Monday, 22 July 2019

ಕರ್ ನಾಟಕಾ ಡ್ರಾಮಾ

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..
ಸರ್ಕಾರ ಉಳಿಸೋಣು..ಮೇಲೆ ಕುಂತವನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು...
ಲಗಾಮು ಸ್ಪೀಕರ್ ಕೈಲಿ..ನಾವೇನ ಮಾಡೋಣ..
ಎಲ್ಲಾರು ಕಿವಿ ಮುಚ್ಕೊಂಡ ಟಿವಿ ನೋಡೋಣ...😀

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ವಿಪಗೆ ರೂಲಯಾವುದು ಯಾವ್ದು, ಸದನಕ್ಕೆ ಮಿತಿಯಾವ್ದು..
ಆರೋಪದಲ್ಲಿ ನಿಜ ಯಾವ್ದು..ಮಾತಾಡೋದ್ರಲ್ಲಿ ಕರೇ ಯಾವ್ದು..
ಅತೃಪ್ತರು ಮನೆಮಾತು..ವಿಪ್ ಕಾರಾಬಾತು..
ಸದನ ಕುರುಕ್ಷೇತ್ರ ಆಯ್ತು?
ಆರೋಪ ಮಾಡಿದ ಮೇಲೆ ಬಿಪಿ ಬರ್ದೇ ಇರ್ತದ..
ನಮ್ಮ ಶಾಕರು ಹಿಂಗೆ ಅಂತ ಅವ್ನ ಕೈ ಬಿಡೋಕಾಯ್ತದ..
ನಾಲಿಗೆನ ಅವರ ಕೈಲಿಲ್ಲ ನಾವೇನ್ ಮಾಡೋಣ..
ಸ್ಪೀಕರು ಹೇಳಿದಾಕ್ಷಣ ಡ್ರಾಮಾ ಆಡೋರ ಡ್ರಾಮಾ ನೋಡೋಣ....

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಒಂದು ಬಾಯಲ್ಲೂ ನೂರೆಂಟು ಸುಳ್ಲೂ...
ಇಲ್ಲೊಬ್ಬ ಸೂಪರ್ರು, ಅಲ್ಲೊಬ್ಬ ಪಾಪಲ್ರು..
ವಿಧಾನಸೌಧದ ಮೆಟಾಡೋರ್ರು..ಚಾನೆಲೂ ಓಡಿಸುತ್ತಾವ್ರು..ನೋಡಿ ಸುಸ್ತಾಗಿ ಮಲ್ಗವ್ನೆ..
ಯಾರಪ್ಪ ಎಬ್ಸೋರು..?
ಕೆಂಗಲ್ಲ ಹನಮಂತಯ್ಯ ಕಟ್ಸಿದ ಹಳೇ ವಿಧಾನಸೌಧದಲ್ಲೇ ಈ ಕಾರಬಾರು...
ಏನಾರೂ ನೋಡ್ಕೊಂಡ ಹೋಗು ಮತದಾರನೇ..ನಿಲ್ಲ ನಿನೆಲ್ಲೂ..
ಅತೃಪ್ತರು ರಾಜೀನಾಮೆ ಕೊಟ್ರೆ ನಾವೇನ್ ಮಾಡಾಣ..
ಅವರಿಗೂ ಅನರ್ಹತೆ ಬಣ್ಣ ಹಚ್ಚಿ ಆಟಾ ಆಡೋಣ...

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಶಾಸಕ ಸ್ಥಾನಾನೆ ಟೆಂಪರ್ವರಿ ನಾವೇನ ಮಾಡಾಣ..ನಮ್ದೆ ಸರ್ಕಾರ ಉಳಿಯುಗಂಟ..ಡ್ರಾಮಾ ಆಡಾಣ...

*ಮಂಜು ಗದಗಿನ*❤

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...