ್ಲಾ ಬಂದು ಹಳೇಯ ಮಾತಾದವು. ಈಗಿನ ಯುವ ಸಮುದಾಯ ಪ್ರತಿದಿನ ಅಫಡೇಟ್ ಆಗುತ್ತಿದ್ದಾರೆ. ಪ್ರಪಂಚಕ್ಕೆ ಯಾವುದಾದರೂ ಹೊಸತು ಪರಿಚಯವಾದ್ರೆ ಸಾಕು ಅದು ನನ್ನದಾಗಬೇಕು, ನಾನು ನನ್ನ ಗೆಳೆಯ/ಗೆಳತಿಯರ ಮುಂದೆ ಅದನ್ನು ತೊರ‌್ಬೇಕು ಎಂಬ ಕ್ರೇಜ್ ಹೆಚ್ಚಾಗಿದೆ. ಅಂತಹ ಹೊಸ ಕ್ರೇಜೊಂದು ನಮ್ಮ ಯುವಕರ ಮಧ್ಯ ಸದ್ದಿಲ್ಲದೇ ಸುದ್ದಿಯಾಗುತ್ತಿದೆ.
   ಗಡ್ಡ,  ಫ್ಯಾಶನ ಮಾಡುವುದು ಈಗ ಓಲ್ಡ, ಈಗೇನಿದ್ರು ಜುಟ್ಟು ಬೀಡುವ ಕ್ರೇಜ್. ಇದ್ದೇಂತಹ ಕ್ರೇಜ್ ಅಂತೀರಾ!? ಇದು ನಮ್ಮ ಯುವಕ ಹಾರ್ಟಫೇವರೇಟ್ ಪ್ಯಾಶನ ಆಗಿದೆ ಈಗ. ಎಲ್ಲಿ ನೋಡಿದರು ಇಂತಹ ಜುಟ್ಟು ಬಿಟ್ಟ ಹುಡ್ಗರು ಕಾಣಸಿಗುತ್ತಾರೆ.  ಹುಡ್ಗರಿಗೆ ತಲೆಯಲ್ಲಿ ಹೆಚ್ಚು ಕೂದಲುಗಳು ಇದ್ದರೆ ಸಾಕು ಮನೆ ಮಂದಿಯಲ್ಲಾ ಸೇರಿ ತೂ..! ನಿನ್ನಾ ಏನ್ ಅಸಯ್ಯಾ ಇದು ಹೆಣ್ಣ್ಮಕ್ಳ ಹಾಗೆ ಕೂದಲು ಬಿಟ್ಟಿದ್ದೀಯಾ ಎಂದು ಬೈಯುತ್ತಿದ್ದರು. ಅದು ತಲೆಯಲ್ಲಿ ಸ್ಪಲ್ಪವೇ ಕೂದಲು ಇದ್ದಾಗ. ಆದರೆ ಇಂದು ಹುಡ್ಗಿಯರ ಹಾಗೆ  ಸಣ್ಣದೊಂದು ಜಟ್ಟು ಬಿಟ್ಟುಕೊಂಡು ಓಡಾಡುವ ಹುಡ್ಗರಿಗೆ ಏನೇನ್ನಬೇಡಾ. ಇದಕ್ಕೆ ಪ್ಯಾಶನ ಅನ್ನಬೇಕೋ? ಹುಚ್ಚುತನ ಅನ್ನಬೇಕೋ? ಎಂಬುದು ಒಂದು ತಿಳಿತಾುಲ್ಲಾ.
  ಮೊನ್ನೆ ಕ್ಯಾಂಪಸನ ಬಸ್ಟಾಫನಲ್ಲಿ ಕುಳಿತುಕೊಂಡಿದ್ದೆ. ನನ್ನ ಎದುರಿಗೆ ನಾಲ್ಕೈದು ಹುಡುಗಿಯರು ಕುಳಿತುಕೊಂಡಿದ್ದರು. ಅಷ್ಟೋತ್ತಿಗಾಗಲೇ ಒಂದಿಬ್ಬರೂ ಹುಡ್ಗರು ಬರ್ತಾುದ್ರು. ಅದರಲ್ಲಿ ಒಬ್ಬ ತನ್ನ  ಜುಟ್ಟನ್ನು ತನ್ನ ಕೈಗಳಿಂದ ತಿರಗಿಸುತ್ತಾ. ಆ ಜಟ್ಟನ್ನು ಜಡೆಯ ಹಾಗೆ ಮಾಡಿಕೊಳ್ಳುತ್ತಾುದ್ದ ಅದನ್ನು ನೋಡಿದ ಆ ಹುಡ್ಗಿಯರು "ನೋಡಲೇ ಅಲ್ಲಿ, ಅವ್ನ ಜಟ್ಟು ಹೇಗಿದೇ" ಎನ್ನುತ್ತಾ ಮುಸಿಮುಸಿ ನಗ್ತಾುದ್ರು. ಮತ್ತೊಬ್ಬಳು "ಗಂಡು ರೂಪದ ಹೆಣ್ಣು ಹೋಗ್ತಾುದೆ" ಎಂದಳು. ನನ್ಗೆ ಆಗ್ಲೇ ಅನಿಸಿದ್ದು. ಇದು ಗಂಡು ಕುಲಕ್ಕೆ ಅವಮಾನ ಎಂದು.
ಗಂಡಿಗೆ  ಇರ‌್ಬೇಕು, ಹೆಣ್ಣಿಗೆ ಜಡೆುರ‌್ಬೇಕು ಎಂಬ ಮಾತು ಈಗ ಸುಳ್ಳಾಗಿದೆ. ಹೊತ್ತ ಗಂಡಸಿಗೆ ಡಿಂಮ್ಯಾಂಡಪ್ಪೋ ಡಿಮ್ಯಾಂಡೋ ಎಂಬುದನ್ನು ಬದಲಾುಸ್ಕೊಂಡು ಜುಟ್ಟು ಹೊತ್ತ ಗಂಡಸಿಗೆ ಡಿಮ್ಯಾಂಪ್ಪಪ್ಪೋ ಡಿಮ್ಯಾಂಡೋ ಎನ್ನುವಂತಾಗಿದೆ. ನಮ್ಮ ಹುಡ್ಗರು ಜುಟ್ಟು ಬೀಡುದೇ ಒಂದು ಪ್ಯಾಶನನಾಗಿ ತೆಗೆದುಕೊಂಡಿದ್ದಾರೆ. ಒಂದಿಷ್ಟು ದಿನಗಳು ಹೋದ್ರೆ ಆ ಜುಟ್ಟಿಗೆ ಮಲ್ಲಿಗೆ ಹೂವು ಮುಡಿದಕೊಳ್ಳೋದು ಒಂದು ಫ್ಯಾಶನ ಅಂದ್ರೆ ಆಶ್ಚರ್ಯ ಪಡಬೇಕಿಲ್ಲ. ಎಲ್ಲವೂ ಕಾಲಾಹೇ ತಸ್ಮೇಹೇ ನಮಃ ಎನ್ನಬೇಕಷ್ಟೇ.
ಮಂಜುನಾಥ ಗದಗಿನ
8050753148

Saturday, 6 February 2016

ಹೇಗಿದ್ದ ಹೇಗಾದ ಅಪ್ಪ!!


  ಅಪ್ಪ ಮೊದಲಿನ ಹಾಗಿಲ್ಲ. ನನ್ನ ಜೊತೆ ಮಾತನಾಡುವದಿಲ್ಲ, ನನ್ನ ಜೊತೆ ಹೆಜ್ಜೆ ಹಾಕುವದಿಲ್ಲ, ಬಾಯಿತುಂಬಾ ಮಗನೇ ಎಂದು ಕರಿಯೋದಿಲ್ಲ, ಅಪ್ಪಿ ಮುದ್ದಾಡುವುದಿಲ್ಲ, ತಪ್ಪು ಮಾಡಿದಾಗ ದಂಡಿಸುವದಿಲ್ಲ. ಆದರೆ ಒಳಗೊಳಗೆ ಅದೇನೋ! ಮಾತನಾಡುತ್ತಾನೆ, ತನ್ನ ಕೋಲಿನೊಂದಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾನೆ. ತನ್ನ ಹಾಸಿಗೆಗಳಲ್ಲೆ ಬಿದ್ದು ಹೊರಳಾಡುತ್ತಿದ್ದಾನೆ. ಹೌದು! ಅಪ್ಪ ಮಾತನಾಡುವದಿಲ್ಲ, ಸರಿಯಾಗಿ ನಡೆದಾಡುವುದಿಲ್ಲ. ಯಾಕಂದ್ರೆ ದಶಕಗಳ ಹಿಂದೆ ಪಾರ್ಶ್ವವಾಯು ಎಂಬ ಹೆಮ್ಮಾರಿ ನನ್ನಪ್ಪನ ಕೈ, ಬಾಯಿಗಳನ್ನು ಕಿತ್ತುಕೊಂಡು, ಮೂಲೆಯಲ್ಲಿ


ಹೆಡೆಮುರಿ ಕಟ್ಟಿ ಮಲಗಿಸಿದೆ.
  ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೇ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತೀರುಗುತ್ತಿದ್ದ. ಹ್ಞೂ! ನಾನು ಆ ದೇವರ ಏಕೈಕ ವರ ಪ್ರಸಾದ ನಮ್ಮಪ್ಪ ಅಮ್ಮನಿಗೆ. ನಾನು ಹುಟ್ಟಿದಾಗಲೇ ಅಪ್ಪ ಓಣಿ ಮಂದಿಗೇಲ್ಲಾ, ಕಡಬಿನ ಊಟ ಹಾಕಿ ಸಂಭ್ರಮಿಸಿದ್ದ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ, ಮಾತಿನಲ್ಲೂ ಅಪ್ಪ ಹಿರಿ ಹಿರಿ ಹಿಗ್ಗಿ ಸಂಭ್ರಮಿಸುತ್ತಿದ್ದ ಅಂತ ಅವ್ವ ಪದೇ ಪದೇ ಹೇಳ್ತಾಯಿದ್ಳು. ಆದರೆ ಈಗ ಆ ಸಂಭ್ರಮ! ಮನೆಯ ಮೂಲೆಯಲ್ಲಿ ಹೊರ ಪ್ರಪಂಚದ ಅರಿವಿಲ್ಲದೇ ಬೆಚ್ಚಗೆ ಅವಿತುಕೊಂಡು ಕುಳಿತಿದೆ. 
  ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೇನೆ ಅಪ್ಪ ಇಂದು ಮೂಲೆಗುಂಪಾಗಿ ಸೊಂಪಿಲ್ಲದೇ ಬದುಕಿನ ಕೊನೆಯ ದಿನಗಳನ್ನು ಏಣಿಸುತ್ತಾ ಕುಳಿತಿದ್ದಾನೆ.
  ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು, ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಖಃಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ. 
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ.
ಮಂಜುನಾಥ ಗದಗಿನ, 
8050753148



ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...