Wednesday, 19 December 2018

ಬಡತನದಲ್ಲಿ ಅರಳಿದ ಕಲಾ ಪ್ರವೀಣ ಈ "ಚಿಲ್ಲರೆ ಮಂಜ"


ಮಂಜುನಾಥ ಗದಗಿನ
ಕಲಿಯುವ ಆಸಕ್ತಿ ಇದ್ರೆ, ಮನುಷ್ಯ ಎತ್ತರಕ್ಕೆರಬಲ್ಲ. ಸಾಧಿಸುವ ಮನಸ್ಸಿದ್ದರೆ 
ಬಡತನ ಕೂಡಾ ಸಾಥ್ ನೀಡ ಬಲ್ಲದು ಎಂಬುದಕ್ಕೆ ಇಲ್ಲೋಬ್ಬ ಕಲಾವಿದ ನಿದರ್ಶನವಾಗಿದ್ದಾರೆ.
ಹೌದು! ಅವರೇ ಹಾವೇರಿ ಜಿಲ್ಲೆಯ ಮಲಗುಂದ ಎಂಬ ಪುಟ್ಟ ಹಳ್ಳಿಯ ಮಂಜುನಾಥ ಗುಡ್ಡದವರ. ಯಾವುದೇ ಕಲಾ ತರಬೇತಿ ಇಲ್ಲದ ಆಸಕ್ತಿಯಿಂದ ಕಲಿತ ನಟನಾ ಕಲೆಯ ಮೂಲ ಇಂದು ಕಿರುತೆರೆಯ ಮೇಲೆ ನಟನೆ ಮಾಡುತ್ತಾ ನಾಡಿನ ಮನೆ-ಮನದ ಮಾತಾಗಿದ್ದಾರೆ ಮಂಜುನಾಥ ಅಲಿಯಾಸ್ ಚಿಲ್ಲರೆ ಮಂಜಾ. 
ಬಡತನ:
ಇಂದು ಮಂಜಾಭಾರತದಲ್ಲಿ ತಮ್ಮ ನಟನೆ ಮೂಲಕ ಲಕ್ಷಾಂತರ ಜನರನ್ನು ನಕ್ಕು ನಗಿಸುತ್ತಿರುವ ಇವರ ಹಿಂದೆ ಹೇಳಲಾರದಷ್ಟು ನೋವಿನಯಾತನೆ‌ ಇದೆ. ತಾಯಿ ಗಂಗಮ್ಮ. ತಂದೆ ಬಸಪ್ಪ. ಇವರಿಗೆ ನಾಲ್ಕು ಜನ ಮಕ್ಕಳು. ಮೂರು ಗಂಡು, ಒಂದು ಹೆಣ್ಣು. ಮಂಜುನಾಥ ಮೊದಲನೇ ಮಗ. ಮನೆಯಲ್ಲಿ ಬಡತನ ಇದ್ದ ಕಾರಣ ತಾಯಿ ಗಂಗಮ್ಮ ಪ್ರತಿದಿನ ಕೂಲಿನಾಲಿ‌ ಮಾಡಿ ಈ ಮಕ್ಕಳನ್ನು ಸಾಕಿ ಸಲುಹಿದ್ದಾಳೆ. ಮಂಜುನಾಥ ಅವರಿಗೆ ಚಿಕ್ಕ ವಯಸ್ಸಿನಲ್ಲೇ ನಾಟಕ,ಸಿನಿಮಾ ನೋಡುವ ಕಯಾಲಿ. ಈ ಕಯಾಲಿಯೇ ಮುಂದೊಂದು ದಿನ ದೊಡ್ಡ ನಟನಾಗಿಸಿದ್ದು ಈ ಇತಿಹಾಸ.
ಬದುಕು ಬದಲಿಸಿದ ಧಾರವಾಡಃ
ಮಂಜುನಾಥ ಅವರು ಹೆಚ್ಚಿನ ಶಿಕ್ಷಣ ಕಲಿಯಲು ಶಿಕ್ಷಣ ಕಾಶಿ ಧಾರವಾಡಕ್ಕೆ ಬಂದರು. ಇಲ್ಲಿ ಬಿಎ ಪದವಿಯಲ್ಲಿ ಓದುತ್ತಿದ್ದಾಗ. ಆಗಾಗಾ ಇಲ್ಲಿಯ ರಂಗಾಯಣಕ್ಕೆ ಭೇಟಿ ನೀಡುತ್ತಿದ್ದರೂ,ಇಂತಹ ಭೇಟಿಯಿಂದ ಇವರಿಗೆ ಹಲವು ರಂಗ ಕಲಾವಿದರ ಪರಿಚಯವಾಯಿತು. ನಂತರ ದಿನಗಳಲ್ಲಿ ಶಿಕ್ಷಣದೊಟ್ಟಿಗೆ ಹವ್ಯಾಸಿ ರಂಗ ತಂಡಗಳೊಟ್ಟಿಗೆ ಸೇರಿ ನಟನೆ ಕಲಿತು ಅದರಲ್ಲಿ ಪಾರಂಗತರಾದರು. ಮನೆಯಲ್ಲು ಬಡತನ ಇದ್ದ ಕಾರಣ ಶಿಕ್ಷಣ, ರೂಮ್ ಬಾಡಿಗೆ ಹೀಗೆ ದಿನನಿತ್ಯದ ಹತ್ತು ಹಲವು ಖರ್ಚುಗಳಿಗೆ ದುಡ್ಡು ಹೊಂದಿಸಬೇಕಾಗಿತ್ತು. ಇದಕ್ಕಾಗಿಯೇ ಮಂಜುನಾಥ ಅವರು ಶಿಕ್ಷಣ, ನಟನೆಯೊಂದಿಗೆ ಬಿಡುವಿನ ವೇಳೆಯಲ್ಲಿ ಅಲ್ಲಲ್ಲಿ ಕೆಲಸ ಮಾಡಿ ತಮ್ಮ ಖರ್ಚು ವೆಚ್ಚ ನಿಗಿಸಿಕೊಳ್ಳುತ್ತಿದ್ದರು.

ಸಕಲ ಕಲಾವಲ್ಲಭ:
ಮಂಜುನಾಥ ಸಕಲ ಕಲಾವಲ್ಲಭರು. ಶಿಕ್ಷಣ, ನಟನೆ, ಕೆಲಸ ಇದರೊಟ್ಟಿಗೆ ಇವರು ಉತ್ತಮ ಬರಹಗಾರ ಕೂಡಾ. ಇವರೊಲ್ಲೊಬ್ಬ ಕವಿ ಕೂಡಾ ಇದ್ದಾನೆ. ಇದೇ ಕಾರಣ ಇವರು ಬರೆದ ಹಲವು ಕವನ, ಲೇಖನಗಳು ರಾಜ್ಯದ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಹಾಗೂ ವೆಬ್ ತಾಣಗಳಲ್ಲಿ ಪ್ರಕಟಗೊಂಡಿವೆ. ಇದೇ ಹವ್ಯಾಸದಿಂದಲೇ ಮಂಜುನಾಥ ಅವರು www.ಡಾಕ್ಟರ್.com ಎಂಬ ಹಾಸ್ಯಮಿಶ್ರಿತ ನಾಟಕವನ್ನು ರಚನೆ ಮಾಡಿದ್ದಾರೆ. ಈ ನಾಟಕವನ್ನು ರಾಜ್ಯದ ಹಲವೆಡೆ ಪ್ರದರ್ಶನ ಮಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದಾರೆ. ಈ ನಾಟಕ ೩೦ಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ.

ಕೈ ಹಿಡಿದ ನಟನೆ:
ಹೀಗೆ ಯಾವುದೇ ರಂಗ ತರಬೇತಿಯೂ ಇಲ್ಲದೇ ಬರೀ ಆಸಕ್ತಿ ಹಾಗೂ ಶ್ರದ್ಧೆಯಿಂದ ಕಲಿತ ನಟನೆ ಇವರ ಬದುಕನ್ನೇ ಬದಲಾಯಿಸಿದೆ. ಅದೊಂದು ದಿನ ಹುಬ್ಬಳ್ಳಿಯಲ್ಲಿ ನಡೆದ ಮಜಾಭಾರತ ಆಡಿಷನ್ ನಲ್ಲಿ ಪಾಲ್ಗೊಂಡರು. ಇವರ ನಟನೆ ನೋಡಿ ಅಲ್ಲಿ ಜಡ್ಜ್ ಶಬ್ಬಾಶಗಿರಿ ಕೊಟ್ಟು ಸೆಲೆಕ್ಷನ್ ಮಾಡಿದರು. ನಂತರ ಇವರ ನಟನೆ ಎಷ್ಟು ಪರಿಪಕ್ವವಾಯಿತು ಎಂದರೆ, ಮಜಾಭಾರತ ೨, ಕಾಮಿಡಿ ಟಾಕೀಸ್, ಸದ್ಯ ಮಜಾಭಾರತ-೨ರಲ್ಲಿಯೂ ಉಳಿಸಿಕೊಂಡಿದ್ದಾರೆ. ಇದೇ ವೇಳೆ ಇವರ ನಟನೆ ಮೆಚ್ಚಿ ಹಲವು ಸಿನಿಮಾಗಳಿಗೆ ಅವಕಾಶಗಳು ಒದಗಿ ಬಂದಿವರ. ಆದರೆ, ಸಮಯದ ಅಭಾವ ಹಾಗೂ ಇನ್ನಷ್ಟು ನಟನೆಯಲ್ಲಿ ಫಳಗಬೇಕೆಂಬ ಆಸೆಯಿಂದ ಬಂದ ಅವಕಾಶಗಳನ್ನು ತಳ್ಳಿ ಹಾಕಿ, ನಟನೆಯಲ್ಲಿ ಮತ್ತಷ್ಟು ಪರಕಾಯ ಪ್ರವೇಶ ಮಾಡುತ್ತಿದ್ದಾರೆ. ಬೆಳ್ಳಿತೆರೆಗೆ ಬಂದು ಅಲ್ಲಿಯೂ ಕಥೆ ಹಾಗೂ ಡೈರಕ್ಷನ್ ಮಾಡಬೇಕು ಎಂಬ ಹೆಬ್ಬಕೆ ಇದೆ ಎಂದು ಹೇಳುತ್ತಾರೆ ಮಂಜುನಾಥ. ಬಡತನದಲ್ಲೇ ಪ್ರತಿಭೆಗಳಿರಿದೂ ಎಂಬ ವಾದಕ್ಕೆ ಮಂಜುನಾಥನ ಕಲಾಪ್ರತಿಭೆಯೆ ಸಾಕ್ಷಿ. ಇಂತಹ ಹಳ್ಳಿ ಹಾಗೂ ಬಡತನದಲ್ಲಿ ಬೆಳೆದ ಪ್ರತಿಭೆಗಳು ಮತ್ತಷ್ಟು ಬೆಳಕಿಗೆ ಬರಲಿ. ಮಂಜುನಾಥ ಅವರು ಮತ್ತಷ್ಟು ಮಗದಷ್ಟು ಎತ್ತರಕ್ಕೆ ಬೆಳೆಯಲಿ ಎಂಬ ಆಶಯ ಕಲಾಪ್ರಿಯರದ್ದು.



No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...