Wednesday, 20 February 2019

ಬ್ರಹ್ಮಗಂಟು

ಮಂಜುನಾಥ ಗದಗಿನ

ಅಪರಿಚಿತರಿವರು, ಅಪರಿಚಿತರು
ಎಲ್ಲೋ ಹುಟ್ಟಿ, ಎಲ್ಲೋ
ಬೆಳೆದು ಮೂರು ಗಂಟಲ್ಲಿ
ಒಂದಾದವರು..
!
ಮೂರು ಗಂಟಲ್ಲೆ ನಂಟು ಕಂಡು
ನೆಂಟರಾದವರು,
ಪ್ರೀತಿ, ವಾತ್ಸಲ್ಯ, ಮಮತೆ
ಒಂಚೂರು ಹುಸಿ ಕೋಪ, ಹಟ
ಕಟ್ಟಿಕೊಂಡು ಮುಂದೆ ಸಾಗುವವರು.
!
ಕಷ್ಟ, ಸುಖಃಗಳಲ್ಲಿ ಜೊತೆಯಾಗಿ
ಸಂಸಾರ ಎಂಬ ಸುಂದರ
ಅರಮನೆಯಲ್ಲಿ ಚಂದದ ನಗು
ಚಲ್ಲಿ ಹೆಗಲಿಗೆ ಹೆಗಲು ಕೊಟ್ಟು
ಬಾಳ ನಡೆಸುವವರು, ಅವರೇ
ಬ್ರಹ್ಮ ಹಾಕಿದ ಗಂಟಿನಲ್ಲಿ
ಸತಿ, ಪತಿ ಆದವರು.
#ಎಂಜಿ..💪🏼🌹

No comments:

Post a Comment

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...