Sunday, 8 May 2016

ಕರುಣಾಮಯಿ



 ಒಂದು ಸುಂದರ ಸಂಸಾರ ಆ ಸಂಸಾರಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಆದರೆ ಆ ಕುಟುಂಬದಲ್ಲಿ ಹೇಳಿಕೊಳ್ಳುವಂತಹ ಬಡತನವೇನು ಇರಲಿಲ್ಲ.ಆದರೆ ಮನೆಯ ಯಜಮಾನನಿಗೆ ಮಾತ್ರ ದುಡ್ಡಿನ ಹಪಾ ಹಪಿ ಮಾತ್ರ ತುಸು ಜಾಸ್ತಿನೆ ಇತ್ತು. ಹೆಂಡತಿ ಏಷ್ಟೇ ದುಡಿದರೂ ಚಿತ್ರಹಿಂಸೆ ನೀಡುತ್ತಿದ್ದ. ಆದರೆ  ಹೆಂಡತಿ ಮಾತ್ರ ಸಹನೆ ಶೀಲೆ ಯಾಗಿದ್ದಳು. ಗಂಡನಾದವನು ಏನೇ ಅಂದರು ಅದು ಅವಳಿಗೆ ವೇದ ವ್ಯಾಖ್ಯವಾಗಿತ್ತು. ಎಂದೂ ಗಂಡಮಾತಿಗೆ ಎದುರು  ಮಾತನಾಡಿದವಳಲ್ಲ.
  ಈ ಕುಟುಂದ ಮೂಲ ಉದ್ಯೋಗ ಇದೇ ಎಂದು ಇರಲಿಲ್ಲ. ಯಾವ ಉದ್ಯೋಗ ದೊರೆತರು ಅದನ್ನೆ ಮಾಡುತ್ತಿದ್ದರು. ಆದರೆ ಇವರು ಬ್ರಾಹ್ಮಣರಲ್ಲ  ಆದರೂ ಮನೆಯ ಯಜಮಾನ ಮಾತ್ರ ಒಂದು ದೇವಾಲಯ ಅರ್ಚಕನಾಗಿದ್ದ, ಇದರೊಂದಿಗೆ ದೊಡ್ಡ ,ದೊಡ್ಡ ಸಮಾರಂಭಗಳ ಅಡುಗೆಯನ್ನು ಮಾಡುತ್ತಿದ್ದನು. ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು.
  ಇನ್ನೂ ಮಗಳು ಮತ್ತು ಮಗ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಇಬ್ಬರೂ ಶಾಲೆಯಲ್ಲಿ ಚನ್ನಾಗಿ ಓದುತ್ತಿದ್ದರು. ಆದರೆ ತಂದೆಯ ದುಡ್ಡಿನ ವ್ಯಾಮೋಹ ಜಾಸ್ತಿಯಾಗಿದ್ದರಿಂದ ಮಗಳನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದನು. ಆ ಹುಡುಗಿಗೆ ಕೇಲವ ಆಗ ಹನೇರಡು ವರ್ಷ ವಯಸ್ಸು ಮಾತ್ರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೆ ಮನೆಗೆ ಆಸರೆಯಾದಳು . ಆ ಹುಡುಗಿ ಮಾತ್ರ ಶಾಲೆಯಲ್ಲಿ ತುಂಬಾ ಜಾಣೆಯಾಗಿದ್ದಳು. ಆಟ-ಪಾಠದಲ್ಲಿ ಅವಳೆ ಶಾಲೆಗೆ ಪ್ರಥಮಳಾಗಿದ್ದಳು. ಅವಳ ತಂದೆ ಶಾಲೆ ಬಿಡಿಸಿದ್ದಾಗ, ಅವಳು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆದರೆ ತಂದೆಯ ಹಣದಾಸೆಗೆ ಅವಳ ವಿದ್ಯಾಭ್ಯಾಸದ ಕನಸು ಮಾತ್ರ ಏಳನೇ ತರಗತಿಗೆ ಕಮರಿ ಹೋದದ್ದು ದುರಂತವೇ ಸರಿ.
  ಆದರೆ ಮನೆಯ ಯಜಮಾನನ ಹಣದಾಸೆ ಇಷ್ಷಕ್ಕೆ ನಿಲ್ಲಲಿಲ್ಲ. ಇದ್ದೊಬ್ಬ ಮಗನ ಮೇಲು ಅವನ ಕಣ್ಣು ಬಿದ್ದಿತು. ಆ ಹುಡುಗ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇದ್ದೊಬ್ಬ ಮಗನನ್ನು ಚನ್ನಾಗಿ ಶಾಲೆಗೆ ಕಳುಹಿಸಬೇಕೆಂಬ ಇರಾದೇ ಮಾತ್ರ ಆ ತಂದೆಗೆ ಇರಲೇ ಇಲ್ಲ. ಬರೀ ದುಡ್ಡು, ದುಡ್ಡು ಎಂದು ಬಾಯಿ ಬಿಡುತ್ತಿದ್ದನು. ಒಂದಿನಾ " ನೀ ಶಾಲೆ ಕಲೆತು  ಏನ ದೊಡ್ಡ ಸಾಹೇಬಾ ಆಗ ಬೇಕಾಗಿಲ್ಲ, ಸಾಲಿ ಬಿಟ್ಟ ದುಡ್ಯಾಕ ಹೋಗ ಇನ್ನ" ಎಂದು ಆ ಪುಟ್ಟ ಮಗುವನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದ. ಪಾಪ ಆ ಹುಡುಗನದು ಮಾತ್ರ ಅರಣ್ಯ ರೋಧನ  ಯಾರು ಕೇಳುವವರಿಲ್ಲ.
  ಇದ್ದೊಬ್ಬ ಮಗನನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿರುವ ಸುದ್ದಿ ಇಡೀ ಓಣಿಗೆ ತಿಳಿಯಿತು. ಓಣಿ ಮಂದಿಯಲ್ಲ " ನಿನಗ ಇರಾಂವ ಒಬ್ಬ ಮಗಾ ಅದಾನು ಅವನರ ಸರಿಯಾಗಿ ಸಾಲಿಗೆ ಕಳುಹಿಸ ಬಾರದಾ ಎಂದು  ಬೈಯಲು ಪ್ರಾರಂಭಿಸಿದರು. ಇದರಿಂದ ಅವನ ಮನ ಪರಿವರ್ತನೆಯಾಗಿ, ಮಗನನ್ನು ಶಾಲೆಗೆ ಕಳುಹಿಸಲು ಮುಂದಾದಾಗ್ ಸಮಯ ಮೀರಿ ಹೋಗಿತ್ತು. ಆವಾಗ ಆ ಹುಡುಗ ನಾಲ್ಕನೇ ತರಗತಿಯಲ್ಲಿ ಫೇಲ್ ಆಗಿ ವತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳುವ ಪರಸ್ಥಿತಿ ಬಂದೋದಗಿತು.
 ಇದರ ಮಧ್ಯ ಹೆಂಡತಿ, ಮಗಳಿಗೆ ತುಂಬಾನೆ ಕಾಟ ಕೊಡಲು ಪ್ರಾರಂಭಿಸಿದ್ದ, ಕುಳಿತ್ರು ತಪ್ಪು, ನಿಂತ್ರು ತಪ್ಪು ಏನ್ನುವಂತಹ ಪರಸ್ಥಿತಿ ಅವರದಾಗಿತ್ತು. ಪ್ರತಿ ಕ್ಷಣವು ಅವರಿಗೆ ನರಕ ಸದೃಶವಾಗಿತ್ತು. ಆದರೆ ಅದೆಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈ ಯಜಮಾನನ ಹಣದಾಸೆಗೆ ದೇವಸ್ಥಾನ ಹಣದ ಹುಂಡಿಯೇ ಮಾಯವಾಯಿತು.
  ಒಂದಿನಾ ಸಾಮೂಹಿಕ ವಿವಾಹ ನಿಮಿತ್ತ ಅಡುಗೆ ಮಾಡಲು ಹೋದಾಗ ರಾತ್ರಿ ಇಡೀ ನಿದ್ದೆಗೆಟ್ಟು ದುಡಿದನು. ಆದರೆ ಮರುದಿನ ವಿಶ್ರಾಂತಿ ತೆಗೆದುಕೊಳ್ಳದೇ, ಮತ್ತೆ ದುಡಿಯಲು ಪ್ರಾರಂಭಿಸಿದನು. ಇದರಿಂದ ಅವನ ಬಿಪಿ, ಶುಗರ ಹೆಚ್ಚಾಗಿ ಪಾಶ್ವವಾಯು ತಗುಲಿತು. ಇಂತಹ ಸಮಯದಲ್ಲಿ ಅವನ ಹೆಂಡತಿ  ಸಾಲ ಮಾಡಿ ದವಾಖಾನೆ ತೋರಿಸಿದಳು, ಆದರೆ ಅವನು ಮಾಡಿದ ಪಾಪಕ್ಕೆ ಆ ದೇವರ ಅವನ ಮಾತುಗಳನ್ನೆ ಕಿತ್ತುಕೊಂಡು ಬಿಟ್ಟಿದ್ದ.
 ಇಂತಹ ಸಮಯದಲ್ಲಿ ಅವನ  ಆರೈಕೆ ಮಾಡಿದವಳು ಅವನ ಹೆಂಡತಿನೇ. ಅವನು ಕೊಟ್ಟ ಕಷ್ಟಗಳೆಲ್ಲವನ್ನು ಮರೆತು ಅವನ ಹೊಲಸು ತೊಳೆಯುವದರಿಂದ ಹಿಡಿದು ರಾತ್ರಿ  ಮಲಗುವವರೆಗೂ ಅವನ ಜಾಕ್ರಿ ಮಾಡಿದಳು. ಇದರ ಜೊತೆ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಳು.
   ಆಗ ಮಗ ಚಿಕ್ಕವನಾಗಿದ್ದರಿಂದ, ಅವನ ಅಕ್ಕ ಮನೆಯ ನೊಗವನ್ನು ಹೊತ್ತು ಗಂಡು ಮಗನ ಹಾಗೆ, ಎಲ್ಲವನ್ನು ಎದುರಿಸಿ, ಮಾಡಿದ ಸಾಲವನ್ನೆಲ್ಲಾ ತೀರಿಸಿ ತಾನೆ ದುಡಿದು, ಅದರಲ್ಲಿಯೇ ಸ್ವಲ್ಪ ಹಣವನ್ನು ಕೂಡಿಟ್ಟು, ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದಳು.
   ಆದರೆ ಆ ಹುಡುಗನ ಪರಸ್ಥಿತಿ ತಂತಿ ಮೇಲಿನ ನಡಿಗೆಯಂತಾಗಿತ್ತು. ಅತ್ತ ಸಾಲೆಗೆ ಹೋಗಲು ಆಗದು ಇತ್ತ ಬಿಡಲು ಆಗದಂತಹ ಪರಸ್ಥಿತಿ. ಆದರೆ ಅವನ ತಾಯಿ ಹೇಳಿದ್ದು ಮಾತ್ರ " ಮಗಾ ನೀನು ಸಾಲಿಗೆ ಹೋಗಿ ದೊಡ್ಡ ಸಾಗೇಬಾ ಆಗ್ಬೇಕು. ಏಸೇ ಕಷ್ಟಾದ್ರು ನೀ ಸಾಲಿ ಬಿಡಾಕ ಹೋಗಬ್ಯಾಡ, ಏಸೇ ಕಷ್ಟಾ ಬಂದ್ರು ಅವು ನನಗೆ ಇರ‌್ಲಿ" ಎಂದು ಮಗನನ್ನು ಶಾಲೆಗೆ ಕಳುಹಿಸಿದಳು.
  ಆ ಹುಡುಗ ಕೂಡಾ ಚನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು. ಆಗ ಅವನ ತಾಯಿಗೆ ಮಾತ್ರ ಎಲ್ಲವನ್ನು ಗೆದ್ದ ಸಂತಸ. ಮಗನ ಆ ಸಾಧನೆಯಿಂದ ಅವನ ತಾಯಿ ಹೆಚ್ಚಿನ ಓದಿಗಾಗಿ ಶಹರಕ್ಕೆ ಕಳುಹಿಸಿದಳು. ಅಲ್ಲಿಯೋ ಆ ಹುಡುಗ ಚನ್ನಾಗಿ ಓದಿ. ಉತ್ತಮ ಪಲಿತಾಂಶದೊಂದಿಗೆ ತನ್ನ ಓದನ್ನು ಮುಗಿಸಿದನು. ನಂತರ ಒಳ್ಳೇಯ ಕೆಲಸ ಹುಡುಕಿಕೊಂಡು. ಉತ್ತಮ ಸಂಭಳ ಪಡೆದುಕೊಳ್ಳುವಂತಾದ , ಅಷ್ಷರಲ್ಲಾಗಲೇ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ , ತನ್ನ ತಾಯಿಯನ್ನು ಶಹರಕ್ಕೆ ಕರೆದುಕೊಂಡು ಹೋಗಿ, ರಾಣಿಯ ಹಾಗೆ ನೋಡಿಕೊಂಡನು
  ತಾಯಿಯೇ ದೇವರು"

ಮಂಜುನಾಥ ಗದಗಿನ
ಪೋನ ನಂ ; 8050753148

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...