ಮಂಜುನಾಥ ಗದಗಿನ
ಉತ್ತುವ ಕೈಗಳ
ಹಿಂದೆ ಬಿಚ್ಚಿ
ಹೇಳಲಾರದ ನೋವಿದೆ,
ಬತ್ತಿ ಬರಡಾಗುವ
ಮುನ್ನ ಬೆಳಕಾಗ ಬಾರದೇ
ರೈತರ ಬಾಳಲೊಮ್ಮೆ.
ಎಷ್ಟೇ ಒತ್ತಿ ಹೇಳಿದರೂ
ಬಿಚ್ಚುತ್ತಿಲ್ಲ ಸರ್ಕಾರಗಳು
ಬಾಯನ್ನು, ಭೂ ತಾಯಿ
ಮಾತ್ರ ಮರೆತಿಲ್ಲ ರೈತರನ್ನು.
ಸಾಲಕ್ಕೆ ಹೆದರಿ ಸಾಯದಿರು,
ಸತ್ತು ಹೆಂಡತಿ, ಮಕ್ಕಳ
ಅನಾಥರನ್ನಾಗಿಸದಿರು,
ಸಾವೇ ಶಾಶ್ವತವಲ್ಲ ಕಷ್ಟಗಳಿಗೆ
ಇದ್ದು ಜಯಸು ನೀ ಕಷ್ಟಗಳ
ಕೋಟೆಗಳನೊಮ್ಮೆ.
ನೀ ಬದುಕಿ ಬೆರಗಾಗಿಸು
ನೋಡುವ ಕಣ್ಣುಗಳನೊಮ್ಮೆ.
ಉತ್ತುವ ಕೈಗಳ
ಹಿಂದೆ ಬಿಚ್ಚಿ
ಹೇಳಲಾರದ ನೋವಿದೆ,
ಬತ್ತಿ ಬರಡಾಗುವ
ಮುನ್ನ ಬೆಳಕಾಗ ಬಾರದೇ
ರೈತರ ಬಾಳಲೊಮ್ಮೆ.
ಎಷ್ಟೇ ಒತ್ತಿ ಹೇಳಿದರೂ
ಬಿಚ್ಚುತ್ತಿಲ್ಲ ಸರ್ಕಾರಗಳು
ಬಾಯನ್ನು, ಭೂ ತಾಯಿ
ಮಾತ್ರ ಮರೆತಿಲ್ಲ ರೈತರನ್ನು.
ಸಾಲಕ್ಕೆ ಹೆದರಿ ಸಾಯದಿರು,
ಸತ್ತು ಹೆಂಡತಿ, ಮಕ್ಕಳ
ಅನಾಥರನ್ನಾಗಿಸದಿರು,
ಸಾವೇ ಶಾಶ್ವತವಲ್ಲ ಕಷ್ಟಗಳಿಗೆ
ಇದ್ದು ಜಯಸು ನೀ ಕಷ್ಟಗಳ
ಕೋಟೆಗಳನೊಮ್ಮೆ.
ನೀ ಬದುಕಿ ಬೆರಗಾಗಿಸು
ನೋಡುವ ಕಣ್ಣುಗಳನೊಮ್ಮೆ.

No comments:
Post a Comment