Saturday, 22 December 2018

ಓ ರೈತ

ಮಂಜುನಾಥ ಗದಗಿನ

ಉತ್ತುವ ಕೈಗಳ
ಹಿಂದೆ ಬಿಚ್ಚಿ
ಹೇಳಲಾರದ ನೋವಿದೆ,
ಬತ್ತಿ ಬರಡಾಗುವ
ಮುನ್ನ ಬೆಳಕಾಗ ಬಾರದೇ
ರೈತರ ಬಾಳಲೊಮ್ಮೆ.

ಎಷ್ಟೇ ಒತ್ತಿ ಹೇಳಿದರೂ
ಬಿಚ್ಚುತ್ತಿಲ್ಲ ಸರ್ಕಾರಗಳು
ಬಾಯನ್ನು, ಭೂ ತಾಯಿ
ಮಾತ್ರ ಮರೆತಿಲ್ಲ ರೈತರನ್ನು.

ಸಾಲಕ್ಕೆ ಹೆದರಿ ಸಾಯದಿರು,
 ಸತ್ತು ಹೆಂಡತಿ, ಮಕ್ಕಳ
ಅನಾಥರನ್ನಾಗಿಸದಿರು,
ಸಾವೇ ಶಾಶ್ವತವಲ್ಲ ಕಷ್ಟಗಳಿಗೆ
ಇದ್ದು ಜಯಸು ನೀ ಕಷ್ಟಗಳ
ಕೋಟೆಗಳನೊಮ್ಮೆ.

ನೀ ಬದುಕಿ ಬೆರಗಾಗಿಸು
ನೋಡುವ ಕಣ್ಣುಗಳನೊಮ್ಮೆ.

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...