Tuesday, 11 July 2023

ಜಂತಿಮನೆ ಮತ್ತು ಇಲಿ...



ಗಾಗ ಉದುರಿ ಬೀಳುವ ಮಣ್ಣಿನ ನಡುವೆ ಬದುಕು ಸಾಗಿವುದು ಅದೇಷ್ಟು ಕಷ್ಟ. ಆದರೆ, ಹಳ್ಳಿಗರಿಗೆ ಇದೇ ಜೀವನ. ಯಾಕಂದರೆ ಹಳ್ಳಿಗಳಲ್ಲಿ ಈಗಲೂ ಬಹುತೇಕ ನಾವುಗಳು ಜಂತಿಮನೆಗಳನ್ನೇ ಕಾಣುತ್ತಿವೆ. ಇವುಗಳಿಗೆ ಜಂತಿಮನೆಗಳು ಎಂದರೆ ಕರೆಯಲು ಕಾರಣವು ಇದೆ. ಇವುಗಳನ್ನು ನಮ್ಮ ಹಿರಿಕರು ಜಂತಿ ಕಟ್ಟಿಗೆಯಿಂದ ಮನೆಗಳನ್ನು ಕಟ್ಟುತ್ತಿದ್ದರು. ಈ ಜಂತಿ ಕಟ್ಟಿಗೆಯಲ್ಲೇ ಮನೆಗಳನ್ನು ಕಟ್ಟಲು ಒಂದು ಸಕಾರಣವೂ ಇತ್ತು. ಜಂತಿ ಕಟ್ಟಿಗೆಗಳಿಗೆ ಹುಳು ಹಿಡಿಯುವುದಿಲ್ಲ. ಹೀಗಾಗಿ ಅವುಗಳು ಹೆಚ್ಚುಕಾಲ ಬಾಳಿಕೆ ಬರುತ್ತವೆ ಎಂಬ ಒಂದು ವೈಜ್ಞಾನಿಕ ಕಾರಣಗಳನ್ನು ಹಿನ್ನೆಲೆಯಲ್ಲೇ ನಮ್ಮ ಹಿರಿಯರು ಮನೆಗಳನ್ನು ಕಟ್ಟುವಾಗ ಈ ಜಂತಿ ಕಟ್ಟಿಗೆಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ನಾವುಗಳು ಇಂದು ಈ ಮನೆಗಳನ್ನು ಜಂತಿ ಮನೆಗಳನು ಎಂದು ಕರೆಯುತ್ತಿವೆ. 

ಜಂತಿಮನೆಗಳಿಗೆ ಜಂತಿಕಟ್ಟಿಗೆ ಒಂದಿಷ್ಟು ಗಿಡದ ತಪ್ಪಲು ಹಾಕಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಹೀಗೆ ನಿರ್ಮಾಣ ಮಾಡಿದ ಮನೆಗಳು ನೂರಾರು ವರ್ಷಗಳು ಕಳೆದರೂ ಹಾಗೇ ಇವೆ. ಅದೇಷ್ಟೋ ತಲೆಮಾರುಗಳಿಗೆ ಆಶ್ರಯಗಳನ್ನು ನೀಡಿವೆ. ಆದರೆ, ಈ ಜಂತಿಮನೆಗಳಲ್ಲಿ ವಾಸ ಮಾಡುವುದೇ ಒಂದು ರಣರೋಚಕ.

ಹೌದು, ಜಂತಿಮನೆಗಳು ಮನುಷ್ಯರಿಗೆ ಮಾತ್ರ ಆಶ್ರಯ ನೀಡುತಿರಲಿಲ್ಲ. ಮೇಲಿನ ಜಂತಿಯಲ್ಲಿ ಹಾವು, ಹೆಗ್ಗಣ್ಣ, ಚೇಳು, ಇಲಿ ಹೀಗೆ ಅನೇಕ ಪ್ರಾಣಿಗಳಿಗೂ ಪಾಲಕನಾಗಿತ್ತು ಜಂತಿಮನೆ. ಹೀಗಾಗಿ ಈ ಮನೆಗಳಲ್ಲಿ ವಾಸ ಮಾಡಿದವರು ಗಟ್ಟಿಗರೇ ಸೈ. ನಾನು ಕೂಡಾ ಜಂತಿಮನೆಯಲ್ಲೇ ಹುಟ್ಟಿ ಬೆಳೆದವ. ರಾತ್ರಿ ಆಯಿತು ಎಂದರೆ ಸಾಕು ಮನೆಯ ಮೇಲಿಂದ ಅದೇನೋ ಒಂದು ತರಹ ಸದ್ದು ಸದಾ ಕೇಳಿಬರುತಿತ್ತು. ಅದೇಷ್ಟೇ ಪ್ರಯತ್ನ ಮಾಡಿದರೂ ಆ ಸದ್ದಿನ ದಾರಿ ಕಂಡು ಹಿಡಿಯಲು ಅಸಾಧ್ಯವಾಗಿತ್ತು. ಒಂದು ಸಾರಿ ಈ ಕಡೆ ಕೇಳಿದರೆ ಮತ್ತೊಂದು ಸಾರಿ ಆ ಕಡೆ ಕೇಳಿ ಬರುತ್ತಿತ್ತು. ಹೀಗಾಗಿ ನಾನು ಆಗ ಚಿಕ್ಕವನಿಂದ ಕಾರಣಕ್ಕೆ ಇದು ದೆವ್ವದ ಇರಬಹುದು ಎಂದು ಭಾವಿ ಅರ್ಧ ಹೊದ್ದ ಚಾದರನ್ನು ಪೂರ್ಣ ಹೊದ್ದು ಮಲಗಿದ ರಾತ್ರಿಗಳಿಗೆ ಲೆಕ್ಕವೇ ಇಲ್ಲ. ಇದಕ್ಕೆ ಕಾರಣವೂ ಇತ್ತು. ನಮ್ಮ ಮನೆಯ ಹಿಂದೆ ಒಂದು ದೊಡ್ಡದಾದ ಹುಣಸೆ ಮರ ಇದೆ. ಆ ಮರದಲ್ಲಿ ದೆವ್ವಗಳು ಕುಳಿತುಕೊಂಡಿರುತ್ತವೆ ಎಂಬ ಮಾತು ಆಗಾಗ ಕೇಳಿ ಬರುತ್ತಿದ್ದವು. ನಾನು ಕೂಡಾ ಅದೇ ದೆವ್ವಗಳು ಬಂದು ನಮ್ಮ ಮನೆಯ ಮೇಲೆ ಓಡಾಡುತ್ತವೆ ಎಂದು ಭಾವಿಸಿದ್ದೆ. ಆದರೆ, ಅದೊಂದು ದಿನ ಅಪ್ಪ ಇಲಿ ಹಿಡಿಯುವ ಯಂತ್ರ ತಂದು ಅದರಲ್ಲಿ ಒಂದು ಫೀಸ್ ಬಜ್ಜೆಯನ್ನು ಹಾಕಿ ಜಂತಿಯ ಮೇಲೆ ಇಟ್ಟು ಮಲಗಿದ. ನಾನು ಯಾಕೆಂದು ಕೇಳಿದ್ದಕ್ಕೆ ನಾಳೆ ಗೊತ್ತಾಗುತ್ತದೆ ಎಂದು ಸುಮ್ಮನಾಗಿಸಿದ. ಆದರೆ, ಮರುದಿನ ಬೆಳಗಾಗುವಷ್ಟರಲ್ಲಿ ಅಪ್ಪ ಆ ಇಲಿ ಹಿಡಿಯುವ ಯಂತ್ರವನ್ನು ಹೊರಗೆ ತೆಗೆದಾಗ ಅದಲ್ಲಿ ಬರೋಬ್ಬರಿ ನಾಲ್ಕು ಇಲಿಗಳು ಒಂದೇ ಚಾಳಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಅದು ಆ ಬಜ್ಜಿ ಆಸೆಗಾಗಿ ಎಂಬ ವಿಷಯ ಬೇರೆ. ಆದರೆ, ಅಪ್ಪ ಆಗಾ ಹೇಳಿದ ರಾತ್ರಿ ಈ ಇಲಿಗಳೇ ರಾತ್ರಿಯಲ್ಲ ಸದ್ದು ಮಾಡಿ ನಿದ್ದೆ ಹಾಳು ಮಾಡುತ್ತಿದ್ದವು ಎಂದು. ನಾನು ಅರೇಕ್ಷಣ ನಿಟ್ಟುಸಿರು ಬಿಟ್ಟು ದೆವ್ವ ಎಂಬ ಭ್ರಮೆಯಿಂದ ಹೊರ ಬಂದು ನೆಮ್ಮದಿಯಿಂದ ನಿದ್ದೆ ಮಾಡಲು ಆರಂಭಿಸಿದೆ. 

-ಮಂಜುನಾಥ ಗದಗಿನ.

ಮುಂದುವರೆಯುವುದು....

(ಜಂತಿಮನೆ ಮತ್ತು ಮಳೆ)

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...