Sunday, 4 September 2016

ಒಂದಕ್ಷರ ಕಲಿಸಿದಾತ ಗುರುವೇ..!!

ಒಂದು ಗುರಿ, ಆ ಗುರಿ ಹಿಂದೆ ಒಬ್ಬ ಗುರು ಇದ್ದರೆ ಎಂತಹ ಕಷ್ಟಗಳಿಗೂ ಸೆಡ್ಡು ಹೊಡೆದು ಮುನ್ನುಗ್ಗಿ ಸಾಧನೆ ಶಿಖರಕ್ಕೆ ಮುತ್ತಿಕ್ಕ ಬಹುದು. ಆದರೆ ಗುರಿ, ಗುರು ಇಲ್ಲದ ಜೀವನ ದೋಣಿಯಿಲ್ಲದ ನಾವಿಕನಂತೆ. ಕೊನೆಯಿಲ್ಲದ ಅಲೆದಾಟ, ಪರದಾಟ. ಹಾಗೆ ನನ್ನ ಜೀವನವು ದೋಣಿಯಿಲ್ಲದ ನಾವಿಕನಂತೆ ದಿಕ್ಕು ತೋಚಿದೇ, ಮುಳುಗಿ ಹೋಗುತ್ತಿತ್ತು. ಈ ಸಮಯದಲ್ಲಿ ಕೈ ಹಿಡಿದು ಕರೆ ತಂದು ಗುರಿ ಹಾಗು ಗುರುವಾಗಿ ಮಾರ್ಗದರ್ಶನ ತೋರಿಸಿ,ಬದುಕಿಗೆ ಬೆಳಕಾದವರು ನನ್ನ ಗುರು.
ಬದುಕಿನ ಬಡತನ ಎಂಬ ಕತ್ತಲೆಯ ಕೆಳಗೆ ಕೊಳೆತು ಹೋಗುತ್ತಿದ್ದ ಬದುಕು. ಕಲಿಬೇಕು, ಸಾಧಿಸಬೇಕು ಎಂಬ ಹುಚ್ಚು ಹಂಬಲಗಳು ಮನದಲ್ಲಿ ಮನೆ ಮಾಡಿದ್ದವು. ಆದರೆ ಆ ಹಂಬಲಕ್ಕೆ ಬೆಂಬಲವಿಲ್ಲದೇ, ಕನಸುಗಳು ಸೊರಗಿ ಹೋಗುತ್ತಿದವು. ಇದೇ ಸಮಯಕ್ಕೆ ಕನಸುಗಳಿಗೆ ಬಣ್ಣ ತುಂಬಿ, ರಂಗು ರಂಗಾಗಿಸಿ ರೆಕ್ಕೆ ಬಲಿತ ಹಕ್ಕಿಯಂತಾಗಿಸಿದ್ದು ಇದೇ ನನ್ನ ಗುರು.
ಇದು ಐದು ವರ್ಷಗಳ ಹಿಂದಿನ ಮಾತು. ನಾನು ಪಿಯುಸಿ ಓದುತ್ತಿದ್ದ ಸಮಯ. ಮನೆಯಲ್ಲಿ ಬಡತನ ಕಾಲು ಮುರಿದುಕೊಂಡು ಬಿದ್ದಿದ್ದರು ಸಹ ಕಲಿಬೇಕು ಎಂಬ ಅಧಮ್ಯ ಆಸೆ. ಈ ಆಸೆಯಿಂದಲೇ ಪ್ರತಿದಿನ ಕೂಲಿ ಮಾಡಿ ಕಾಲೇಜಿಗೆ ಹೋಗುತ್ತಿದೆ. ಒಂದು ಚಿಕ್ಕ ಆಸೆ ಎಂತಹ ಕಾರ್ಯಕ್ಕೂ ಪ್ರೇರೆಪಿಸುತ್ತದೆ ಅಲ್ವಾ! ಹೌದು! ನನ್ನ ಕಲಿಬೇಕು ಎಂಬ ಆಸೆ ನನ್ನ ಎಲ್ಲ ಕಷ್ಟಗಳಿಗೂ ಕಾವಲಾಗಿತ್ತು. ಇದೇ ಧೈರ್ಯದಿಂದ ಚನ್ನಾಗಿ ಓದಿ ಕ್ಲಾಸ್‌ಗೆ ಪ್ರಥಮ ಸ್ಥಾನ ಪಡೆದುಕೊಂಡೆ. ಆದರೆ ಮುಂದೆ ಕಲಿಬೇಕು ಎಂಬ ಬಯಕೆ ಇದ್ದರೂ ಸಹ ಆರ್ಥಿಕ ತೊಂದರೆಯಿಂದ ಕಲಿಯಲಾಗದ ಪರಸ್ಥಿತಿ. ಇಲ್ಲಿಗೆ ನನ್ನ ಕನಸಿನ ರೆಕ್ಕೆಗಳು ಕತ್ತರಿಸಿ ಬೀಳುತ್ತವೆ. ಎಂದು ಜೀವನದ ಮೇಲೆ ಜಿಗುಪ್ಸೆ ಹುಟ್ಟಿತ್ತು.
ಇದೇ ಸಮಯಕ್ಕೆ ಗುರು,ಮಾರ್ಗದರ್ಶಕ,ಪೋಷಕ ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಸ್ನೇಹಿತನಂತೆ ನನ್ನ ಕನಸಿಗೆ, ಬದುಕಿಗೆ ಹೇಗಲಾಗಿ, ನಿಂತು. ಪ್ರತಿದಿನ ಕೈತುತ್ತು ಹಾಕಿದ್ದು ನನ್ನ ಮಾವ. ಒಂದು ಚಿಕ್ಕ ಹಳ್ಳಿಯಲ್ಲಿ, ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನನ್ನು ತನ್ನ ಕಡೆ ಕರೆಸಿಕೊಂಡು, ವಿಧ್ಯೆ,ಬುದ್ದಿ,ಬಟ್ಟೆ, ಊಟ ತನ್ನೊಟ್ಟಿಗೆ ಇರಲು ಆಶ್ರಯ ಕೊಟ್ಟು ನನ್ನ ಬಾಳಿನಲ್ಲಿ ಬೆಳಕಾಗಿ ಜೀವನಕ್ಕೆ ಗುರುವಾಗಿ, ಮಾರ್ಗದರ್ಶನ ನೀಡುತ್ತಿದ್ದಾರೆ ಈ ನನ್ನ ಮಾವ.
ಗುರು ಎಂದರೆ, ಕೇವಲ ಶಾಲೆಯಲ್ಲಿ ಹೇಳಿಕೊಡುವ ಶಿಕ್ಷಕ ಅಷ್ಟೇ ಅಲ್ಲ. ಮನೆಯಲ್ಲಿಯ ತಂದೆ-ತಾಯಿ, ಅಜ್ಜ-ಅಜ್ಜಿ,  ಬಂಧು-ಬಳಗ, ಸ್ನೇಹಿತ, ದಿನಾಲೂ ನಾವು ನೋಡುವ, ಮಾತನಾಡುವ ಜನರನ್ನೂ, ಸಮಾಜದಲ್ಲಿ ಎತ್ತರಕ್ಕೆರಿದ ಮಹನೀಯರನ್ನು ಗುರುಗನ್ನಾಗಿ ಭಾವಿಸಿದರೆ, ಎತ್ತರಕ್ಕೆ ಬೆಳೆಯಲು ಸಾಧ್ಯ. ಗುರುವಿನ ಗುಲಾಮನಾಗದೇ, ದೊರೆಯದೇನ್ನ ಮಕುತಿ ಎಂಬ ಹಿರಿಯ ದಾರ್ಶನಿಕರ ಮಾತಿನಂತೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದ್ದಾರೆ. ಅದೇ ರೀತಿ ನನ್ನ ಜೀವನದಲ್ಲಿ ಎಲ್ಲವನ್ನು ತಿಳಿಸಿಕೊಟ್ಟಿದ್ದು ಇದೇ ನನ್ನ ಮಾವ.ಇಂದು ಒಂದಿಷ್ಟು ತಿಳುವಳಿಕೆ, ಜ್ಞಾನ ಸಂಪಾದಿಸಿ ಸಮಾಜವನ್ನು ಎದುರಿಸಲು ಕಲಿತ್ತಿದ್ದೇನೆ ಎಂದರೆ ಅದಕ್ಕೆ ಇವರೇ ಕಾರಣ.
ಸಮಾಜದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು, ಯಾವ ರೀತಿಯಾಗಿ ಮಾತನಾಡಬೇಕು ಎಂದು ತಿಳಿದ ನನಗೆ ಎಲ್ಲವನ್ನು ತಿಳಿಸಿ ಮಾರ್ಗದರ್ಶನ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ಶಿಕ್ಷಣದ ಖರ್ಚು ವೆಚ್ಚ, ನನ್ನ ದಿನದ ಖರ್ಚಿಗೆ ದುಡ್ಡು ಕೊಟ್ಟು ತಂದೆ-ತಾಯಿಗಿಂತಲೂ ಚನ್ನಾಗಿ ನೋಡಿಕೊಂಡು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇವರ ಈ ಸಹಾಯ, ಪ್ರೀತಿ, ವಿಶ್ವಾಸಗಳನ್ನು ಈ ಜನ್ಮದಲ್ಲಿ ತೀರಿಸಿಲು ನನ್ನಿಂದಾಗದು. ಆದರೆ ಸೂಕ್ತ ಸಮಯದಲ್ಲಿ ಗುರುವಾಗಿ ಸಿಕ್ಕು, ಗುರಿ ತೋರಿ ಸಾಧನಗೆ ದಾರಿ ತೋರಿದ ಈ ನನ್ನ ಜೀವನದ ಗಾಡ್ ಪಾರ್ಧರ್‌ಗೆ ನನ್ನದೊಂದು ಸಲಾಂ.
ಮಂಜುನಾಥ ಗದಗಿನ
8050753148

Wednesday, 6 July 2016

ಭಾವಾಂತರಂಗವ ಬೀಡದ ಅಂತರಂಗ..!


  ಮಂಜುನಾಥ ಗದಗಿನ


ಮನಸ್ಸಿನಲ್ಲಿ ಅದೋನೋ! ಪುಳಕ್,
ಭಾವನೆಗಳಿಲ್ಲಿ ಅದೇನೋ ತಳುಕ,
ಹೃದಯದಲ್ಲಿ ಅದೇನೋ ನಡುಕ,
ಕೊನೆಗೆ ಸುರಿದದ್ದು ಕಣ್ಣಿರ ಜಳಕ.
                                                                                         ಎಂಜಿ..   
ಸಂಪ್ರದಾಯಗಳು ಕೂಡಾ ಕೇಲವೊಂದು ಸಾರಿ ಮನಸ್ಸಿಗೆ ನೋವು-ನಲಿವನ್ನು ನೀಡುತ್ತವೆ ಅಲ್ವಾ! ಈ ಸಂಪ್ರದಾಯಗಳು ಇರದೇ ಹೋಗಿದ್ದರೆ ಇಂದು ನಾವೇಲ್ಲರೂ ಒಟ್ಟಿಗೆ ಕೂಡುತ್ತಿರಲಿಲ್ಲ, ಭಾವಾಂತರಂಗದಲ್ಲಿ ತೇಲಿ ಸುಂದರ ಕ್ಷಣಗಳನ್ನು ಸೃಷ್ಠಿಸಿ ಇತಿಹಾಸದ ಪುಟಗಳಲ್ಲಿ ತೇಲಿಬಿಡುತ್ತಿರಲಿಲ್ಲ. ಮೋಜು-ಮಸ್ತಿಯೊಂದಿಗೆ ಬೇರೆಯುತ್ತಿರಲಿಲ್ಲ. ಕೊನೆಗೆ ಪ್ರೀತಿ ಅಪ್ಪುಗೆಯೊಂದಿಗೆ ಮರಳುತ್ತಿರಲಿಲ್ಲ.
     ಹೌದು! ಅದು ಒಂದು ಅದ್ಭುತ್ ಸುಂದರ ಬಿಳ್ಕೋಡುಗೆಯ ಸಂಪ್ರದಾಯ ಕಾರ್ಯಕ್ರಮ. ಹೊಸತನ ಸ್ವಾಗತಿಸುವದು. ಹಳೇಯದನ್ನ ಬಿಳ್ಕೋಡುವದು ನಮ್ಮ ಸಂಪ್ರದಾಯ.  ಆ ಸಭಾಂಗಣದ ತುಂಬೇಲ್ಲಾ ಬಣ್ಣ-ಬಣ್ಣದ ಬಲೂನ್‌ಗಳು, ಅಲ್ಲಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು, ಮಧ್ಯ ಮಧ್ಯ ಸದ್ದು ಮಾಡುತ್ತಿದ್ದ ಡಿಜೆಗಳು ಇಡೀ ವಾತಾವರಣಕ್ಕೆ ರಂಗು ತಂದಿದ್ದವು. ಇನ್ನೂ ಹುಡುಗಿಯರು ಕಲರ್ ಕಲರ್ ಡ್ರೆಸ್ ಹಾಕ್ಕೊಂಡು ಹುಡುಗರ ಎದೆಯಲ್ಲಿ ಜಗಮಗಿಸುತ್ತಿದ್ದರು.
    ಕಾರ್ಯಕ್ರಮ ಯಾವ ರೀತಿಯಾಗಿ ನಡೆಯುತ್ತದೆ, ಯಾರು? ಹೇಗೆ ಮಾತನಾಡುತ್ತಾರೆ. ಏನೆಲ್ಲ ಅಡುಗೆ ಮಾಡಿಸಿದ್ದಾರೆ ಎಂಬ ಪುಳಕ್‌ದೊಂದಿಗೆ ಆರಂಭವಾದ ನಮ್ಮ ಕಾರ್ಯಕ್ರಮ ಅಧ್ಯಕ್ಷರ ಹಾಗೂ ಅತಿಥಿಗಳ ಭಾಷಣದೊಂದಿಗೆ ಸಂಪ್ರದಾಯಿಕವಾಗಿ ಮುಗಿಯಿತು. ಅನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಬ್ಬಾ..! ಅಬ್ಬಾ..!  ಊಟ ಮಾತ್ರ ಯಾವ ಫೈ ಸ್ಟಾರ್ ಹೋಟೆಲ್‌ನ ಊಟಕ್ಕೂ ಕಡಿಮೆ ಇರಲಿಲ್ಲ. ಹುರಕ್ಕಿ ಹೋಳಗಿ, ಪರೋಟಾ, ಎರಡು ತರಹದ ಪಲ್ಯ, ಹಪ್ಪಳ, ಮೊಸರ ಅನ್ನ, ಗೀ ರೈಸ್ ಹಾ..ಹಾ.. ನೆನಸಿಕೊಂಡರೆ ಹೊಟ್ಟೆ ತಾಳ ಹಾಕಲು ಪ್ರಾರಂಭಿಸುತ್ತದೆ.
    ಇದಾದ ನಂತರ ನಡೆದದ್ದು ಮನರಂಜನಾ ಕಾರ್ಯಕ್ರಮ, ಒಂದು ಕಾರ್ಯಕ್ರಮ ನೆನಪಿನಲ್ಲಿ ಉಳಿಯ ಬೇಕಾದರೆ ಅಲ್ಲಿ ಮೋಜು-ಮಸ್ತಿ ಇರಲೇ ಬೇಕು. ಅದೇ ರೀತಿ ನಮ್ಮ ಜೂನಿಯರ‌್ಸಗಳು ನಮಗೆ ನಾನಾ ವಿಧದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕೆಲವೊಂದು  ಚೀಟಿಯಲ್ಲಿ ಆಟಗಳ ಹೆಸರಗಳನ್ನು ಬರೆದು ಇಟ್ಟಿದ್ದರು. ಸ್ಪರ್ಧೆ ಪ್ರಾರಂಭವಾದ ನಂತರ ಮೊದಲ ಸಾಲಿನಲ್ಲಿ ಕುಳಿತಿದ್ದ ನಮ್ಮ ಆರು ಜನ ಸಹಪಾಠಿಗಳನ್ನು ಕರೆದು ಚೀಟಿ ತೆಗೆಯಲು ಹೇಳಿದರು. ಅವರಿಗೆ ಬಂದ ವಿಷಯ ಮೇಕಫ್ ಮಾಡುವದು. ಹೌದು! ಆರು ಜನರಲ್ಲಿ ಮೂರು ಜನ ಕುಳಿತುಕೊಳ್ಳಬೇಕು, ಮೂರು ಜನ ಮೇಕಫ್ ಮಾಡಬೇಕು. ಇಲ್ಲೇ ಬಂದದ್ದು ನೋಡಿ ಅವರಿಗೆ ತಳುಕ. ಎಲ್ಲರೂ ಮೇಕಫ್ ಮಾಡ್ತಿನಿ ಅನ್ನೋರೆ ಆಗಿದ್ದರು. ಮೇಕಫ್ ಮಾಡಿಸಿಕೊಳ್ಳಲು ಯಾರು ಸಿದ್ಧರಿರಲಿಲ್ಲ. ಕೊನೆಗೆ ಅವರ ನಡುವೆ ಹೊಂದಾಣಿಕೆಯಾಗಿ ಮೇಕಫ್ ಮಾಡಿದ್ರು ನೋಡಿ ಏನ್! ಅದ್ಭುತ್ ಅಂತೀರಾ! ನೋಡೋಕೆ ಎರಡು ಕಣ್ಣು ಸಾಲದಾಗಿದ್ದು. ಹೀಗೆ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನಮಗೆ ಮನರಂಜನೆ ಒದಗಿಸಿದರು. ಆದರೆ ಇಷ್ಟೋತ್ತಿಗಾಗಲೇ ಭಾವನೆಗಳ ಕಟ್ಟೆ ಒಡೆದು ಕೆಲವರ ಕಣ್ಣುಗಳು ಜಳಕ ಮಾಡಲು ಶುರುವಿಟ್ಟಿಕೊಂಡವು. ಆದರೆ ಕೆಲವೊಂದಿಷ್ಟು ಜನರು ಏನು ಮಾಡಬೇಕು ಎಂದು ತಿಳಿಯದೇ ಭಾವಾಂತರಂಗದಲ್ಲಿ ಅಲ್ಲೋಲ್ ಕಲ್ಲೋಲಕ್ಕೆ ಒಳಗಾಗಿದ್ದರು.
    ನೀವು ಕೊಟ್ಟ ಆ ಪುಟ್ಟ ಪೋಟೋ. ಮನಸ್ಸಿನ ಪುಟಗಳಿಲ್ಲಿ ಸದಾ ನಲಿದಾಡುತ್ತಿರುತ್ತದೆ. ಆ ಪುಸ್ತಕ್ ನಿಮ್ಮನ್ನು ಸಾದಾ ನೆನಪಿಸುತ್ತಿರುತ್ತದೆ. ಕೊನೆಗೆ ಅದೇ ನೆನಪಿನ ಭಾರದಲ್ಲಿ ಕೊನೆಯಾಗುತ್ತದೆ. ಸೋ..ಥ್ಯಾಂಕ್ಸ ಟು ಆಲ್ ಜೂನಿಯರ‌್ಸ.


Monday, 27 June 2016

ಕಾಗದ ದೋಣಿಯ ಮಾಸದ ನೆನಪು..!

ಮಂಜುನಾಥ ಗದಗಿನ

 
 ಕಡುಕಪ್ಪು ಆಕಾಶದಲ್ಲಿ ಮಿಂಚೂಂದು ಮೂಡಿದಾಗ ಎದೆಯಲ್ಲಿ, ಅದೇನೋ! ಸಂಚಲನ. ಮಾಸಿದ ನೆನಪುಗಳು ಬೇಡವೆಂದರು ತುಂಟ ಮಳೆ ಬೀಡಬೇಕಲ್ಲಾ, ಬಂದು ಮನಸ್ಸಿನಾಳದಲ್ಲಿ ನೆನಪಿನ ತುಂತುರು ಹನಿಗಳನ್ನು ಸುರಿಸಿಯೇ ಹೋಗುತ್ತದೆ. ಹಾಗೆಯೇ ಚಂದದ ಚಿತ್ರವೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಮನಸ್ಸು ಕೂಡಾ ತನಗರಿವಿಲ್ಲದೇ ಆ ನೆನಪಿನ ಮಳೆಯಲ್ಲಿ ಜಾರಿ ಹೋಗುತ್ತದೆ.
 ಈಗತಾನೆ ಮಳೆಗಾಲ ಆರಂಭವಾಗಿದೆ. ಬಿಸಿಲಿಗೆ ಬಾಯಿತೆರೆದಿದ್ದ ಭೂತಾಯ ಒಡಲ ಹೊಕ್ಕ ಮಳೆಯ ಹನಿಗಳು ಗಮ್ ಎಂದು ಮಣ್ಣಿನ ಸುವಾಸೆಯನ್ನು ಎಲ್ಲೆಡೆ ಹರಡಿಕೊಂಡಿದೆ. ಇದರೊಟ್ಟಿಗೆ ಬಾಲ್ಯದ ಆ ದಿನಗಳು ಕೂಡಾ ಹೂಡಿ ಎದ್ದು ಮನಸ್ಸಿನಾಳದಲ್ಲಿ ಹೊಸ ಮನ್ಮಂತರನ್ನು ಸೃಷ್ಠಿಸಿ ತೇಲಾಡುತ್ತಿವೆ. ಅದು ಕೂಡಾ ಕಾಗದ ದೋಣಿಯ ನೆನಪಿನೊಂದಿಗೆ.
 ದಟ್ಟ ಕಾರ್ಮೋಡಗಳು ಆಗಸದ ತುಂಬೇಲ್ಲಾ ಹರಡಿಕೊಂಡು ಒಂದಕ್ಕೊಂದು ಜಿದ್ದಿಗೆ ಬಿದ್ದವರ ಹಾಗೆ ತೇಲುತ್ತಿದ್ದರೆ.  ಮಳೆ ಬರುವ ಮುನ್ಸೂಚನೆ ಎಂದು ತಿಳಿದುಕೊಂಡು ಮನೆ ಸೇರುತ್ತಿದ್ದೇವು. ಮಳೆಯ ಹನಿಗಳು ಭೂಮಿಯನ್ನು ತಾಕೀದಾಗ, ಸೂಸುತ್ತಿದ್ದ ಆ ತಣ್ಣನೆಯ ತಂಗಾಳಿಗೆ ಮೈಮನಗಳು ಜಲ್ ಎಂದು ಅವ್ವನ ಸೆರಗಿನ ಹಿಂದೆ ಬೆಚ್ಚಗೆ ಅವಿತುಕೊಳ್ಳುವ ಹಾಗೆ ಮಾಡುತ್ತಿತ್ತು.
  ಹೊರಗಡೆ ಮಳೆಯ ಆರ್ಭಟ ಹೆಚ್ಚಾದಂತೆ, ನಮ್ಮ ಕಾಗದ ದೋಣಿಯ ಆಸೆಗಳು ಗರಿಗೆದರುತ್ತಿದ್ದವು. ನಾನು ನಮ್ಮಕ್ಕ ಪುಸ್ತಕದ ಹಾಳೆಗಳನ್ನು ಕಿತ್ತುಕೊಂಡು, ಕಾಗದ ದೋಣಿಗಳನ್ನು ತಯಾರಿಸಿ ನಾನು ಅವ್ವನ ಮಗನಾಗಿದ್ದರಿಂದ ನಾನು ಅವ್ವ ಹೆಸರು ಬರೆದು ,ಅಕ್ಕ ಅಪ್ಪನ ಹೆಸರು ಬರೆದು ಮನೆಯ ಮುಂದೆ ನಿಂತು ತೇಲಿಬಿಡುತ್ತಿದ್ದೇವು. ಅವುಗಳು ಸಾಗಿದಂತೆ ಅವುಗಳ ಹಿಂದೆ ನಮ್ಮ ಪಯಣವು ಸಾಗುತ್ತಿತ್ತು. ಕಾಗದ ದೋಣಿಗಳು ನಾ ಮುಂದು ತಾ ಮುಂದು ಎಂಬಂತೆ ಸಾಗುತ್ತಿದ್ದರೆ, ನಾವುಗಳು ನನ್ನ ದೋಣಿ ಮುಂದೆ ಸಾಗಲಿ ಎಂದು ಅದರ ಹಿಂದೆ ನೀರು ಚಿಮ್ಮುತ್ತಾ ದೋಣಿಗೆ ವೇಗತುಂಬುತ್ತಿದ್ದೇವು.
 ದೋಣಿಗಳು ಸಾಗಿದಂತೆ ನಮ್ಮ ಹಾರಾಟ ಚಿರಾಟವು ಸಾಗುತ್ತಿತ್ತು. ದೋಣಿಗಳು ಸಾಗಿದಂತೆ ಮುಂದೆ ಇರುತ್ತಿದ್ದ ಕಡ್ಡಿ ಕಸರನ್ನು ಸ್ವಚ್ಚ ಮಾಡುತ್ತಾ, ದೋಣಿಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದೇವು. ಅವುಗಳು ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಕೆರೆಯನ್ನು ತಲುಪೂರೆಗು ಮಳೆಯನ್ನು ಲೆಕ್ಕಿಸದೇ ಅವುಗಳ ಜೊತೆ ಆಟ ಆಡುತ್ತಾ, ಹೋಗುತ್ತಿದ್ದೇವು. ಒಂದು ವೇಳೆ ಯಾವುದೇ ದೋಣಿ ಮುಗುಚಿದರು ಮತ್ತೊಂದು ದೋಣಿಗೆ ಸಾಥ ನೀಡುತ್ತಿದ್ದೇವು.
 ಇನ್ನೂ ಶಾಲೆಗೆ ಹೋದ ಸಂದರ್ಭದಲ್ಲಿ ಮಳೆ ಬಂದ್ರೆ ಮುಗಿದೆ ಹೋಯಿತು. ನಮ್ಮ ಗೆಳೆಯರೆಲ್ಲರೂ ಗಂಡು ಕಾಗದ ದೋಣಿಗಳನ್ನು ಮಾಡಿ ಬೀಡುತ್ತಿದ್ದರು. ಹೌದು! ದೋಣಿಗಳಲ್ಲಿ ಗಂಡು ಮತ್ತು ಹೆಣ್ಣು ದೋಣಿಗಳಿವೆ. ದೋಣಿಯ ಕೆಳಗೆ ಒಂದು ಮಡಚಿದ ತುದಿ ಬಂದರೆ ಅದು ಗಂಡು ದೋಣಿ, ಇಲ್ಲಾ ಅಂದ್ರೆ ಅದು ಹೆಣ್ಣು ದೋಣಿ. ಹೀಗೆ ಶಾಲೆಯಿಂದ ಬರ‌್ಬೇಕಾದ್ರೆ ದೋಣಿಗಳನ್ನು ರಸ್ತೆ ಪಕ್ಕದ ಚರಂಡಿಯಲ್ಲಿ ಬೀಡುತ್ತಿದ್ದೇವು. ಕೆಲವೊಂದಿಷ್ಟು ಹುಡ್ಗರು ನಿಂತ ನೀರಿನಲ್ಲಿ ಕಲ್ಲಿನ ಕಪ್ಪೆ ಜಿಗಿಸುತ್ತಾ ತಲೆಯ ಮೇಲೆ ಪಾಠಿ ಚೀಲವನ್ನು ಹೊದ್ದುಕೊಂಡು ಮನೆಗೆ ಸಾಗುತ್ತಿದ್ದೇವು. ಆ ಕ್ಷಣಗಳನ್ನು ನೆನೆದ್ರೆ ಮೈ ಮನಸ್ಸುಗಳು ಅರೇ ಕ್ಷಣ ಕಾಗದ ದೋಣಿಯಲ್ಲಿ ಪ್ರಯಾಣಿಸುತ್ತದೆ, ಮನಸ್ಸು ಕಪ್ಪೆಯ ಹಾಗೆ ಜಿಗಿದಾಡುತ್ತದೆ.
    ಮಳೆ ಕೇವಲ ಮಳೆ ಅಲ್ಲ, ಅದು ಬಾನು ಕೂಡಿಟ್ಟ ಭಾವನೆಗಳ ಸೆಲೆ. ಈ ಸೆಲೆಯಲ್ಲೆ ನಮ್ಮಲ್ಲೆರ ಭಾವನೆಗಳು ಆ ಮಳೆಯೊಂದಿಗೆ ಚಲ್ಲಾಟ ಆಡುತ್ತವೆ. ಅಂತಹ ಚಲ್ಲಾಟದ ಒಂದು ಸುಂದರ ನೆನಪೆ ಈ ಕಾಗದ ದೋಣಿಯ ಮಾಸದ ನೆನಪು.


ನೋಡ ಬನ್ನಿ ಶಬರಿಕೊಳ್ಳ..

ಮಂಜುನಾಥ ಗದಗಿನ 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.
ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು ಎಲ್ಲರನ್ನು ಅರೆ ಕ್ಷಣ ಚಕಿತಗೊಳಿಸುತ್ತವೆ.

ಜಕಣಾಚಾರಿ ಕೆತ್ತನೆ:

ಶಿಲ್ಪಿ ಜಕಣಾಚಾರಿ ಕೆತ್ತಿದ ಶಬರಿದೇವಿಯ ದೇಗುಲ ಇಲ್ಲಿದೆ. ವಿಶಾಕವಾದ ಮುಖ ಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿ ಮೂರ್ತಿಯು ಸುಮಾರು ಐದು ಅಡಿ ಎತ್ತರದ ಕಲ್ಲಿನ ಪ್ರಭಾವಳಿಗೆ ಹೊಂದಿಕೊಂಡ ಮೂರ್ತಿಯಾಗಿದೆ. ಒಮ್ಮೆ ದರ್ಶನ ಪಡೆದರೆ ಮತ್ತೆ ಮತ್ತೆ ದೇವಿಯ ದರ್ಶನ ಪಡೆದು ಪುನೀಯರಾಗಬೇಕೆಂಬ ಭಕ್ತಿ ಭಾವ ಹೊಮ್ಮುವಂತೆ ಮಾಡುವುದು ಇಲ್ಲಿನ ವೈಶಿಷ್ಟ. ದೇವಾಲಯದ ಎದುರಿಗೆ ದೀಪಮಾಲಿಕಾ ಕಂಭವಿದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ನಡೆಯುತ್ತದೆ.
ಶಬರಿಕೊಳ್ಳಕ್ಕೆ ಆಗಮನ:
ಶ್ರೀ ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ಸುಂದರಿಯಾದ ಶ್ರೀ ಶಬರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶದಿಂದ ಸ್ವಯಂವರ ನಡೆಸಲು ಏರ್ಪಾಡು ಮಾಡುತ್ತಾನೆ. ಶಭರ ಮಹಾರಾಜನ ಅಪ್ಪಣೆಯಂತೆ ಅಷ್ಟ ದಿಕ್ಕುಗಳಿಂದ ಬೇಟೆಯಾಡಿ ಪ್ರಾಣಿಗಳ ತಲೆ ಕತ್ತರಿಸಿ ತಂದು ಸ್ವಯಂವರದ ಮಂಟಪಕ್ಕೆ ಶೃಂಗರಿಸಲು ತಿಳಿಸುವನು. ರಕ್ತ ಸಿಕ್ತ ಸ್ವಯಂವರ ಮಂಟಪವನ್ನು ಕಂಡು ದೀಗ್ಭ್ರಮೆಯಾಗಿ ತನ್ನ ಸ್ವಯಂವರದ ಸಲುವಾಗಿ ಪ್ರಾಣಿಗಳ ಜೀವ ತೆಗೆದಿದ್ದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯತಳೆದು ಸುಖ-ಸಂಪತ್ತು, ಸೌಭಾಗ್ಯವನ್ನು ಬಿಟ್ಟು ಸಕಲ ರಾಜ ವೈಭವವನ್ನು ತೊರೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸಿರುವುದು ಪುರಾಣದಲ್ಲಿ ಉಲ್ಲೇಖವಿದೆ. ರಾಮದುರ್ಗದಿಂದ 14 ಕಿ.ಮೀ ಮತ್ತು  ಸುರೇಬಾನದಿಂದ 3 ಕಿ.ಮೀ ಅಂತರದಲ್ಲಿದೆ ಈ ಶಬರಿ ನೆಲೆಸಿರುವ ಸ್ಥಳ.

ಈ ದೇವಾಲಯ ಕುರಿತು ಎರಡು ದೃಷ್ಟಾಂತಗಳು ಪ್ರಚಲಿತದಲ್ಲಿವೆ.

ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ.
ಶ್ರೀರಾಮನ ಶ್ರೇಷ್ಠ ಭಕ್ತೆಯಾದ ಶ್ರೀ ಶಬರಿಯ ಭಕ್ತಿ ಅನನ್ಯವಾಗಿದೆ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ ಕಥೆ ರಾಮಾಯಣದ್ದು. ಈ ಕಥೆಯಲ್ಲಿ ಬರುವ ಶಬರಿ ಇಲ್ಲಿಯೇ ವಾಸವಾಗಿದ್ದಳು.ಶ್ರೀರಾಮನ ಬರುವಿಗಾಗಿ ತಪಗೈದು ಶ್ರೀರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದುತಂದು ಸಿಹಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ಶ್ರೀಮಾತೆಯ ತಪ್ಪಸ್ಸಿನ ಫಲವೋ ಏನೋ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಬಂದನು. ಈ ಅಭಯಾರಣ್ಯದಲ್ಲಿ ನೆಲೆಸಿದ ಶ್ರೀ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಶ್ರೀರಾಮ ಆಕೆಯ ಭಕ್ತಿಯನ್ನು ಮೆಚ್ಚಿ ಏನು ವರ ಬೇಕು ಕೇಳು ನಿನಗೆ ಎಂದು ಕೇಳುತ್ತಾನೆ. ಆಕೆ ಶ್ರೀರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ಪ್ರಾಣಪಕ್ಷಿ ಹಾರಿ ಹೋಗುವ ಸಂದರ್ಭದಲ್ಲಿ ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ  ನೀರಿಗಾಗಿ ವೀಕ್ಷಿಸಿದನೆಂದೂ, ನೀರು ಕಂಡು ಬರದೇ ಇದ್ದಾಗ ಬಾಣ ಪ್ರಯೋಗಿಸಿ ತನ್ನ ಬಿಲ್ವಿದ್ಯೆಯ ಮೂಲಕ ನೀರು ತರಿಸಿದನೆಂಬ ಪ್ರತೀತಿ ಹೊಂದಿದ ಎರಡು ಹೊಂಡಗಳು ಸಾಕ್ಷಿಯಾಗಿ ಇಲ್ಲಿವೆ. ಆ ಹೊಂಡಗಳಲ್ಲಿ ಗಣಪತಿ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲಾ ಮತ್ತು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾಧಿಗಳು ಭಾವಿಸುತ್ತಾರೆ. ಶಬರಿ ನೆಲೆ ನಿಂತ ತಾಣವಾದ ಈ ಪವಿತ್ರ ಸ್ಥಳವೇ ಶ್ರೀ ಶಬರಿಕೊಳ್ಳವಾಗಿದೆ
ಶ್ರೀ ಶಬರಿ ಮಾತೆಯು ಶ್ರೀರಾಮನಿಗೆ ನನಗೆ ಮುಕ್ತಿ ದಯಪಾಲಿಸು ಅಂತ ಬೇಡಿಕೊಂಡಾಗ ಆಗ ಶ್ರೀರಾಮನು ಮಾತೆ ನಿನಗೆ ಮುಕ್ತಿ ಸಿಗಬೇಕಾದರೆ ನೀನು ’ಪಂದಳ ರಾಜ್ಯ’ದಲ್ಲಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತಳಾಗು ಎಂದು ಅನುಗ್ರಹಿಸಿದ ಪವಿತ್ರ ಸ್ಥಾನವು ಇದಾಗಿದೆ. ಅಲ್ಲದೆ ದೇಶಾದ್ಯಂತ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ತುಳಸಿ ಮಾಲೆಯನ್ನು ಧರಿಸಿ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯುದಕ್ಕಿಂತ ಮುನ್ನ  ಶ್ರೀ ಶಬರಿಯು ತಪಸ್ಸು ಮಾಡಿ ಮೋಕ್ಷ ಪಡೆದ ’ಶಬರಿ ಪೀಠಂ’ ಅಂತಾ ದೇವಸ್ಥಾನದಲ್ಲಿ ಮೊದಲು ಪೂಜೆಗೈದು ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆಯಾಗಿದೆ.
ಇನ್ನೊಂದು ಕಥೆ ಸೊರೆವ್ವನದು. ಆಕೆ ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದ ಋಷಿ ಮುನಿಗಳಿಗೆ ಉಪಟಳ ನೀಡುತ್ತಿದ್ದ ಸುರಭ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಅವಳ ಸ್ಮರಣೆಗಾಗಿ ದೇಗುಲ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ಆದ್ದರಿಂದ ಈ ಊರನ್ನು ಮೊದಲಿಗೆ ಸೂರಿಬನ ಎಂದೂ ನಂತರದ ದಿನಗಳಲ್ಲಿ ಸೂರಿಬನವೇ ಸುರೇಬಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಎಂದೂ ಪ್ರತೀತಿ ಇದೆ.
ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶ್ರೀ ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಮತ್ತು ಸುರೇಬಾನ-ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಟಾನ ಗೈದು ಶ್ರೀ ಶಬರಿ ತಾಯಿ ಕೃಪೆಗೆ ಪಾತ್ರರಾಗಿರುವುದು ತಾಜಾ ನಿದಶರ್ನ.

ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

      ಒಂದು ಸುಂದರ ಪುಷ್ಕರಣಿಯಲ್ಲಿ ಸತತ ಜಲೋದ್ಭವವಾಗುತ್ತಿದೆ. ಜಲದ ಪ್ರೋಕ್ಷಣೆಯಿಂದ ಪಾಪನಾಶವಾಗುವುದು. ಅಲ್ಲದೆ ಪಾನಮಾಡಿದರೆ ಸಕಲ ರೋಗಕ್ಕೆ ಸಂಜೀವಿನಿಯಂತಿದೆ. ಇನ್ನೊಂದು ಪುಷ್ಕರಣಿಯಲ್ಲಿ ಸ್ನಾನಕ್ಕೆ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡು ಪೌಳಿಗಳು ಇವೆ. ಭಕ್ತಾದಿಗಳಿಗೆ ತಂಗಲು ಅನುಕೂಲವಿದೆ. ಈಗ ಸರಕಾರಿ ಸಹಾಯ ಧನದಲ್ಲಿ ಭವ್ಯವಾದ ಕಟ್ಟಡವಿದೆ. ಮದುವೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿದೆ. ವರ್ಷದಲ್ಲಿ ನೂರಾರು ಮದುವೆಗಳು ನಡೆಯುತ್ತವೆ. ಅಲ್ಲದೆ ಶ್ರೀಕ್ಷೇತ್ರದಲ್ಲಿ ನೋಡುಗರ ಮನಸೆಳೆಯುವ 200 ಅಡಿಗಳ ಅಂತರದಿಂದ ದುಮ್ಮಿಕ್ಕಿ ಬೀಳುವ ಅಂತರಗಂಗೆ, ಆಕಳ ಮೊಲೆಯು ಸೂಮಾರು 120 ಅಡಿಗಳಷ್ಟು ಎತ್ತರದಲ್ಲಿ ಗುಹೆಯಲ್ಲಿ ಇದೆ. ಸಾವಿರ ವರುಷ ಇತಿಹಾಸ ವಿರುವ ಬೋರೆಹಣ್ಣಿನ ಮರವಿದೆ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ.
ಇಲ್ಲಿನ ದೇವಿಗೆ ನಿತ್ಯವೂ ಪೂಜೆ, ಆಭಿಷೇಕ ಸಲ್ಲುತ್ತಿದೆ.ಕಾರ್ತಿಕ ಮಾಸ, ದೀಪಾವಳಿ ಅಮವಾಸ್ಯೆ , ಹುಣ್ಣಿಮೆ ಸಂದರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಜಾತ್ರೆ ದಿನ ಸುರೇಬಾನದ ಶ್ರೀ ಮಾರುತಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ದೇವಾಲಯದವರೆಗೂ ಬರುತ್ತದೆ ತದನಂತರ ಜಾತ್ರೆಗೆ ಚಾಲನೆ ನೀಡುತ್ತಾರೆ.


Monday, 9 May 2016

ಒಂದು ಬದುಕು ಎರಡು ಅನುಭವ!


 ನಮ್ಮದು ಚಿಕ್ಕ ಹಳ್ಳಿ, ಜೀವನ ಶೈಲಿಯಲ್ಲಿ ಆಡಂಬರವಿಲ್ಲ, ಇದದ್ದರಲ್ಲೆರ ಎಲ್ಲವನ್ನೂ ನಿಭಾಯಿಸಿಕೊಂಡು
 ತೃಪ್ತಿಕರ ಜೀವನ ನಡೆಸುತ್ತಿರುವ ಬಡ ಜೀವಗಳು. ಕಾಯಕವೇ ಕೈಲಾಸ ಎಂದು ದುಡಿಯುವ ದೇಹಗಳು. ಬೆಳ್ಳಿಗೆ ಆಯ್ತೆಂದರೆ, ಏ ಮಲ್ಲವ್ವ, ಏ ಕಲ್ಲವ್ವ ಬೇಗ ಬೇಗ ಬರ‌್ರೆ, ಬಂಡಿ ಹೊಂಡೈಯಿತಿ. ದಗುಡ ಬರದ ಹೋದರ ಬಿಟ್ಟ ಹೋಗತ್ತಿವ ನೋ! ಹೇ ತಡಿರ ಯಕ್ಕಾ ಅಷ್ಟೊಂದು ಅವಸರಾ ಯಾಕ ಮಾಡಾಕತ್ತಿ? ಬುತ್ತಿ ಕಟ್ಟಕೊಳ್ಳಾಕತ್ತಿನಿ ನಿಂದ್ರ, ಎನ್ನುವ ಮಲ್ಲವ. ಆತವಾ ಲಗುನ ಬಾ! ಮುಂಜಾನೆ ಇಂತಹ ಮಾತುಗಳು ಹಳ್ಳಿಗಳಲ್ಲಿ ಸರ್ವೆಸಾಮಾನ್ಯವಾಗಿ  ಕೇಳುತ್ತಿದೆ.
     ಮುಂಜಾನೆಯಿಂದ  ಸಾಯಂಕಾಲದವರೆಗೆ ದುಡಿದು, ನಗು ಮೊಗದಿ ಬರುವ ಅವರ ಮುಖ ಹುಣ್ಣಿಮೆಯ ಚಂದ್ರನಂತೆ ಲಕಾ,ಲಕಾ ಹೊಳಿಯುತ್ತಿದ್ದವು. ಬಂದ ತಕ್ಷಣ ಗಂಡನ ಬೇಕು ಬೇಡಗಳನ್ನು ಆಲಿಸಿಕೊಂಡು, ಸ್ಪಂದಿಸುವ ಹೃದಗಳು ಅಲ್ಲಿದ್ದವು. ಪ್ರತಿದಿನ ರಾತ್ರಿ ಹುಣ್ಣಿಮೆ ಚಂದ್ರ ಬರುತ್ತಿದ್ದ. ಈ ಸಮಯದಲ್ಲಿ ದುಡಿದು ಬೆಸತ್ ಜೀವಗಳು ಪಕ್ಕದ ಮನೆಗೆ ಹೋಗಿ ತಮ್ಮ ಸುಖ, ದುಖಃ ಹಂಚಿಕೊಳ್ಳುತ್ತಿದ್ದವು. ಅಲ್ಲಿ ದುಖ:. ದುಮ್ಮಾನ, ಹಾಸ್ಯ ಎಲ್ಲವೂ ತುಂಬಿಕೊಂಡಿರುತ್ತಿತ್ತು. ಗಂಡಸರು,  ಬಜಾರ, ಗುಡಿ ಕಟ್ಟೆಗಳಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.
    ಇನ್ನೂ ಯಾರಿಗಾದರೂ, ತೊಂದರೆಯಾದರೆ ಮಮಲ ಮರಗುವ ಜನ. ನೆರೆ-ಹೊರೆಯವರಂತು ಬಂಧುಬಳಗಗಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ ತೋರಿಸುತ್ತಾರೆ. ಇವು ನಾನು ಕಂಡು ನೋಡಿದ ಹಳ್ಳಿ ಜೀವನ.
   ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದೆ.  ನಗರ ಜೀವನ ಕಂಡಿರದ ನಾನು, ಹೇಗಪ್ಪಾ ಎಲ್ಲಿ ಇರುವದು? ಎಂದುಕೊಂಡೆ. ಇಲ್ಲಿನ ವಾತಾವರಣ, ಊಟ ನನಗೆ ಹೊಂದಾಣಿಕೆ ಆಗಲಿಲ್ಲ. ಆದರೂ ಇರಲೇ ಬೇಕಾದ ಅನಿವಾರ್ಯತೆ.
    ನಮ್ಮ ಭಾಷೆಗೂ, ಇಲ್ಲಿಯ ಭಾಷೆಗೂ ಸ್ವಲ್ಪ ವ್ಯತ್ಯಾಸ ಇದದ್ದು ಕಂಡುಕೊಂಡೆ. ಇನ್ನೂ ವೇಷ ಭೂಷಣ ಅಯೋ ದೇವರೆ! ಎಂದುಕೊಂಡೆ. ನಮ್ಮಲ್ಲಿ ಗಂಡಸರು ಪಂಚೆ, ಹೆಂಗಸರು ಇರಕಲ್ ಸೀರೆ ಉಟ್ಟಕೊಂಡ ಬರತ್ತಾ ಇದ್ದರ ಶಿವ-ಪಾರ್ವತಿ ನೋಡಿದ ಅನುಭವ. ಇಲ್ಲೂ ಶಿವ, ಶಿವಾ! ಒಂದು ದಿನಾ ನಾಲ್ಕೈದು ಹುಡುಗಿಯರು ಅರ್ಧಮರ್ಧ ಬಟ್ಟೆ ಹಾಕೊಂಡು ಬರ್ತಾಯಿದ್ದರೂ, ಅದನ್ನು ನೋಡಿದ ನಾನು ಅಯ್ಯೋ! ಪಾಪ ಅವರ ಮನೆಯಲ್ಲಿ ಹಾಕೊಳ್ಳಾಕ ಬಟ್ಟೆ ಕೊಡಿಸಿಲ್ಲಾ ಎಂದು ನನ್ನ ಗೆಳೆಯನಿಗೆ ಹೇಳಿದೆ. ಅವನು ಹಾಗಲ್ಲಾ ಲೇ ಅದು ಈಗಿನ ಪ್ಯಾಶನ್ ಎಂದ. ಇರಬಹುದು ಎಂದು ತಲೆ ಅಲ್ಲಾಡಿಸಿದೆ.

   ಇನ್ನೂ ಬೆಳ್ಳಿಗೆ ಆಫೀಸಿಗೆ ಹೋಗುವ, ಅಂಕಲ್-ಆಂಟಿ ರೋ! ದೇವದೇವಾ! ಅವಸರದಲ್ಲೇ ಹುಟ್ಟಿದ್ದಾರೆನೋ ಎಂಬಂಹ ಅವಸರ. ತಾವು ರೆಡಿ ಆಗುವ ಸಂಭ್ರಮದಲ್ಲಿ ಮಗು ಅಳತ್ತಾ, ಇದ್ದರು ಸಹ ಚಿನ್ನು, ಪಪ್ಪಿ, ಪಿಂಕಿ, ಮುದ್ದು ಸುಮ್ಮನಿರು, ನನಗೆ ಆಪೀಸಗೆ ಲೆಟ್ ಆಗಿದೆ. ನೀ ಬೇರೆ ಅಳತ್ತಾ ಇದ್ದಿಯಾ, ಸುಮ್ಮನಾಗು ಎಂದು ಗೊಣಗುತ್ತಾ, ಬಾಯ್ ಬಾಯ್ ಎಂದು ಹೊರಟೆ ಹೋಗುತ್ತಾರೆ. ಆ ಮಗು ಮಮ್ಮಿ, ಡ್ಯಾಡಿ ಎಂದೇ ಅಳತ್ತಾ ಇರುತ್ತೆ. ಆಪೀಸನ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವರ ಮುಖ ಸುಟ್ಟ ಬದನೆಕಾಯಿ ಆಗಿರುತ್ತೆ. ಮನೆಗೆ ಬಂದವರೇ, ಬಾಗಿಲು ಹಾಕಿಕೊಂಡು ಒಳಗೆ ಕುಳಿತ್ತರೆ ಮುಗಿದೆ ಹೊಯ್ತಿ, ಮತ್ತೆ ಹೊರಗೆ ಬರುವುದು ಮರುದಿನ ಅದೇ  ಗಡಿಬಿಡಿಯಲ್ಲೇ.
    ರಾತ್ರ ಆಯ್ತಿ ಎಂದರೆ ದೇವಲೋಕವೇ ಧರೆಗಿಳಿದ ಅನುಭವ. ಜಗಮಗಿಸುವ ಕಟ್ಟಡಗಳು, ಗೀಜುಗೂಡುವ ರಸ್ತೆಗಳು, ಎಲ್ಲಿ ನೋಡಿದರು ಗೋಬಿ , ನ್ಯೂಡಲ್ಸ, ಪಾನಿಪುರಿ ಅಂಗಡಿಗಳ ಸಾಲು. ಇವುಗಳನ್ನು ತಿಂದು ಬಾಯಿ ಚಪ್ಪರಿಸುವ ಜನ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ.

Sunday, 8 May 2016

ಕರುಣಾಮಯಿ



 ಒಂದು ಸುಂದರ ಸಂಸಾರ ಆ ಸಂಸಾರಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಆದರೆ ಆ ಕುಟುಂಬದಲ್ಲಿ ಹೇಳಿಕೊಳ್ಳುವಂತಹ ಬಡತನವೇನು ಇರಲಿಲ್ಲ.ಆದರೆ ಮನೆಯ ಯಜಮಾನನಿಗೆ ಮಾತ್ರ ದುಡ್ಡಿನ ಹಪಾ ಹಪಿ ಮಾತ್ರ ತುಸು ಜಾಸ್ತಿನೆ ಇತ್ತು. ಹೆಂಡತಿ ಏಷ್ಟೇ ದುಡಿದರೂ ಚಿತ್ರಹಿಂಸೆ ನೀಡುತ್ತಿದ್ದ. ಆದರೆ  ಹೆಂಡತಿ ಮಾತ್ರ ಸಹನೆ ಶೀಲೆ ಯಾಗಿದ್ದಳು. ಗಂಡನಾದವನು ಏನೇ ಅಂದರು ಅದು ಅವಳಿಗೆ ವೇದ ವ್ಯಾಖ್ಯವಾಗಿತ್ತು. ಎಂದೂ ಗಂಡಮಾತಿಗೆ ಎದುರು  ಮಾತನಾಡಿದವಳಲ್ಲ.
  ಈ ಕುಟುಂದ ಮೂಲ ಉದ್ಯೋಗ ಇದೇ ಎಂದು ಇರಲಿಲ್ಲ. ಯಾವ ಉದ್ಯೋಗ ದೊರೆತರು ಅದನ್ನೆ ಮಾಡುತ್ತಿದ್ದರು. ಆದರೆ ಇವರು ಬ್ರಾಹ್ಮಣರಲ್ಲ  ಆದರೂ ಮನೆಯ ಯಜಮಾನ ಮಾತ್ರ ಒಂದು ದೇವಾಲಯ ಅರ್ಚಕನಾಗಿದ್ದ, ಇದರೊಂದಿಗೆ ದೊಡ್ಡ ,ದೊಡ್ಡ ಸಮಾರಂಭಗಳ ಅಡುಗೆಯನ್ನು ಮಾಡುತ್ತಿದ್ದನು. ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು.
  ಇನ್ನೂ ಮಗಳು ಮತ್ತು ಮಗ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಇಬ್ಬರೂ ಶಾಲೆಯಲ್ಲಿ ಚನ್ನಾಗಿ ಓದುತ್ತಿದ್ದರು. ಆದರೆ ತಂದೆಯ ದುಡ್ಡಿನ ವ್ಯಾಮೋಹ ಜಾಸ್ತಿಯಾಗಿದ್ದರಿಂದ ಮಗಳನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದನು. ಆ ಹುಡುಗಿಗೆ ಕೇಲವ ಆಗ ಹನೇರಡು ವರ್ಷ ವಯಸ್ಸು ಮಾತ್ರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೆ ಮನೆಗೆ ಆಸರೆಯಾದಳು . ಆ ಹುಡುಗಿ ಮಾತ್ರ ಶಾಲೆಯಲ್ಲಿ ತುಂಬಾ ಜಾಣೆಯಾಗಿದ್ದಳು. ಆಟ-ಪಾಠದಲ್ಲಿ ಅವಳೆ ಶಾಲೆಗೆ ಪ್ರಥಮಳಾಗಿದ್ದಳು. ಅವಳ ತಂದೆ ಶಾಲೆ ಬಿಡಿಸಿದ್ದಾಗ, ಅವಳು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆದರೆ ತಂದೆಯ ಹಣದಾಸೆಗೆ ಅವಳ ವಿದ್ಯಾಭ್ಯಾಸದ ಕನಸು ಮಾತ್ರ ಏಳನೇ ತರಗತಿಗೆ ಕಮರಿ ಹೋದದ್ದು ದುರಂತವೇ ಸರಿ.
  ಆದರೆ ಮನೆಯ ಯಜಮಾನನ ಹಣದಾಸೆ ಇಷ್ಷಕ್ಕೆ ನಿಲ್ಲಲಿಲ್ಲ. ಇದ್ದೊಬ್ಬ ಮಗನ ಮೇಲು ಅವನ ಕಣ್ಣು ಬಿದ್ದಿತು. ಆ ಹುಡುಗ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇದ್ದೊಬ್ಬ ಮಗನನ್ನು ಚನ್ನಾಗಿ ಶಾಲೆಗೆ ಕಳುಹಿಸಬೇಕೆಂಬ ಇರಾದೇ ಮಾತ್ರ ಆ ತಂದೆಗೆ ಇರಲೇ ಇಲ್ಲ. ಬರೀ ದುಡ್ಡು, ದುಡ್ಡು ಎಂದು ಬಾಯಿ ಬಿಡುತ್ತಿದ್ದನು. ಒಂದಿನಾ " ನೀ ಶಾಲೆ ಕಲೆತು  ಏನ ದೊಡ್ಡ ಸಾಹೇಬಾ ಆಗ ಬೇಕಾಗಿಲ್ಲ, ಸಾಲಿ ಬಿಟ್ಟ ದುಡ್ಯಾಕ ಹೋಗ ಇನ್ನ" ಎಂದು ಆ ಪುಟ್ಟ ಮಗುವನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದ. ಪಾಪ ಆ ಹುಡುಗನದು ಮಾತ್ರ ಅರಣ್ಯ ರೋಧನ  ಯಾರು ಕೇಳುವವರಿಲ್ಲ.
  ಇದ್ದೊಬ್ಬ ಮಗನನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿರುವ ಸುದ್ದಿ ಇಡೀ ಓಣಿಗೆ ತಿಳಿಯಿತು. ಓಣಿ ಮಂದಿಯಲ್ಲ " ನಿನಗ ಇರಾಂವ ಒಬ್ಬ ಮಗಾ ಅದಾನು ಅವನರ ಸರಿಯಾಗಿ ಸಾಲಿಗೆ ಕಳುಹಿಸ ಬಾರದಾ ಎಂದು  ಬೈಯಲು ಪ್ರಾರಂಭಿಸಿದರು. ಇದರಿಂದ ಅವನ ಮನ ಪರಿವರ್ತನೆಯಾಗಿ, ಮಗನನ್ನು ಶಾಲೆಗೆ ಕಳುಹಿಸಲು ಮುಂದಾದಾಗ್ ಸಮಯ ಮೀರಿ ಹೋಗಿತ್ತು. ಆವಾಗ ಆ ಹುಡುಗ ನಾಲ್ಕನೇ ತರಗತಿಯಲ್ಲಿ ಫೇಲ್ ಆಗಿ ವತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳುವ ಪರಸ್ಥಿತಿ ಬಂದೋದಗಿತು.
 ಇದರ ಮಧ್ಯ ಹೆಂಡತಿ, ಮಗಳಿಗೆ ತುಂಬಾನೆ ಕಾಟ ಕೊಡಲು ಪ್ರಾರಂಭಿಸಿದ್ದ, ಕುಳಿತ್ರು ತಪ್ಪು, ನಿಂತ್ರು ತಪ್ಪು ಏನ್ನುವಂತಹ ಪರಸ್ಥಿತಿ ಅವರದಾಗಿತ್ತು. ಪ್ರತಿ ಕ್ಷಣವು ಅವರಿಗೆ ನರಕ ಸದೃಶವಾಗಿತ್ತು. ಆದರೆ ಅದೆಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈ ಯಜಮಾನನ ಹಣದಾಸೆಗೆ ದೇವಸ್ಥಾನ ಹಣದ ಹುಂಡಿಯೇ ಮಾಯವಾಯಿತು.
  ಒಂದಿನಾ ಸಾಮೂಹಿಕ ವಿವಾಹ ನಿಮಿತ್ತ ಅಡುಗೆ ಮಾಡಲು ಹೋದಾಗ ರಾತ್ರಿ ಇಡೀ ನಿದ್ದೆಗೆಟ್ಟು ದುಡಿದನು. ಆದರೆ ಮರುದಿನ ವಿಶ್ರಾಂತಿ ತೆಗೆದುಕೊಳ್ಳದೇ, ಮತ್ತೆ ದುಡಿಯಲು ಪ್ರಾರಂಭಿಸಿದನು. ಇದರಿಂದ ಅವನ ಬಿಪಿ, ಶುಗರ ಹೆಚ್ಚಾಗಿ ಪಾಶ್ವವಾಯು ತಗುಲಿತು. ಇಂತಹ ಸಮಯದಲ್ಲಿ ಅವನ ಹೆಂಡತಿ  ಸಾಲ ಮಾಡಿ ದವಾಖಾನೆ ತೋರಿಸಿದಳು, ಆದರೆ ಅವನು ಮಾಡಿದ ಪಾಪಕ್ಕೆ ಆ ದೇವರ ಅವನ ಮಾತುಗಳನ್ನೆ ಕಿತ್ತುಕೊಂಡು ಬಿಟ್ಟಿದ್ದ.
 ಇಂತಹ ಸಮಯದಲ್ಲಿ ಅವನ  ಆರೈಕೆ ಮಾಡಿದವಳು ಅವನ ಹೆಂಡತಿನೇ. ಅವನು ಕೊಟ್ಟ ಕಷ್ಟಗಳೆಲ್ಲವನ್ನು ಮರೆತು ಅವನ ಹೊಲಸು ತೊಳೆಯುವದರಿಂದ ಹಿಡಿದು ರಾತ್ರಿ  ಮಲಗುವವರೆಗೂ ಅವನ ಜಾಕ್ರಿ ಮಾಡಿದಳು. ಇದರ ಜೊತೆ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಳು.
   ಆಗ ಮಗ ಚಿಕ್ಕವನಾಗಿದ್ದರಿಂದ, ಅವನ ಅಕ್ಕ ಮನೆಯ ನೊಗವನ್ನು ಹೊತ್ತು ಗಂಡು ಮಗನ ಹಾಗೆ, ಎಲ್ಲವನ್ನು ಎದುರಿಸಿ, ಮಾಡಿದ ಸಾಲವನ್ನೆಲ್ಲಾ ತೀರಿಸಿ ತಾನೆ ದುಡಿದು, ಅದರಲ್ಲಿಯೇ ಸ್ವಲ್ಪ ಹಣವನ್ನು ಕೂಡಿಟ್ಟು, ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದಳು.
   ಆದರೆ ಆ ಹುಡುಗನ ಪರಸ್ಥಿತಿ ತಂತಿ ಮೇಲಿನ ನಡಿಗೆಯಂತಾಗಿತ್ತು. ಅತ್ತ ಸಾಲೆಗೆ ಹೋಗಲು ಆಗದು ಇತ್ತ ಬಿಡಲು ಆಗದಂತಹ ಪರಸ್ಥಿತಿ. ಆದರೆ ಅವನ ತಾಯಿ ಹೇಳಿದ್ದು ಮಾತ್ರ " ಮಗಾ ನೀನು ಸಾಲಿಗೆ ಹೋಗಿ ದೊಡ್ಡ ಸಾಗೇಬಾ ಆಗ್ಬೇಕು. ಏಸೇ ಕಷ್ಟಾದ್ರು ನೀ ಸಾಲಿ ಬಿಡಾಕ ಹೋಗಬ್ಯಾಡ, ಏಸೇ ಕಷ್ಟಾ ಬಂದ್ರು ಅವು ನನಗೆ ಇರ‌್ಲಿ" ಎಂದು ಮಗನನ್ನು ಶಾಲೆಗೆ ಕಳುಹಿಸಿದಳು.
  ಆ ಹುಡುಗ ಕೂಡಾ ಚನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು. ಆಗ ಅವನ ತಾಯಿಗೆ ಮಾತ್ರ ಎಲ್ಲವನ್ನು ಗೆದ್ದ ಸಂತಸ. ಮಗನ ಆ ಸಾಧನೆಯಿಂದ ಅವನ ತಾಯಿ ಹೆಚ್ಚಿನ ಓದಿಗಾಗಿ ಶಹರಕ್ಕೆ ಕಳುಹಿಸಿದಳು. ಅಲ್ಲಿಯೋ ಆ ಹುಡುಗ ಚನ್ನಾಗಿ ಓದಿ. ಉತ್ತಮ ಪಲಿತಾಂಶದೊಂದಿಗೆ ತನ್ನ ಓದನ್ನು ಮುಗಿಸಿದನು. ನಂತರ ಒಳ್ಳೇಯ ಕೆಲಸ ಹುಡುಕಿಕೊಂಡು. ಉತ್ತಮ ಸಂಭಳ ಪಡೆದುಕೊಳ್ಳುವಂತಾದ , ಅಷ್ಷರಲ್ಲಾಗಲೇ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ , ತನ್ನ ತಾಯಿಯನ್ನು ಶಹರಕ್ಕೆ ಕರೆದುಕೊಂಡು ಹೋಗಿ, ರಾಣಿಯ ಹಾಗೆ ನೋಡಿಕೊಂಡನು
  ತಾಯಿಯೇ ದೇವರು"

ಮಂಜುನಾಥ ಗದಗಿನ
ಪೋನ ನಂ ; 8050753148

Monday, 11 April 2016

ಕನಸಾಗಿಕಾಡಿ ಬದುಕಾಗಿರುವ ಪತ್ರಿಕೋದ್ಯಮ


ಕನಸುಗಳೇ ಹಾಗೆ! ಕಾಡುತ್ತವೆ. ಕೆರಳುತ್ತವೆ. ಕೆಣಕುತ್ತವೆ.. ಕೊನೆಗೆ ಸಾಕಾರಗೊಂಡೋ..ಸಾಕಾರಗೊಳ್ಳದೇನೋ..ಮನಸ್ಸಿನಾಳದಿಂದ ಸರಿದು ಮಾಯವಾಗುತ್ತವೆ.ಹ್ಞೂ! ನನಗೂ ಸಾವಿರ ಕನಸುಗಳ ಮಧ್ಯ ಒಂದು ಚಿಕ್ಕ ಕನಸು ಮೂಡಿತ್ತು. ಆ ಕನಸು ಈಡೇರಿಕೆಗೆ ನಾನಾ ಕಸರತ್ತುಗಳು. ಇವುಗಳೊಂದಿಗೆ ಅನೇಕ ಸವಾಲುಗಳನ್ನು ದಾಟಿ ಕನಸಾಗಿ ಕಾಡಿದ್ದ ಪತ್ರಿಕೋದ್ಯಮ ಅಣಿ ಇಟ್ಟೆ.
ಸಮಾಜ ಅಂಕುಡೊಂಕುಗಳನ್ನು ತಿದ್ದಿ ತಿಡುವ ಗುತರುತರ ಜವಾದ್ದಾರಿ ಪತ್ರಿಕೋದ್ಯಮದ್ದು. ಒಳ್ಳೆ ಕಾರ್ಯ ಮಾಡಿದಾಗ ಶಬ್ಬಾಶಗಿರಿ ನೀಡುತ್ತಾ, ತಪ್ಪು ಮಾಡಿದಾಗ ಚಾಟಿ ಏಟು ನೀಡುತ್ತಾ ಯಾರ ಅಚಿಜು ಅಳುಕು ಇಲ್ಲದೇ,ತನ್ನದೇ ಹಮ್ಮು ಬಿಮ್ಮಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಬದುಕು ಎಂಬುದು ಅಮೂಲ್ಯವಾದದ್ದು, ಬದುಕಬೇಕಾದರೆ ಕನಸುಗಳು ಅಷ್ಟೇ ಮುಖ್ಯ. ಕನಸುಗಳು ಬದುಕನ್ನು ರೂಪಿಸುತ್ತವೆ ಹಾಗೇ ನಾ ಕಂಡ ಪತ್ರಿಕೋದ್ಯಮದ ಕನಸು ಮುಂದಿನ ನನ್ನ ಬದುಕಾಗಿರುವುದು ಈಗ ಇತಿಹಾಸ.
ಪತ್ರಿಕೋದ್ಯಮ ಒಂದು ಗ್ಲಾಮರ್ ಲೋಕ ಎನ್ನುವುದು ಒಂದು ಮಾತಾದಾರೆ, ಅದರ ಒಳಗಿರುವ ಲೋಕ ನಮ್ಮನ್ನು ದಂಕು ಬಡಿಸುತ್ತವೆ. ಕ್ಷಣ ಕ್ಷಣಕ್ಕೂ ಹೊಸ ವಿಷಗಳು, ಹೊಸ ಮಾಹಿತಿಗಳನ್ನು ಹೆಕ್ಕಿ ತಗೆಯುವ ಕಸರತ್ತು ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಆದರೆ ನಿಂತು ಓದುವವರಿಗೆ, ಕುಳಿತು ನೋಡುವವರಿಗೆ ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇರುವುದಿಲ್ಲ.ಆದರೆ ಅದರ ಸುಳಿಗೆ .ಸಿಲುಕಿದಾಗಲೇ ಅದರ ಅರಿವು ಗೊತ್ತಾಗುವುದು. ಪತ್ರಿಕೋದ್ಯಮದಲ್ಲಿ ಸಾವಿರಾರು ಕನಸುಗಳನ್ನು ಕಂಡು ಅದೇಷ್ಟೋ ಜನ ಸಾಗಿದ್ದಾರೆ, ಸಾಧಿಸಿದ್ದಾರೆ, ಸಾಧಿಸಲಾಗದೇ ಸೋತು ಅದರ ಸಹವಾಸದಿಂದ ದೂರ ಸರಿದವರು ಇದ್ದಾರೆ.
 ಸುದ್ದಿಮನೆಯಲ್ಲಿ ಸದ್ದು ಮಾಡಬೇಕು, ಸಾವಿರ ಸಾವಿರ ಸಮಸ್ಯೆಗಳನ್ನು ಹೆಕ್ಕಿ ಸಮಾಜ ಸುಧಾರಿಸಬೇಕು ಎಂಬ ಕನಸು ನನ್ನದಾಗಿತ್ತು. ಒಬ್ಬ ವ್ಯಕ್ತಿ ಪತ್ರಕರ್ತನಾಗಲು ಓದು ಬರಹವಷ್ಟೇ ಇದ್ದರೆ ಸಾಲದು ಜನರ ಪ್ರತಿಧ್ವನಿಯಾಗಿ, ಸತ್ಯವನ್ನು ಹೇಳುವ, ಅನ್ಯಾಯದ ಪರ ನಿಲ್ಲುವ ಗಟ್ಟಿತನ ಬೇಕು ಹಾಗೇ ಕ್ರೀಯಾಶೀಲತೆಯು ಇರಬೇಕು. ಪತ್ರಿಕೋದ್ಯಮ ಸೇರಿದ ಕೆಲವೇ ದಿನಗಳನ್ನಿ ಈ ಸತ್ಯ ಅರಿವಾಯಿತು.
ಪತ್ರಿಕೋದ್ಯಮದಲ್ಲಿ ಕ್ಷಣ ಕ್ಷಣಕ್ಕೂ ಎದುರಾಗುವ ಅಪಾಗಳು, ಸಮಸ್ಯಗಳನ್ನು ಕಂಡು ಈ ವೃತ್ತಿಯೇ ಬೇಡ ಎಚಿದು ತೀರ್ಮಾನಿಸಿದ್ದು ಇದೆ. ಆದರೆ, ನನ್ನ ಕನಸು ಇಲ್ಲಿ ನಿಲ್ಲ ಬಾರದು, ಅದು ಕೂಡಾ ಪತ್ರಿಕೋದ್ಯಮದ ನೀರಿನೊಂದಿಗೆ ಹರಿಯಬೇಕು ಎಂದುಕೊಂಡು ಅದರ ಆಳ, ಅಗಲಗಳನ್ನು ತಿಳಿದುಕೊಳ್ಳಲು ಮುಂದಡಿ ಇಟ್ಟೆ.
ನಾವು ವಿದ್ಯಾರ್ಥಿಗಳಾಗಿದ್ದರು ಸಹ ನಮ್ಮ ಗುರುಗಳ ಹಲವು ವರ್ಷದ ಅನುಭವಗಳು ನಮ್ಮ ಬದುಕಿನ ಅನುಭವಗಳಿಗೆ ಸೇರುತ್ತವೆ. ಅವರು ಎದುರಿಸಿದ ಸಮಸ್ಯೆಗಳು ಕಂಡುಕೊಂಡ ಪರಿಹಾರಗಳು ನಮ್ಮ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ ನಮ್ಮ ಕನಸುಗಳಿಗೆ ನೀರೆರೆಯುತ್ತವೆ.
ಮತ್ತೊಬ್ಬರ ಭುಜದ ಮೇಲೆ ಬಂದುಕಿಟ್ಟು ಗುಂಡು ಹೊಡೆಯುವುದು ತುಂಬಾಜಾಣತನದ ಕೆಲಸ.  ಇದು ಕಷ್ಟದ ಕೆಲಸ ಎಂದುಕೊಳ್ಳುವವರ ಮುಂದೆ ನಾವು ಎಲ್ಲರಂತೆ ಎಂತಹ ಕಷ್ಟವಿದ್ದರು ಎದುರಿಸುವ ಶಕ್ತಿ ಮತ್ತು ಅಗತ್ಯವಾದ ಯುಕ್ತಿ ನಮ್ಮಲ್ಲೂ ಇದೆ ಎಂದು ತಿಳಿಸುವ ಕನಸು ನನ್ನದು.ಈ ಕನಸು ಹೊತ್ತ ಕಂಗಳು ಪತ್ರಿಕೊದ್ಯಮದಲ್ಲಿ ಬದುಕನ್ನು ರೂಪಿಸುತ್ತಿವೆ. ಕನಸಿಗೂ ಬದುಕಿಗೂ ಹಗಲು-ರಾತ್ರಿಯ ವ್ಯತ್ಯಾಸ ಬಿಟ್ಟರೆ ಎರಡು ಒಂದೇ. ಬದುಕು ಹಗಲು ಗನಸಾದರೆ, ಕನಸು ರಾತ್ರಿಯ ಬದುಕು. ಒಬ್ಬ ಒಳ್ಳೆಯ ಪತ್ರಕರ್ತೆಯಾಗಬೇಕು ಎಂಬುದು ನನ್ನ ಬದುಕಿನ ದೊಡ್ಡಕನಸು. ಕನಸಾಗಿ ಕಾಡಿದ ಕನಸು ಕಂಡ ಕನಸು ಸಾಕಾರಕ್ಕಾಗಿ ಶ್ರಮದಿಂದ ಕಲಿಯುತ್ತಿದ್ದೇನೆ.
manjunath gadgin

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...