Sunday, 8 April 2018

ಬಣಗುಡುತ್ತಿರುವ ಬನಶಂಕರಿ..!

ಮಂಜುನಾಥ ಗದಗಿನ

ಹುಬ್ಬಳ್ಳಿ ಇತಿಹಾಸದ ಮಜಲೂಗಳನ್ನು ಕೆದಕಿದಷ್ಟು ಗತ ಇತಿಹಾಸದೊಂದಿಗೆ ಇಲ್ಲಿನ ಕಲಾ ಸಿರಿವಂತಿಕೆ ಬಿಚ್ಚುತ್ತಾ ಸಾಗುತ್ತಿವೆ. ಆದರೆ ಇವುಗಳ ಸೂಕ್ತ ನಿರ್ವಹಣೆ ಹಾಗೂ ಪ್ರಚಾರದ ಕೊರತೆಯಿಂದ ಅವಸಾನದತ್ತ ಸಾಗುತ್ತಿರುವುದು ಕೆದಕರ ಸಂಗತಿ.
ಬಾದಾಮಿ ಚಾಲುಕ್ಯರ ಕಾಲದ 11ನೇ ಶತಮಾನದ ದೇವಾಲವೊಂದು ಹುಬ್ಬಳ್ಳಿಯಿಂದ 8 ಕಿ.ಮಿ ದೂರದ ಅಮರಗೋಳದಲ್ಲಿದೆ. ಅಮರಗೋಳ ಬಸ್ಟಾಫ್‌ಯಿಂದ ಸ್ಟೇಶನ್ ರೋಡ ಮಾರ್ಗವಾಗಿ ದಾಟಿ, ದುಂಡಿ ಬಸವೇಶ್ವರ ಗುಡಿಯ ಬಲಕ್ಕೆ ಹೋದರೆ ಮಾರುತಿ ದೇವಸ್ಥಾನ ಸಿಗುತ್ತದೆ ಇದನ್ನು ಸಾಗಿ ಮುಂದೆ ಬಂದರೆ ಮರಿಗೌಡರ ಓಣಿಯ ವಿಶಾಲ ಅಂಗಳದಲ್ಲಿ ಕಾಣ ಸಿಗುವುದೇ ಶಿಥಿಲಾವಸ್ಥೆ ತಲುಪಿರುವ ಐತಿಹಾಸಿಕ ಕಲಾ ಶ್ರೀಮಂತಿಕೆಯಿಂದ ಕೂಡಿರುವ ಬನಶಂಕರಿ ದೇವಾಲಯ.
ಅನಾಧರ, ಅನಾಥ..!
ಈ ದೇವಾಲಯ ಭಾರತೀಯ ಪುರಾತತ್ವ ಇಲಾಖೆಯ ಅಧಿನಕ್ಕೆ ಒಳಪಟ್ಟಿದೆ. ಆದರೆ ಇಲಾಖೆಯ ಅನಾಧರ ವರ್ತನೆಯಿಂದ ದೇವಸ್ಥಾನ ಅನಾಥವಾಗಿರುವುದು ಆರಂಭದಲ್ಲೇ ಗೊತ್ತಾಗುತ್ತದೆ. ಐತಿಹಾಸಿಕ ದೇವಾಲಯ ಇದೇ ಎಂಬ ಒಂದೇ ಒಂದು ಮಾರ್ಗಸೂಚಿಯಾಗಲಿ, ಫಲಕವಾಗಲಿ ಕಾಣಸಿಗುವುದಿಲ್ಲ. ಹುಬ್ಬಳ್ಳಿ-ಧಾರವಾಡ ಹೆದ್ದಾರಿಗೆ ಹೊಂದಿಕೊಂಡಿರುವ ರಸ್ತೆ ದಾಟಿಯೇ ಈ ದೇವಾಲಯಕ್ಕೆ ಸಾಗಬೇಕು. ಇಲ್ಲಿ ಒಂದು ಐತಿಹಾಸಿಕ ದೇವಾಲಯ ಇದೆ ಎಂದು ಫಲಕ ಹಾಕಿದ್ದರೆ, ದಿನ ನಿತ್ಯ ಓಡಾಡುವ ಲಕ್ಷ್ಯಾಂತರ ಪ್ರಯಾಣಿಕರಿಗೆ ದೇವಾಲಯ ಇರುವಿಕೆ ಗೊತ್ತಾಗುತ್ತಿತ್ತು. ಇದರಿಂದ ದೇವಾಲಯ ಪ್ರೇಕ್ಷಣಿಯ ಸ್ಥಳವಾಗುತ್ತಿತ್ತು ಎಂಬ ಮಾತಿನಲ್ಲಿ ಅನುಮಾನವಿಲ್ಲ. ಆದರೆ ಭಾರತೀಯ ಪ್ರಾಚ್ಯ ವಸ್ತು ಇಲಾಖೆಯ ನಿರ್ಲಕ್ಷದಿಂದ ಈ ದೇವಾಲಯ ಅನಾಥವಾಗಿದೆ.
ಕಣ್ಣು ಕೊರೈಸುವ ವಾಸ್ತು ಶೈಲಿ.
ಕ್ರಿ.ಶ 1120ರಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ಸೌಧೂರೆ ಜಕ್ಕರಸ ದೊರೆ ನಿರ್ಮಿಸಿದ್ದಾನೆಂದು ದೇವಾಲಯದ ಒಳಗಿರುವ ಶಿಲಾಶಾಸನ ಉಲ್ಲೇಖಿಸಿದೆ.ಪೂರ್ವಾಭಿಮುಖವಾಗಿ ಮರಳುಗಲ್ಲಿನಿಂದ ಈ ದೇವಾಯಲವನ್ನು ನಿರ್ಮಿಸಲಾಗಿದೆ. ದೇವಾಲಯವು ದ್ವಿಕೂಟವಾಗಿದ್ದು, ಪೂರ್ವ ಮತ್ತು ದಕ್ಷಿಣಕ್ಕೆ ಮುಖ ಮಾಡಿದ ಗರ್ಭ ಗುಡಿಯನ್ನು ಹೊಂದಿದೆ. ಒಂದು ಗರ್ಭಗುಡಿಯಲ್ಲಿ ಬನಶಂಕರಿ, ಮತ್ತೊಂದು ಗರ್ಭಗುಡಿಯಲ್ಲಿ ಶಂಕರಲಿಂಗವನ್ನು ಕಾಣಬಹುದು. ಗರ್ಭಗೃಹದ ಬಾಗಿಲುಗಳ ಮೇಲೆ ಅರ್ಧಗಂಬಗಳ ಹಾಗೂ ಸೂಕ್ಷ್ಮ ಕೆತ್ತನೆಗಳನ್ನು ಕಾಣಬಹುದು. ಲಲಾಟಬಿಂಬದಲ್ಲಿ ಗಜಲಕ್ಷ್ಮೀಯ ಉಬ್ಬುಶಿಲ್ಪವಿದ್ದು, ಮೇಲಿನ ಶಿಲಾಫಲಕದಲ್ಲಿ ಐದು ಮಂಟಪಗಳ ಸೂಕ್ಷ್ಮ ಉಬ್ಬು ರಚನೆಗಳಿವೆ. ಮಧ್ಯದ ಮಂಟಪವು ಗಣಪತಿಯ ಉಬ್ಬು ಶಿಲ್ಪವನ್ನು ಹೊಂದಿದೆ.
ದಕ್ಷಿಣಾಭಿಮುಖವಾಗಿರುವ ಗರ್ಭಗುಡಿಯ ಮೇಲೂ ಸೂಕ್ಷ್ಮ ಕೆತ್ತನ ಕಲಾ ಕುಸುರಿಯನ್ನು ಕಾಣಬಹುದು. ಇನ್ನು ಈ ದೇವಾಲಯದ ವಿಶೇಷವೆಂದರೆ ಇದರ ನವರಂಗ ಮಂಟಪ. ಇಲ್ಲಿ ನಾಲ್ಕು ಕಂಬಗಳಿದ್ದು. ಈ ಕಂಬಗಳ ಮೇಲೆ ವಿಷ್ಣು,ನಟರಾಜ, ಗಣಪತಿ, ಭೈರವ,ಭೈರವಿ, ಶಿವ, ವರಹಾ, ಉಗ್ರನರಸಿಂಹ, ಚಂದ್ರ, ವೀರಭ್ರದ, ಮೊದಲಾದ ದೇವಾನುದೇವತೆಗಳ ಅದ್ಭುತ್ ಕೆತ್ತನೆಗಳನ್ನು ಕಾಣಬಹುದು. ನವರಂಗದ ಕಂಬಗಳ ಮೇಲೆ ಕೆತ್ತಿದ ದೇವಾಯಲಗಳು ಕಾಣ ಸಿಗುವುದು ಅಪರೂಪ.ಇನ್ನೂ ದೇವಾಲಯದ ಹೊರಭಿತ್ತಿಯು ಗೋಡೆಕಂಬ,ಅರ್ಧಕಂಬ, ಮತ್ತು ದೇವಕೊಷ್ಟಕಗಳ ಅಲಂಕಾರದಿಂದ ಕೂಡಿದೆ. ನಕ್ಷತ್ರಾಕಾರದ ತಲವಿನ್ಯಾಸವನ್ನು ಹೊಂದಿದೆ.
ಸೂಕ್ತ ರಕ್ಷಣೆಯಿಲ್ಲ..
ದೇವಸ್ಥಾನದ  ಸುತ್ತಲೂ ಬೇಲಿ ಹಾಕಲಾಗಿದೇ, ಆ ಬೇಲಿಯನ್ನು ಈಗಾಗಳೆ ಬೇಧಿಸಲಾಗಿದೆ. ಇನ್ನೂ ದೇವಸ್ಥಾನದ ಒಳಗೆ ಯಾರು ಬೇಕಾದರೂ ರಾಜಾರೋಷವಾಗಿ ಪ್ರವೇಶಿಸಬಹುದು. ಇನ್ನೂ ದೇವಸ್ಥಾನದ ಸುತ್ತಲೂ ಒತ್ತುವರಿ ಆಗಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹೀಗಾಗಿ ಜೀರ್ಣೋದ್ಧಾರ ಸಮಯದಲ್ಲಿ ತೆಗೆದ ಕಲ್ಲುಗಳಿಗೆ ಹಾಗೂ ದೇವಸ್ಥಾನಕ್ಕೆ ಯಾವುದೇ ರಕ್ಷಣೆ ಇಲ್ಲ. ಅಷ್ಟೇ ಅಲ್ಲದೇ ಇಲ್ಲಿ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಇದಕ್ಕೆ ಅರ್ಚಕರು ಸಹಿತ ಇಲ್ಲ. ಓಣಿಯ ಮಹಿಳೆಯರೆ ಈ ದೇವಸ್ಥಾನದ ಪೂಜೆ ಮಾಡುತ್ತಿದ್ದಾರೆ. ದೇವಸ್ಥಾನದ ಮೇಲೂಸ್ತುವಾರಗೆ ಸರಕಾರ ಒಬ್ಬ ನೌಕರರನ್ನು ಹಾಗೂ ಒಬ್ಬ ಕಾವಲುಗಾರರನ್ನು ನೇಮಕ ಮಾಡಲಾಗಿದೆ. ಆದರೆ ಸರಕಾರಿ ನೌಕರ ಧಾರವಾಡದಲ್ಲಿ ಇರುವುದರಿಂದ ಈ ದೇವಾಲಯ ರಕ್ಷಣೆಯ ಹೊಣೆ ಅಲಿಯ್ಲ ಕಾವಲುಗಾರನ್ನದೆ. ಅವನು ಇಲ್ಲದೇ ಇದ್ದಾಗ ಇದಕ್ಕೆ ರಕ್ಷಣೆ ನೀಡುವವರು ಯಾರು? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಉತ್ಸವ ಸಾರ್ಥಕತೆ 

ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ,ಬನಶಂಕರೀ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ





Saturday, 7 April 2018

ಹೊಟ್ಟೆಯ ಹಿಟ್ಟಿಗಾಗಿ ಕಟ್ಟಿಗೆ ಹೊರುವ ಕಸರತ್ತು.


ಮಂಜುನಾಥ ಗದಗಿನ

  ಆಧುನಿಕ ಜೀವನ ಶೈಲಿಗೆ ಕಾಲಿಕಟ್ಟಿಕೊಂಡು ಯಾವ ದಿಕ್ಕು ದೆಸೆಯು ಗೊತ್ತಿಲ್ಲದೆ ಕೇವಲ ದುಡ್ಡು ಸಂಪಾದನೆಗಾಗಿ, ಜೀವನದ ಅಮೂಲ್ಯ ಕ್ಷಣಗಳನ್ನು ಯಾಂತ್ರಿಕ ವಸ್ತುಗಳೊಂದಿಗೆ ನಮ್ಮದೇ ಹಮ್ಮು-ಬಿಮ್ಮಿನಲ್ಲಿ ಕಳೆಯುತ್ತಿದ್ದೇವೆ. ಆದರೆ ಕೆಲವೊಂದಿಷ್ಟು ಜನರು ಯಾಂತ್ರಿಕ ಬದುಕಿನಿಂದ ದೂರವೇ ಇದ್ದು ತಮ್ಮದೇ ಪುಟ್ಟ ಪ್ರಪಂಚದಲ್ಲಿ ಆಸೆ, ಆಕಾಂಕ್ಷೆಗಳೊಂದಿಗೆ ಹೊಟ್ಟೆಯ ಹಿಟ್ಟಿಗಾಗಿ, ದಿನನಿತ್ಯ ಕಟ್ಟಿಗೆ ಹೊರುವ ಕೆಲಸವನ್ನು ಮಾಡುತ್ತಿದ್ದಾರೆ.
  ಸೂರ್ಯ ಹುಟ್ಟುವುದಕ್ಕೂ ಮುನ್ನ, ಎದ್ದು ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಟ್ಟು. ತಮ್ಮ ಹೊಟ್ಟೆಗೆ ಸ್ಪಲ್ಪ ಬುತ್ತಿಕಟ್ಟಿಕೊಂಡು ಹೋಗುವ ಈ ಮಹಿಳೆಯರು ಮತ್ತೆ ಮನೆ ಸೇರುವುದು ಅದೇ ಸೂರ್ಯನೊಂದಿಗೆ. ಈ ಮಹಿಳೆಯರದ್ದು ದಿನನಿತ್ಯದ ಕಾಯಕವೇ ಇದು.
 ಬದುಕಿನ ಬಡತನ ಎಂತಹ ಕೆಲಸಕ್ಕಾದರು ಪ್ರೇರೆಪಿಸುತ್ತದೆ ಎಂಬುದಕ್ಕೆ ಅಂದು ದಾರಿಯಲ್ಲಿ ಕಂಡ ಈ ಮಹಿಳೆಯರೇ ಜ್ವಲಂತ ಸಾಕ್ಷಿಯಾಗಿದ್ದರು. ತುತ್ತು ಅನ್ನಕ್ಕಾಗಿ ಸುಡು ಬಿಸಿಲನ್ನು ಲೆಕ್ಕಿಸದೇ ಕಾಣದ ಯಾವುದೋ ಒಂದು ದಾರಿಗುಂಟ ಅದೇಷ್ಟೋ ಕೀ.ಮಿಗಳನ್ನು ನಡೆದುಕೊಂಡು ಕಟ್ಟಿಗೆ ತರುತ್ತಿದ್ದರು. ಮಾಸಿದ ಬಟ್ಟೆ, ಅವರ ಕಾಲಲ್ಲಿನ ಚಪ್ಪಲಿಗಳು ಅವರ ಬದುಕಿನ ಬಡತನವನ್ನು ಅಣಕಿಸುತ್ತಿದ್ದವು.
ಇವರ ಆ ಗಟ್ಟಿತನ ಅದೆಂತಹ ಗಂಡೆದೆಯನ್ನು ಗದರಿಸುವಂತಿತ್ತು.
  ನಾವುಗಳು ಮನೆಯಲ್ಲಿ ಇದ್ದಾಗ ಒಂದು ಕಡ್ಡಿಯನ್ನು ತೆಗೆದು ಈ ಕಡೆಯಿಂದ ಆ ಕಡೆಗೆ ಹಾಕುವುದಿಲ್ಲ. ಒಂದು ವೇಳೆ ಹಾಕಿದ್ರು ಆ ಮೇಲೆ ಸೊಂಟನೋವು ಎಂದು ಹಾಸಿಗೆ ಹಿಡಿಯುವುದು ಗ್ಯಾರಂಟಿ. ಹೌದು! ಇದು ನಮ್ಮ ಆಧುನಿಕ ಜೀವನ ಶೈಲಿಯ ಯಾಂತ್ರಿಕ ಬದುಕಿನ ಬಹು ದೊಡ್ಡ ಉಡುಗರೆ ಎಂದರೆ ತಪ್ಪಾಗಲಾರದು. ಇಂತಹ ಪರಸ್ಥಿಯಲ್ಲಿ ಈ ಮಹಿಳೆಯರು ದಿನ ನಿತ್ಯ ತಮಗೆ ತಿಳಿಯದಷ್ಟು ದೂರವನ್ನು ಸಾಗಿ, ಭಾರವಾದ ಕಟ್ಟಿಗಳನ್ನು ಕಡೆದುಕೊಂಡು, ಅವುಗಳನ್ನು ವ್ಯವಸ್ಥಿತವಾಗಿ ಕಟ್ಟಿಕೊಂಡು, ತಲೆಯ ಮೇಲೆ ಹೊತ್ತುಕೊಂಡು ಬರುತ್ತಾರಲ್ಲಾ! ಅವರ ಗಟ್ಟಿತನಕ್ಕೆ ಗಟ್ಟಿಯಾಗಿ ಕೂಗಿ ಹೇಳಲೇ ಬೇಕು ಶಬ್ಬಾಸ್ ಎಂದು.
   ನಾವ್ ಏನ ಮಾಡೋನ್ರಿ, ಈಗಿನ್ ಸಿಲಿಂಡರ ತಗೋಳಾಕ್ ನಮ್ಮ ಹತ್ರ ದುಡ್ಡಿಲ್ಲ. ತುತ್ತು ಅನ್ನ ತಿನ್ನಬೇಕಂದ್ರೆ ದಿನನಿತ್ಯ ಕಟ್ಟಿಗೆ ಹೊರಲೇ ಬೇಕು. ಇದನ್ನ ಮಾಡದೇ ಹೋದ್ರ ಹೊಟ್ಟೆಗೆ ತಣ್ಣಿರ ಬಟ್ಟೆನೆಗತಿ. ಇನ್ನ ಸರಕಾರ ನಮ್ಗ ಚುಮಣಿ ಎಣ್ಣೆ ಬಂದ್ ಮಾಡಿದೆ. ಹೀಂಗಾದ್ರ ನಮ್ಮ ಜೀವನ ಹೇಂಗ್ ನಡೆಸೋದು ಎಂದು ಮಲ್ಲವ್ವ ತನ್ನ ಅಳಲನ್ನು ತೊಡಿಕೊಂಡಳು.
  ಅಷ್ಟೂ ದೂರ ಹೋಗಿ, ತ್ರಾಸಪಟ್ಟು ತಂದರು ಒಂದು ಹೋರೆಗೆ ಸಿಗುವುದು ಕೇವಲ್ 30-40 ರೂ.ಗಳು ಮಾತ್ರ. ಇನ್ನೂ ಕೆಲವೊಂದಿಷ್ಟು ಸಾರಿ ಆ ಕಟ್ಟಿಗಳು ಮಾರದೇ ಹೋದ್ರೆ ಅವರು ಪಟ್ಟ ಶ್ರಮ ಹೋಳೆಯಲ್ಲಿ ಹುಣಸೆ ಹಣ್ಣು ತೋಳೆದ ಹಾಗೆ ಆಗುತ್ತೆ. ಇದರ ಜತೆ ಅವರ ಮನೆಯ ಒಲೆಗೂ ಇದೇ ಕಟ್ಟಿಯನ್ನು ಒಳಸುತ್ತಾರೆ. ಈ ದೃಶ ನೋಡಿದಾಕ್ಷಣ ನಮ್ಮ ಊರು ನನ್ಗೆ ನೆನಪಾಯಿತು. ನಮ್ಮ ಅವ್ವ ಕೂಡಾ ಕಟ್ಟಿಗೆ ತರಲು ಗುಡ್ಡಕ್ಕೆ ಹೋಗುತ್ತಿದದ್ದು ನೆನೆದು ಜೀವ ಹಿಂಡಿದಾಂತಾಯಿತು. ಇವರ ಈ ಕಾಯಕಕ್ಕೆ ಬೆಲೆ ಸಿಗುವುದು ಯಾವಾಗ? ಇವರ ಬದುಕು ಹಸನಾಗುವುದು ಯಾವಾಗ? ಎಂಬುದು ನಮ್ಮೆಲ್ಲರ ಪ್ರಶ್ನೆ.



ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...