Saturday, 24 March 2018

ಆಟಗಳು ಉಂಟು ಲೆಕ್ಕಕ್ಕಿಲ್ಲ..!


ಮಂಜುನಾಥ ಗದಗಿನ

 ಆಟದೊಂದಿಗೆ ಪಾಠ ಕೇಳುತ್ತಿದ್ದರೆ, ಅದೆನೋ, ಹರುಷ. ಮತ್ತಷ್ಟು ಕಲಿಬೇಕು, ತಿಳಿದುಕೊಳ್ಳಬೇಕು ಎಂಬ ಹಂಬಲ ವ್ಯಕ್ತಿಗತವಾಗಿ ಪರಕಾಯ ಪ್ರವೇಶ ಮಾಡುತ್ತಿತ್ತು. ಅದರಲ್ಲೂ ಚಿನ್ನಿ-ದಾಂಡು, ಲಗೋರಿ, ಬುಗುರಿ, ಕಣ್ಣಾಮುಚ್ಚಾಲೆ ಆಟಗಳ ಜೀವನದ ಅವಿಬಾಜ್ಯ ಅಂಗಗಳಾಗಿ ಬಾಲ್ಯದ ದಿನಗಳಲ್ಲಿ ಪಾರಮ್ಯ ಮೆರೆದಿದ್ದವು. ಆದರೆ ಇಂದು ಈ ಆಟಗಳೆಲ್ಲಾ, ಕಂಪ್ಯೂಟರ್, ಮೊಬೈಲ್, ವಿಡಿಯೋ ಗೇಮ್‌ಗಳಲ್ಲಿ ಕಳೆದು ಹೋಗಿರುವದು ಮನುಕುಲದ ಯಾಂತ್ರಿಕ ಬದುಕನ್ನು ಅನಾವರಣಗೊಳಿಸುತ್ತವೆ.

ಬೇಕಾದ್ದು, ಬೇಡವಾದದ್ದನ್ನು ಬೆನ್ನಿಗೆ ಕಟ್ಟಿಕೊಂಡು,ದಿನಗಳನ್ನು ಆರಂಭಿಸುವ ಇಂದಿನ ನಾಗರಿಕ ಪ್ರಜೆಗಳಿಗೆ ಆಟ ಆಡಲು ಎಲ್ಲಿಂದ ಬರಬೇಕು ಪುರಸೋತ್ತು. ತಮ್ಮ ಮಕ್ಕಳಿಗೆ ಎಲ್ಲಿಲದ್ದ ಕಾಯ್ದೆ,ನಿಯಮ ಎಂಬ ಕಟ್ಟಳೆಗಳಲ್ಲಿ ಬಂದಿಸಿ, ಹೊರಗಡೆಯ ಪ್ರಪಂಚಕ್ಕೆ ಅಪರಿಚಿತರನ್ನಾಗಿ ಮಾಡುತ್ತಿದ್ದಾರೆ. ತಮ್ಮ ಮಕ್ಕಳು, ಕೇಳಿದ್ದೇಲ್ಲವನ್ನ ಮನೆಯಲ್ಲಿಯೇ ತಂದುಕೊಟ್ಟು, ಅವರನ್ನು ನಾಲ್ಕು ಗೋಡೆಗಳ ಮಧ್ಯ ಬಂದಿಸಿದ್ದಾರೆ. ಹೀಗಿರುವಾಗ ಮಕ್ಕಳು ಹೊರ ಜಗತ್ತಿನೊಂದಿಗೆ ಬೇರೆತು, ಸ್ವಚ್ಚಂದಾಗಿ ಆಡುವದು ದೂರದ ಮಾತಾಯಿತು. ಹೀಗಿರುವಾಗ ನಮ್ಮ ಗ್ರಾಮೀಣ ಕ್ರೀಡೆಗಳು, ಬೆಳೆಯುವದು ಯಾವಾಗ? ಕೈಯಲ್ಲೊಂದು ಜಗತ್ತಿನ್ನು ಒಳಗೊಂದ ಮೊಬೈಲ್ ಇದ್ದರೆ ಸಾಕು, ಹೆತ್ತವರನ್ನು ಹೇಡೆಮುರಿಕಟ್ಟಿ ಬೀಡುತ್ತಾರೆ ಇಂದಿನ ಮಕ್ಕಳು. 
ಮೊನ್ನೆ ರಜೆಗೆಂದು ಊರಿಗೆ ಹೋದಾಗ, ಗೆಳೆಯರ ಜೊತೆ ಓಣಿಯ ಸಂಧಿ-ಗೊಂದಿಗಳಲ್ಲಿ ಲೋಕಾಭಿರಾಮವಾಗಿ ಮಾತಾಡುತ್ತಾ ಸುತ್ತಾಡುತ್ತಿದ್ದೆ. ಅಲ್ಲೆ ಪಕ್ಕದಲ್ಲೆ ಒಂದಿಷ್ಟು ತಮ್ಮಂದಿರು ಚಿನ್ನಿ-ದಾಂಡುಗಳನ್ನು ಹಿಡಿದುಕೊಂಡು, ಬೀಸಿ ಹೊಡೆಯುತ್ತಿರುವುದ ಕಂಡು, ಬಾಲ್ಯ ನೆನಪುಗಳು ಸ್ಮತಿಪಟಲಗಳ್ಲಿ ನಲಿದಾಡಲು ಶುರು ಮಾಡಿದವು. ನಾವುಗಳು ಕೂಡಾ, ಅವರ ಹಾಗೆಯೇ ದಿನ ಬೆಳಗಾದ್ರೆ ಚಿನ್ನಿ-ದಾಡು, ಕಿಸೆಯಲ್ಲೊಂದಿ ಗೋಲಿಯನ್ನು ಇಳಿಸಿಕೊಂಡು ಬರುತ್ತಿದ್ದೇವು. ಚಿನ್ನಿ-ದಾಂಡು ಆಡುತ್ತಿದಬೇಕಾದ್ರೆ ಕಾಲು ಗೆದರಿಕೊಂಡು ಗೆಳೆಯರ ಜೊತೆ ಗುದ್ದಾಡಿದ್ದು, ರಸ್ತೆಯಲ್ಲಿ ಓಡಾಡುವ ಮುದಕರಿಗೆ ಬಡಿದಾಗ, ಅವರು ಲೋ..ಬಾಡ್ಯಾ ನಿನಗ್ ಬ್ಯಾರೇ ಯಾರು ಸಿಗಲಿಲ್ಲೇನೋ..ಎಂದು ಬೈದದ್ದು, ಸೋತಾಗ ಮಾರುದ್ದ ದೂರದಿಂದ ಕೋಳಿಯ ಹಾಗೆ ಕುಕ್ಕುಕ್ಕೂ..ಎಂದು ಕೂಗುತ್ತಾ ಓಡಿದ್ದು ಎಲ್ಲವು ನೆನಪಾಗಿ, ಕಣ್ಣಾಲಿಗೆಗಳು ತೇವಗೊಂಡವು. ನಾವುಗಳು ಕೂಡಾ, ಅವರ ಜೊತೆ ಒಂದ ಕೈ ಚಿನ್ನಿ-ದಾಂಡು ಆಡಿ ಖುಷಿಪಟ್ಟೆವು.
ಈ ಆಟಗಳನ್ನು ಆಡುವುದರಿಂದ ಮೊದಲೆಲ್ಲಾ ಮಕ್ಕಳಿಗೆ ವ್ಯಾಯಾಮವಾಗುತಿತ್ತು. ಬುದ್ದಿ ಚುರುಕಾಗುತ್ತಿತ್ತು. ಇದೇ ಕಾರಣಕ್ಕೆ ಈ ಆಟಗಳನ್ನು ಋತುಮಾನಕ್ಕನುಗುಣವಾಗಿ ಆಡಲಾಗುತ್ತಿತ್ತು. ಆದರೆ ಇಂದು ದಿನ ಬೆಳಗಾದ್ರೆ ಸಾಕು ಬ್ಯಾಟು, ಚಂಡು ಹಿಡಿದು ಹೊರಟು ಬಿಟ್ಟರೇ, ಯಾರದಾದ್ರು ತಲೆನೋ..ಕೈಯೋ ಮುರಿಯೋ ವರೆಗೂ ಆಡಿ, ಜಗಳದೊಂದಿಗೆ ಮನೆಗೆ ಮರಳುತ್ತಿದ್ದಾರೆ. ಆಟಗಳು ಮನುಷ್ಯನ ಮನಸ್ಸನ್ನ ಉಲ್ಲಸಿತನ್ನಾಗಿಸುತ್ತವೆ. ಅಂತಹ ಆಟಗಳಲ್ಲಿ ಚಿನ್ನಿ-ದಾಂಡು, ಲಗೋರಿ ಆಟಗಳು ಮಹತ್ತರವಾಗಿವೆ. ಆದರೆ ಇಂದಿನ ಮಕ್ಕಳಿಗೆ ಚಿನ್ನಿ-ದಾಂಡು, ಲಗೋರಿ, ಬುಗುರಿ ಎಂದರೆ ಹಾಗೆಂದ್ರೆ ಏನು? ಎಂದು ಕೇಳುವ ಪರಸ್ಥಿತಿ ನಿರ್ಮಾಣವಾಗಿದೆ.
ತಾಯಿಯಾದ್ಳು ಆಡಿ ಬಾ ಏನ ಕಂದ, ಅಂಗಾಲ ತೊಳೆದೇನ, ತೆಂಗಿನ ಕಾಯಿ ತಿಳಿನೀರ ತಕ್ಕೊಂದು ಬಂಗಾರದ ಮೊರೆ ತೊಳೆದೇನು ಎಂದು ಆಡಿ ದಣಿದು ಬಂದ ತನ್ನ ಮಗನನ್ನು ಉಪಚರಿಸುತ್ತಿದ್ದಳು. ಆದರೆ ಈಗನ ತಾಯಂದಿರು ಧೋಳ್‌ಲ್ಲಿ ಆಡಬ್ಯಾಡ, ಕೇಸರಲ್ಲಿ ನಡಿಬ್ಯಾಡ ನನ್ನ ಮಗನ, ಆಡಿದ್ದು ಗೊತ್ತಾದ್ರ ಕೈಕಾಲ ಮುರಿತಿನ ಎಂದು ಮಕ್ಕಳನ್ನು ಗಧರಿಸುತ್ತಿದ್ದಾರೆ. ಹೀಗಾದ್ರ ನಮ್ಮ ಮಕ್ಕಳು ಈ ಆಟಗಳನ್ನು ಆಡುವುದು ಯಾವಾಗ? ಈ ಆಟಗಳು ಉಳಿಯೋದು ಹೇಗೆ? ಒಂದು ವೇಳೆ ಇಂತಹ ಆಟಗಳು ಇದ್ದಾವೇ, ಎಂದು ನಮ್ಮ ಮಕ್ಕಳಿಗೆ ತಿಳಿಸಬೇಕಾದರೆ, ಸಾಹಿತ್ಯ ಸಮ್ಮೇಳನದ ಹಾಗೆಯೋ, ಕ್ರಿಕೇಟನ ಟೋರ್ನಾಮೆಂಟಗಳ ಹಾಗೆ ಟೋರ್ನಿ ಕರೆದು ಅವುಗಳಿಗೂ ಪಂದ್ಯ ಏರ್ಪಡಿಸಿ, ಪರ್ದಶಿಸಿದರೆ ನಮ್ಮ ಯುವ ಜನಾಂಗಕ್ಕೆ ಇವುಗಳ ಬಗ್ಗೆ ಮನವರಿಕೆ ಆದರೂ ಆದಿತು.



No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...