Monday, 11 April 2016

ಕನಸಾಗಿಕಾಡಿ ಬದುಕಾಗಿರುವ ಪತ್ರಿಕೋದ್ಯಮ


ಕನಸುಗಳೇ ಹಾಗೆ! ಕಾಡುತ್ತವೆ. ಕೆರಳುತ್ತವೆ. ಕೆಣಕುತ್ತವೆ.. ಕೊನೆಗೆ ಸಾಕಾರಗೊಂಡೋ..ಸಾಕಾರಗೊಳ್ಳದೇನೋ..ಮನಸ್ಸಿನಾಳದಿಂದ ಸರಿದು ಮಾಯವಾಗುತ್ತವೆ.ಹ್ಞೂ! ನನಗೂ ಸಾವಿರ ಕನಸುಗಳ ಮಧ್ಯ ಒಂದು ಚಿಕ್ಕ ಕನಸು ಮೂಡಿತ್ತು. ಆ ಕನಸು ಈಡೇರಿಕೆಗೆ ನಾನಾ ಕಸರತ್ತುಗಳು. ಇವುಗಳೊಂದಿಗೆ ಅನೇಕ ಸವಾಲುಗಳನ್ನು ದಾಟಿ ಕನಸಾಗಿ ಕಾಡಿದ್ದ ಪತ್ರಿಕೋದ್ಯಮ ಅಣಿ ಇಟ್ಟೆ.
ಸಮಾಜ ಅಂಕುಡೊಂಕುಗಳನ್ನು ತಿದ್ದಿ ತಿಡುವ ಗುತರುತರ ಜವಾದ್ದಾರಿ ಪತ್ರಿಕೋದ್ಯಮದ್ದು. ಒಳ್ಳೆ ಕಾರ್ಯ ಮಾಡಿದಾಗ ಶಬ್ಬಾಶಗಿರಿ ನೀಡುತ್ತಾ, ತಪ್ಪು ಮಾಡಿದಾಗ ಚಾಟಿ ಏಟು ನೀಡುತ್ತಾ ಯಾರ ಅಚಿಜು ಅಳುಕು ಇಲ್ಲದೇ,ತನ್ನದೇ ಹಮ್ಮು ಬಿಮ್ಮಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಬದುಕು ಎಂಬುದು ಅಮೂಲ್ಯವಾದದ್ದು, ಬದುಕಬೇಕಾದರೆ ಕನಸುಗಳು ಅಷ್ಟೇ ಮುಖ್ಯ. ಕನಸುಗಳು ಬದುಕನ್ನು ರೂಪಿಸುತ್ತವೆ ಹಾಗೇ ನಾ ಕಂಡ ಪತ್ರಿಕೋದ್ಯಮದ ಕನಸು ಮುಂದಿನ ನನ್ನ ಬದುಕಾಗಿರುವುದು ಈಗ ಇತಿಹಾಸ.
ಪತ್ರಿಕೋದ್ಯಮ ಒಂದು ಗ್ಲಾಮರ್ ಲೋಕ ಎನ್ನುವುದು ಒಂದು ಮಾತಾದಾರೆ, ಅದರ ಒಳಗಿರುವ ಲೋಕ ನಮ್ಮನ್ನು ದಂಕು ಬಡಿಸುತ್ತವೆ. ಕ್ಷಣ ಕ್ಷಣಕ್ಕೂ ಹೊಸ ವಿಷಗಳು, ಹೊಸ ಮಾಹಿತಿಗಳನ್ನು ಹೆಕ್ಕಿ ತಗೆಯುವ ಕಸರತ್ತು ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಆದರೆ ನಿಂತು ಓದುವವರಿಗೆ, ಕುಳಿತು ನೋಡುವವರಿಗೆ ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇರುವುದಿಲ್ಲ.ಆದರೆ ಅದರ ಸುಳಿಗೆ .ಸಿಲುಕಿದಾಗಲೇ ಅದರ ಅರಿವು ಗೊತ್ತಾಗುವುದು. ಪತ್ರಿಕೋದ್ಯಮದಲ್ಲಿ ಸಾವಿರಾರು ಕನಸುಗಳನ್ನು ಕಂಡು ಅದೇಷ್ಟೋ ಜನ ಸಾಗಿದ್ದಾರೆ, ಸಾಧಿಸಿದ್ದಾರೆ, ಸಾಧಿಸಲಾಗದೇ ಸೋತು ಅದರ ಸಹವಾಸದಿಂದ ದೂರ ಸರಿದವರು ಇದ್ದಾರೆ.
 ಸುದ್ದಿಮನೆಯಲ್ಲಿ ಸದ್ದು ಮಾಡಬೇಕು, ಸಾವಿರ ಸಾವಿರ ಸಮಸ್ಯೆಗಳನ್ನು ಹೆಕ್ಕಿ ಸಮಾಜ ಸುಧಾರಿಸಬೇಕು ಎಂಬ ಕನಸು ನನ್ನದಾಗಿತ್ತು. ಒಬ್ಬ ವ್ಯಕ್ತಿ ಪತ್ರಕರ್ತನಾಗಲು ಓದು ಬರಹವಷ್ಟೇ ಇದ್ದರೆ ಸಾಲದು ಜನರ ಪ್ರತಿಧ್ವನಿಯಾಗಿ, ಸತ್ಯವನ್ನು ಹೇಳುವ, ಅನ್ಯಾಯದ ಪರ ನಿಲ್ಲುವ ಗಟ್ಟಿತನ ಬೇಕು ಹಾಗೇ ಕ್ರೀಯಾಶೀಲತೆಯು ಇರಬೇಕು. ಪತ್ರಿಕೋದ್ಯಮ ಸೇರಿದ ಕೆಲವೇ ದಿನಗಳನ್ನಿ ಈ ಸತ್ಯ ಅರಿವಾಯಿತು.
ಪತ್ರಿಕೋದ್ಯಮದಲ್ಲಿ ಕ್ಷಣ ಕ್ಷಣಕ್ಕೂ ಎದುರಾಗುವ ಅಪಾಗಳು, ಸಮಸ್ಯಗಳನ್ನು ಕಂಡು ಈ ವೃತ್ತಿಯೇ ಬೇಡ ಎಚಿದು ತೀರ್ಮಾನಿಸಿದ್ದು ಇದೆ. ಆದರೆ, ನನ್ನ ಕನಸು ಇಲ್ಲಿ ನಿಲ್ಲ ಬಾರದು, ಅದು ಕೂಡಾ ಪತ್ರಿಕೋದ್ಯಮದ ನೀರಿನೊಂದಿಗೆ ಹರಿಯಬೇಕು ಎಂದುಕೊಂಡು ಅದರ ಆಳ, ಅಗಲಗಳನ್ನು ತಿಳಿದುಕೊಳ್ಳಲು ಮುಂದಡಿ ಇಟ್ಟೆ.
ನಾವು ವಿದ್ಯಾರ್ಥಿಗಳಾಗಿದ್ದರು ಸಹ ನಮ್ಮ ಗುರುಗಳ ಹಲವು ವರ್ಷದ ಅನುಭವಗಳು ನಮ್ಮ ಬದುಕಿನ ಅನುಭವಗಳಿಗೆ ಸೇರುತ್ತವೆ. ಅವರು ಎದುರಿಸಿದ ಸಮಸ್ಯೆಗಳು ಕಂಡುಕೊಂಡ ಪರಿಹಾರಗಳು ನಮ್ಮ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ ನಮ್ಮ ಕನಸುಗಳಿಗೆ ನೀರೆರೆಯುತ್ತವೆ.
ಮತ್ತೊಬ್ಬರ ಭುಜದ ಮೇಲೆ ಬಂದುಕಿಟ್ಟು ಗುಂಡು ಹೊಡೆಯುವುದು ತುಂಬಾಜಾಣತನದ ಕೆಲಸ.  ಇದು ಕಷ್ಟದ ಕೆಲಸ ಎಂದುಕೊಳ್ಳುವವರ ಮುಂದೆ ನಾವು ಎಲ್ಲರಂತೆ ಎಂತಹ ಕಷ್ಟವಿದ್ದರು ಎದುರಿಸುವ ಶಕ್ತಿ ಮತ್ತು ಅಗತ್ಯವಾದ ಯುಕ್ತಿ ನಮ್ಮಲ್ಲೂ ಇದೆ ಎಂದು ತಿಳಿಸುವ ಕನಸು ನನ್ನದು.ಈ ಕನಸು ಹೊತ್ತ ಕಂಗಳು ಪತ್ರಿಕೊದ್ಯಮದಲ್ಲಿ ಬದುಕನ್ನು ರೂಪಿಸುತ್ತಿವೆ. ಕನಸಿಗೂ ಬದುಕಿಗೂ ಹಗಲು-ರಾತ್ರಿಯ ವ್ಯತ್ಯಾಸ ಬಿಟ್ಟರೆ ಎರಡು ಒಂದೇ. ಬದುಕು ಹಗಲು ಗನಸಾದರೆ, ಕನಸು ರಾತ್ರಿಯ ಬದುಕು. ಒಬ್ಬ ಒಳ್ಳೆಯ ಪತ್ರಕರ್ತೆಯಾಗಬೇಕು ಎಂಬುದು ನನ್ನ ಬದುಕಿನ ದೊಡ್ಡಕನಸು. ಕನಸಾಗಿ ಕಾಡಿದ ಕನಸು ಕಂಡ ಕನಸು ಸಾಕಾರಕ್ಕಾಗಿ ಶ್ರಮದಿಂದ ಕಲಿಯುತ್ತಿದ್ದೇನೆ.
manjunath gadgin

Wednesday, 6 April 2016

ಬಾಳಿಗೊಂದು ಯುಗಾದಿ!



ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
   ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ  ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ  ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
  ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ  ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
  ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
  ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.
  ಇನ್ನೂ ಯುಗಾದಿ ದಿನಾ, ಸೂರ್ಯ ಹುಟ್ಟುವ ಮುನ್ನವೇ ಎದ್ದು ಬೇವಿನ ಮರ ಹುಡುಕಿಕೊಂಡು ಅಲೆಯುತ್ತಿದ್ದೇವು. ಅದೆಲ್ಲೂ ಮರ ಕಂಡಿತೆಂದ್ರ ದಾವಂತ ಹೊಡಿಹೋಗುತ್ತಿದ್ದೇವು. ಅಷ್ಟರಲ್ಲಾಗಲೆ ಜನ ಬಂದು ಹೋಗುತ್ತಿದ್ದರು. ನಮ್ಗೆ ಗಿಡ ಹತ್ತಲು ಬರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಜನಕ್ಕೆ  ಅಣ್ಣಾರ ನಮ್ಮಗು ಸ್ವಲ್ಪ ಹರದಕೊಡ್ರಿ ಎಂದು ಬೇಡಿಕೊಳ್ಳುತ್ತಿದ್ದೇವು. ಅವ್ರ ಪಾಪಾ ಅಂತಾ ಕಿತ್ತು ಕೊಡುತ್ತಿದ್ದರು. ಹೀಗೆ ತಂದ ಬೇವನ್ನು ನಮ್ಮವ್ವನ ಕೈಯಲ್ಲಿ ಕೊಟ್ಟಾಗ ಅವಳು ಅದನ್ನು, ನೀರಿಗೆ ಹಾಕಿ ಕಾಯಿಸುತ್ತಿದ್ಳು. ಯಾಕ ಹಾಕ್ತಿ ಬೇ.. ಅಂತಾ ಕೇಳಿದರೆ  ಬೇವನ್ನು ಹಾಕಿ ಸ್ನಾನ ಮಾಡಿದ್ರ  ಯಾವುದೇ ರೋಗಾ-ರುಜಿನಾ ಬರೋದಿಲ್ಲ ಅಂತಾ ಹೇಳುತ್ತಿದ್ದಳು. ಅದರಿಂದ ನಾವು ಖುಷಿಯಾಗಿ ಹಾಕಬೇ ಇನ್ನಷ್ಟ ಹಾಕ ಎಂದು ಹೇಳುತ್ತಿದೇವು.
 ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು  ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು.  ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು.  ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.

  ಮಂಜುನಾಥ ಗದಗಿನ
8050753148

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...