ಹಸಿದ ಹೊಟ್ಟೆಗೆ ಅರಕಾಸಿನ ಮಜ್ಜಿಗೆಯು ಸಾಲದು ಎಂಬ ಮಾತು ಈಗ ಅರ್ಥವಾಗುತ್ತಿದೆ. ಊರಲ್ಲಿ ಅವ್ವ ಮಾಡಿದ ಬಿಸಿ, ಬಿಸಿ ರೊಟ್ಟಿ ತಿಂದು ಉಂಡಾಡಿ ಗುಂಡನ ಹಾಗೆ ತೀರಗಾಡ್ತಾಯಿದ್ದೆ. ಯಾವಾಗ ಊರ ಬಿಟ್ಟು ಧಾರವಾಡ ಸೇರಿಕೊಂಡ ನೋ..ಅವಾಗ ಗೊತ್ತಾಯಿತು.ಹಸಿವು ಎಂಬ ಶೂಲದ ಮಹತ್ವ. ಈಗ ಒಂದೊತ್ತು ಊಟ ಇಲ್ಲದೇ ಹೊದ್ರು ಹಸಿವೇ ಎಂಬ ಹೆಬ್ಬಾವು ಹೊಟ್ಟೆಯನ್ನೆ ಕಚ್ಚಿ ತಿನ್ನುತ್ತಿದೆ.
ಊರಲ್ಲಿ ಇದ್ದಾಗ ರಾಜಾಹುಲಿಯ ಹಾಗೆ ಕುಡಿಮೀಸೆಯ ಮೇಲೆ ಕೈ ಹೊತ್ತು, ಟೀಫ್ ಟಾಫ್ ಡ್ರೆಸ್ ಮಾಡ್ಕೋಂಡು ಇರಗ್ತಾಯಿದ್ರೆ, ಇವರೇನು? ಮಹಾರಾಜನ ಮೊಮ್ಮಕ್ಕಳಾ! ಎಂದು ಜನ ಗುಸು-ಗುಸು, ಪಿಸು-ಪಿಸು ಮಾತಾಡ್ತಾಯಿದ್ರು. ಕಿಸೆ ತುಂಬ ಕಾಸು, ಕೈಯಲ್ಲೊಂದು ಬೈಕ್ ಹಿಡ್ಕೊಂಡ ಜಮ್ ಅಂತಾ ಇದ್ವಿ. ಮನೆಯಲ್ಲಿ ಪೋನ್ ಮಾಡಿ ಮಗಾ! ಊಟಕ್ಕೆ ಬಾರ್ಲಾ ಎಂದು ಕರೆಯೊವರೆಗೂ ಅಲೆದಾಡ್ತಾಯಿದ್ವಿ.ಆದ್ರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಊರು ಬಿಟ್ಟು ಪರ ಊರಿಗೆ ಬಂದ ಮೇಲೆ, ಹಳೆಯ ನೆನಪುಗಳು ಸ್ಮತಿಪಟಲಗಳಲ್ಲಿ ಇಣುಕುತ್ತಾ, ನಮ್ಮನ್ನು ನೋಡಿ ಗಹಗಹಿಸಿ ನಗ್ತಾಯಿವೆ. ರಾಜಾಹುಲಿಯಾಗಿ ಊರು,ಕೆರಿ ಸುತ್ತಾಯಿದ್ದೆ, ಆದ್ರೆ ಈಗ ರಾಜಾಇಲಿಯಾಗಿ ಕ್ಯಾಂಪಸ್ನ ಸಂಧಿ, ಗೊಂದಿಗಳಲ್ಲಿ ಆಮಂತ್ರಣವಿಲ್ಲದ ಔತಣಕೂಟಗಳಿಗೆ ಅಲೆದಾಡ್ತಾಯಿದ್ದೇನೆ.
ಹಾಗಂತ್ತಾ ಇದು ನನ್ನೊಬ್ಬ ಕಥೆಯಲ್ಲ. ಇದು ಊರು ಬಿಟ್ಟು ಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಥೆಯ ವ್ಯಥ್ಯೆಯಾಗಿದೆ. ಮನೆಯಲ್ಲಿದ್ದಾಗ ಒಂದು ಕಡ್ಡಿಯನ್ನು ಈ ಕಡೆಯಿಂದ ತೆಗೆದು ಆ ಕಡೆ ಹಾಕುವದಿಲ್ಲ. ಆದ್ರೆ ಊರು ಬಿಟ್ಟ ಮೇಲೆ ಹಾಸ್ಟೆಲೋ..ರೂಮೋ.. ಮಾಡಿಕೊಂಡು ಸೆಗಣಿಯಲ್ಲಿಯ ಹುಳುವಿನ ಹಾಗೆ ಒದ್ಯಾಡುತ್ತಿರುತ್ತಾರೆ.
ಪತ್ರಿನಿತ್ಯ ಬೆಳಗಾದ್ರೆ ಸಾಕು, ಮಾಡಲೇ..ತಗಿಲೇ..ತಿನ್ನಲೇ..ತೋಳಿಲೇ..ಒಗಿಲೇ..ಎಂಬ ಲೇ ಜೀವ ಪ್ರಾರಂಭವಾಗುತ್ತದೆ. ಇದರ ಮಧ್ಯೆ ಕ್ಲಾಸು..ಲಕ್ಚರು ಎಂಬ ಕಿರಿ,ಕಿರಿ ಬೇರೆ. ಇದೆಲ್ಲವುದರೊಂದಿಗೆ ಹಸಿವೇ ಎಂಬ ಹೆಮ್ಮಾರಿ ಬೇರೆ ದಿನ ಬೆಳಗಾದ್ರೆ, ಸಾಕು, ಕೋಳಿಯಗಿಂತಲೂ ಅತತ್ವಾಗಿ ಕೂಗಲೂ ಶುರುಮಾಡುತ್ತೇ ಈ ಹೊಟ್ಟೆ ಎಂಬ ಬಕಾಸುರ. ಇದಕ್ಕೆ ಮಾಡಿ ಹಾಕೋದು, ಎಂದ್ರೆ ಎದೆ ಝಲ್ ಏನಿಸುತ್ತದೆ. ಆದ್ರೆ ತಿನ್ನೊವಾಗ ಸ್ವರ್ಗಕ್ಕೆ ನಾಲ್ಕೇ ಗೇಣು ಅನಿಸುತ್ತದೆ.
ಹುಡುಗರು ಅಡುಗೆಯಲ್ಲಿ ಪಾರಂಗತರಲ್ಲ. ಆದ್ರೆ ಕೆಲವೊಂದಿಷ್ಟು ಹುಡುಗರು ಮಾತ್ರ ಹೆಂಗಳೆಯರೆಗೆ ಟಾಂಗ್ ಕೊಡುವ ಹಾಗೆ ವಿವಿಧ ಭೋಜನಗಳನ್ನು ಮಾಡಲು ಕಲ್ತಿರ್ತಾರೆ. ಆದ್ರೆ ಅಡುಗೆ ಮಾಡಲು ಬರದೇ ಹುಡುಗ್ರು ಅಡುಗೆ ಮನೆಯಂದ್ರೆ ಅಖಾಡಕ್ಕೆ ಇಳಿದವರ ಹಾಗೆ ಆಡುತ್ತಾರೆ. ಪ್ರತಿದಿನ ಅನ್ನ, ಸಾರು.. ಬಿಟ್ಟರೇ ಮನೆಯಿಂದ ತಂದ ಖಡಕ್ ರೊಟ್ಟಿನೇ ಗತಿ. ಇದರಿಂದ ಊಟ ಎಂದರೆ ಮುಖ ಸಪ್ಪೆ ಮಾಡಿಕೊಳ್ಳುತ್ತಾರೆ.
ಆದ್ರೆ ಇದೆಲ್ಲವಿಂದ ತುಸು ವಿಮುಕ್ತಿ ಪಡೆಯಲು ವಿದ್ಯಾರ್ಥಿಗಳು ಅನಿವಾರ್ಯವಾಗಿ ಅಲ್ಲಲ್ಲಿ ನಡೆಯುವ ಆಮಂತ್ರಣವಿಲ್ಲ ಔತಣಕೂಟಗಳಿಗೆ ಹೋಗಿ ಗಡತ್ತಾಗಿ ಜಡಿದು ಬರುತ್ತಾರೆ. ಹೌದು! ಇದು ಹಸಿವೆ ಎಂಬ ಹೆಬ್ಬಾವನ್ನು ನಿಗಿಸಲು ಅನಿವಾರ್ಯ ಕೂಡಾ ಆಗಿದೆ. ಕ್ಯಾಂಪಸ್ನಲ್ಲಿ ಹಾಗೂ ಸುತ್ತ-ಮುತ್ತಲೂ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಆಮಂತ್ರಣಗಳು ಬಂದಿರುವುದಿಲ್ಲ. ಆದ್ರೆ ಒಬ್ಬ ವಿದ್ಯಾರ್ಥಿಗೆ ಗೊತ್ತಾದ್ರೆ ಸಾಕು, ಎಲ್ಲ ವಿದ್ಯಾರ್ಥಿಗಳ ಮೊಬೈಗಳು ರಿಂಗಣಿಸುತ್ತವೆ ನಂತರ, ಕಾರ್ಯಕ್ರಮ ವೀಕ್ಷಿಸಿ, ಭರ್ಜರಿ ಊಟ ಮಾಡಿ ಬರುತ್ತೇವೆ. ಇದರಿಂದ ಒಂದು ದಿನದ, ಹಸಿವುವೆಂಬ ಹೆಬ್ಬಾವಿಗೆ ತಣಿಸಿದಂತೆ ಆಗುತ್ತದೆ. ಆದ್ರೆ ಕೆಲವೊಂದು ಸಾರಿ ಅದೇ ಹೆಬ್ಬಾವು ಹೆಡೆ ಏತ್ತಿದಾಗ, ಅದಕ್ಕೆ ತಣ್ಣಿರ ಬಟ್ಟೆ ಹಾಕಿ ತೆಪ್ಪಗೆ ಮಲಗಿಸುತ್ತೇವೆ.
ಹಸಿವೇ ಎಂಬ ಹೆಬ್ಬಾವನ್ನು ಬಿಳ್ಕೋಡುವುದೆಂದರೆ, ಉರಿ,ಉರಿಯುವ ಅಗ್ನಿ ತನ್ನ ಶಾಖವನ್ನು ಬಿಟ್ಟು ಕೊಟ್ಟಂತೆ, ಅಲ್ಲವೇ? ಆದ್ರೆ ಹಸಿವೇ ಎಂಬ ಹೆಬ್ಬಾವಿಗೆ ಯಾವುದರ ಹಂಗಿದೆ, ಅದು ಎಲ್ಲರನ್ನು ಸುತ್ತಿಕೊಂಡೆ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿಗ ಆಗುತ್ತಿದೆ.
ಮಂಜುನಾಥ ನಾ ಗದಗಿನ
ಊರಲ್ಲಿ ಇದ್ದಾಗ ರಾಜಾಹುಲಿಯ ಹಾಗೆ ಕುಡಿಮೀಸೆಯ ಮೇಲೆ ಕೈ ಹೊತ್ತು, ಟೀಫ್ ಟಾಫ್ ಡ್ರೆಸ್ ಮಾಡ್ಕೋಂಡು ಇರಗ್ತಾಯಿದ್ರೆ, ಇವರೇನು? ಮಹಾರಾಜನ ಮೊಮ್ಮಕ್ಕಳಾ! ಎಂದು ಜನ ಗುಸು-ಗುಸು, ಪಿಸು-ಪಿಸು ಮಾತಾಡ್ತಾಯಿದ್ರು. ಕಿಸೆ ತುಂಬ ಕಾಸು, ಕೈಯಲ್ಲೊಂದು ಬೈಕ್ ಹಿಡ್ಕೊಂಡ ಜಮ್ ಅಂತಾ ಇದ್ವಿ. ಮನೆಯಲ್ಲಿ ಪೋನ್ ಮಾಡಿ ಮಗಾ! ಊಟಕ್ಕೆ ಬಾರ್ಲಾ ಎಂದು ಕರೆಯೊವರೆಗೂ ಅಲೆದಾಡ್ತಾಯಿದ್ವಿ.ಆದ್ರೆ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಊರು ಬಿಟ್ಟು ಪರ ಊರಿಗೆ ಬಂದ ಮೇಲೆ, ಹಳೆಯ ನೆನಪುಗಳು ಸ್ಮತಿಪಟಲಗಳಲ್ಲಿ ಇಣುಕುತ್ತಾ, ನಮ್ಮನ್ನು ನೋಡಿ ಗಹಗಹಿಸಿ ನಗ್ತಾಯಿವೆ. ರಾಜಾಹುಲಿಯಾಗಿ ಊರು,ಕೆರಿ ಸುತ್ತಾಯಿದ್ದೆ, ಆದ್ರೆ ಈಗ ರಾಜಾಇಲಿಯಾಗಿ ಕ್ಯಾಂಪಸ್ನ ಸಂಧಿ, ಗೊಂದಿಗಳಲ್ಲಿ ಆಮಂತ್ರಣವಿಲ್ಲದ ಔತಣಕೂಟಗಳಿಗೆ ಅಲೆದಾಡ್ತಾಯಿದ್ದೇನೆ.
ಹಾಗಂತ್ತಾ ಇದು ನನ್ನೊಬ್ಬ ಕಥೆಯಲ್ಲ. ಇದು ಊರು ಬಿಟ್ಟು ಬಂದ ಪ್ರತಿಯೊಬ್ಬ ವಿದ್ಯಾರ್ಥಿಗಳ ಕಥೆಯ ವ್ಯಥ್ಯೆಯಾಗಿದೆ. ಮನೆಯಲ್ಲಿದ್ದಾಗ ಒಂದು ಕಡ್ಡಿಯನ್ನು ಈ ಕಡೆಯಿಂದ ತೆಗೆದು ಆ ಕಡೆ ಹಾಕುವದಿಲ್ಲ. ಆದ್ರೆ ಊರು ಬಿಟ್ಟ ಮೇಲೆ ಹಾಸ್ಟೆಲೋ..ರೂಮೋ.. ಮಾಡಿಕೊಂಡು ಸೆಗಣಿಯಲ್ಲಿಯ ಹುಳುವಿನ ಹಾಗೆ ಒದ್ಯಾಡುತ್ತಿರುತ್ತಾರೆ.
ಪತ್ರಿನಿತ್ಯ ಬೆಳಗಾದ್ರೆ ಸಾಕು, ಮಾಡಲೇ..ತಗಿಲೇ..ತಿನ್ನಲೇ..ತೋಳಿಲೇ..ಒಗಿಲೇ..ಎಂಬ ಲೇ ಜೀವ ಪ್ರಾರಂಭವಾಗುತ್ತದೆ. ಇದರ ಮಧ್ಯೆ ಕ್ಲಾಸು..ಲಕ್ಚರು ಎಂಬ ಕಿರಿ,ಕಿರಿ ಬೇರೆ. ಇದೆಲ್ಲವುದರೊಂದಿಗೆ ಹಸಿವೇ ಎಂಬ ಹೆಮ್ಮಾರಿ ಬೇರೆ ದಿನ ಬೆಳಗಾದ್ರೆ, ಸಾಕು, ಕೋಳಿಯಗಿಂತಲೂ ಅತತ್ವಾಗಿ ಕೂಗಲೂ ಶುರುಮಾಡುತ್ತೇ ಈ ಹೊಟ್ಟೆ ಎಂಬ ಬಕಾಸುರ. ಇದಕ್ಕೆ ಮಾಡಿ ಹಾಕೋದು, ಎಂದ್ರೆ ಎದೆ ಝಲ್ ಏನಿಸುತ್ತದೆ. ಆದ್ರೆ ತಿನ್ನೊವಾಗ ಸ್ವರ್ಗಕ್ಕೆ ನಾಲ್ಕೇ ಗೇಣು ಅನಿಸುತ್ತದೆ.
ಹುಡುಗರು ಅಡುಗೆಯಲ್ಲಿ ಪಾರಂಗತರಲ್ಲ. ಆದ್ರೆ ಕೆಲವೊಂದಿಷ್ಟು ಹುಡುಗರು ಮಾತ್ರ ಹೆಂಗಳೆಯರೆಗೆ ಟಾಂಗ್ ಕೊಡುವ ಹಾಗೆ ವಿವಿಧ ಭೋಜನಗಳನ್ನು ಮಾಡಲು ಕಲ್ತಿರ್ತಾರೆ. ಆದ್ರೆ ಅಡುಗೆ ಮಾಡಲು ಬರದೇ ಹುಡುಗ್ರು ಅಡುಗೆ ಮನೆಯಂದ್ರೆ ಅಖಾಡಕ್ಕೆ ಇಳಿದವರ ಹಾಗೆ ಆಡುತ್ತಾರೆ. ಪ್ರತಿದಿನ ಅನ್ನ, ಸಾರು.. ಬಿಟ್ಟರೇ ಮನೆಯಿಂದ ತಂದ ಖಡಕ್ ರೊಟ್ಟಿನೇ ಗತಿ. ಇದರಿಂದ ಊಟ ಎಂದರೆ ಮುಖ ಸಪ್ಪೆ ಮಾಡಿಕೊಳ್ಳುತ್ತಾರೆ.
ಆದ್ರೆ ಇದೆಲ್ಲವಿಂದ ತುಸು ವಿಮುಕ್ತಿ ಪಡೆಯಲು ವಿದ್ಯಾರ್ಥಿಗಳು ಅನಿವಾರ್ಯವಾಗಿ ಅಲ್ಲಲ್ಲಿ ನಡೆಯುವ ಆಮಂತ್ರಣವಿಲ್ಲ ಔತಣಕೂಟಗಳಿಗೆ ಹೋಗಿ ಗಡತ್ತಾಗಿ ಜಡಿದು ಬರುತ್ತಾರೆ. ಹೌದು! ಇದು ಹಸಿವೆ ಎಂಬ ಹೆಬ್ಬಾವನ್ನು ನಿಗಿಸಲು ಅನಿವಾರ್ಯ ಕೂಡಾ ಆಗಿದೆ. ಕ್ಯಾಂಪಸ್ನಲ್ಲಿ ಹಾಗೂ ಸುತ್ತ-ಮುತ್ತಲೂ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಆಮಂತ್ರಣಗಳು ಬಂದಿರುವುದಿಲ್ಲ. ಆದ್ರೆ ಒಬ್ಬ ವಿದ್ಯಾರ್ಥಿಗೆ ಗೊತ್ತಾದ್ರೆ ಸಾಕು, ಎಲ್ಲ ವಿದ್ಯಾರ್ಥಿಗಳ ಮೊಬೈಗಳು ರಿಂಗಣಿಸುತ್ತವೆ ನಂತರ, ಕಾರ್ಯಕ್ರಮ ವೀಕ್ಷಿಸಿ, ಭರ್ಜರಿ ಊಟ ಮಾಡಿ ಬರುತ್ತೇವೆ. ಇದರಿಂದ ಒಂದು ದಿನದ, ಹಸಿವುವೆಂಬ ಹೆಬ್ಬಾವಿಗೆ ತಣಿಸಿದಂತೆ ಆಗುತ್ತದೆ. ಆದ್ರೆ ಕೆಲವೊಂದು ಸಾರಿ ಅದೇ ಹೆಬ್ಬಾವು ಹೆಡೆ ಏತ್ತಿದಾಗ, ಅದಕ್ಕೆ ತಣ್ಣಿರ ಬಟ್ಟೆ ಹಾಕಿ ತೆಪ್ಪಗೆ ಮಲಗಿಸುತ್ತೇವೆ.
ಹಸಿವೇ ಎಂಬ ಹೆಬ್ಬಾವನ್ನು ಬಿಳ್ಕೋಡುವುದೆಂದರೆ, ಉರಿ,ಉರಿಯುವ ಅಗ್ನಿ ತನ್ನ ಶಾಖವನ್ನು ಬಿಟ್ಟು ಕೊಟ್ಟಂತೆ, ಅಲ್ಲವೇ? ಆದ್ರೆ ಹಸಿವೇ ಎಂಬ ಹೆಬ್ಬಾವಿಗೆ ಯಾವುದರ ಹಂಗಿದೆ, ಅದು ಎಲ್ಲರನ್ನು ಸುತ್ತಿಕೊಂಡೆ ಇರುತ್ತದೆ. ಆದರೆ ಅದರ ಅರಿವು ಮಾತ್ರ ನಮಗಿಗ ಆಗುತ್ತಿದೆ.
ಮಂಜುನಾಥ ನಾ ಗದಗಿನ