Sunday, 20 January 2019

ಬನಶಂಕರಿ ಜಾತ್ರ್ಯಾಗ ನಾಟಕ ಗುಂಗು

ಮಂಜುನಾಥ ಗದಗಿನ

ಬಾದಾಮಿ ಬನಂಕರಿ ಜಾತ್ರೆ ಅಂದ್ರ,ಬಾಲಕರಿಂದ ಹಿಡಿದು ಹಣ್ಣ ಹಣ್ಣ ಮುದುಕರವರೆಗೂ ಶ್ಯಾನಾ ಪ್ರೀತಿ. ಯಾಕಂದ್ರ ತಂದೆ-ತಾಯಿ ಬಿಟ್ಟ ಈ ಜಾತ್ರೆನಲ್ಲಿ ಎಲ್ಲವೂ ದೊರೆಯುತ್ತದೆ ಎಂಬ ಲೋಕಾರೂಢಿ ಮಾತಿದೆ. ಅದು ಕರೇ ಕೂಡಾ ಹೌದು, ಇನ್ನ ಜಾತ್ರೆಯಲ್ಲಿ ಮನರಂಜನೆಗೆನೂ ಕಡಿಮೆ ಇಲ್ಲ ಈ ಸಾರಿ ಭರ್ಜರಿ ನಾಟಕಗಳು ಬಂದಿವೆ. ಅದರಲ್ಲೂ ಕಾಮಿಡಿ ಕಿಲಾಡಿ, ಮಜಾಭಾರತನಲ್ಲಿ ಮಿಂಚು ಹರಿಸಿದ ಸ್ಟಾರ್ ನಟರ ದಂಡೆ ಇದೆ. ಉದಾ. ನಮ್ಮ ರಾಮದುರ್ಗ ಅಪ್ಪಣ್ಣ ರಾಮದುರ್ಗ, ಸಂದಾನಂದ ಕಾಳೆ, ನೀಲಾ ಜೇವರ್ಗಿ, ಚಿಲ್ಲರೇ ಮಂಜ ಅಲಿಯಾಸ ಮಂಜುನಾಥ ಗುಡ್ಡದವರ, ರಾಮದುರ್ಗದ ಸದ್ಯ ದಂಡುಪಾಳ್ಯದಲ್ಲಿ ನಟನಾ ಪಾರಮ್ಯ ಮೇರೆದ ವಿಠ್ಠಲ್ ಪರೀಟ ಹೀಗಾ ಸ್ಟಾರ್ ನಟರು ನಗುವಿನ ಕಚಗುಳಿ ಇಡಲು ಅಣಿಯಾಗಿದ್ದಾರೆ. ಒಟ್ಟನಲ್ಲಿ ಈ ಬಾರಿ ಜಾತ್ರಿನಲ್ಲಿ ನಾಟಕ ಗುಂಗ ಜೋರ್ ಐತಿ.
ಹಿಂದೊಮ್ಮೆ ನಾಟಕ ರತ್ನ ಗುಬ್ಬಿ ವೀರಣ್ಣ, ಏಳಗಿ ಬಾಳಪ್ಪ, ಕಂದಗಲ್ಲ ಹಣಮಂತರಾಯ, ಚಿತ್ತರಗಿ ಗಂಗಾಧರ ಶಾಸ್ತ್ರಿ, ಡಾ. ರಾಜಕುಮಾರ ಹಾಸ್ಯ ಕಲಾವಿದ ನರಸಿಂಹರಾಜು, ಸೇರಿದಂತೆ ಮುಂತಾದವರು ಈ ಜಾತ್ರೆಯಲ್ಲಿ ಬಂದು ನಾಟಕವನ್ನಾಡಿ ಹೋಗಿರುವುದು ಒಂದು ವಿಶೇಷ. ಇವರ ಪೌರಾಣಿಕ, ಭಕ್ತಿ ಪ್ರಧಾನ ನಾಟಕಗಳನ್ನು ಹಿರಿಯರು ಇಂದಿಗೂ ಮೆಲಕು ಹಾಕುತ್ತಾರೆ.
ಚಲನಚಿತ್ರ ನಟ, ನಟಿಯರಾದ ವಿನಯಾಪ್ರಸಾದ, ಪ್ರೇಮಾ, ಉಮಾಶ್ರೀ, ಟೈಗರ್ ಪ್ರಭಾಕರ, ಬಿರಾದಾರ, ಶ್ರುತಿ, ಟೆನ್ನಿಸ್ ಕೃಷ್ಣ, ದಾಮಿನಿ, ಇನ್ನು ಅನೇಕ ಧಾರಾವಾಹಿ ಕಲಾವಿದರು ಸೇರಿದಂತೆ ಕಿರು ತೆರೆಯ ನಟ ನಟಿಯರು ಬಂದು ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರೊಂದಿಗೆ ಇದೀಗ ರಂಗಭೂಮಿ ಕಲಾವಿದ ರಾಜು ತಾಳಿಕೋಟಿ, ಸೇರಿದಂತೆ ಅನೇಕ ನಟರು ಇಲ್ಲಿ ಕಲೆ ಪ್ರದರ್ಶನ ನೀಡಿದ್ದನನ್ನು ನೆನೆಸಿಕೊಳ್ಳಲೇ ಬೇಕು.
----
ಈ ಬಾರಿ ಬಂದ ನಾಟಕಗಳು..

1. ಹೆಣ್ಣು ಹೆತ್ತವಳು.
2. ಪ್ಯಾಟಿ ಹುಡಿಗ್ಯಾರ.
3. ಬಂದರ ನೊಡ ಬಂಗಾರಿ.
4. ತೊದಲ ಗಂಗಿ ಹರಿದಾಳ ಅಂಗಿ.
5. ನಿದ್ದಿಗೆಡಿಶ್ಯಾಳ ಬಸಲಿಂಗಿ.
6. ಹುಚ್ಚ ಹಿಡಿಶ್ಯಾಳ ಹುಚ್ಚಮಂಗಿ.
7. ಅವ್ವ ಬಂಗಾರಿ ಮಗಳ ಸಿಂಗಾರಿ.
8. ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ.
9. ಕೈ ಕೊಟ್ಟ ಹುಡಗಿ ತಲೆ ಕೆಟ್ಟ ಹುಡುಗ.
10. ಅಪ್ಪ ಮನ್ಯಾಗ ಮಗಳ ಸಂತ್ಯಾಗ.
11. ಅತ್ತಿ ಅಟ್ಟದ ಮ್ಯಾಗ ಮಾವ ಕಟ್ಟಿಮ್ಯಾಗ.
12. ಬಂಡ ಬಡ್ಡಿ ಮಗ

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...