Wednesday, 18 January 2017

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..!!

    ಇಂದು-ನಾಳೆ ಮುಗಿಯದೇ,ನಿತ್ಯ ನಿರಂತರ ಹರಿಯುವುದೇ ಸ್ನೇಹದ ಕಡಲು. ಆ ಕಡಲಲ್ಲಿ ನಮ್ಮ ನೆನೆಪುಗಳು ಮಿಂಚು ದೋಣಿಗಳು ಇದ್ದ ಹಾಗೆ, ಬಂದು ಹೀಗೆ ಹೋಗುತ್ತೆ. ಅದರೊಟ್ಟಿಗೆ ಸಾಗರದ ಅಲೆಯ ಹಾಗೆ ಮಧುರಕ್ಷಣಗಳನ್ನು ಹೊತ್ತುಕೊಂಡು ಬಂದು ಎದೆಯಾಳದಲ್ಲಿ ತುಂಟ ನೆನಪುಗಳನ್ನು ಸುರಿಸುತ್ತವೆ.
ಬೆಟ್ಟದಂತಹ ಕನಸುಗಳೊಂದಿಗೆ, ಒಂದು ಭರವಸೆಯೊಂದಿಗೆ ಅದೇಷ್ಟೋ ವಿದ್ಯಾರ್ಥಿಗಳು ತಂದೆ-ತಾಯಿ,ಬಂಧುಬಳಗ, ಬಾಲ್ಯದ ಸ್ನೇಹಿತರುನ್ನು ಬಿಟ್ಟು ಕಾಣದ ಊರಿಗೆ ಬಂದು ಶಿಕ್ಷಣ ಪಡೆಯುತ್ತಾರೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣ ಪಡೆಯಬೇಕೆಂದರೆ ಊರು ಬಿಟ್ಟು ಬರಲೇ ಬೇಕು. ಹ್ಞೂ! ನಾನು ಕೂಡಾ ಒಂದು ಚಿಕ್ಕ ಭರವಸೆಯೊಂದಿಗೆ ನಗರಕ್ಕೆ ಅಂಬೆಗಾಲಿಟ್ಟವನು. ಗೊತ್ತಿಲ್ಲದ ಊರಿಗೆ ಬಂದ ಮೇಲೆ ಪ್ರಾರಂಭದಲ್ಲಿ ಎಡವುದು ಸಹಜ. ಮತ್ತೆ ಚೇತರಿಸಿಕೊಂಡು ಮುನ್ನುಗುವದು ಕಾಲ ಸಹಜ. ನಾನು ಕೂಡಾ ಪ್ರಾರಂಭದ ಎಲ್ಲ ಕಷ್ಟಗಳನ್ನು ಅನುಭವಿಸಿ ಸ್ನಾತಕೋತ್ತರ ಮುಗಿಸಿದವನೇ. ಆದರೆ ನನ್ನ ಆ ಕಷ್ಟಗಳಿಗೆ, ಸುಖಗಳಿಗೆ ಹೇಗಲಾಗಿ ನಿಂತುಕೊಂಡಿದ್ದು ನನ್ನ ಸ್ನೇಹಿತರು.
ಅವು ಕಾಲೇಜಿನ ಆರಂಭದ ದಿನಗಳು. ಕಂಡಷ್ಟು ಬಗೆದಷ್ಟು ಎಲ್ಲವೂ ಹೊಸದು. ಅದರೊಟ್ಟಿಗೆ ಹೊಸ ಮುಖಗಳ ದರ್ಶನ. ಅನಂತರ ಅವೇ ಮುಖಗಳು ಮಾಗದರ್ಶ ನೀಡಿದ್ದು ಈಗ ಇತಿಹಾಸ. ಕಾಲಗಳು ಗತಿಸಿದರು ನೆನಪುಗಳು ಗತಿಸವು ಎಂಬುದಕ್ಕೆ ಕ್ಯಾಂಪಸನ್ ಕೆಲವು ಸ್ನೇಹದ ಸಹಾಯಗಳು,ಕಿಟಲೆಗಳು, ಮುನಿಸು, ದ್ವೇಷ, ಜಗಳ, ಕಾಡು ದಾರಯಲ್ಲಿ ಕಾಡಿಸಿದ್ದು ಎಲ್ಲವೂ ನೆನಪಿನ ದೋಣಿಯಲ್ಲಿ ಸಾಗುವವೇ.
ದಿನದ ಖರ್ಚಿಗೆ ಎಂದು ತಂದಿದ್ದ ಸಾವಿರ ರೂಪಾಯಿ, ಕಾಡುದಾರಿ ಮಧ್ಯೆ ಕಳೆದು ಹೋದಾಗಿ,ಊರಿಗೆ ಹೋಗಲು ದುಡ್ಡು ಇಲ್ಲದಿದ್ದಾಗ, ನನ್ನ ಕಷ್ಟವನ್ನು ಆಲಿಸಿ, ತನ್ನ ಜೇಬಿನಿಂದ ನೂರರ ಮೂರು ನೋಟುಗಳನ್ನು ನನ್ನ ಕೈಗಿಟ್ಟು ಮಂಜು ಈ ದುಡ್ಡು ತೆಗೆದುಕೊಂಡು ಹೋಗು, ನಿನ್ನ ಖರ್ಚಿಗೂ ಆಗುತ್ತದೆ, ನೀನು ಊರಿಂದ ಬಂದ ಮೇಲೆ ಕೊಡುವಂತೆ ಎಂದು ಕಷ್ಟ ಕಾಲದಲ್ಲಿ ಕನಿಕರದಿಂದ ಸಹಾಯ ಮಾಡಿದ ಸುರೇಶಣ್ಣ. ಎಕ್ಸಾಂ ಬಂದಾಗ ವಾರ್ಡನ ಎದುರು ಹಾಕಿಕೊಂಡು ಸ್ನೇಹಕ್ಕೆ ತನ್ನ ಹಾಸ್ಟೇಲ್‌ನಲ್ಲಿ ನೆಲೆಸಲು ಅವಕಾಶ ಕೊಡುತ್ತಿದ್ದ, ಪ್ರತಿದಿನ ಮಧ್ಯಾಹ್ನ ತುತ್ತು ಊಟ ಕೊಡುತ್ತಿದ್ದ ಯಲ್ಲಪ್ಪ, ಪ್ರತಿದಿನ ದುಡ್ಡು ಖರ್ಚು ಮಾಡಿ ಲೇಖನಗಳನ್ನು ಟೈಫ ಮಾಡಲು ಹೋಗುತ್ತಿದ್ದಾಗ ಅಣ್ಣ ನನ್ನ ಲ್ಯಾಫಿ ಇದೆ. ಮನೆಗೆ ತೆಗೆದುಕೊಂಡು ಹೋಗಿ ಟೈಫ್ ಮಾಡು ಎಂದು ಸಹೃದಯ ತೋರಿದ ಮಧುಶ್ರೀ. ಸ್ಟೋರ್ಟ ಟೀಶರ್ಟಗೆ ಕೊಡಲು ದುಡ್ಡು ಇಲ್ಲದಾದ ತನ್ನ ಕೈಯಿಂದ ದುಡ್ಡು ನೀಡಿದ ಸುಬ್ಬು, ಪ್ರತಿದಿನ ಪ್ರಯಾಣದಲ್ಲಿ ಜತೆಯಾಗಿ ಇರುತ್ತಿದ್ದ ಶ್ರೀ ಹೀಗೆ ಸ್ನೇಹ ಎಂಬ ಸುಂದರ ಕಡಲನ್ನು ತೆರೆಯುತ್ತಾ ಹೋದ ಹಾಗೆ ಅದರ ಹರವು ಹೆಚ್ಚಾಗುತ್ತಾ ಸಾಗುತ್ತದೆ.
  ಲೇಖನ ಕಳುಹಿಸಲು ಲ್ಯಾಫಿ ಕೊಡಲಿಲ್ಲ ಎಂದು, ಮಲ್ಲಿಕಾರ್ಜುನ ಜೊತೆ ಮಾತು ಬಿಟ್ಟದ್ದು, ಅಕ್ಕನ ಮದುವೆಗೆ ಕರೆದಿಲ್ಲ ಎಂದು ಮೂನಿಸಿಕೊಂಡದ್ದು, ಕಾಲೇಜಗೆ ನನ್ನ ಬಿಟ್ಟು ಹೋದ ಎಂದು ಗೆಳೆಯನೊಂದಿಗೆ ಸೆಟಗೊಂಡಿದ್ದು, ಎಕ್ಸಾಂ ನಲ್ಲಿ ತೊರಿಸಲಿಲ್ಲ ಎಂದು ಕೋಪಗೊಂಡಿದ್ದು, ಹಾಸ್ಟೇಲ್ ದಾರಿಯಲ್ಲಿ ಮಾವು ಕದ್ದು ತಿನ್ನಂದ್ದು, ರೈಲ್ವೆ ಹಳಿಗಳ ಮೇಲೆ ಬೇಕಾಬಿಟ್ಟಿ ಸೇಲ್ಪಿ ತೆಗೆದುಕೊಂಡದ್ದು, ಶ್ರೀನಗರ ಸರ್ಕಲ್‌ನಲ್ಲಿ ನಿಂತು ಸ್ನೇಹಿತರೊಟ್ಟಿಗೆ ಹುಡ್ಗಿಯರಿಗೆ ಕಾಳಹಾಕಿದ್ದು, ಒಂದೇ ಬೈಕ್ ಮೇಲೆ ಪಂಚಪಾಂಡವರು ಪ್ರಯಾಣಿಸಿದ್ದು, ಒಂದೇ ಪ್ಲೇಟ್‌ನಲ್ಲಿ ಮೂವರು ಊಟ ಮಾಡಿದ್ದು, ನೇರಳೆ ಹಣ್ಣಿಗಾಗಿ ಗಿಡ ನೇತಾಡಿದ್ದು ಎಲ್ಲವು ಸ್ನೇಹದ ಸುಮಧುರ ಕ್ಷಣಗಳೆ. ಆದರೆ ಆ ಸ್ನೇಹಿತರು ಈಗ ನನ್ನೊಟ್ಟಗಿಲ್ಲ. ಆದರೆ ಅವರ ನೆನಪು ಮಾತ್ರ ನನ್ನೊಟ್ಟಿಗೆ ಸದಾ ಇರುತ್ತವೆ. ವೃತ್ತಿ ಬದುಕಿನಲ್ಲಿ ಎಲ್ಲ ಸ್ನೇಹಿತರು ಒಂದೊಳ್ಳೆ ಹುದ್ದೆ ಪಡೆಕೊಳ್ಳಿ ಎಂದು ಆಶಿಸುವ ನಿಮ್ಮ ಸ್ನೇಹಿತ ಮಂಜು.
ಮಂಜುನಾಥ ಗದಗಿನ

Wednesday, 11 January 2017

ಥಂಡಿಗೆ ಥರಗುಟ್ಟುವ ಕವಿವಿ ಕ್ಯಾಂಪಸ್


  ವರ್ಷದ ಹನ್ನೇರಡು ತಿಂಗಳು ಹಚ್ಚ ಹಸಿರನ್ನು ಹೊದ್ದು ಬೆಚ್ಚಗೆ ಮಲಗಿರುವ ಕರ್ನಾಟಕ ಸಸ್ಯ ಶಾಮಲೆ. ಚಳಿಗಾಲದಲ್ಲಿ ಮೈಕೊಡವಿ ಎದ್ದು ಇಡೀ ಕ್ಯಾಂಪಸ್‌ನ್ನು ಥರಗುಟ್ಟುವಂತೆ ಮಾಡುತ್ತಾಳೆ.
   ನವ್ಹೆಂಬ, ಡಿಸೆಂಬರ್ ತಿಂಗಳಲ್ಲಿ ಚಳಿಯದ್ದೇ ಆರ್ಭಟ. ಬಡವ, ಶ್ರೀಮಂತರೆಂಬ ಭೇದಭಾವ ಇಲ್ಲದೇ ಎಲ್ಲರಿಗೂ ಚಳಿ, ಚಳಿ ಏಟು ನೀಡುತ್ತದೆ. ಆದರೆ ಈ ಬಾರಿ  ಚಳಿ ತುಸು ಜಾಸ್ತಿನೇ ಇದೆ. ಇದಕ್ಕೆ ಧಾರವಾಡ ಕೂಡ ಹೊರತಾಗಿಲ್ಲ. ಅದರಲೂ, ಕರ್ನಾಟಕ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಚಳಿ ಹೆಚ್ಚಾಗಿಯೇ ಇದೆ. ವಿದ್ಯಾರ್ಥಿಗಳ ಅನುಭವಿಸುವ ಪಾಡು ಆ ದೇವರಿಗೆ ಪ್ರೀತಿ.
 ದೇಶ, ರಾಜ್ಯದ  ನಾನಾ ಹಾಗೂ ವಿದೇಶದ  ಸಾವಿರಾರು ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. ಆರಂಭದಲ್ಲಿ ಉತ್ಸಾಹದಿಂದಲೇ ಆಟ-ಪಾಠದೊಂದಿಗೆ ಓಡಾಡಿಕೊಂಡಿರುತ್ತಾರೆ. ಅಕ್ಟೋಬರ್ ಕಳೆಯುತ್ತ ನವೆಂಬರ್ ಆರಂಭವಾಗುತ್ತಿದ್ದಂತೆ ಗಂಟು ಮೂಟೆಯಲ್ಲಿದ್ದ ಸ್ವೆಟರ್, ಸಾಕ್ಸ್, ಹ್ಯಾಂಡಗ್ಲೋಸ್, ಜರ್ಕೀನ, ಕುಲಾವಿ, ಶಾಲು, ಮಾಪ್ಲರ ಮೊದಲಾದ ಹೊದಿಕೆಗಳು ಹೊರಬಂದು ವಿದ್ಯಾರ್ಥಿಗಳ ಮುನಿದ ಮೈಗೆ ಬೆಚ್ಚಗಿನ ಅನುಭವ ನೀಡುತ್ತಿವೆ.
ಈ ಮಧ್ಯೆ ಬೀಸುವ ಶುಷ್ಕ ವಾತಾವರಣ, ಶೀತಗಾಳಿಗೆ ವಿದ್ಯಾರ್ಥಿಗಳ ಆಸಕ್ತಿ ಕಡಿಮೆ ಆಗುತ್ತದೆ. ತಮ್ಮ ಪ್ರದೇಶದ ಚಳಿಗೂ, ಕ್ಯಾಂಪಸ ಚಳಿಗೂ ಹೊಂದಾಣಿಕೆ ಆಗದೇ, ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಪ್ರಸಕ್ತ ವರ್ಷದ ಚಳಿ ತುಂಬಾನೆ ಹೆಚ್ಚಾಗಿರುವದರಿಂದ ವಿದ್ಯಾರ್ಥಿಗಳ ಪಾಡು ಹೇಳತಿರದಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳು ಕ್ಲಾಸ್‌ಗಳಿಗೆ ಲೇಟಾಗಿ ಬರುತ್ತಿರುವದು ಸರ್ವೇಸಾಮಾನ್ಯವಾಗಿದೆ.
     ಈ ಸಮಯದಲ್ಲಿ ಹುಡುಗಿಯರಿಗೆ ತಮ್ಮ ಸೌಂದರ್ಯ, ತ್ವಚೆಯದೇ ಚಿಂತೆ. ಚಳಿಗಾಲದಲ್ಲಿ ತ್ವಚ್ಛೆ ರಕ್ಷಿಸಲು ಹರಸಾಹಸ ಮಾಡುತ್ತಿರುವುದು ಕಂಡುಬರುತ್ತದೆ. ಅಂದದ ಮುಖಕ್ಕೆ ಚಂದದ ಬಣ್ಣ ಹಚ್ಚಿಕೊಂಡು ಬರುತ್ತಿದ್ದ ಹುಡುಗಿಯರು, ಈ ಸಾರಿ ಅವೆಲ್ಲಕ್ಕೂ ತಾತ್ಕಾಲಿಕವಾಗಿ ಬಾಯ್ ಬಾಯ್ ಹೇಳಿದ್ದಾರೆ.
  ರಾತ್ರಿ ಒಂದು ಗಂಟೆಯವರೆಗೂ ಓದುತ್ತಿದ್ದ ವಿದ್ಯಾರ್ಥಿಗಳು, ಚಳಿಗಾಲದಲ್ಲಿ ಏಳಕ್ಕೆ ಬೆಚ್ಚಗಿನ ರಗು ಹೊದ್ದು ಮಲಗಿದರೆ ಮಾರನೇ ದಿನ ಎಂಟಕ್ಕೆ ಏಳುತ್ತಿದ್ದಾರೆ. ಅದು ಏಕ್ಸಾಂ ಇವೆ ಎಂಬ ಪರಿವೇ ಇಲ್ಲದೆ. ಅಲ್ಲಿ-ಇಲ್ಲಿ ರೂಮ್ ಮಾಡಿದವರ ಕಥೆಯೇ ಹೀಗಾದ್ರೇ. ಅಲ್ಲೇ ಇರುವ ಶಾಲ್ಮಲಾ, ನ್ಯೂ ಪಿಜಿ. ಭೀಮಾ ಹಾಸ್ಟಲ್ ವಿಧ್ಯಾರ್ಥಿಗಳು ಅನುಭವ ಜಮ್ಮು-ಕಾಶ್ಮೀರ ನಿವಾಸಿಗಳಂತಾಗಿದೆ.
ಚಳಿ, ಚಳಿ ತಾಳೆನು ಈ ಚಳಿಯಾ! ಎಂಬ ಹಾಡನ್ನು ಗುನುಗುತ್ತಾ, ಚಳಿಯಿಂದ ರಕ್ಷಣೆ ಪಡೆಯಲೂ ಎಲ್ಲಿದ ಕಸರತ್ತು ಮಾಡುತ್ತಿದ್ದಾರೆ. ಮಂಜು ಹೋಟೆಲ್, ಮಿಲ್ಕ ಪಾರ್ಲರಗಳತ್ತ ವಿದ್ಯಾರ್ಥಿಗಳ ದಂಡೆ ಹೋಗುತ್ತಿದೆ. ಹಿಂದಿನ ವರ್ಷಕ್ಕಿಂತ ಈ ಸಲದ ಥಂಡಿಗೆ ಕ್ಯಾಂಪಸ್ ಮಾತ್ರ ಥರಗುಟ್ಟುತ್ತಿದೆ ಎಂದು ಸೀನಿಯರ್‌ಗಳ ಅನುಭವದ ಮಾತು.

   ಮಂಜುನಾಥ ಗದಗಿನ

Saturday, 7 January 2017

ಕೆಯುಡಿ ಕ್ಯಾಂಪಸ್ ವಯ್ಯಾರ...!

ಮಂಜುನಾಥ ನಾ ಗದಗಿನ

   ಯುಗಾದಿ ಆರಂಭದಿಂದಲೇ ಪ್ರಕೃತಿಯಲ್ಲಿ ಹೊಸ ಬದಲಾವಣೆ ಪ್ರಾರಂಭವಾಗುತ್ತದೆ. ಹೊಸ ಚಿಗುರು, ಹೊಸ ವಿಕಾಸಗಳಾಗಿ ಈ ಜಗತ್ತಿಗೆ ನವ್ಯ ಶೋಭೆಯನ್ನು ತಂದು ಮನಸ್ಸಿಗೆ ಮುದ ನೀಡುತ್ತದೆ. ಅದೇ ರೀತಿ ನಮ್ಮ ಕ್ಯಾಂಪಸನ ಸಸ್ಯಶಾಮಲೆ ಕೂಡಾ ಫುಲ್ ಶೈನಿಂಗ್ ಆಗಿ ವಿದ್ಯಾರ್ಥಿಗಳ ಮುದ್ದಾದ ಮನಸ್ಸುಗಳಿಗೆ ಮುದ್ದು ಮಾಡುತ್ತಾ ಮುದ ನೀಡುತ್ತಿದ್ದಾಳೆ.
  ಮಲೆನಾಡಿನ ಮಗುವಿನಂತಿರುವ ಧಾರವಾಡಕ್ಕೆ ಶಿಕ್ಷಣಕಾಶಿ, ನಿವೃತ್ತರ ಸ್ವರ್ಗ ಎಂಬಿತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಯಾಕೆಂದ್ರ ಇಲ್ಲಿನ ವಾತಾವರಣ ಎಲ್ಲರಿಗೂ ಒಗ್ಗುವತಂದ್ದು. ಬಿರು ಬೇಸಿಗೆಯನ್ನು ಬೆಂಡಾಗಿಸಿ ತಂಪನೆರೆಯುವ ತಾಕತ್ತು ಇಲ್ಲಿನ ವಾತಾವರಣಕ್ಕಿದೆ.
 ಇನ್ನೂ ಕವಿವಿ ಪ್ರಕೃತಿಗೆ ಈಗ ಹಬ್ಬದ ಸಂಭ್ರಮ. ಎಲ್ಲಿ ನೋಡಿದರು ಹೊಸ ಚಿಗುರಿನಿಂದ ಕಂಗೊಳಿಸು ಮರಗಳು, ಚಿತ್ತಾಕರ್ಷಕದೊಂದಿಗೆ ಅರಳಿನಿಂತ ಹೂಗಳು, ಮೈ ಮರೆತು ಮನತುಂಬಿ ಕೂಗುವ ಕೋಗಿಲೆಗಳು, ಬಿಂಕ-ಬಿನ್ನಾಣಗಳಿಂದ ಮುತ್ತನಿಕ್ಕುವ ಚಿಟ್ಟೆಗಳು. ಇದೆಲ್ಲದಕ್ಕೂ ಸಾಕ್ಷಿಯಾಗಿ ಬಿಸುವ ತಂಗಾಳಿ, ಎಸ್ ! ನಿಜಕ್ಕೂ ಬಣ್ಣಿಸಲಾದಗ ಪ್ರಕೃತಿಯ ಒಯ್ಯಾರ ಕಣ್ಣಿಗೆ ಕಟ್ಟುತ್ತಿದೆ.
  ಮಾನವನಲ್ಲಿ ಹುಟ್ಟು ಪ್ರಶ್ನೆಯಾದರೆ, ಸಾವು ಉತ್ತರವಾಗಿ ನಿಲ್ಲುತ್ತದೆ. ಆದರೆ ಪ್ರಕೃತ್ತಿಯದ್ದು ಹುಟ್ಟು, ಸಾವಿನದಾಚೆಗಿನ ಬದುಕು. ಅದಕ್ಕೆ ಪ್ರಕೃತಿಯನ್ನು ಮಾಯೆ ಎಂದು ಕರೆಯುತ್ತಾರೆ. ಆ ಮಾಯೆಯ ಮಾಟಕ್ಕೆ ಕವಿವಿ ವಿದ್ಯಾರ್ಥಿಗಳು ಮಾತ್ರ ಮಂತ್ರಮುಗ್ಧರಾಗಿದ್ದಾರೆ.
  ಯುಗಾದಿಯ ಆರಂಭಕ್ಕೂ ಮುನ್ನ ಕಣ್ಣು ಹಾಯಿಸಿದ್ದಷ್ಟು ಕಣ್ಣಿಗೆ ಕಾಣುತ್ತಿದದ್ದು, ಸೆಟ್ಟುದುನಿಂತ ಒಣ ಮರ-ಗಿಡಗಳು. ಇದ್ದರೂ ಇಲ್ಲದವರಂತೆ ನಿಶಬ್ಧವಾದ ತನ್ನ ಇರುವಿಕೆಯನ್ನೆ ಕಳೆದುಕೊಂಡಂತೆ, ಮೌನಕ್ಕೆ ಜಾರಿದ್ದ ಸಸ್ಯಶಾಮಲೆ. ಆದರೆ ಈಗಿನ ವಾತಾವರಣ ನೋಡಿದರೆ ಇವಳೇ ನಾ! ಕಳೆದು ಹೋದ ಸಸ್ಯಶಾಮಲೆ ಎಂದು ಮೂಗಿನ ಮೇಲೆ ಬೆರಳಿಟ್ಟು ನೋಡುವ ಹಾಗೆ ದಟ್ಟಡವಿಯನ್ನು ಮೀರಿಸುವಂತೆ ಮೀರ-ಮೀರ ಮಿನುಗುತ್ತಿದ್ದಾಳೆ. ನಮ್ಮ ವನಶ್ರೀ.
   ಅದರಲ್ಲೂ ಕ್ಯಾಂಪಸ್‌ನ ಹಸಿರಿಗೆ ಅದೇನೋ! ಗತ್ತು, ಗಮ್ಮತ್ತಿದೆ. ಚೈತ್ರದ ಚಿಗುರಿಗೆ ಚಿಗುರು ಮಿಸೆಯ ಹುಡುಗರನ್ನು ಮಗುವಾಗಿಸಿ, ತಣಿಸಿ, ಕುಣಿಸುವ, ತಳಮಳಗೊಳಿಸಿ, ಎಲ್ಲೆಲ್ಲಿಗೋ ಕೊಂಡಯ್ಯುವ, ಬಿರು ಬೇಸಿಗೆಗೆ ಬಳಲಿ ಮರೆತು ಹೋದ ನೆನೆಪುಗಳಿಗೆ ಮರುಜೀವ ತುಂಬುವ, ಅಗಾಧ ಶಕ್ತಿ ಈ ಚೈತ್ರದ ಚಿಗುರಿಗಿದೆ.
  ಇದು ಮಳೆಗಾಲವಲ್ಲ. ಆದರೂ ಅಕಾಲಿಕವಾಗಿ ಸುರಿಯುವ ಮಳೆಗೆ, ಹುಡಿ ಏಳುವ ಮಣ್ಣಿನ ಸುವಾಸನೆಯೇ ಬೇರೆ. ಅದರಲ್ಲೂ ಗಿಡ-ಮರಗಳ ಮೇಲೆ ಬಿದ್ದ ಮಳೆಯ ಹನಿಗಳು , ಎಲೆಗಳಿಗೆ ಮುತ್ತಿಟ್ಟು ಜಾರಿ ಭೂತಾಯಿ ಒಡಲು ಸೇರಿ ಮಾಯವಾಗುವ ದೃಶ್ಯವಂತು ಪ್ರಕೃತಿಯ ವಿಸ್ಮಯದ ಹಾಗೆ ಕಾಣುತ್ತದೆ. ಈಗ ಪರೀಕ್ಷಾ ಸಮಯ ಬೇರೆ, ಆದರೆ ನಮ್ಮ ವಿ.ವಿ ವಿದ್ಯಾರ್ಥಿಗಳು ಈ ಪ್ರಕೃತಿಯ ಸೊಬಗನ್ನು ಸವಿಯುತ್ತಾ ಒತ್ತಡ ನಿವಾರಣೆ ಮಾಡಿಕೊಳ್ಳುತ್ತಾ, ಬಿ ಹ್ಯಾಪಿ ನೋ ಬಿಪಿ, ಎಂದು ಫುಲ್ ರಿಲ್ಯಾಕ್ಸ ಮೂಡಲ್ಲಿ. ಪರೀಕ್ಷೆಯ ಯುದ್ದಕ್ಕೆ ಸನ್ನದ್ದರಾಗುತ್ತಿದ್ದಾರೆ. ಅವರೆಲ್ಲರಿಗೂ ಸಸ್ಯಶಾಮಲೆ ಕೂಡಾ ಆಲ್ ದ ಬೆಸ್ಟ ಎಂಬ ಸಂದೇಶ ನೀಡುತ್ತಿದ್ದಾಳೆ.



Thursday, 5 January 2017

ಕುಂದಾನಗರಿಯ ಸುತ್ತ ಸುತ್ತ ಬನ್ನಿ...



ಮಂಜುನಾಥ ಗದಗಿನ

ಬೆಳಗಾವಿ ಕನ್ನಡಿಗರ ಹೆಮ್ಮೆಯ ನಗರ. ಕರ್ನಾಟಕದ ವಾಯವ್ಯ ಭಾಗದ ಗಡಿಯಲ್ಲಿ ನೆಲೆಸಿರುವ ಸುಂದರ ಹಸಿರುಮಯ ಪ್ರದೇಶ. ಮಲೆನಾಡಿನ ಛಾಯೆಯಲ್ಲಿ ಬರುವ ಈ ತಾಣವು ಇತರೆ ಬಯಲು ಸೀಮೆ ಪ್ರದೇಶಗಳಂತಿರದೆ ಸದಾ ತಂಪಾಗಿದ್ದು ಹಿತಕರ ವಾತಾವರಣದಿಂದ ಕೂಡಿದೆ. ಇದೇ ಕಾರಣಕ್ಕೆ ಕುಂದಾನಗರಿ ಎಲ್ಲರಿಗೂ ಹಿತವೇನಿಸುವುದು. ಹೀಗಾಗಿ ಕುಂದಾನಗರಿಯ ಸುತ್ತ ಕಣ್ಮನ ಸೆಳೆಯುವು, ಐತಿಹಾಸಿ, ಧಾರ್ಮಿಕ ಸ್ಥಳಗಳನ್ನು ಒಳಗೊಂಡ ಪ್ರವಾಸಿ ತಾಣವಾಗಿದೆ. ಈ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಗೋಕಾಕ ಪಾಲ್ಸ್:
ಬೆಳಗಾವಿ ನಗರದಿಂದ ಸುಮಾರು 70 ಕಿ.ಮೀ ದೂರ ಸಾಗಿದರೆ ಸಿಗುವುದೇ ಗೋಕಾಕ. ಈ ಪಟ್ಟಣ ಖ್ಯಾತಿಗಳಿಸಿರುವುದು ರುದ್ರ ರಮಣೀಯ ಪಾಲ್ಸ್‌ನಿಂದ. ಅದಕ್ಕೆ ಗೋಕಾಕ ಪಾಲ್ಸ್ ಎಂದು ಕರೆಯುತ್ತಾರೆ. ಘಟಪ್ರಭಾ ನದಿಯಿಂದ ಉಂಟಾದ ಈ ಜಲಪಾತಕ್ಕೆ ಅಡ್ಡಲಾಗಿ ತೂಗು ಸೇತುವೆ ನಿರ್ಮಿಸಲಾಗಿದೆ. ಇದರ ಕುಂಟ ಹೊರಟು ನೋಡಿದರೆ ಜಲಪಾತದ ರಮಣೀಯತೆಯನ್ನು ಕಣ್ಣರಳಿಸಿ ಆಸ್ವಾದಿಸಬಹುದು. ಇದೇ ಕಾರಣಕ್ಕೆ ಗೋಕಾಕ ಪಾಲ್ಸ್‌ಗೆ ವರ್ಷ ಪೂರ್ತಿ ಪ್ರವಾಸಿಗರು ಆಗಮಿಸುತ್ತಿರುತ್ತಾರೆ. ಮಳೆಗಾಲದಲ್ಲಿ ಇಲ್ಲಿ ಜನಜಂಗುಳಿಯನ್ನು ಕಾಣಬಹುದು. ಗೋಕಾಕ ಬಂದರೆ ಗೋಕಾಕ ಕರದಂಟ್ ತೆಗೆದುಕೊಂಡು ಹೋಗುವುದುನ್ನು ಮರೆಯಬೇಡಿ.
ಐತಿಹಾಸಿಕ ಹಳಸಿ:
 ಹಲ್ಶಿ ಎಂದೂ ಕರೆಯಲ್ಪಡುವ ಈ ಪುಟ್ಟ ಪಟ್ಟಣವು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿದೆ. ಈ ಪಟ್ಟಣವು ಒಂದೊಮ್ಮೆ ಕದಂಬರ ರಾಜಧಾನಿಯಾಗಿ ಮೆರೆದಿದ್ದು, ತನ್ನಲ್ಲಿರುವ ಅದ್ಭುತ ವಾಸ್ತು ಶಿಲ್ಪದ ಭೂವರಾಹ ಲಕ್ಷ್ಮಿ ನರಸಿಂಹ ದೇವಾಲಯದಿಂದಾಗಿ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದಕ್ಕೊಂದು ಎದುರಾಭಿಮುಖವಾಗಿರುವ ಎರಡು ಗರ್ಭಗುಡಿಗಳಿವೆ. ಬಲಬದಿಯ ಗರ್ಭ ದೇಗುಲದಲ್ಲಿ 4 ಅಡಿ ಎತ್ತರದ ಕುಳಿತಿರುವ ವಿಷ್ಣುವಿನ ವಿಗ್ರಹವಿದ್ದು, ಅದರ ಹಿಂದೆಯೆ ಲಕ್ಷ್ಮಿ ಹಾಗೂ ಸೂರ್ಯನಾರಾಯಣ ವಿಗ್ರಹಗಳಿವೆ. ಇನ್ನು ಎಡಬದಿಯ ಗರ್ಭ ಗುಡಿಯಲ್ಲಿ ಭೂದೇವಿ (ಪೃಥ್ವಿ) ಯನ್ನು ಬಾಯಿಯಲ್ಲಿ ಹಿಡಿದಿರುವ 5 ಅಡಿ ಎತ್ತರದ ವರಾಹ ಸ್ವಾಮಿಯ ವಿಗ್ರಹವಿದೆ. ಇಲ್ಲಿನ ಅರ್ಚಕರ ಪ್ರಕಾರ, 2 ಅಡಿ ಎತ್ತರದ ನರಸಿಂಹನ ಸ್ವಯಂಭು ವಿಗ್ರಹವೊಂದು ಮುಖ್ಯ ವಿಷ್ಣುವಿನ ವಿಗ್ರಹದ ಪಕ್ಕದಲ್ಲಿದೆ. ಸುತ್ತಮುತ್ತಲು ಅದ್ಭುತವಾದ ಹಸಿರುಮಯ ಪರಿಸರವನ್ನು ಹೊಂದಿರುವ ಈ ತಾಣಕ್ಕೆ ಬೆಳಗಾವಿ ನಗರದಿಂದ ಖಾನಾಪುರ ಮಾರ್ಗವಾಗಿ ಸುಲಭವಾಗಿ ತಲುಪಬಹುದು.  
---
ಹೂಲಿ:
 ಬೆಳಗಾವಿಯ ಶ್ರೀಕ್ಷೇತ್ರ ಸವದತ್ತಿಯಿಂದ ಕೇವಲ 9 ಕಿ.ಮೀಗಳ ಅಂತರದಲ್ಲಿದೆ ಈ ಸ್ಥಳ. ಬೆಳಗಾವಿಯ ಪುರಾತನ ಹಳ್ಳಿಗಳಲ್ಲಿ ಒಂದಾಗಿರುವ ಹೂಲಿ ಹಳ್ಳಿಯು ತನ್ನಲ್ಲಿರುವ ಪಂಚಲಿಂಗೇಶ್ವರ ದೇವಾಲಯದಿಂದ ಪ್ರಸಿದ್ಧವಾಗಿದೆ. ಆಕರ್ಷಕ ವಾಸ್ತುಶಿಲ್ಪವನ್ನು ಹೊಂದಿರುವ ಈ ದೇವಾಲಯವನ್ನು ನೋಡುವುದೇ ಒಂದು ಚೆಂದದ ಅನುಭವ. ಕಲ್ಲಿನಿಂದಲೆ ಮಾಡಲ್ಪಟ್ಟಿರುವುದರಿಂದ ಬಿಸಿಲಿನಲ್ಲೂ ತಂಪಾದ ನೆರಳಿನ ಅನುಭವ ನೀಡುತ್ತದೆ. ಈ ತಂಪಿನಲ್ಲಿ ಸಮಯ ಕಳೆಯಲೆಂದು ಜನ ಇಲ್ಲಿಗೆ ಬರುವುದುಂಟು. ಭಾರತೀಯ ಪುರಾತತ್ವ ಇಲಾಖೆಗೆ ಒಳಪಡುವ ಈ ದೇವಾಲಯವನ್ನು ರಕ್ಷಿತ ಸ್ಮಾರಕಗಳಲ್ಲಿ ಪರಿಗಣಿಸಲಾಗಿದೆ.  
--
ಧಾರ್ಮಿಕ ಸ್ಥಳ ಸವದತ್ತಿ:
 ಸವದತ್ತಿಯು ಒಂದು ಯಾತ್ರಾ ಕ್ಷೇತ್ರವಾಗಿದೆ. ಬೆಳಗಾವಿಯಿಂದ ಸುಮಾರು 90 ಕಿ.ಮೀಗಳ ದೂರವಿದೆ. ಸುಗಂದವರ್ತಿ, ಸೌಗಂದಿಪುರ ಎಂದೂ ಕರೆಯಲ್ಪಡಿತ್ತಿದ್ದ ಇದು ರಟ್ಟ ವಂಶದ (875-1230) ರಾಜಧಾನಿಯಾಗಿತ್ತು. ಶಕ್ತಿ ದೇವಿಯ ಆರಾಧಕರಿಗೆ ಪವಿತ್ರವಾಗಿರುವ ಶ್ರೀ ರೇಣುಕಾ ದೇವಿ ದೇವಾಲಯ ಇಲ್ಲಿರುವ ಪ್ರಮುಖ ಪ್ರವಾಸಿ ತಾಣ. ಎಲ್ಲಮ್ಮಗುಡ್ಡ ಎಂದೂ ಕರೆಯಲ್ಪಡುವ ಈ ತಾಣಕ್ಕೆ ತೆರಳಲು ಬೆಳಗಾವಿಯಿಂದ ನಿರಂತರವಾಗಿ ಬಸ್ ಸೌಲಭ್ಯವಿದೆ. ಬನದ ಹುಣ್ಣಿಮೆ ಹಾಗು ಭಾರತಿ ಹುಣ್ಣಿಮೆ ದಿನಗಳಂದು ಲಕ್ಷ ಲಕ್ಷ ಸಂಖ್ಯೆಯಲ್ಲಿ ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
---
ನವೀಲುತೀರ್ಥ ಡ್ಯಾಂ:
ಬೆಳಗಾವಿಯಿಂದ 100 ಕಿ.ಮೀಗಳ ಅಂತರದಲ್ಲಿ ನವೀಲುತೀರ್ಥ ಸ್ಥಳವನ್ನು ಕಾಣ ಬಹುದು. ಇದು ಒಂದು ಪಿಕ್ನಿಕ್‌ಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಸವದತ್ತಿಗೆ ಅತಿ ಹತ್ತಿರದಲ್ಲಿರುವ ಈ ತಾಣವನ್ನು ಬೆಳಗಾವಿಯಿಂದ ಸವದತ್ತಿಗೆ ತೆರಳಿ ಸುಲಭವಾಗಿ ಅಲ್ಲಿಂದ ತಲುಪಬಹುದು. 1932 ರಲ್ಲಿ ಗುರುದೇವ ಮಹಾತಪಸ್ವಿ ಶ್ರೀ ಕುಮಾರಸ್ವಾಮಿಜಿಯವರು ಈ ತಾಣದಲ್ಲಿ ಧ್ಯಾನಿಸಿದ್ದರು ಎಂದು ಹೇಳಲಾಗಿದೆ.
--
ಸೋಗಲ್:
ಬೆಳಗಾವಿ ಜಿಲ್ಲೆಯ ನವೀಲುತೀರ್ಥದಿಂದ ಕೇವಲ 24 ಕಿ.ಮೀ ಪ್ರಯಾಣಿಸಿದಾಗ ಸಿಗುವ ಮತ್ತೊಂದು ಪ್ರವಾಸಿ ತಾಣವೆ ಸೋಗಲ್. ತನ್ನಲ್ಲಿರುವ ಜಲಪಾತದಿಂದಾಗಿ ಪ್ರಸಿದ್ಧವಾಗಿರುವ ಈ ತಾಣ ದಂತಕಥೆಯ ಪ್ರಕಾರ, ಶಿವಪಾರ್ವತಿಯರು ವಿವಾಹವಾಗಿದ್ದರೆನ್ನಲಾದ ಕಲ್ಯಾಣ ಮಂಟಪವನ್ನು ಹೊಂದಿದೆ.
--
ಅಂಬೋಲಿ ಘಾಟ್:
 ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ಈ ಪ್ರಸಿದ್ಧ ಘಟ್ಟ ಪ್ರದೇಶವು ಬೆಳಗಾವಿಯ ವಾಯವ್ಯ ದಿಕ್ಕಿನಲ್ಲಿ ಸುಮಾರು 68 ಕಿ.ಮೀ ಗಳ ದೂರದಲ್ಲಿ ನೆಲೆಸಿದ್ದು ಸಾವಂತವಾಡಿ ರಸ್ತೆಯ ಮೂಲಕ ಸುಲಭವಾಗಿ ತೆರಳಬಹುದು. ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಬರುವ ಈ ಪ್ರದೇಶವು ಒಂದು ಪ್ರಕೃತಿಸಹಜ ಸುಂದರ ತಾಣವಾಗಿದೆ. ಒಂದು ಬದಿ ಆಳವಾದ ಕಣಿವೆ ಇನ್ನೊಂದು ಬದಿ ಎತ್ತರಕ್ಕೆ ಚಾಚಿರುವ ಬೆಟ್ಟ ಅಲ್ಲಲ್ಲಿ ಕವಲೊಡೆದ ಪುಟ್ಟ ಪುಟ್ಟ ಜಲಪಾತಗಳು, ಮಳೆಗಾಲದಲ್ಲಿ ಇಲ್ಲಿನ ಸಹಜ ಹಾಗೂ ಮನಮೋಹಕ ಆಕರ್ಷಣೆಗಳು.

ಶಬರಿಕೊಳ್ಳ:
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.
ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು


ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

Monday, 2 January 2017

ಕರ್ನಾಟಕ ಏಕೀಕರಣದಲ್ಲಿ ನಾಗನೂರ ಮಠ

ಮಂಜುನಾಥ ಗದಗಿನ
ಕರ್ನಾಟಕ ಏಕೀಕರಣದಲ್ಲಿ ನಾಡಿನ ಅನೇಕ ನೇತಾರರು, ಸಾಹಿತಿಗಳು, ಕನ್ನಡಾಭಿಮಾನಿಗಳು ತಮ್ಮ ತನು, ಮನಗಳನ್ನು ಅರ್ಪಿಸಿದ್ದಾರೆ. ಇವುಗಳೊಟ್ಟಿಗೆ ನಾಡಿನ ಮಠಗಳು ಏಕೀಕರಣದಲ್ಲಿ ತಮ್ಮ ಅನನ್ಯ ಸೇವೆಯನ್ನು ಸಲ್ಲಿಸಿವೆ. ಅವುಗಳಲ್ಲಿ ಬೆಳಗಾವಿಯ  ನಾಗನೂರ ಮಠ ಹಾಗೂ ಕಾರಂಜಿ ಮಠಗಳು ಪ್ರಮುಖವಾದವುಗಳು.

ನಾಗನೂರು ಮಠದ ಡಾ. ಶಿವಬಸವ ಸ್ವಾಮೀಜಿ ಕನ್ನಡ ಹಾಗೂ ಕರ್ನಾಟಕಕ್ಕೆ ಸಲ್ಲಿಸಿದ ಸೇವೆ ಅನನ್ಯ. ಕರ್ನಾಟಕ ಏಕೀಕರಣ ಸಂದರ್ಭದಲ್ಲಿ ಕನ್ನಡಪರ ಚಟುವಟಿಕೆಗಳನ್ನು ತೀವ್ರಗೊಳಿಸಿ, ಕನ್ನಡದ ಕಿಚ್ಚನ್ನು ಹೆಚ್ಚಿಸಿದ ಶ್ರೇಯಸ್ಸು ಶ್ರೀಗಳಿಗೆ ಸಲ್ಲುತ್ತದೆ.
ಕನ್ನಡ ಏಕೀಕರಣ ಹೋರಾಟದ ಸಂದರ್ಭದಲ್ಲಿ ಶ್ರೀಗಳು ಹೋರಾಟಗಾರರಿಗೆ ಶ್ರೀಮಠದಲ್ಲಿ ಆಶ್ರಯ ನೀಡಿ, ಅವರಿಗೆ ತುತ್ತು ಅನ್ನ ಹಾಕಿ ಹೋರಾಟಕ್ಕೆ ಅಣಿಗೊಳಿಸುತ್ತಿದ್ದರು. ಎಷ್ಟೋ ಬಾರಿ ತಮ್ಮ ಜೋಳಿಗೆಯ ಮೂಲ ಭಿಕ್ಷೆ ಬೇಡಿ ಹೋರಾಟಗಾರರಿಗೆ ಉಣಬಡಿಸಿದ್ದಾರೆ.
ಅದು ೧೯೪೭ರ ಸಮಯ ಬ್ರಿಟಿಷ್ ಸರ್ಕಾರ ಭಾರತಕ್ಕೆ ಸ್ವಾತಂತ್ರ್ಯ ಕೊಟ್ಟು ಹೋಗಿತ್ತು. ಅದಾಗಲೇ ಎಲ್ಲೆಡೆ ಭಾಷಾವಾರು ಪ್ರಾಂತ್ಯಗಳ ರಚನೆಯ ಕೂಗು ಎಲ್ಲೆಡೆ ಹರಡಿತ್ತು. ಈ ಸಂದರ್ಭದಲ್ಲಿ ಗಡಿನಾಡಿನಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸಿದರು. ನಾಡಿನ ಹೆಸರಾಂತ ವಿದ್ವಾಂಸರನ್ನು, ಸಾಹಿತಿಗಳನ್ನು, ಕಲಾವಿದರನ್ನು ಬೆಳಗಾವಿಗೆ ಬರಮಾಡಿಕೊಂಡು ಅವರ ಮೂಲಕ ಬೆಳಗಾವಿ ಮತ್ತು ಹೊಂದಿಕೊಂಡ ಗಡಿಭಾಗಗಳ ಕನ್ನಡಿಗರಲ್ಲಿ ನಾಡು, ನುಡಿಯ ಬಗ್ಗೆ ಪ್ರೀತಿ ಉಕ್ಕುವಂತೆ ಮಾಡಿದರು.
ಏಕೀಕರಣ ಸಂದರ್ಭದಲ್ಲಿ ತಲೆ ಎತ್ತಿದ ಭಾಷಾ ವಿವಾದದ ಫಲವಾಗಿ ‘ಮಹಾರಾಷ್ಟ್ರ ಏಕೀಕರಣ ಸಮಿತಿ’ ಅಸ್ತಿತ್ವಕ್ಕೆ ಬಂದಿತು. ಇದರಿಂದ ಗಾಬರಿಗೊಂಡ ಈ ಭಾಗದ ಕನ್ನಡಿಗರು ಕನ್ನಡ ಕಟ್ಟುವ ಕಾರ್ಯ ಅಣಿಯಾದರು. ಭಾಷಾವಾರು ಪ್ರಾಂತ್ಯ ರಚನೆಯ ಹಿನ್ನೆಲೆಯಲ್ಲಿ ಫಜಲ್ ಅಲಿ ಆಯೋಗ ಮಾಹಿತಿ ಮತ್ತು ಮನವಿ ಸಂಗ್ರಹಣೆಗಾಗಿ ಬೆಳಗಾವಿಗೆ ಬಂದಾಗ ಕನ್ನಡ ಸಂಘ, ಸಂಸ್ಥೆಗಳು ಮನವಿ ಸಲ್ಲಿಸಿದವು. ಮರಾಠಿ ಸಂಘ, ಸಂಸ್ಥೆಗಳು ಹಿಂದುಳಿಯಲ್ಲಿಲ್ಲ. ಬೆಳಗಾವಿ ಜಿಲ್ಲೆಯು ಸಮಗ್ರವಾಗಿ ಕರ್ನಾಟಕದಲ್ಲೇ ಉಳಿಯಬೇಕೆಂಬ ದೃಢ ನಿರ್ಧಾರ ಕನ್ನಡ ಸಂಘ, ಸಂಸ್ಥೆಗಳದಾಗಿತ್ತು. ಶಿವಬಸವ ಸ್ವಾಮೀಜಿ ಸಲ್ಲಸಿದ ಮನವಿ ಅತ್ಯಂತ ಪ್ರಭಾವಶಾಲಿಯಾಗಿತ್ತು.
ಬೆಳಗಾವಿ ಯಾವಾಗಲೂ ಕನ್ನಡಿಗರದ್ದೆ. ಹಿಂದು ಮತ್ತು ಮುಸ್ಲಿಂ ಅರಸರ ಆಳ್ವಿಕೆಯಲೂ ಇದು ಕನ್ನಡ ನಾಡಿನ ಹಿಂದು ಮತ್ತು ಅರಸರ ಆಳ್ವಿಕೆಯಲ್ಲಿ ಇದು ಕನ್ನಡ ನಾಡು ಒಂದು ಪಟ್ಟಣವಾಗಿತ್ತು. ಮರಾಠಿಗಳು, ಪೇಶ್ವೆಯವರು ಕನ್ನಡನಾಡಿನ ಕೆಲವು ಭಾಗಗಳನ್ನು ಆಳುವಾಗ ಕೂಡ ಇದು ಈ ಭಾಗದ ಆಡಳಿತ ಕೇಂದ್ರವಾಗಿತ್ತು. ಇಲ್ಲಿಯ ಮೂಲ ವ್ಯಾಪಾರಿಗಳು, ಉದ್ಯೋಗಿಗಳು ಮನೆತನಗಳು ಕನ್ನಡಿಗರದ್ದಾಗಿವೆ. ಈ ವ್ಯಾಪಾರ ಕೇಂದ್ರಕ್ಕೆ ಬರುವ ಮಾಲು ಕರ್ನಾಟಕದ ಜಿಲ್ಲೆಗಳಿಂದ ಮತ್ತು ಇದೇ ಜಿಲ್ಲೆಯ ತಾಲೂಕು, ಹಳ್ಳಿಗಳಿಂದ. ಈಗ ಸಾಕ್ಷಿ ಹೇಳಲು ಬರುತ್ತಿರುವ ಮಾರಾಠಿ ಮುಖಂಡರು ಇತ್ತೀಚಿಗೆ ಬಂದು ನೆಲೆಸಿದವರು. ಎಂದು ಪ್ರತಿಪಾದಿಸಿದರು. ಇದನ್ನು  ಸ್ವಾತಂತ್ರ್ಯ ಹೋರಾಟಗಾರ ರಂಗನಾಥ ದಿವಾಕರ,  ಸ್ವಾತಂತ್ರ್ಯ ಯೋಧ ಹಾಗೂ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಗ್ಲುೆಪ್ಪ ಹಳ್ಳಿಕೇರಿ ಅವರು ಶ್ರೀಗಳ ವಾದವನ್ನು ಇಂಗ್ಲಿಷ್‌ಗೆ ಭಾಷಾಂತರಿಸಿ ಹೇಳಿದರು.
ಶ್ರೀಗಳ ವಾದವನ್ನು ಆಯೋಗ ಆಸಕ್ತಿಯಿಂದ ಆಲಿಸಿತು ಮತ್ತು ಅವರನ್ನು ತುಂಬು ಗೌರವದಿಂದ ಕಂಡಿತು. ಇದರಿಂದ ೧೯೫೬ ನವೆಂಬರ್ ೧ ರಂದು ಕರ್ನಾಟಕ ರಾಜ್ಯ ಉದಯವಾಯಿತು.
ನಂತರ ಬೆಳಗಾವಿ ಒಂದು ಜಿಲ್ಲಾ ಕೇಂದ್ರವಾಯಿತ. ಕನ್ನಡ ವಿರೋಧಿಗಳು ಕರಾಳ ದಿನ ಆಚರಿಸಿದರ. ಮರಾಠಿ ಪರ ಜನರು ಅಂಗಡಿ, ಮುಂಗಟ್ಟುಗಳಿಗೆ ಬೆಂಕಿ ಹಚ್ಚಿ, ಧಾಂದಲೆ ಎಬ್ಬಿಸಿದರು. ಕಂಡಲ್ಲಿ ಗುಂಡಿಕ್ಕುವ ಆಜ್ಞೆ  ಹೊರ ಬಿತ್ತು. ಸಮಯದಲ್ಲಿ ಶ್ರೀಗಳ ಕನ್ನಡಪರ ಕಳಕಳಿ ಇದ್ದ ಶ್ರೀಗಳ ಪ್ರಾಣಕ್ಕೆ ಆಪತ್ತು ಎದುರಾತು. ಪುಂಡರ ಕಣ್ಣು ಶ್ರೀಮಠದ ಪ್ರಸಾದ ನಿಲಯದ ಮೇಲೂ ಬಿದ್ದು, ಈ ಸಮಯದಲ್ಲಿ ಪೊಲೀಸರು ಶ್ರೀಗಳಿಗೆ ರಕ್ಷಣೆ ನೀಡಿದರು. ಭಕ್ತ ಒತ್ತಾಯದ ಮೇರೆಗೆ ಶ್ರೀಗಳು ಕೆಲವು ದಿನಗಳ ಕಾಲ ಹುಬ್ಬಳ್ಳಿ ಮತ್ತು ಹಿರೇ ಬಾಗೇವಾಡಿಯಲ್ಲಿ ತಮ್ಮ ಭಕ್ತರ ಮನೆಯಲ್ಲಿ ಆಶ್ರಯ ಪಡೆದರು.
ಕೆಲವು ದಿನಗಳ ನಂತರ ಇದು ತನ್ನಗಾಯಿತು. ಆ ಮೇಲೆ ಕರ್ನಾಟಕ-ಮಹಾರಾಷ್ಟ್ರ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಭಾರತ ಪ್ರಧಾನ ನ್ಯಾಯಾಧೀಶರಾಗಿದ್ದ ಮೆಹರಚಂದ ಮಹಾಜನ್ ಅವರ ನೇತೃತ್ವದಲ್ಲಿ ಆಯೋಗ ನೇಮಕಗೊಂಡಾಗ ಶ್ರೀಗಳು ಸ್ಪಷ್ಟ ಮಾತುಗಳಿಗಳಲ್ಲಿ ‘ಬೆಳಗಾವಿ ಎಂದೆಂದೂ ಕರ್ನಾಟಕದ್ದು, ಗಡಿ ವಿವಾದ ಮುಗಿದು ಹೋದ ಅಧ್ಯಾಯ ಅದನ್ನು ಮತ್ತೆ ಕೆದಕಬಾರದು ಎಂದು ಹೇಳಿದರು. ಇದಾದ ನಂತರ ಬೆಳಗಾವಿ ಕರ್ನಾಟಕದಲ್ಲೇ ಉಳಿಯಿತು. ಈ ಶ್ರೇಯಸ್ಸು ನಾಗನೂರು ಮಠಕ್ಕೆ ಸಂಧಿತು.
ನಾಡಿನ ಜನತೆ ಶ್ರೀಗಳನ್ನು ತುಂಬು ಮನದಿಂದ ಅಭಿನಂದಿಸಿದರು. ಇದಾಗಿ ೫೦ ವರ್ಷಗಳ ನಂತರ ಸುವರ್ಣ ಕರ್ನಾಟಕ ವರ್ಷಾಚರಣೆ ಸಂಭ್ರಮದಲ್ಲಿ ಸರ್ಕಾರ ಶ್ರೀಮಠಕ್ಕೆ ‘ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿತು.
ಈಗಲೂ ಕೂಡಾ ನಾಗನೂರ ಮಠ ಹಲವಾರು ಕನ್ನಡ ಶಾಲೆಗಳನ್ನು ಸ್ಥಾಪಿಸಿ, ಈ ಮೂಲಕ ಕನ್ನಡ ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಅಷ್ಟೇ ಅಲ್ಲದೇ ಕರ್ನಾಟಕ, ಮಹಾರಾಷ್ಟ್ರ ನಡುವೆ ಸಾಂಸ್ಕೃತಿಕ ರಾಯಭಾರಿಯಾಗಿ ಕೆಲಸ ಮಾಡುತ್ತಿದೆ. ಈಗ ಸಿದ್ಧರಾಮ ಶ್ರೀ ಮಠವನ್ನು ಮುನ್ನಡೆಸುತ್ತಿದ್ದಾರೆ.





ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...