ಮಂಜುನಾಥ ಗದಗಿನ

ಇದು ಕುರಿ ಕಾಯೋ ಹುಡಗನೊಬ್ಬ ತನ್ನ ಛಲದಿಂದ ಪಿಎಸ್ಐ ಆದ ಛಲದ ಕಥೆ. ಸಾಧನೆಗೆ ಬಡತನ ಅಡ್ಡಿಯಾಗದು. ಸಾಧಿಸಬೇಕು, ಗುರಿಮುಟ್ಟಬೇಕು ಎಂಬ ಛಲವಿದ್ದರೆ ಸಾಕು ಎಂತಹ ಬಡತನಕ್ಕೂ ಸೆಡ್ಡು ಹೊಡೆದು ಮುನ್ನಗ್ಗಬಹುದು ಎಂಬುದಕ್ಕೆ ಈ ಮಾದರಿಯಾಗಿದ್ದಾನೆ. ನನಗಾಗದು ಎಂದು ಕೈಕಟ್ಟಿ ಕುಳಿತ ಅದೇಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾನೆ. ಇದೀಗ ಪಿಎಸ್ಐ ಪರೀಕ್ಷೆ ಇದೆ ಪಾಸ್ ಆಗಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾನೆ. ಪಿಸ್ತ ಇನ್ ಸರ್ವಿಸನಲ್ಲಿ ರಾಜ್ಯಕ್ಕೆ ಐದನೇ ರ್ಯಾಂಕ್, ಒಟ್ಟಾರೆ ರಾಜ್ಯಕ್ಕೆ 76ನೇ ರ್ಯಾಂಕ್ ಇದೆ. ಎಲ್ಲರಿಗೂ ಸ್ಫೂರ್ತಿ.
ಆತನದ್ದು ತೀರಾ ಬಡ ಕುಟುಂಬ. ಇದ್ದದ್ದರಲ್ಲಿ ಎಲ್ಲವನ್ನು ಕಾಣುವ ಸರಳ ಕುಟುಂಬ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆ ಮಾತಿಗೆ ಕಟಿಬದ್ಧರಾಗಿ ನಡೆಯುತ್ತಿದ್ದ. ಯಾವತ್ತು ತನ್ನ ಎಲ್ಲೆಯನ್ನು ಮೀರಿ ದಾಟಿ ಮತ್ತೊಬ್ಬರಿಗೆ ನೋವು ಕೊಟ್ಟವನಲ್ಲ. ಇದ್ದ ಬಡತನದಲ್ಲೇ ತಾನು ಕೂಲಿನಾಲಿ ಮಾಡಿಕೊಂತ. ತಾನು ಓದುತ್ತಾ, ತಮ್ಮ, ತಂಗಿಯರನ್ನು ಓದುತ್ತಾ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾನೆ.

ಇಷ್ಟೇ ಶಾಲೆಯ ರಜೆಗಳಲ್ಲಿ ಈತ ತನ್ನ ಶಾಲೆಯ ಖರ್ಚು ಸರಿದೂಗಿಸಲು ಮದುವೆ ಪೆಂಡಾಲ್ಗಳನ್ನು ಹಾಕಲು ಹೋಗುತ್ತಿದ್ದ. ಈ ಸಮಯದಲ್ಲಿ ಗಳಿಸಿದ ಹಣವೇ ಆತನ ಶಿಕ್ಷಣಕ್ಕೆ ಆಧಾರವಾಗಿತ್ತು. ಹಾಗೋ ಹೀಗೋ ಆಡು ಕಾಯುತ್ತಾ, ಮದುವೆ ಪೆಂಡಾಲ್ ಹಾಕುತ್ತ, ಪಿಯುಸಿ ಮುಗಿಸಿದ. ನಂತರ ಬಿಕಾಂ ಅಲ್ಲಿಯೂ ಇದೆ ಸ್ಥಿತಿ. ಕಾಲೇಜಿಗೆ ಹೋಗಿದ್ದಕ್ಕಿಂತ ಕುರಿ ಕಾಯುವುದು, ಪೆಂಡಾಲ್ ಹಾಕುವುದು. ಆದರೆ, ಇದೆ ಸಮಯಕ್ಕೆ ಏನಾದರೂ ಸಾಧಿಸಬೇಕು ಎಂಬ ಛಲ ಆತನಲ್ಲಿ ಮೂಡಿತು. ಇದೇ ಕಾರಣಕ್ಕೆ ಕುದಿಯುತ್ತಿದೆ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಶುರು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಇರುವಾಗಲೇ, ಡಿಗ್ರಿ ಕೂಡ ಮುಗಿತು.
ಇನ್ನೇನು ಮನೆಯಲ್ಲಿ ಇದ್ದ ಒಂದು ಕೋಣೆಯಲ್ಲಿಯೇ ತನ್ನ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳತೊಡಗಿದ. ಇದಕ್ಕೆ ಒಂದು ಟೈಂ ಟೇಬಲ್ ತಯಾರಿಸಿ ಓದಿದೆ. ಇದರೊಟ್ಟಿಗೆ ಕುರಿ ಕಾಯುವ ಕೆಲಸ ಬೇರೆ. ಈತನ ಈ ಪರಿಶ್ರಮಕ್ಕೆ ಒಂದೆ ಸಲ್ಲಕ್ಕೆ ಎರಡು ಸರ್ಕಾರಿ ನೌಕರರು ಅರಸಿ ಬಂದವು. ಕೆಎಸ್ಐಎಸ್ಎಫ್ ಹಾಗೂ ಕೆಎಸ್ಆರ್ಪಿ. ಇದರಲ್ಲಿ ಸೇರಿದ್ದು ಕೆಎಸ್ಆರ್ಪಿ. ನೌಕ್ರಿ ಹಿಡಿದು ಬೆಂಗಳೂರು. ಈತನ ಛಲ ಇಷ್ಟಕ್ಕೇ ನಿಲ್ಲಲಿಲ್ಲ. ಅಲ್ಲಿದ್ದು ಮತ್ತೇ ಓದಿದ ಇದರ ಪರಿಣಾಮವಾಗಿ ಇಲಾಖೆಯಲ್ಲಿ ಪರೀಕ್ಷೆಯಲ್ಲಿ ಪಾಸಾದ. ಆದರೆ, ಅನಿವಾರ್ಯ ಕಾರಣಗಳಿಂದ ಈ ಹುದ್ದೆಗೆ ಸೇರಲಾಗುವುದಿಲ್ಲ. ಹೀಗೆ ಎಸ್ಡಿಎ ಪರೀಕ್ಷೆ ಬರೆದ ಅಲ್ಲಿಯೂ ಯಶ ಕಂಡ. ಆದರೆ, ನ್ಯಾಯಾಲಯದಲ್ಲಿ ಕ್ರಿ.ಶ. ಮತ್ತೇ ಸಿವಿಲ್ ಕಾನ್ಸಸ್ಟೇಬಲ್ ಪರೀಕ್ಷೆ ಬರೆದಿದ್ದಾರೆ. ಇದರಲ್ಲೂ ಯಶಸ್ಸು ಸಾಧಿಸಿದ. ಸದ್ಯ ಕುಂದಾನಗರಿಯಲ್ಲಿ ಆರಕ್ಷಕ ಹುದ್ದೆಯಲ್ಲಿ ಜನರ ರಕ್ಷಣೆ ಮಾಡುತ್ತಿದ್ದಾರೆ. ಹೌದು! ಅವನೆ ಕಟಕೋಳ ಗ್ರಾಮದ ಕರೆಪ್ಪ ಕುರುವಿನಕೊಪ್ಪ. ಇತನ ಛಲ ಹಾಗೂ ಸಾಧಿಸಬೇಕೆಂಬ ಒಂದೇ ಒಂದು ದೃಢತೆ ಇತನ ಸಾಧನೆಗೆ ಕಾವಲು. ಇತನ ಸಾಧನೆ ಇಷ್ಟಕ್ಕೆ ಮುಗಿದಿಲ್ಲ. ಈ ಪಿಎಸ್ಐ ಆಗಬೇಕು ಹಿರಿಯಾಸೆ, ಅಚಲ ಗುರಿಯೊಂದಿಗೆ ನಿರಂತರ ಓದಿನಲ್ಲಿ ಮಗ್ನನಾಗಿದ್ದಾನೆ. ಇಂದು ನಾಳೆ ಇದರಲ್ಲೂ ಯಶ ಸಾಧಿಸುತ್ತಾನೆ ಎಂಬ ನಂಬಿಕೆಯೇ ಆತನದ್ದು. ಏನೇ ಆಗಲಿ ನನ್ನಿಂದ ಆಗದು ಎಂಬ ಯುವಕರಿಗೆ ಈ ಸ್ಪೂರ್ತಿ. ಇದೇ ಕಾರಣಕ್ಕೆ ಐದು ನೌಕ್ರಿ ಪಡೆದು, ಮತ್ತಷ್ಟು ಉನ್ನತ ಹುದ್ದೆಗೇರಬೇಕೆಂದು ಮುನ್ನುಗ್ಗುತ್ತಿದ್ದಾನೆ. ಇತನ ಎಲ್ಲ ಕನಸುಗಳು, ನೂರಾಸೆ ಕನಸುಗಳು. ಮತ್ತಷ್ಟು ಮಗದಷ್ಟು ಜನಕ್ಕೆ ಇದು ಮಾದರಿಯಾಗಲಿ ಎಂಬ ಎಲ್ಲರ ಆಶಯ.
-
ಮಂಜುನಾಥ ಗದಗಿನ
ಮಂಜುನಾಥ ಗದಗಿನ
ಸೂಪರ್ ಸರ್ ಇಂತಹ ಬರಹಗಳು ಮತ್ತಷ್ಟು ಮುಡಿಬರಲಿ
ReplyDeleteನಿಜವಗಲೂ ಇಂತಹ ಪ್ರತಿಬೆಗಳನ್ನು ಗುರುತಿಸಿ ಸಮಾಜಕ್ಕೆ ಒಳ್ಳೆಯ ಸಂದೇಶ ತಿಳಿಸಿದ ತಮಗೆ ಧನ್ಯವಾದಗಳು
ReplyDelete