Tuesday, 15 November 2016

ವಾರೇ ಕಣ್ಣ ಹುಡ್ಗಿ, ಬಾರೇ ನನ್ನ ಬೆಡಗಿ...!!


ಮೌನ ಎಂಬ ಮಾಯಾಂಗನಿಯನ್ನು ಬೆನ್ನರಿ ಹೊರಟಿದ್ದಾಗ, ಇಳಿ ಸಂಜೆ ಎಂಬ ಕೆಂಪು ಹಾಸು ನಿಧಾನವಾಗಿ ಇಣುಕುತ್ತಿದ್ದ ಆ ಹೊತ್ತಲ್ಲಿ ಮನಸ್ಸಿನ ಮೌನಕ್ಕೆ ಮೂಲಾಮು ಹಚ್ಚಿದ ಆ ನಿನ್ನ ಕುಡಿನೋಟ ಇಂದೆಕೋ! ನನ್ನದೆಯ ಅಂರಂಗದಲ್ಲಿ ವಿರಹ ಗೀತೆಯೊಂದನನ್ನು ಹುಟ್ಟು ಹಾಕಿ ಗುನುಗುತ್ತಿದೆ.
ಆಗತಾನೆ, ಕ್ಲಾಸುಗಳನ್ನು ಮುಗಿಸಿ ಹೊರಗಡೆ ಹೆಜ್ಜೆ ಇಟ್ಟಾಗ ಕತ್ತಲೆಯು ಬೆಳಕನ್ನು ಅಟ್ಟಿಸಿಕೊಂಡು ಹೋಗುತ್ತಿತ್ತು. ಇದರ ಮಧ್ಯ ಗೆಳೆಯರ ಮಾತಿನ ಕಾದಾಟಾ, ಕಾಲು ಎಳೆದಾಟಗಳನ್ನು ಮಾಡುತ್ತಾ ಕಾಡು ಹರಟೆ ಹೋಡೆಯುತ್ತಾ ಲೋಕಾಭಿರಾಮವಾಗಿ ಬರುತ್ತಿದ್ದರು. ನಾನು ಮಾತ್ರ ಅವರ ಗೋಜಿಗೆ ಹೋಗದೆ, ನನ್ನದೆಯಾದ ಪ್ರಪಂಚದಲ್ಲಿ, ಯೋಚಿಸುತ್ತಾ ಬರುತ್ತಿದ್ದೆ.
ನಮ್ಮ ವಿಭಾಗವು ಕ್ಯಾಂಪಸ ಎಂಬ ಜಗತ್ತಿನಿಂದ, ಸಂಬಂಧ ಕಳೆಜಿಕೊಂಡ ಪುಟ್ಟ ರಾಷ್ಟ್ರದಂತಿರುವ ವಿಭಾಗ. ಇಲ್ಲಿಂದ ಕ್ಯಾಂಪಸ ಕಡೆಗೆ ಹೋಗ್ಬೇಕಾದ್ರೆ, ಅದೋನೋ, ಖುಷಿ, ಸುತ್ತಲ್ಲೂ ಹಚ್ಚ ಹಸಿರು, ಅದರ ಮಧ್ಯ ನಮ್ಮ ಪ್ರಯಣ ಎಷ್ಟು ಚಂದ ಅಲ್ವಾ. ಹ್ಞೂ..ಅವತ್ತು ಕೂಡಾ ಅದೇ ಆಹ್ಲಾದಕ ವಾತಾವರಣದ ಮಧ್ಯ ಪುಟ್ಟ ಹೆಜ್ಜೆಗಳನ್ನು ಹಾಕುತ್ತಾ ಬರುತ್ತಿದ್ದೆ. ಆ ಕಾಡ ಹಾದಿಯಲ್ಲಿ ಅಂದು ಕಂಡಳೇ ನೀನು. ಆಗತಾನೆ ಕವಿವಿಯ ಪ್ರಕೃತಿ ಮೈಗೊಡವಿ ಎದ್ದು, ಹೊಸತನದಿಂದ ಶೋಭಿಸುತ್ತಿದ್ದಳು. ಆ ಕ್ಷಣಕ್ಕೆ ಕಂಡ ನಿನ್ನ ಮುಖ ಕೂಡಾ, ಮರ್ಕ್ಯೂರಿ ಬಲ್ಪನ ಹೊಳಪಿನಂತೆ ಕಂಡಿತು.
ನಾಲ್ಕಾರು ನಿಮ್ಮ ಗೆಳತಿಯರ ಜೊತೆ ತಳಕುತ್ತಾ..ಬಳಕುತ್ತಾ..ಬರುತ್ತಿದ್ದ ನಿನ್ನನ್ನು ನೋಡಿದೆ. ಅದೋನೋ! ಪರವಸೆನಾದೇನು, ನೀ ನೋಡು ಮುನ್ನವೆ ಎಂಬ ಯೋಗರಾಜ ಭಟ್ಟರ ಹಾಡು ಎದೆಯಲಿ ಸದ್ದು ಮಾಡಲು ಶುರುಮಾಡಿತು. ನೀನು ಗೆಳತಿಯರ ಜೊತೆ ಮಾತನಾಡುತ್ತಿದ್ದಾಗ ನೀನು ಮಾಡುತ್ತಿದ್ದ ಹಾವ-ಭಾವಗಳು, ಆ ನಿನ್ನ ಮಾತುಗಾರಿಕೆ ನನ್ನರ್ಧ ಕೊಂದು ಹಾಕಿದವು. ಕಾರಣವೇ ಇಲ್ಲದೇ ಗೋಳ್ ಎಂದು ನಗುತ್ತಿದ್ದ, ನಿನ್ನ ಆ ನಗುವಿನ ಸದ್ದು, ಪದೇ ಪದೇ ಜಾರಿ ಬಿಳುತ್ತಿದ್ದ ನಿನ್ನ ಮುಂಗುರಳುಗಳು ಇಂದು ಕನಸಿನಲ್ಲೂ ಕಾಡುತ್ತಿವೆ.
ಕ್ಯಾಂಪಸ ಎಂದ ಜಗತ್ತು ಬಂದಾಕ್ಷಣ ನಿನ್ನ ಸಂಗಡಿಗರು ತಮ್ಮ ದಾರಿಗಳ ಕಡೆಗೆ ಹೋದಾಗ. ನೀನೊಬ್ಬಳೆ ಕಪ್ಪು ಹಾಸಿಗೆ ಮಧ್ಯ ಯುವ ರಾಣಿಯ ಹಾಗೆ ನಡೆದುಕೊಂಡು ಹೋಗುತ್ತಾ ಇದ್ದೆ. ನಾನು ಕೂಡಾ ನಿನ್ನನ್ನೆ ಅನುಸರಿಸುತ್ತಾ ಬಂದು ಬಸ್ಟಾಫನಲ್ಲಿ ನಿಂತುಕೊಂಡು, ನಿನ್ನ ಒಂದು ನೋಡಕ್ಕಾಗಿ ಹಪಹಪಿಸುತ್ತಿದ್ದೆ. ಎಷ್ಟೋ ಹೊತ್ತಾದ್ರು, ನೀ ನನ್ನನ್ನು ನೋಡದೇ ಇದ್ದಾಗ ಆ ದೇವರಿಗೆ ಅಫ್ಲೀಕೇಶನ್ ಹಾಕಿ  ದೇವರೆ ಇವಳು ನನ್ನ ನೋಡೋ ಹಾಗೆ ಮಾಡಪ್ಪಾ ಎಂದು ಕೇಳಿಕೊಂಡೆ. ಅದೇನೋ! ನನ್ನ ಪ್ರಾರ್ಥನೆ ಆ ದೇವರಿಗೆ ಕೇಳಿಸಿರ‌್ಬೇಕು. ಅವಳು ಸಡನಾಗಿ ನನ್ನ ಕಡೆ ವಾರೆಗಣ್ಣಿನಿಂದ ನೋಡಿಯೇ ಬಿಟ್ಟಳು. ಹೀಗೆ ಅವಳು ಪದೇ ಪದೇ ನನ್ನು ವಾರೆಗಣ್ಣಿನಿಂದ ನೋಡುತ್ತಾ ನಿಂತುಕೊಂಡಳು. ಅಷ್ಟೋತ್ತಿಗಾಗಲೆ ಬಸ್ ಬಂದೇ ಬಿಟ್ಟಿತು. ಅವ್ಳ ಬಸ್ ಹತ್ತ ಬೇಕಾದ್ರೆ ಪೂರ್ಣ ತಲೆಯತ್ತಿ , ಒಂದು ಕಣ್ಣ ಸನ್ನೆ ಮಾಡಿ ನನ್ನನ್ನು ಬಿಳ್ಕೋಡಬೇಕ್ರಾದೆ, ಅದು ನನಗೆ ಜಗತ್ತಿನ ಎಂಟನೇ ಅದ್ಭುತದ ಹಾಗೆ ಕಾಣಿಸಿತು. ಅಂದು ಬೇಟಿಯಾದ್ಳು ಇನ್ನೂವರೆಗೂ ಮೀಟ್ ಆಗಿಯೇ. ಇಲ್ಲಾ! ನಿನ್ನ ನೋಡುವಿಕೆಗಾಗಿ ನನ್ನ ಮನ ಅಂಕೆ ಇಲ್ಲದ, ಮಂಗನ ತರ ಜಿಗಿದಾಡುತ್ತಿದೆ. ಬೇಗ ಮೀಟ್ ಆಗಿ ಅದಕ್ಕೋಂದು ಅಂಕೆ ಹಾಕುಬಾ...!!!!!!
ಮಂಜುನಾಥ ಗದಗಿನ
8050753148

Friday, 21 October 2016

ಇವರು ಮಾಡಿದ ತಪ್ಪಾದರೂ ಏನು?



   ಬದುಕು ಎಷ್ಟೋಂದು ಸೂಚಿಗ ನೋಡಿ, ತುತ್ತು ಅನ್ನಕ್ಕಾಗಿ, ಮೈ ಮುಚ್ಚೋ ಬಟ್ಟೆಗಾಗಿ, ಸಾವಧಾನವೇ ಇಲ್ಲದೆ ಹಗಲಿರುಳು ದುಡ್ಡಿಗಾಗಿ ಧನ ದುಡಿದ ಹಾಗೆ ಇದ್ದ ಬದ್ದ ಒತ್ತಡವನ್ನು ಮೈ ಮೇಲೆ ಹಾಕಿಕೊಂಡು ದುಡಿಯುತ್ತಿವೆ. ಇದೇಲ್ಲಾ ಯಾರಿಗೊಸ್ಕರ ಅಂತ ಹಾಗೆ ದುಡಿಯುವವರನ್ನ ಒಂದು ಮಾತು ಕೇಳಿ ಅವರು ನೀಡುವ ಉತ್ತರ ಒಂದೇ  ಈನ್ಯಾರಿಗೆ ನಮ್ಮ ವೃದ್ದಾಫ್ಯದಲ್ಲಿ ನಮ್ಮನ್ನ ನೋಡಿಕೊಳ್ಳೊ ಮಕ್ಕಳಿಗೆ  ಎಂಬ ಉತ್ತರ ನೀಡುವದು ಗ್ಯಾರಂಟಿ. ಆದರೆ ಆ ಮಕ್ಕಳು ದೊಡ್ಡವರಾದ ಮೇಲೆ, ತಂದೆ-ತಾಯಂದಿರನ್ನ ಎಷ್ಟರ ಮಟ್ಟಿಗೆ ಚನ್ನಾಗಿ ನೋಡ್ಕೋಳ್ತಾರೋ! ಆ ದೇವರಿಗೆ ಗೊತ್ತು. ಆದರೆ ಕೆಲವೊಂದಿಷ್ಟು ಮಕ್ಕಳು ತಮ್ಮ ಸಾಕಿದ ತಂದೆ-ತಾಯಿಗಳನ್ನು  ಕಾಲ ಕಸವನ್ನಾಗಿಸಿ ಮನೆ ಬಿಟ್ಟು ಹಾಕುತ್ತಾರೆ. ಪಾಪಾ ಆ ಮುಗ್ದ ಜೀವಗಳು ವಿಧಿಯಿಲದ್ಲೆ ಶಹರಗಳ ಕಡೆ ಮುಖ ಮಾಡಿ ಈ ರೀತಿ ಜೀವನ ಸಾಗಿಸುತ್ತಿರುವದು ಕೆದರಕ.
  ಹೌದು! ಇಂತಹ ಜನರು ಎಲ್ಲೆಂದರಲ್ಲಿ ಕಾಣಸಿಗುತ್ತಾರೆ. ಆದರೆ ಇವರು ಯಾರು? ಎಲ್ಲಿಂದ ಬಂದವರು ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಹೀಗೆ ಮಹಾನಗರಗಳಿಗೆ ಬರುವವರು ವೃದ್ದರೇ ಹೆಚ್ಚಾಗಿದ್ದಾರೆ. ಆದರೆ ಜನರನ್ನು ಕಾಡುವ ಪ್ರಶ್ನೆಗಳು ಎರಡು. ಇವರನ್ನು ಇಲ್ಲಿ ತಂದು ಬಿಡುತ್ತಿರುವವರು ಯಾರು? ಅದರಲ್ಲೂ ವೃದ್ದರನ್ನು ತಂದು ಬಿಡುತ್ತಿರುವುದು ಯಾಕೆ? ಇಂತಹ ಪ್ರಶ್ನೆಗಳು ನಾಗರಿಕ ಸಮಾಜದಲ್ಲಿ ಪ್ರಶ್ನೆಗಳು ಪ್ರಶ್ನೆಗಳೇ ಆಗಿ ಉಳಿದಿವೆ.
   ಆದರೆ ವೃದ್ದರನ್ನು ತಂದು ಬಿಡುತ್ತಿರುವುದಕ್ಕೆ ಕಾರಣಗಳು ಹಲವು ಇರಬಹುದು. ಆದರೆ ವಯಸ್ಸಾದವರ ಜೊತೆ ಎಲ್ಲಿ ಇರುವದು, ಅವರ ಕಾಟ ಹೇಗೆ ಸಹಿಸಿಕೊಳ್ಳುವುದು ಎಂದು ಹೆತ್ತ ಮಕ್ಕಳು ಅಥವಾ ಸಂಬಂಧಿಕರೆ ತಂದು ಬಿಡುತ್ತಿದ್ದಾರೆ ಎಂಬ ವಾದ ಒಂದು ಕಡೆ ಕೇಳಿ ಬರುತ್ತಿರುವುದು ಮಾತ್ರ ನಿಜ. ಮಕ್ಕಳನ್ನು ಹೆತ್ತು-ಹೊತ್ತು, ಸಾಕಿ, ಸಲುಹಿ, ಅವರು ಮಾಡಿದ ಅದೆಷ್ಟೋ ತಪ್ಪುಗಳನ್ನು ಮನ್ನಿಸಿ, ಅವರಿಗೊಂದು ಉಜ್ವಲವಾದ ಭವಿಷ್ಯ ನಿರ್ಮಾಣ ಮಾಡಿರುತ್ತಾರೆ. ಅದೇ ಮಕ್ಕಳು ದೊಡ್ಡವರಾದ ಮೇಲೆ ತಂದೆ-ತಾಯಿ ತಮಗೊಸ್ಕರ ಮಾಡಿದ ತ್ಯಾಗ ಮರೆತು, ಅವರು ಮಾಡಿದ ಸಣ್ಣ-ಪುಟ್ಟ ತಪ್ಪುಗಳಿಗೂ ಬೈದು,ಹಿಯಾಳಿಸಿ, ಮನೆ ಬಿಟ್ಟು ಹೊರಹಾಕುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ. ಇಂತಹವುಗಳಿಗೆ ಜ್ವಲಂತ ಸಾಕ್ಷಿ ಎಂಬಂತೆ ನಗರದ ಪ್ರತಿಯೊಂದು ಗಲ್ಲಿ,ಗಲ್ಲಿಗಳಲೂ ಇಂತಹ ವೃದ್ದರು ಕಾಣಸಿಗುತ್ತಾರೆ.
 ವೃದ್ದರನ್ನು ಮಹಾನಗರಗಳಲ್ಲಿ ಬಿಟ್ಟು ಹೋದ ಸಂಬಂಧಿಕರು ಅಥವಾ ಮಕ್ಕಳು ಆ ಮೇಲೆ ಅವರು ಏನಾದರೂ ಎಂದು ತಲೆಹಾಕಿಕೂಡ ನೋಡುವುದಿಲ್ಲ. ಆದರೆ ಗೊತ್ತು-ಗುರಿಯಿಲ್ಲದ ಊರಿಗೆ ಬಂದ ವೃದ್ದರೂ ಏನು ಮಾಡಬೇಕೆಂದು ತಿಳಿಯದೆ, ಮಾನಸಿಕವಾಗಿ ಕುಗ್ಗಿ ಮಾನಸಿಕ ರೋಗಿಗಳಾಗಿ, ಜಗತ್ತಿನ ಸಂಪರ್ಕ ಕಳೆದುಕೊಂಡು ನಮ್ಮದೇ ಲೋಕದಲ್ಲಿ ಇದ್ದು ಬಿಡುತ್ತಿದ್ದಾರೆ.
  ಇವರ ಈ ಸ್ಥಿತಿ ನೋಡಿ ಜನರು ಅಯ್ಯೋ ಪಾಪವೆಂದು 1 ರೂ ಅಥವಾ 2 ರೂ, ಹಾಕಿ ಹೋಗುತ್ತಾರೆ, ಇನ್ನೂ ಕೆಲವರು ಇವರ ಮುಂದೆ ಹಾದು ಹೋಗಬೇಕಾದರೆ ಮೂಗು ಮುಚ್ಚಿಕೊಂಡು ಹೋಗುತ್ತಾರೆ. ತಾಸು ಗಂಟಲೇ ಹೋಟೆಲ್ ಮುಂದೆ ನಿಂತರೆ, ಅವರು ನೀಡುವ ಹಳಸಿದ ಊಟವೇ ಇವರಿಗೆ ಮೃಷ್ಟಾನ್ನವಾಗಿರುತ್ತದೆ. ಇವರಿಗೆಂದು ಒಂದು ಸೂರು ಇಲ್ಲ. ಎಲ್ಲೆಂದರಲ್ಲಿ ಮಲಗಿ ಏಳುತ್ತಾರೆ. ಇನ್ನೂ ಮೈತುಂಬ ಗಾಯಗಳಾಗಿದ್ದರು, ಅದೇ ಸ್ಥಿತಿಯಲ್ಲೇ ಜೀವನ ಸಾಗಿಸುತ್ತಿದ್ದಾರೆ.
   ಇಂತಹ ಜನರ ಸ್ಥಿತಿ ನೋಡಿ, ಎಂತವರ ಹೃದಯ ಕೂಡಾ ಮರುಗದೇ ಇರದು, ಆದರೇ ಪ್ರಜ್ಞಾವಂತ ಜನರ ಪ್ರಶ್ನೆ ಇವರು ಮಾಡಿದ ತಪ್ಪಾದರೂ ಏನು? ಎಂಬುದು.
 ಮಂಜುನಾಥ ಗದಗಿನ
8050753148

 

Tuesday, 11 October 2016

ಮತ್ತೆ ಹುಟ್ಟಿ ಬಾ ನನ್ನಪ್ಪ ..


ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯೇಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೆ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತಿರುಗುತ್ತಿದ್ದ. ಆದರೆ, ಈಗ ಅಪ್ಪ ನನ್ನೊಟ್ಟಿಗಿಲ್ಲ. ಆದರೆ, ಅಪ್ಪ ಕೊಟ್ಟು ಹೋದ ನೆನಪುಗಳು ಮಾತ್ರ ಎಡಬಿಡದೇ ಕಾಡುತ್ತಿವೆ.
ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೆ ಪಾರ್ಶ್ವವಾಯು ಹೊಡು ಮೂಲೆ ಗುಂಪಾಗಿ ಹೋದದ್ದು ಈಗ ಇತಿಹಾಸ ಮಾತ್ರ. ಪಾಶ್ವವಾಯು ತಗುಲಿ ಬರೋಬ್ಬರಿ 12 ವರ್ಷ ನನ್ನಪ್ಪ ನನ್ನೊಟ್ಟಿಗೆ ಇದ್ದದ್ದು ಮಾತ್ರ ವಿಸ್ಮಯ. ಹೌದು! ನಮ್ಮ ಊರಲ್ಲೇ ಪಾರ್ಶ್ವವಾಯು ತಗುಲಿ 12 ವರ್ಷ ಜೀವಿಸಿದ್ದ ಒಂದೇ ಒಂದು ಕುರುಹುಗಳು ಸಿಗುವುದಿಲ್ಲ. ಹೀಗಂತ ಊರಿನವರೇ ಮಾತನಾಡಿಕೊಳ್ಳುತ್ತಿದ್ದರು. ಅಪ್ಪನ ನಂತರ ನಾಲ್ಕೈದು ಜನರಿಗೆ ಪಾರ್ಶ್ವವಾಯು ಹೊಡೆಯಿತು. ಅವರ‌್ಯಾರು ಬಹುದಿನ ಬದುಕದೇ ಶಿವನ ಪಾದ ಸೇರಿಕೊಂಡರು. ಆದರೆ, ಅಪ್ಪನದ್ದು ಗಟ್ಟಿ ಜೀವ.
ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು,  ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಃಖಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ.
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ. ಈಗ ಊರಿಗೆ ಹೋದರೆ, ಹಸನ್ಮುಖಿಯಾಗಿ ಕುರ್ಚಿ ಮೇಲೆ ಕುಳಿತು ಸ್ವಾಗತಿಸಲು ನನ್ನಪ್ಪ ನನ್ನೊಟ್ಟಿಗಿಲ್ಲ. ಅಪ್ಪ ಇಲ್ಲದ ಬದುಕು ಇಂದೇಕೋ ಬರಿದಾಗಿ ಕಾಣಿಸುತ್ತಿದೆ. ಅಪ್ಪನ ನೆನೆಪುಗಳು ಮೈಯಲ್ಲ ಅಪ್ಪಿಕೊಂಡು ಕಾಡಿ, ಅರೆಬರೆ ನೆನೆಪುಗಳನ್ನು ಕೆಣಕುತ್ತಿವೆ. ಏನೇ ಆಗಲಿ ಮತ್ತೆ ಅಪ್ಪ ಮತ್ತೆ ಹುಟ್ಟಿ ಬಾ..
ಮಂಜುನಾಥ ಗದಗಿನ
8050753148 

Sunday, 4 September 2016

ಒಂದಕ್ಷರ ಕಲಿಸಿದಾತ ಗುರುವೇ..!!

ಒಂದು ಗುರಿ, ಆ ಗುರಿ ಹಿಂದೆ ಒಬ್ಬ ಗುರು ಇದ್ದರೆ ಎಂತಹ ಕಷ್ಟಗಳಿಗೂ ಸೆಡ್ಡು ಹೊಡೆದು ಮುನ್ನುಗ್ಗಿ ಸಾಧನೆ ಶಿಖರಕ್ಕೆ ಮುತ್ತಿಕ್ಕ ಬಹುದು. ಆದರೆ ಗುರಿ, ಗುರು ಇಲ್ಲದ ಜೀವನ ದೋಣಿಯಿಲ್ಲದ ನಾವಿಕನಂತೆ. ಕೊನೆಯಿಲ್ಲದ ಅಲೆದಾಟ, ಪರದಾಟ. ಹಾಗೆ ನನ್ನ ಜೀವನವು ದೋಣಿಯಿಲ್ಲದ ನಾವಿಕನಂತೆ ದಿಕ್ಕು ತೋಚಿದೇ, ಮುಳುಗಿ ಹೋಗುತ್ತಿತ್ತು. ಈ ಸಮಯದಲ್ಲಿ ಕೈ ಹಿಡಿದು ಕರೆ ತಂದು ಗುರಿ ಹಾಗು ಗುರುವಾಗಿ ಮಾರ್ಗದರ್ಶನ ತೋರಿಸಿ,ಬದುಕಿಗೆ ಬೆಳಕಾದವರು ನನ್ನ ಗುರು.
ಬದುಕಿನ ಬಡತನ ಎಂಬ ಕತ್ತಲೆಯ ಕೆಳಗೆ ಕೊಳೆತು ಹೋಗುತ್ತಿದ್ದ ಬದುಕು. ಕಲಿಬೇಕು, ಸಾಧಿಸಬೇಕು ಎಂಬ ಹುಚ್ಚು ಹಂಬಲಗಳು ಮನದಲ್ಲಿ ಮನೆ ಮಾಡಿದ್ದವು. ಆದರೆ ಆ ಹಂಬಲಕ್ಕೆ ಬೆಂಬಲವಿಲ್ಲದೇ, ಕನಸುಗಳು ಸೊರಗಿ ಹೋಗುತ್ತಿದವು. ಇದೇ ಸಮಯಕ್ಕೆ ಕನಸುಗಳಿಗೆ ಬಣ್ಣ ತುಂಬಿ, ರಂಗು ರಂಗಾಗಿಸಿ ರೆಕ್ಕೆ ಬಲಿತ ಹಕ್ಕಿಯಂತಾಗಿಸಿದ್ದು ಇದೇ ನನ್ನ ಗುರು.
ಇದು ಐದು ವರ್ಷಗಳ ಹಿಂದಿನ ಮಾತು. ನಾನು ಪಿಯುಸಿ ಓದುತ್ತಿದ್ದ ಸಮಯ. ಮನೆಯಲ್ಲಿ ಬಡತನ ಕಾಲು ಮುರಿದುಕೊಂಡು ಬಿದ್ದಿದ್ದರು ಸಹ ಕಲಿಬೇಕು ಎಂಬ ಅಧಮ್ಯ ಆಸೆ. ಈ ಆಸೆಯಿಂದಲೇ ಪ್ರತಿದಿನ ಕೂಲಿ ಮಾಡಿ ಕಾಲೇಜಿಗೆ ಹೋಗುತ್ತಿದೆ. ಒಂದು ಚಿಕ್ಕ ಆಸೆ ಎಂತಹ ಕಾರ್ಯಕ್ಕೂ ಪ್ರೇರೆಪಿಸುತ್ತದೆ ಅಲ್ವಾ! ಹೌದು! ನನ್ನ ಕಲಿಬೇಕು ಎಂಬ ಆಸೆ ನನ್ನ ಎಲ್ಲ ಕಷ್ಟಗಳಿಗೂ ಕಾವಲಾಗಿತ್ತು. ಇದೇ ಧೈರ್ಯದಿಂದ ಚನ್ನಾಗಿ ಓದಿ ಕ್ಲಾಸ್‌ಗೆ ಪ್ರಥಮ ಸ್ಥಾನ ಪಡೆದುಕೊಂಡೆ. ಆದರೆ ಮುಂದೆ ಕಲಿಬೇಕು ಎಂಬ ಬಯಕೆ ಇದ್ದರೂ ಸಹ ಆರ್ಥಿಕ ತೊಂದರೆಯಿಂದ ಕಲಿಯಲಾಗದ ಪರಸ್ಥಿತಿ. ಇಲ್ಲಿಗೆ ನನ್ನ ಕನಸಿನ ರೆಕ್ಕೆಗಳು ಕತ್ತರಿಸಿ ಬೀಳುತ್ತವೆ. ಎಂದು ಜೀವನದ ಮೇಲೆ ಜಿಗುಪ್ಸೆ ಹುಟ್ಟಿತ್ತು.
ಇದೇ ಸಮಯಕ್ಕೆ ಗುರು,ಮಾರ್ಗದರ್ಶಕ,ಪೋಷಕ ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಸ್ನೇಹಿತನಂತೆ ನನ್ನ ಕನಸಿಗೆ, ಬದುಕಿಗೆ ಹೇಗಲಾಗಿ, ನಿಂತು. ಪ್ರತಿದಿನ ಕೈತುತ್ತು ಹಾಕಿದ್ದು ನನ್ನ ಮಾವ. ಒಂದು ಚಿಕ್ಕ ಹಳ್ಳಿಯಲ್ಲಿ, ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನನ್ನು ತನ್ನ ಕಡೆ ಕರೆಸಿಕೊಂಡು, ವಿಧ್ಯೆ,ಬುದ್ದಿ,ಬಟ್ಟೆ, ಊಟ ತನ್ನೊಟ್ಟಿಗೆ ಇರಲು ಆಶ್ರಯ ಕೊಟ್ಟು ನನ್ನ ಬಾಳಿನಲ್ಲಿ ಬೆಳಕಾಗಿ ಜೀವನಕ್ಕೆ ಗುರುವಾಗಿ, ಮಾರ್ಗದರ್ಶನ ನೀಡುತ್ತಿದ್ದಾರೆ ಈ ನನ್ನ ಮಾವ.
ಗುರು ಎಂದರೆ, ಕೇವಲ ಶಾಲೆಯಲ್ಲಿ ಹೇಳಿಕೊಡುವ ಶಿಕ್ಷಕ ಅಷ್ಟೇ ಅಲ್ಲ. ಮನೆಯಲ್ಲಿಯ ತಂದೆ-ತಾಯಿ, ಅಜ್ಜ-ಅಜ್ಜಿ,  ಬಂಧು-ಬಳಗ, ಸ್ನೇಹಿತ, ದಿನಾಲೂ ನಾವು ನೋಡುವ, ಮಾತನಾಡುವ ಜನರನ್ನೂ, ಸಮಾಜದಲ್ಲಿ ಎತ್ತರಕ್ಕೆರಿದ ಮಹನೀಯರನ್ನು ಗುರುಗನ್ನಾಗಿ ಭಾವಿಸಿದರೆ, ಎತ್ತರಕ್ಕೆ ಬೆಳೆಯಲು ಸಾಧ್ಯ. ಗುರುವಿನ ಗುಲಾಮನಾಗದೇ, ದೊರೆಯದೇನ್ನ ಮಕುತಿ ಎಂಬ ಹಿರಿಯ ದಾರ್ಶನಿಕರ ಮಾತಿನಂತೆ ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ, ಆ ಗುರಿ ಸಾಧನೆಗೆ ಗುರುವಿನ ಮಾರ್ಗದರ್ಶನ ಅವಶ್ಯಕ ಎಂದು ಹೇಳಿದ್ದಾರೆ. ಅದೇ ರೀತಿ ನನ್ನ ಜೀವನದಲ್ಲಿ ಎಲ್ಲವನ್ನು ತಿಳಿಸಿಕೊಟ್ಟಿದ್ದು ಇದೇ ನನ್ನ ಮಾವ.ಇಂದು ಒಂದಿಷ್ಟು ತಿಳುವಳಿಕೆ, ಜ್ಞಾನ ಸಂಪಾದಿಸಿ ಸಮಾಜವನ್ನು ಎದುರಿಸಲು ಕಲಿತ್ತಿದ್ದೇನೆ ಎಂದರೆ ಅದಕ್ಕೆ ಇವರೇ ಕಾರಣ.
ಸಮಾಜದಲ್ಲಿ ಯಾವ ರೀತಿಯಾಗಿ ನಡೆದುಕೊಳ್ಳಬೇಕು, ಯಾವ ರೀತಿಯಾಗಿ ಮಾತನಾಡಬೇಕು ಎಂದು ತಿಳಿದ ನನಗೆ ಎಲ್ಲವನ್ನು ತಿಳಿಸಿ ಮಾರ್ಗದರ್ಶನ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ಶಿಕ್ಷಣದ ಖರ್ಚು ವೆಚ್ಚ, ನನ್ನ ದಿನದ ಖರ್ಚಿಗೆ ದುಡ್ಡು ಕೊಟ್ಟು ತಂದೆ-ತಾಯಿಗಿಂತಲೂ ಚನ್ನಾಗಿ ನೋಡಿಕೊಂಡು, ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಇವರ ಈ ಸಹಾಯ, ಪ್ರೀತಿ, ವಿಶ್ವಾಸಗಳನ್ನು ಈ ಜನ್ಮದಲ್ಲಿ ತೀರಿಸಿಲು ನನ್ನಿಂದಾಗದು. ಆದರೆ ಸೂಕ್ತ ಸಮಯದಲ್ಲಿ ಗುರುವಾಗಿ ಸಿಕ್ಕು, ಗುರಿ ತೋರಿ ಸಾಧನಗೆ ದಾರಿ ತೋರಿದ ಈ ನನ್ನ ಜೀವನದ ಗಾಡ್ ಪಾರ್ಧರ್‌ಗೆ ನನ್ನದೊಂದು ಸಲಾಂ.
ಮಂಜುನಾಥ ಗದಗಿನ
8050753148

Wednesday, 6 July 2016

ಭಾವಾಂತರಂಗವ ಬೀಡದ ಅಂತರಂಗ..!


  ಮಂಜುನಾಥ ಗದಗಿನ


ಮನಸ್ಸಿನಲ್ಲಿ ಅದೋನೋ! ಪುಳಕ್,
ಭಾವನೆಗಳಿಲ್ಲಿ ಅದೇನೋ ತಳುಕ,
ಹೃದಯದಲ್ಲಿ ಅದೇನೋ ನಡುಕ,
ಕೊನೆಗೆ ಸುರಿದದ್ದು ಕಣ್ಣಿರ ಜಳಕ.
                                                                                         ಎಂಜಿ..   
ಸಂಪ್ರದಾಯಗಳು ಕೂಡಾ ಕೇಲವೊಂದು ಸಾರಿ ಮನಸ್ಸಿಗೆ ನೋವು-ನಲಿವನ್ನು ನೀಡುತ್ತವೆ ಅಲ್ವಾ! ಈ ಸಂಪ್ರದಾಯಗಳು ಇರದೇ ಹೋಗಿದ್ದರೆ ಇಂದು ನಾವೇಲ್ಲರೂ ಒಟ್ಟಿಗೆ ಕೂಡುತ್ತಿರಲಿಲ್ಲ, ಭಾವಾಂತರಂಗದಲ್ಲಿ ತೇಲಿ ಸುಂದರ ಕ್ಷಣಗಳನ್ನು ಸೃಷ್ಠಿಸಿ ಇತಿಹಾಸದ ಪುಟಗಳಲ್ಲಿ ತೇಲಿಬಿಡುತ್ತಿರಲಿಲ್ಲ. ಮೋಜು-ಮಸ್ತಿಯೊಂದಿಗೆ ಬೇರೆಯುತ್ತಿರಲಿಲ್ಲ. ಕೊನೆಗೆ ಪ್ರೀತಿ ಅಪ್ಪುಗೆಯೊಂದಿಗೆ ಮರಳುತ್ತಿರಲಿಲ್ಲ.
     ಹೌದು! ಅದು ಒಂದು ಅದ್ಭುತ್ ಸುಂದರ ಬಿಳ್ಕೋಡುಗೆಯ ಸಂಪ್ರದಾಯ ಕಾರ್ಯಕ್ರಮ. ಹೊಸತನ ಸ್ವಾಗತಿಸುವದು. ಹಳೇಯದನ್ನ ಬಿಳ್ಕೋಡುವದು ನಮ್ಮ ಸಂಪ್ರದಾಯ.  ಆ ಸಭಾಂಗಣದ ತುಂಬೇಲ್ಲಾ ಬಣ್ಣ-ಬಣ್ಣದ ಬಲೂನ್‌ಗಳು, ಅಲ್ಲಲ್ಲಿ ಮಿನುಗುತ್ತಿದ್ದ ನಕ್ಷತ್ರಗಳು, ಮಧ್ಯ ಮಧ್ಯ ಸದ್ದು ಮಾಡುತ್ತಿದ್ದ ಡಿಜೆಗಳು ಇಡೀ ವಾತಾವರಣಕ್ಕೆ ರಂಗು ತಂದಿದ್ದವು. ಇನ್ನೂ ಹುಡುಗಿಯರು ಕಲರ್ ಕಲರ್ ಡ್ರೆಸ್ ಹಾಕ್ಕೊಂಡು ಹುಡುಗರ ಎದೆಯಲ್ಲಿ ಜಗಮಗಿಸುತ್ತಿದ್ದರು.
    ಕಾರ್ಯಕ್ರಮ ಯಾವ ರೀತಿಯಾಗಿ ನಡೆಯುತ್ತದೆ, ಯಾರು? ಹೇಗೆ ಮಾತನಾಡುತ್ತಾರೆ. ಏನೆಲ್ಲ ಅಡುಗೆ ಮಾಡಿಸಿದ್ದಾರೆ ಎಂಬ ಪುಳಕ್‌ದೊಂದಿಗೆ ಆರಂಭವಾದ ನಮ್ಮ ಕಾರ್ಯಕ್ರಮ ಅಧ್ಯಕ್ಷರ ಹಾಗೂ ಅತಿಥಿಗಳ ಭಾಷಣದೊಂದಿಗೆ ಸಂಪ್ರದಾಯಿಕವಾಗಿ ಮುಗಿಯಿತು. ಅನಂತರ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಬ್ಬಾ..! ಅಬ್ಬಾ..!  ಊಟ ಮಾತ್ರ ಯಾವ ಫೈ ಸ್ಟಾರ್ ಹೋಟೆಲ್‌ನ ಊಟಕ್ಕೂ ಕಡಿಮೆ ಇರಲಿಲ್ಲ. ಹುರಕ್ಕಿ ಹೋಳಗಿ, ಪರೋಟಾ, ಎರಡು ತರಹದ ಪಲ್ಯ, ಹಪ್ಪಳ, ಮೊಸರ ಅನ್ನ, ಗೀ ರೈಸ್ ಹಾ..ಹಾ.. ನೆನಸಿಕೊಂಡರೆ ಹೊಟ್ಟೆ ತಾಳ ಹಾಕಲು ಪ್ರಾರಂಭಿಸುತ್ತದೆ.
    ಇದಾದ ನಂತರ ನಡೆದದ್ದು ಮನರಂಜನಾ ಕಾರ್ಯಕ್ರಮ, ಒಂದು ಕಾರ್ಯಕ್ರಮ ನೆನಪಿನಲ್ಲಿ ಉಳಿಯ ಬೇಕಾದರೆ ಅಲ್ಲಿ ಮೋಜು-ಮಸ್ತಿ ಇರಲೇ ಬೇಕು. ಅದೇ ರೀತಿ ನಮ್ಮ ಜೂನಿಯರ‌್ಸಗಳು ನಮಗೆ ನಾನಾ ವಿಧದ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಕೆಲವೊಂದು  ಚೀಟಿಯಲ್ಲಿ ಆಟಗಳ ಹೆಸರಗಳನ್ನು ಬರೆದು ಇಟ್ಟಿದ್ದರು. ಸ್ಪರ್ಧೆ ಪ್ರಾರಂಭವಾದ ನಂತರ ಮೊದಲ ಸಾಲಿನಲ್ಲಿ ಕುಳಿತಿದ್ದ ನಮ್ಮ ಆರು ಜನ ಸಹಪಾಠಿಗಳನ್ನು ಕರೆದು ಚೀಟಿ ತೆಗೆಯಲು ಹೇಳಿದರು. ಅವರಿಗೆ ಬಂದ ವಿಷಯ ಮೇಕಫ್ ಮಾಡುವದು. ಹೌದು! ಆರು ಜನರಲ್ಲಿ ಮೂರು ಜನ ಕುಳಿತುಕೊಳ್ಳಬೇಕು, ಮೂರು ಜನ ಮೇಕಫ್ ಮಾಡಬೇಕು. ಇಲ್ಲೇ ಬಂದದ್ದು ನೋಡಿ ಅವರಿಗೆ ತಳುಕ. ಎಲ್ಲರೂ ಮೇಕಫ್ ಮಾಡ್ತಿನಿ ಅನ್ನೋರೆ ಆಗಿದ್ದರು. ಮೇಕಫ್ ಮಾಡಿಸಿಕೊಳ್ಳಲು ಯಾರು ಸಿದ್ಧರಿರಲಿಲ್ಲ. ಕೊನೆಗೆ ಅವರ ನಡುವೆ ಹೊಂದಾಣಿಕೆಯಾಗಿ ಮೇಕಫ್ ಮಾಡಿದ್ರು ನೋಡಿ ಏನ್! ಅದ್ಭುತ್ ಅಂತೀರಾ! ನೋಡೋಕೆ ಎರಡು ಕಣ್ಣು ಸಾಲದಾಗಿದ್ದು. ಹೀಗೆ ವಿಭಿನ್ನ ವಿಶಿಷ್ಟ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನಮಗೆ ಮನರಂಜನೆ ಒದಗಿಸಿದರು. ಆದರೆ ಇಷ್ಟೋತ್ತಿಗಾಗಲೇ ಭಾವನೆಗಳ ಕಟ್ಟೆ ಒಡೆದು ಕೆಲವರ ಕಣ್ಣುಗಳು ಜಳಕ ಮಾಡಲು ಶುರುವಿಟ್ಟಿಕೊಂಡವು. ಆದರೆ ಕೆಲವೊಂದಿಷ್ಟು ಜನರು ಏನು ಮಾಡಬೇಕು ಎಂದು ತಿಳಿಯದೇ ಭಾವಾಂತರಂಗದಲ್ಲಿ ಅಲ್ಲೋಲ್ ಕಲ್ಲೋಲಕ್ಕೆ ಒಳಗಾಗಿದ್ದರು.
    ನೀವು ಕೊಟ್ಟ ಆ ಪುಟ್ಟ ಪೋಟೋ. ಮನಸ್ಸಿನ ಪುಟಗಳಿಲ್ಲಿ ಸದಾ ನಲಿದಾಡುತ್ತಿರುತ್ತದೆ. ಆ ಪುಸ್ತಕ್ ನಿಮ್ಮನ್ನು ಸಾದಾ ನೆನಪಿಸುತ್ತಿರುತ್ತದೆ. ಕೊನೆಗೆ ಅದೇ ನೆನಪಿನ ಭಾರದಲ್ಲಿ ಕೊನೆಯಾಗುತ್ತದೆ. ಸೋ..ಥ್ಯಾಂಕ್ಸ ಟು ಆಲ್ ಜೂನಿಯರ‌್ಸ.


Monday, 27 June 2016

ಕಾಗದ ದೋಣಿಯ ಮಾಸದ ನೆನಪು..!

ಮಂಜುನಾಥ ಗದಗಿನ

 
 ಕಡುಕಪ್ಪು ಆಕಾಶದಲ್ಲಿ ಮಿಂಚೂಂದು ಮೂಡಿದಾಗ ಎದೆಯಲ್ಲಿ, ಅದೇನೋ! ಸಂಚಲನ. ಮಾಸಿದ ನೆನಪುಗಳು ಬೇಡವೆಂದರು ತುಂಟ ಮಳೆ ಬೀಡಬೇಕಲ್ಲಾ, ಬಂದು ಮನಸ್ಸಿನಾಳದಲ್ಲಿ ನೆನಪಿನ ತುಂತುರು ಹನಿಗಳನ್ನು ಸುರಿಸಿಯೇ ಹೋಗುತ್ತದೆ. ಹಾಗೆಯೇ ಚಂದದ ಚಿತ್ರವೊಂದನ್ನು ಕಣ್ಮುಂದೆ ತಂದು ನಿಲ್ಲಿಸುತ್ತದೆ. ಮನಸ್ಸು ಕೂಡಾ ತನಗರಿವಿಲ್ಲದೇ ಆ ನೆನಪಿನ ಮಳೆಯಲ್ಲಿ ಜಾರಿ ಹೋಗುತ್ತದೆ.
 ಈಗತಾನೆ ಮಳೆಗಾಲ ಆರಂಭವಾಗಿದೆ. ಬಿಸಿಲಿಗೆ ಬಾಯಿತೆರೆದಿದ್ದ ಭೂತಾಯ ಒಡಲ ಹೊಕ್ಕ ಮಳೆಯ ಹನಿಗಳು ಗಮ್ ಎಂದು ಮಣ್ಣಿನ ಸುವಾಸೆಯನ್ನು ಎಲ್ಲೆಡೆ ಹರಡಿಕೊಂಡಿದೆ. ಇದರೊಟ್ಟಿಗೆ ಬಾಲ್ಯದ ಆ ದಿನಗಳು ಕೂಡಾ ಹೂಡಿ ಎದ್ದು ಮನಸ್ಸಿನಾಳದಲ್ಲಿ ಹೊಸ ಮನ್ಮಂತರನ್ನು ಸೃಷ್ಠಿಸಿ ತೇಲಾಡುತ್ತಿವೆ. ಅದು ಕೂಡಾ ಕಾಗದ ದೋಣಿಯ ನೆನಪಿನೊಂದಿಗೆ.
 ದಟ್ಟ ಕಾರ್ಮೋಡಗಳು ಆಗಸದ ತುಂಬೇಲ್ಲಾ ಹರಡಿಕೊಂಡು ಒಂದಕ್ಕೊಂದು ಜಿದ್ದಿಗೆ ಬಿದ್ದವರ ಹಾಗೆ ತೇಲುತ್ತಿದ್ದರೆ.  ಮಳೆ ಬರುವ ಮುನ್ಸೂಚನೆ ಎಂದು ತಿಳಿದುಕೊಂಡು ಮನೆ ಸೇರುತ್ತಿದ್ದೇವು. ಮಳೆಯ ಹನಿಗಳು ಭೂಮಿಯನ್ನು ತಾಕೀದಾಗ, ಸೂಸುತ್ತಿದ್ದ ಆ ತಣ್ಣನೆಯ ತಂಗಾಳಿಗೆ ಮೈಮನಗಳು ಜಲ್ ಎಂದು ಅವ್ವನ ಸೆರಗಿನ ಹಿಂದೆ ಬೆಚ್ಚಗೆ ಅವಿತುಕೊಳ್ಳುವ ಹಾಗೆ ಮಾಡುತ್ತಿತ್ತು.
  ಹೊರಗಡೆ ಮಳೆಯ ಆರ್ಭಟ ಹೆಚ್ಚಾದಂತೆ, ನಮ್ಮ ಕಾಗದ ದೋಣಿಯ ಆಸೆಗಳು ಗರಿಗೆದರುತ್ತಿದ್ದವು. ನಾನು ನಮ್ಮಕ್ಕ ಪುಸ್ತಕದ ಹಾಳೆಗಳನ್ನು ಕಿತ್ತುಕೊಂಡು, ಕಾಗದ ದೋಣಿಗಳನ್ನು ತಯಾರಿಸಿ ನಾನು ಅವ್ವನ ಮಗನಾಗಿದ್ದರಿಂದ ನಾನು ಅವ್ವ ಹೆಸರು ಬರೆದು ,ಅಕ್ಕ ಅಪ್ಪನ ಹೆಸರು ಬರೆದು ಮನೆಯ ಮುಂದೆ ನಿಂತು ತೇಲಿಬಿಡುತ್ತಿದ್ದೇವು. ಅವುಗಳು ಸಾಗಿದಂತೆ ಅವುಗಳ ಹಿಂದೆ ನಮ್ಮ ಪಯಣವು ಸಾಗುತ್ತಿತ್ತು. ಕಾಗದ ದೋಣಿಗಳು ನಾ ಮುಂದು ತಾ ಮುಂದು ಎಂಬಂತೆ ಸಾಗುತ್ತಿದ್ದರೆ, ನಾವುಗಳು ನನ್ನ ದೋಣಿ ಮುಂದೆ ಸಾಗಲಿ ಎಂದು ಅದರ ಹಿಂದೆ ನೀರು ಚಿಮ್ಮುತ್ತಾ ದೋಣಿಗೆ ವೇಗತುಂಬುತ್ತಿದ್ದೇವು.
 ದೋಣಿಗಳು ಸಾಗಿದಂತೆ ನಮ್ಮ ಹಾರಾಟ ಚಿರಾಟವು ಸಾಗುತ್ತಿತ್ತು. ದೋಣಿಗಳು ಸಾಗಿದಂತೆ ಮುಂದೆ ಇರುತ್ತಿದ್ದ ಕಡ್ಡಿ ಕಸರನ್ನು ಸ್ವಚ್ಚ ಮಾಡುತ್ತಾ, ದೋಣಿಗಳು ಸುಗಮವಾಗಿ ಸಾಗುವಂತೆ ನೋಡಿಕೊಳ್ಳುತ್ತಿದ್ದೇವು. ಅವುಗಳು ನಮ್ಮ ಮನೆಯಿಂದ ಸ್ವಲ್ಪ ದೂರವಿರುವ ಕೆರೆಯನ್ನು ತಲುಪೂರೆಗು ಮಳೆಯನ್ನು ಲೆಕ್ಕಿಸದೇ ಅವುಗಳ ಜೊತೆ ಆಟ ಆಡುತ್ತಾ, ಹೋಗುತ್ತಿದ್ದೇವು. ಒಂದು ವೇಳೆ ಯಾವುದೇ ದೋಣಿ ಮುಗುಚಿದರು ಮತ್ತೊಂದು ದೋಣಿಗೆ ಸಾಥ ನೀಡುತ್ತಿದ್ದೇವು.
 ಇನ್ನೂ ಶಾಲೆಗೆ ಹೋದ ಸಂದರ್ಭದಲ್ಲಿ ಮಳೆ ಬಂದ್ರೆ ಮುಗಿದೆ ಹೋಯಿತು. ನಮ್ಮ ಗೆಳೆಯರೆಲ್ಲರೂ ಗಂಡು ಕಾಗದ ದೋಣಿಗಳನ್ನು ಮಾಡಿ ಬೀಡುತ್ತಿದ್ದರು. ಹೌದು! ದೋಣಿಗಳಲ್ಲಿ ಗಂಡು ಮತ್ತು ಹೆಣ್ಣು ದೋಣಿಗಳಿವೆ. ದೋಣಿಯ ಕೆಳಗೆ ಒಂದು ಮಡಚಿದ ತುದಿ ಬಂದರೆ ಅದು ಗಂಡು ದೋಣಿ, ಇಲ್ಲಾ ಅಂದ್ರೆ ಅದು ಹೆಣ್ಣು ದೋಣಿ. ಹೀಗೆ ಶಾಲೆಯಿಂದ ಬರ‌್ಬೇಕಾದ್ರೆ ದೋಣಿಗಳನ್ನು ರಸ್ತೆ ಪಕ್ಕದ ಚರಂಡಿಯಲ್ಲಿ ಬೀಡುತ್ತಿದ್ದೇವು. ಕೆಲವೊಂದಿಷ್ಟು ಹುಡ್ಗರು ನಿಂತ ನೀರಿನಲ್ಲಿ ಕಲ್ಲಿನ ಕಪ್ಪೆ ಜಿಗಿಸುತ್ತಾ ತಲೆಯ ಮೇಲೆ ಪಾಠಿ ಚೀಲವನ್ನು ಹೊದ್ದುಕೊಂಡು ಮನೆಗೆ ಸಾಗುತ್ತಿದ್ದೇವು. ಆ ಕ್ಷಣಗಳನ್ನು ನೆನೆದ್ರೆ ಮೈ ಮನಸ್ಸುಗಳು ಅರೇ ಕ್ಷಣ ಕಾಗದ ದೋಣಿಯಲ್ಲಿ ಪ್ರಯಾಣಿಸುತ್ತದೆ, ಮನಸ್ಸು ಕಪ್ಪೆಯ ಹಾಗೆ ಜಿಗಿದಾಡುತ್ತದೆ.
    ಮಳೆ ಕೇವಲ ಮಳೆ ಅಲ್ಲ, ಅದು ಬಾನು ಕೂಡಿಟ್ಟ ಭಾವನೆಗಳ ಸೆಲೆ. ಈ ಸೆಲೆಯಲ್ಲೆ ನಮ್ಮಲ್ಲೆರ ಭಾವನೆಗಳು ಆ ಮಳೆಯೊಂದಿಗೆ ಚಲ್ಲಾಟ ಆಡುತ್ತವೆ. ಅಂತಹ ಚಲ್ಲಾಟದ ಒಂದು ಸುಂದರ ನೆನಪೆ ಈ ಕಾಗದ ದೋಣಿಯ ಮಾಸದ ನೆನಪು.


ನೋಡ ಬನ್ನಿ ಶಬರಿಕೊಳ್ಳ..

ಮಂಜುನಾಥ ಗದಗಿನ 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದೆ. ಶ್ರೀರಾಮನಿಗೊಸ್ಕರ ಶಬರಿ ಕಾಯ್ದಳು ಎಂದು ಎಲ್ಲರೂ ಗೊತ್ತಿದೆ. ಆದರೆ, ಅಲ್ಲಿ ಕಾಯ್ದಳು ಎಂಬುವುದು ಯಾರಿಗೂ ಗೊತ್ತಿಲ್ಲ. ಆದರೆ, ಇತಿಹಾಸ ಪುಟಗಳನ್ನು ತೀರವಿ ಹಾಕಿದಾಗ ಶಬರಿ ಕಾಯ್ದದ್ದು ಸುರೇಬಾನ ಸಮೀಪದ ಶಬರಿಕೊಳ್ಳ ಎಂಬ ಸ್ಥಳದಲ್ಲಿ ಎಂಬುದು ತಿಳಿದು ಬರುತ್ತದೆ.
ಸುರೇಬಾನ ಗ್ರಾಮದ ಗ್ರಾಮದೇವತೆಯಾಗಿ ಅಲ್ಲದೆ ಸುತ್ತ ಮುತ್ತಲಿನ ಗ್ರಾಮಗಳ ಆರಾಧ್ಯ ದೇವತೆ ಶ್ರೀ ಶಬರಿ ಪೂಜಿಸಲ್ಪಡುತ್ತಾಳೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ಶಬರಿದೇವಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಭವ್ಯವಾದ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯು
ತ್ತವೆ. 200 ಅಡಿಗಳ ಅಂತರದಿಂದ ಧುಮ್ಮಿಕ್ಕುವ ಅಂತರಗಂಗೆ ಎಂಬ ಕಿರು ಜಲಧಾರೆ ಇಲ್ಲಿ ಎಲ್ಲರನ್ನು ತನ್ನತ್ತ ಸೆಳೆದು ಮಂತ್ರ ಮುಗ್ದರನ್ನಾಗಿಸುತ್ತದೆ. ಸುಮಾರು 120 ಅಡಿಗಳಷ್ಟು ಎತ್ತರದ ಗುಹೆಯಲ್ಲಿ ಆಕಳ ಮೊಲೆಯಂತೆಯೇ ನೈಸರ್ಗಿಕವಾಗಿ ಕಲ್ಲಿನಲ್ಲಿ ಮೂಡಿದ ಆಕಳಮೊಲೆ, ಇದರಲ್ಲಿ ಜಿಣುಗುವ ನೀರಿನ ಹನಿಗಳನ್ನು ಎಲ್ಲರನ್ನು ಅರೆ ಕ್ಷಣ ಚಕಿತಗೊಳಿಸುತ್ತವೆ.

ಜಕಣಾಚಾರಿ ಕೆತ್ತನೆ:

ಶಿಲ್ಪಿ ಜಕಣಾಚಾರಿ ಕೆತ್ತಿದ ಶಬರಿದೇವಿಯ ದೇಗುಲ ಇಲ್ಲಿದೆ. ವಿಶಾಕವಾದ ಮುಖ ಮಂಟಪವನ್ನು ಹೊಂದಿದೆ. ನವರಂಗವೂ ಚೆನ್ನಾಗಿದೆ. ಗರ್ಭಗುಡಿಯಲ್ಲಿರುವ ಶಬರಿ ಮೂರ್ತಿಯು ಸುಮಾರು ಐದು ಅಡಿ ಎತ್ತರದ ಕಲ್ಲಿನ ಪ್ರಭಾವಳಿಗೆ ಹೊಂದಿಕೊಂಡ ಮೂರ್ತಿಯಾಗಿದೆ. ಒಮ್ಮೆ ದರ್ಶನ ಪಡೆದರೆ ಮತ್ತೆ ಮತ್ತೆ ದೇವಿಯ ದರ್ಶನ ಪಡೆದು ಪುನೀಯರಾಗಬೇಕೆಂಬ ಭಕ್ತಿ ಭಾವ ಹೊಮ್ಮುವಂತೆ ಮಾಡುವುದು ಇಲ್ಲಿನ ವೈಶಿಷ್ಟ. ದೇವಾಲಯದ ಎದುರಿಗೆ ದೀಪಮಾಲಿಕಾ ಕಂಭವಿದೆ. ಇಲ್ಲಿ ಪ್ರತಿ ವರ್ಷ ಕಾರ್ತಿಕೋತ್ಸವ ನಡೆಯುತ್ತದೆ.
ಶಬರಿಕೊಳ್ಳಕ್ಕೆ ಆಗಮನ:
ಶ್ರೀ ಶಬರಿಯು ಮಧ್ಯಪ್ರದೇಶದ ಶಭರ ಮಹಾರಾಜನ ಒಬ್ಬಳೇ ಮಗಳು. ಸುಂದರಿಯಾದ ಶ್ರೀ ಶಬರಿಯ ಮದುವೆಯನ್ನು ಅದ್ಧೂರಿಯಾಗಿ ಮಾಡುವ ಉದ್ದೇಶದಿಂದ ಸ್ವಯಂವರ ನಡೆಸಲು ಏರ್ಪಾಡು ಮಾಡುತ್ತಾನೆ. ಶಭರ ಮಹಾರಾಜನ ಅಪ್ಪಣೆಯಂತೆ ಅಷ್ಟ ದಿಕ್ಕುಗಳಿಂದ ಬೇಟೆಯಾಡಿ ಪ್ರಾಣಿಗಳ ತಲೆ ಕತ್ತರಿಸಿ ತಂದು ಸ್ವಯಂವರದ ಮಂಟಪಕ್ಕೆ ಶೃಂಗರಿಸಲು ತಿಳಿಸುವನು. ರಕ್ತ ಸಿಕ್ತ ಸ್ವಯಂವರ ಮಂಟಪವನ್ನು ಕಂಡು ದೀಗ್ಭ್ರಮೆಯಾಗಿ ತನ್ನ ಸ್ವಯಂವರದ ಸಲುವಾಗಿ ಪ್ರಾಣಿಗಳ ಜೀವ ತೆಗೆದಿದ್ದನ್ನು ನೋಡಲಾಗದೆ, ಜೀವನದಲ್ಲಿ ಹಿಂಸೆಗಿಂತ ಅಹಿಂಸಾಮಾರ್ಗ ಒಳ್ಳೆಯದು ಎಂದುಕೊಂಡು ಅದರಂತೆ ವೈರಾಗ್ಯತಳೆದು ಸುಖ-ಸಂಪತ್ತು, ಸೌಭಾಗ್ಯವನ್ನು ಬಿಟ್ಟು ಸಕಲ ರಾಜ ವೈಭವವನ್ನು ತೊರೆದು, ನಾರುಮಡಿಯನ್ನುಟ್ಟು ದೇಶ ಸಂಚಾರಿಯಾಗಿ ಶಬರಿಯು ಸುರೇಬಾನ ಗ್ರಾಮಕ್ಕೆ ಹೊಂದಿದ ಅರಣ್ಯದಲ್ಲಿ ನೆಲೆಸಿರುವುದು ಪುರಾಣದಲ್ಲಿ ಉಲ್ಲೇಖವಿದೆ. ರಾಮದುರ್ಗದಿಂದ 14 ಕಿ.ಮೀ ಮತ್ತು  ಸುರೇಬಾನದಿಂದ 3 ಕಿ.ಮೀ ಅಂತರದಲ್ಲಿದೆ ಈ ಶಬರಿ ನೆಲೆಸಿರುವ ಸ್ಥಳ.

ಈ ದೇವಾಲಯ ಕುರಿತು ಎರಡು ದೃಷ್ಟಾಂತಗಳು ಪ್ರಚಲಿತದಲ್ಲಿವೆ.

ರಾಮಾಯಣ ಹಿಂದೂ ಧರ್ಮದ ಪವಿತ್ರ ಗ್ರಂಥ.
ಶ್ರೀರಾಮನ ಶ್ರೇಷ್ಠ ಭಕ್ತೆಯಾದ ಶ್ರೀ ಶಬರಿಯ ಭಕ್ತಿ ಅನನ್ಯವಾಗಿದೆ. ರಾಮ ಲಕ್ಷ್ಮಣನೊಂದಿಗೆ ವನವಾಸಕ್ಕೆ ಬರುವ ಮಾರ್ಗದಲ್ಲಿ ಶಬರಿ ರಾಮನಿಗಾಗಿ ತಾನು ಸಂಗ್ರಹಿಸಿದ ಬೋರೆ ಹಣ್ಣುಗಳನ್ನು ನೀಡಿದ ಕಥೆ ರಾಮಾಯಣದ್ದು. ಈ ಕಥೆಯಲ್ಲಿ ಬರುವ ಶಬರಿ ಇಲ್ಲಿಯೇ ವಾಸವಾಗಿದ್ದಳು.ಶ್ರೀರಾಮನ ಬರುವಿಗಾಗಿ ತಪಗೈದು ಶ್ರೀರಾಮನಿಗಾಗಿ ಬೋರೆ ಹಣ್ಣುಗಳನ್ನು ಆಯ್ದುತಂದು ಸಿಹಿನೋಡಿ ಸಿಹಿಯಾದ ಹಣ್ಣುಗಳನ್ನು ಬೇರ್ಪಡಿಸಿ ಇಡುತ್ತಿದ್ದಳು. ಶ್ರೀಮಾತೆಯ ತಪ್ಪಸ್ಸಿನ ಫಲವೋ ಏನೋ ಶ್ರೀರಾಮನು ಸೀತೆಯನ್ನು ಹುಡುಕುತ್ತಾ ಬಂದನು. ಈ ಅಭಯಾರಣ್ಯದಲ್ಲಿ ನೆಲೆಸಿದ ಶ್ರೀ ಶಬರಿಮಾತೆಗೆ ದರ್ಶನವಿತ್ತು ಸಿಹಿ ಬೋರೆಹಣ್ಣುಗಳನ್ನು ಸೇವಿಸಿದರು. ಶ್ರೀರಾಮ ಆಕೆಯ ಭಕ್ತಿಯನ್ನು ಮೆಚ್ಚಿ ಏನು ವರ ಬೇಕು ಕೇಳು ನಿನಗೆ ಎಂದು ಕೇಳುತ್ತಾನೆ. ಆಕೆ ಶ್ರೀರಾಮನ ತೊಡೆಯ ಮೇಲೆ ಪ್ರಾಣ ಬಿಡಲು ಬಯಸುತ್ತಾಳೆ. ಪ್ರಾಣಪಕ್ಷಿ ಹಾರಿ ಹೋಗುವ ಸಂದರ್ಭದಲ್ಲಿ ರಾಮನ ತೊಡೆಯ ಮೇಲೆ ಮಲಗಿದ್ದಾಗ ರಾಮನು ಸುತ್ತಲೂ  ನೀರಿಗಾಗಿ ವೀಕ್ಷಿಸಿದನೆಂದೂ, ನೀರು ಕಂಡು ಬರದೇ ಇದ್ದಾಗ ಬಾಣ ಪ್ರಯೋಗಿಸಿ ತನ್ನ ಬಿಲ್ವಿದ್ಯೆಯ ಮೂಲಕ ನೀರು ತರಿಸಿದನೆಂಬ ಪ್ರತೀತಿ ಹೊಂದಿದ ಎರಡು ಹೊಂಡಗಳು ಸಾಕ್ಷಿಯಾಗಿ ಇಲ್ಲಿವೆ. ಆ ಹೊಂಡಗಳಲ್ಲಿ ಗಣಪತಿ ಹೊಂಡದ ನೀರು ಎಂದಿಗೂ ಬತ್ತುವುದಿಲ್ಲಾ ಮತ್ತು ಪವಿತ್ರ ತೀರ್ಥವೆಂದು ಇಲ್ಲಿಗೆ ಬರುವ ಭಕ್ತಾಧಿಗಳು ಭಾವಿಸುತ್ತಾರೆ. ಶಬರಿ ನೆಲೆ ನಿಂತ ತಾಣವಾದ ಈ ಪವಿತ್ರ ಸ್ಥಳವೇ ಶ್ರೀ ಶಬರಿಕೊಳ್ಳವಾಗಿದೆ
ಶ್ರೀ ಶಬರಿ ಮಾತೆಯು ಶ್ರೀರಾಮನಿಗೆ ನನಗೆ ಮುಕ್ತಿ ದಯಪಾಲಿಸು ಅಂತ ಬೇಡಿಕೊಂಡಾಗ ಆಗ ಶ್ರೀರಾಮನು ಮಾತೆ ನಿನಗೆ ಮುಕ್ತಿ ಸಿಗಬೇಕಾದರೆ ನೀನು ’ಪಂದಳ ರಾಜ್ಯ’ದಲ್ಲಿನ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಪುನೀತಳಾಗು ಎಂದು ಅನುಗ್ರಹಿಸಿದ ಪವಿತ್ರ ಸ್ಥಾನವು ಇದಾಗಿದೆ. ಅಲ್ಲದೆ ದೇಶಾದ್ಯಂತ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ತುಳಸಿ ಮಾಲೆಯನ್ನು ಧರಿಸಿ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯುದಕ್ಕಿಂತ ಮುನ್ನ  ಶ್ರೀ ಶಬರಿಯು ತಪಸ್ಸು ಮಾಡಿ ಮೋಕ್ಷ ಪಡೆದ ’ಶಬರಿ ಪೀಠಂ’ ಅಂತಾ ದೇವಸ್ಥಾನದಲ್ಲಿ ಮೊದಲು ಪೂಜೆಗೈದು ನಂತರ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದು ಮೊದಲಿನಿಂದಲೂ ನಡೆದು ಬಂದ ವಾಡಿಕೆಯಾಗಿದೆ.
ಇನ್ನೊಂದು ಕಥೆ ಸೊರೆವ್ವನದು. ಆಕೆ ಈ ಸ್ಥಳದಲ್ಲಿ ತಪಸ್ಸು ಮಾಡುತ್ತಿದ್ದ ಋಷಿ ಮುನಿಗಳಿಗೆ ಉಪಟಳ ನೀಡುತ್ತಿದ್ದ ಸುರಭ ಎಂಬ ರಾಕ್ಷಸನನ್ನು ಸಂಹಾರ ಮಾಡಿದಳು. ಅವಳ ಸ್ಮರಣೆಗಾಗಿ ದೇಗುಲ ನಿರ್ಮಾಣಗೊಂಡಿದೆ ಎನ್ನಲಾಗಿದೆ.
ಆದ್ದರಿಂದ ಈ ಊರನ್ನು ಮೊದಲಿಗೆ ಸೂರಿಬನ ಎಂದೂ ನಂತರದ ದಿನಗಳಲ್ಲಿ ಸೂರಿಬನವೇ ಸುರೇಬಾನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದೆ ಎಂದೂ ಪ್ರತೀತಿ ಇದೆ.
ಈ ಕ್ಷೇತ್ರಕ್ಕೆ ನೂರಾರು ಜನ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಿಂದ ಸಾಧು-ಸಂತರು ಬಂದು ಶ್ರೀ ಶಬರಿಯ ಸನ್ನಿಧಿಯಲ್ಲಿ ಜಪ-ತಪ ಗೈದು ಪುನೀತರಾಗಿರುವರು. ಮತ್ತು ಸುರೇಬಾನ-ಮನಿಹಾಳ ಗ್ರಾಮದ ಸದ್ಗುರು ಶ್ರೀ ಶಿವಾನಂದರು 18 ದಿನಗಳವರೆಗೆ ಅನುಷ್ಟಾನ ಗೈದು ಶ್ರೀ ಶಬರಿ ತಾಯಿ ಕೃಪೆಗೆ ಪಾತ್ರರಾಗಿರುವುದು ತಾಜಾ ನಿದಶರ್ನ.

ಪ್ರವಾಸಿಗರಿಗೆ ಪ್ರೇಕ್ಷಣೀಯ ಸ್ಥಳ:

      ಒಂದು ಸುಂದರ ಪುಷ್ಕರಣಿಯಲ್ಲಿ ಸತತ ಜಲೋದ್ಭವವಾಗುತ್ತಿದೆ. ಜಲದ ಪ್ರೋಕ್ಷಣೆಯಿಂದ ಪಾಪನಾಶವಾಗುವುದು. ಅಲ್ಲದೆ ಪಾನಮಾಡಿದರೆ ಸಕಲ ರೋಗಕ್ಕೆ ಸಂಜೀವಿನಿಯಂತಿದೆ. ಇನ್ನೊಂದು ಪುಷ್ಕರಣಿಯಲ್ಲಿ ಸ್ನಾನಕ್ಕೆ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡು ಪೌಳಿಗಳು ಇವೆ. ಭಕ್ತಾದಿಗಳಿಗೆ ತಂಗಲು ಅನುಕೂಲವಿದೆ. ಈಗ ಸರಕಾರಿ ಸಹಾಯ ಧನದಲ್ಲಿ ಭವ್ಯವಾದ ಕಟ್ಟಡವಿದೆ. ಮದುವೆಯಂತಹ ಕಾರ್ಯಕ್ರಮಗಳಿಗೆ ಅವಕಾಶವಿದೆ. ವರ್ಷದಲ್ಲಿ ನೂರಾರು ಮದುವೆಗಳು ನಡೆಯುತ್ತವೆ. ಅಲ್ಲದೆ ಶ್ರೀಕ್ಷೇತ್ರದಲ್ಲಿ ನೋಡುಗರ ಮನಸೆಳೆಯುವ 200 ಅಡಿಗಳ ಅಂತರದಿಂದ ದುಮ್ಮಿಕ್ಕಿ ಬೀಳುವ ಅಂತರಗಂಗೆ, ಆಕಳ ಮೊಲೆಯು ಸೂಮಾರು 120 ಅಡಿಗಳಷ್ಟು ಎತ್ತರದಲ್ಲಿ ಗುಹೆಯಲ್ಲಿ ಇದೆ. ಸಾವಿರ ವರುಷ ಇತಿಹಾಸ ವಿರುವ ಬೋರೆಹಣ್ಣಿನ ಮರವಿದೆ. ಶ್ರೀರಾಮ ಮಂದಿರ ಹಾಗೂ ಮಳೆರಾಜನ ಮಂದಿರವು ಇದೆ.
ಇಲ್ಲಿನ ದೇವಿಗೆ ನಿತ್ಯವೂ ಪೂಜೆ, ಆಭಿಷೇಕ ಸಲ್ಲುತ್ತಿದೆ.ಕಾರ್ತಿಕ ಮಾಸ, ದೀಪಾವಳಿ ಅಮವಾಸ್ಯೆ , ಹುಣ್ಣಿಮೆ ಸಂದರ್ಭಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಜಾತ್ರೆ ದಿನ ಸುರೇಬಾನದ ಶ್ರೀ ಮಾರುತಿ ದೇವಸ್ಥಾನದಿಂದ ಪಲ್ಲಕ್ಕಿ ಉತ್ಸವ ದೇವಾಲಯದವರೆಗೂ ಬರುತ್ತದೆ ತದನಂತರ ಜಾತ್ರೆಗೆ ಚಾಲನೆ ನೀಡುತ್ತಾರೆ.


Monday, 9 May 2016

ಒಂದು ಬದುಕು ಎರಡು ಅನುಭವ!


 ನಮ್ಮದು ಚಿಕ್ಕ ಹಳ್ಳಿ, ಜೀವನ ಶೈಲಿಯಲ್ಲಿ ಆಡಂಬರವಿಲ್ಲ, ಇದದ್ದರಲ್ಲೆರ ಎಲ್ಲವನ್ನೂ ನಿಭಾಯಿಸಿಕೊಂಡು
 ತೃಪ್ತಿಕರ ಜೀವನ ನಡೆಸುತ್ತಿರುವ ಬಡ ಜೀವಗಳು. ಕಾಯಕವೇ ಕೈಲಾಸ ಎಂದು ದುಡಿಯುವ ದೇಹಗಳು. ಬೆಳ್ಳಿಗೆ ಆಯ್ತೆಂದರೆ, ಏ ಮಲ್ಲವ್ವ, ಏ ಕಲ್ಲವ್ವ ಬೇಗ ಬೇಗ ಬರ‌್ರೆ, ಬಂಡಿ ಹೊಂಡೈಯಿತಿ. ದಗುಡ ಬರದ ಹೋದರ ಬಿಟ್ಟ ಹೋಗತ್ತಿವ ನೋ! ಹೇ ತಡಿರ ಯಕ್ಕಾ ಅಷ್ಟೊಂದು ಅವಸರಾ ಯಾಕ ಮಾಡಾಕತ್ತಿ? ಬುತ್ತಿ ಕಟ್ಟಕೊಳ್ಳಾಕತ್ತಿನಿ ನಿಂದ್ರ, ಎನ್ನುವ ಮಲ್ಲವ. ಆತವಾ ಲಗುನ ಬಾ! ಮುಂಜಾನೆ ಇಂತಹ ಮಾತುಗಳು ಹಳ್ಳಿಗಳಲ್ಲಿ ಸರ್ವೆಸಾಮಾನ್ಯವಾಗಿ  ಕೇಳುತ್ತಿದೆ.
     ಮುಂಜಾನೆಯಿಂದ  ಸಾಯಂಕಾಲದವರೆಗೆ ದುಡಿದು, ನಗು ಮೊಗದಿ ಬರುವ ಅವರ ಮುಖ ಹುಣ್ಣಿಮೆಯ ಚಂದ್ರನಂತೆ ಲಕಾ,ಲಕಾ ಹೊಳಿಯುತ್ತಿದ್ದವು. ಬಂದ ತಕ್ಷಣ ಗಂಡನ ಬೇಕು ಬೇಡಗಳನ್ನು ಆಲಿಸಿಕೊಂಡು, ಸ್ಪಂದಿಸುವ ಹೃದಗಳು ಅಲ್ಲಿದ್ದವು. ಪ್ರತಿದಿನ ರಾತ್ರಿ ಹುಣ್ಣಿಮೆ ಚಂದ್ರ ಬರುತ್ತಿದ್ದ. ಈ ಸಮಯದಲ್ಲಿ ದುಡಿದು ಬೆಸತ್ ಜೀವಗಳು ಪಕ್ಕದ ಮನೆಗೆ ಹೋಗಿ ತಮ್ಮ ಸುಖ, ದುಖಃ ಹಂಚಿಕೊಳ್ಳುತ್ತಿದ್ದವು. ಅಲ್ಲಿ ದುಖ:. ದುಮ್ಮಾನ, ಹಾಸ್ಯ ಎಲ್ಲವೂ ತುಂಬಿಕೊಂಡಿರುತ್ತಿತ್ತು. ಗಂಡಸರು,  ಬಜಾರ, ಗುಡಿ ಕಟ್ಟೆಗಳಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಾರೆ.
    ಇನ್ನೂ ಯಾರಿಗಾದರೂ, ತೊಂದರೆಯಾದರೆ ಮಮಲ ಮರಗುವ ಜನ. ನೆರೆ-ಹೊರೆಯವರಂತು ಬಂಧುಬಳಗಗಿಂತ ಹೆಚ್ಚಾಗಿ ಪ್ರೀತಿ, ವಾತ್ಸಲ್ಯ ತೋರಿಸುತ್ತಾರೆ. ಇವು ನಾನು ಕಂಡು ನೋಡಿದ ಹಳ್ಳಿ ಜೀವನ.
   ಹೆಚ್ಚಿನ ವ್ಯಾಸಂಗಕ್ಕಾಗಿ ಧಾರವಾಡಕ್ಕೆ ಬಂದೆ.  ನಗರ ಜೀವನ ಕಂಡಿರದ ನಾನು, ಹೇಗಪ್ಪಾ ಎಲ್ಲಿ ಇರುವದು? ಎಂದುಕೊಂಡೆ. ಇಲ್ಲಿನ ವಾತಾವರಣ, ಊಟ ನನಗೆ ಹೊಂದಾಣಿಕೆ ಆಗಲಿಲ್ಲ. ಆದರೂ ಇರಲೇ ಬೇಕಾದ ಅನಿವಾರ್ಯತೆ.
    ನಮ್ಮ ಭಾಷೆಗೂ, ಇಲ್ಲಿಯ ಭಾಷೆಗೂ ಸ್ವಲ್ಪ ವ್ಯತ್ಯಾಸ ಇದದ್ದು ಕಂಡುಕೊಂಡೆ. ಇನ್ನೂ ವೇಷ ಭೂಷಣ ಅಯೋ ದೇವರೆ! ಎಂದುಕೊಂಡೆ. ನಮ್ಮಲ್ಲಿ ಗಂಡಸರು ಪಂಚೆ, ಹೆಂಗಸರು ಇರಕಲ್ ಸೀರೆ ಉಟ್ಟಕೊಂಡ ಬರತ್ತಾ ಇದ್ದರ ಶಿವ-ಪಾರ್ವತಿ ನೋಡಿದ ಅನುಭವ. ಇಲ್ಲೂ ಶಿವ, ಶಿವಾ! ಒಂದು ದಿನಾ ನಾಲ್ಕೈದು ಹುಡುಗಿಯರು ಅರ್ಧಮರ್ಧ ಬಟ್ಟೆ ಹಾಕೊಂಡು ಬರ್ತಾಯಿದ್ದರೂ, ಅದನ್ನು ನೋಡಿದ ನಾನು ಅಯ್ಯೋ! ಪಾಪ ಅವರ ಮನೆಯಲ್ಲಿ ಹಾಕೊಳ್ಳಾಕ ಬಟ್ಟೆ ಕೊಡಿಸಿಲ್ಲಾ ಎಂದು ನನ್ನ ಗೆಳೆಯನಿಗೆ ಹೇಳಿದೆ. ಅವನು ಹಾಗಲ್ಲಾ ಲೇ ಅದು ಈಗಿನ ಪ್ಯಾಶನ್ ಎಂದ. ಇರಬಹುದು ಎಂದು ತಲೆ ಅಲ್ಲಾಡಿಸಿದೆ.

   ಇನ್ನೂ ಬೆಳ್ಳಿಗೆ ಆಫೀಸಿಗೆ ಹೋಗುವ, ಅಂಕಲ್-ಆಂಟಿ ರೋ! ದೇವದೇವಾ! ಅವಸರದಲ್ಲೇ ಹುಟ್ಟಿದ್ದಾರೆನೋ ಎಂಬಂಹ ಅವಸರ. ತಾವು ರೆಡಿ ಆಗುವ ಸಂಭ್ರಮದಲ್ಲಿ ಮಗು ಅಳತ್ತಾ, ಇದ್ದರು ಸಹ ಚಿನ್ನು, ಪಪ್ಪಿ, ಪಿಂಕಿ, ಮುದ್ದು ಸುಮ್ಮನಿರು, ನನಗೆ ಆಪೀಸಗೆ ಲೆಟ್ ಆಗಿದೆ. ನೀ ಬೇರೆ ಅಳತ್ತಾ ಇದ್ದಿಯಾ, ಸುಮ್ಮನಾಗು ಎಂದು ಗೊಣಗುತ್ತಾ, ಬಾಯ್ ಬಾಯ್ ಎಂದು ಹೊರಟೆ ಹೋಗುತ್ತಾರೆ. ಆ ಮಗು ಮಮ್ಮಿ, ಡ್ಯಾಡಿ ಎಂದೇ ಅಳತ್ತಾ ಇರುತ್ತೆ. ಆಪೀಸನ ಕೆಲಸ ಮುಗಿಸಿ ಮನೆಗೆ ಹೋಗುವಾಗ ಅವರ ಮುಖ ಸುಟ್ಟ ಬದನೆಕಾಯಿ ಆಗಿರುತ್ತೆ. ಮನೆಗೆ ಬಂದವರೇ, ಬಾಗಿಲು ಹಾಕಿಕೊಂಡು ಒಳಗೆ ಕುಳಿತ್ತರೆ ಮುಗಿದೆ ಹೊಯ್ತಿ, ಮತ್ತೆ ಹೊರಗೆ ಬರುವುದು ಮರುದಿನ ಅದೇ  ಗಡಿಬಿಡಿಯಲ್ಲೇ.
    ರಾತ್ರ ಆಯ್ತಿ ಎಂದರೆ ದೇವಲೋಕವೇ ಧರೆಗಿಳಿದ ಅನುಭವ. ಜಗಮಗಿಸುವ ಕಟ್ಟಡಗಳು, ಗೀಜುಗೂಡುವ ರಸ್ತೆಗಳು, ಎಲ್ಲಿ ನೋಡಿದರು ಗೋಬಿ , ನ್ಯೂಡಲ್ಸ, ಪಾನಿಪುರಿ ಅಂಗಡಿಗಳ ಸಾಲು. ಇವುಗಳನ್ನು ತಿಂದು ಬಾಯಿ ಚಪ್ಪರಿಸುವ ಜನ. ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ.

Sunday, 8 May 2016

ಕರುಣಾಮಯಿ



 ಒಂದು ಸುಂದರ ಸಂಸಾರ ಆ ಸಂಸಾರಲ್ಲಿ ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು. ಆದರೆ ಆ ಕುಟುಂಬದಲ್ಲಿ ಹೇಳಿಕೊಳ್ಳುವಂತಹ ಬಡತನವೇನು ಇರಲಿಲ್ಲ.ಆದರೆ ಮನೆಯ ಯಜಮಾನನಿಗೆ ಮಾತ್ರ ದುಡ್ಡಿನ ಹಪಾ ಹಪಿ ಮಾತ್ರ ತುಸು ಜಾಸ್ತಿನೆ ಇತ್ತು. ಹೆಂಡತಿ ಏಷ್ಟೇ ದುಡಿದರೂ ಚಿತ್ರಹಿಂಸೆ ನೀಡುತ್ತಿದ್ದ. ಆದರೆ  ಹೆಂಡತಿ ಮಾತ್ರ ಸಹನೆ ಶೀಲೆ ಯಾಗಿದ್ದಳು. ಗಂಡನಾದವನು ಏನೇ ಅಂದರು ಅದು ಅವಳಿಗೆ ವೇದ ವ್ಯಾಖ್ಯವಾಗಿತ್ತು. ಎಂದೂ ಗಂಡಮಾತಿಗೆ ಎದುರು  ಮಾತನಾಡಿದವಳಲ್ಲ.
  ಈ ಕುಟುಂದ ಮೂಲ ಉದ್ಯೋಗ ಇದೇ ಎಂದು ಇರಲಿಲ್ಲ. ಯಾವ ಉದ್ಯೋಗ ದೊರೆತರು ಅದನ್ನೆ ಮಾಡುತ್ತಿದ್ದರು. ಆದರೆ ಇವರು ಬ್ರಾಹ್ಮಣರಲ್ಲ  ಆದರೂ ಮನೆಯ ಯಜಮಾನ ಮಾತ್ರ ಒಂದು ದೇವಾಲಯ ಅರ್ಚಕನಾಗಿದ್ದ, ಇದರೊಂದಿಗೆ ದೊಡ್ಡ ,ದೊಡ್ಡ ಸಮಾರಂಭಗಳ ಅಡುಗೆಯನ್ನು ಮಾಡುತ್ತಿದ್ದನು. ಒಟ್ಟಿನಲ್ಲಿ ಆರ್ಥಿಕವಾಗಿ ಸಬಲರಾಗಿದ್ದರು.
  ಇನ್ನೂ ಮಗಳು ಮತ್ತು ಮಗ ಇಬ್ಬರೂ ಶಾಲೆಗೆ ಹೋಗುತ್ತಿದ್ದರು. ಇಬ್ಬರೂ ಶಾಲೆಯಲ್ಲಿ ಚನ್ನಾಗಿ ಓದುತ್ತಿದ್ದರು. ಆದರೆ ತಂದೆಯ ದುಡ್ಡಿನ ವ್ಯಾಮೋಹ ಜಾಸ್ತಿಯಾಗಿದ್ದರಿಂದ ಮಗಳನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದನು. ಆ ಹುಡುಗಿಗೆ ಕೇಲವ ಆಗ ಹನೇರಡು ವರ್ಷ ವಯಸ್ಸು ಮಾತ್ರ ಆಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲೆ ಮನೆಗೆ ಆಸರೆಯಾದಳು . ಆ ಹುಡುಗಿ ಮಾತ್ರ ಶಾಲೆಯಲ್ಲಿ ತುಂಬಾ ಜಾಣೆಯಾಗಿದ್ದಳು. ಆಟ-ಪಾಠದಲ್ಲಿ ಅವಳೆ ಶಾಲೆಗೆ ಪ್ರಥಮಳಾಗಿದ್ದಳು. ಅವಳ ತಂದೆ ಶಾಲೆ ಬಿಡಿಸಿದ್ದಾಗ, ಅವಳು ಶಾಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಳು. ಆದರೆ ತಂದೆಯ ಹಣದಾಸೆಗೆ ಅವಳ ವಿದ್ಯಾಭ್ಯಾಸದ ಕನಸು ಮಾತ್ರ ಏಳನೇ ತರಗತಿಗೆ ಕಮರಿ ಹೋದದ್ದು ದುರಂತವೇ ಸರಿ.
  ಆದರೆ ಮನೆಯ ಯಜಮಾನನ ಹಣದಾಸೆ ಇಷ್ಷಕ್ಕೆ ನಿಲ್ಲಲಿಲ್ಲ. ಇದ್ದೊಬ್ಬ ಮಗನ ಮೇಲು ಅವನ ಕಣ್ಣು ಬಿದ್ದಿತು. ಆ ಹುಡುಗ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು. ಇದ್ದೊಬ್ಬ ಮಗನನ್ನು ಚನ್ನಾಗಿ ಶಾಲೆಗೆ ಕಳುಹಿಸಬೇಕೆಂಬ ಇರಾದೇ ಮಾತ್ರ ಆ ತಂದೆಗೆ ಇರಲೇ ಇಲ್ಲ. ಬರೀ ದುಡ್ಡು, ದುಡ್ಡು ಎಂದು ಬಾಯಿ ಬಿಡುತ್ತಿದ್ದನು. ಒಂದಿನಾ " ನೀ ಶಾಲೆ ಕಲೆತು  ಏನ ದೊಡ್ಡ ಸಾಹೇಬಾ ಆಗ ಬೇಕಾಗಿಲ್ಲ, ಸಾಲಿ ಬಿಟ್ಟ ದುಡ್ಯಾಕ ಹೋಗ ಇನ್ನ" ಎಂದು ಆ ಪುಟ್ಟ ಮಗುವನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿದ. ಪಾಪ ಆ ಹುಡುಗನದು ಮಾತ್ರ ಅರಣ್ಯ ರೋಧನ  ಯಾರು ಕೇಳುವವರಿಲ್ಲ.
  ಇದ್ದೊಬ್ಬ ಮಗನನ್ನು ಶಾಲೆ ಬಿಡಿಸಿ ದುಡಿಯಲು ಕಳುಹಿಸಿರುವ ಸುದ್ದಿ ಇಡೀ ಓಣಿಗೆ ತಿಳಿಯಿತು. ಓಣಿ ಮಂದಿಯಲ್ಲ " ನಿನಗ ಇರಾಂವ ಒಬ್ಬ ಮಗಾ ಅದಾನು ಅವನರ ಸರಿಯಾಗಿ ಸಾಲಿಗೆ ಕಳುಹಿಸ ಬಾರದಾ ಎಂದು  ಬೈಯಲು ಪ್ರಾರಂಭಿಸಿದರು. ಇದರಿಂದ ಅವನ ಮನ ಪರಿವರ್ತನೆಯಾಗಿ, ಮಗನನ್ನು ಶಾಲೆಗೆ ಕಳುಹಿಸಲು ಮುಂದಾದಾಗ್ ಸಮಯ ಮೀರಿ ಹೋಗಿತ್ತು. ಆವಾಗ ಆ ಹುಡುಗ ನಾಲ್ಕನೇ ತರಗತಿಯಲ್ಲಿ ಫೇಲ್ ಆಗಿ ವತ್ತೆ ಅದೇ ತರಗತಿಯಲ್ಲಿ ಕುಳಿತುಕೊಳ್ಳುವ ಪರಸ್ಥಿತಿ ಬಂದೋದಗಿತು.
 ಇದರ ಮಧ್ಯ ಹೆಂಡತಿ, ಮಗಳಿಗೆ ತುಂಬಾನೆ ಕಾಟ ಕೊಡಲು ಪ್ರಾರಂಭಿಸಿದ್ದ, ಕುಳಿತ್ರು ತಪ್ಪು, ನಿಂತ್ರು ತಪ್ಪು ಏನ್ನುವಂತಹ ಪರಸ್ಥಿತಿ ಅವರದಾಗಿತ್ತು. ಪ್ರತಿ ಕ್ಷಣವು ಅವರಿಗೆ ನರಕ ಸದೃಶವಾಗಿತ್ತು. ಆದರೆ ಅದೆಲ್ಲವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಈ ಯಜಮಾನನ ಹಣದಾಸೆಗೆ ದೇವಸ್ಥಾನ ಹಣದ ಹುಂಡಿಯೇ ಮಾಯವಾಯಿತು.
  ಒಂದಿನಾ ಸಾಮೂಹಿಕ ವಿವಾಹ ನಿಮಿತ್ತ ಅಡುಗೆ ಮಾಡಲು ಹೋದಾಗ ರಾತ್ರಿ ಇಡೀ ನಿದ್ದೆಗೆಟ್ಟು ದುಡಿದನು. ಆದರೆ ಮರುದಿನ ವಿಶ್ರಾಂತಿ ತೆಗೆದುಕೊಳ್ಳದೇ, ಮತ್ತೆ ದುಡಿಯಲು ಪ್ರಾರಂಭಿಸಿದನು. ಇದರಿಂದ ಅವನ ಬಿಪಿ, ಶುಗರ ಹೆಚ್ಚಾಗಿ ಪಾಶ್ವವಾಯು ತಗುಲಿತು. ಇಂತಹ ಸಮಯದಲ್ಲಿ ಅವನ ಹೆಂಡತಿ  ಸಾಲ ಮಾಡಿ ದವಾಖಾನೆ ತೋರಿಸಿದಳು, ಆದರೆ ಅವನು ಮಾಡಿದ ಪಾಪಕ್ಕೆ ಆ ದೇವರ ಅವನ ಮಾತುಗಳನ್ನೆ ಕಿತ್ತುಕೊಂಡು ಬಿಟ್ಟಿದ್ದ.
 ಇಂತಹ ಸಮಯದಲ್ಲಿ ಅವನ  ಆರೈಕೆ ಮಾಡಿದವಳು ಅವನ ಹೆಂಡತಿನೇ. ಅವನು ಕೊಟ್ಟ ಕಷ್ಟಗಳೆಲ್ಲವನ್ನು ಮರೆತು ಅವನ ಹೊಲಸು ತೊಳೆಯುವದರಿಂದ ಹಿಡಿದು ರಾತ್ರಿ  ಮಲಗುವವರೆಗೂ ಅವನ ಜಾಕ್ರಿ ಮಾಡಿದಳು. ಇದರ ಜೊತೆ ಮನೆಯ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಳು.
   ಆಗ ಮಗ ಚಿಕ್ಕವನಾಗಿದ್ದರಿಂದ, ಅವನ ಅಕ್ಕ ಮನೆಯ ನೊಗವನ್ನು ಹೊತ್ತು ಗಂಡು ಮಗನ ಹಾಗೆ, ಎಲ್ಲವನ್ನು ಎದುರಿಸಿ, ಮಾಡಿದ ಸಾಲವನ್ನೆಲ್ಲಾ ತೀರಿಸಿ ತಾನೆ ದುಡಿದು, ಅದರಲ್ಲಿಯೇ ಸ್ವಲ್ಪ ಹಣವನ್ನು ಕೂಡಿಟ್ಟು, ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದಳು.
   ಆದರೆ ಆ ಹುಡುಗನ ಪರಸ್ಥಿತಿ ತಂತಿ ಮೇಲಿನ ನಡಿಗೆಯಂತಾಗಿತ್ತು. ಅತ್ತ ಸಾಲೆಗೆ ಹೋಗಲು ಆಗದು ಇತ್ತ ಬಿಡಲು ಆಗದಂತಹ ಪರಸ್ಥಿತಿ. ಆದರೆ ಅವನ ತಾಯಿ ಹೇಳಿದ್ದು ಮಾತ್ರ " ಮಗಾ ನೀನು ಸಾಲಿಗೆ ಹೋಗಿ ದೊಡ್ಡ ಸಾಗೇಬಾ ಆಗ್ಬೇಕು. ಏಸೇ ಕಷ್ಟಾದ್ರು ನೀ ಸಾಲಿ ಬಿಡಾಕ ಹೋಗಬ್ಯಾಡ, ಏಸೇ ಕಷ್ಟಾ ಬಂದ್ರು ಅವು ನನಗೆ ಇರ‌್ಲಿ" ಎಂದು ಮಗನನ್ನು ಶಾಲೆಗೆ ಕಳುಹಿಸಿದಳು.
  ಆ ಹುಡುಗ ಕೂಡಾ ಚನ್ನಾಗಿ ಓದಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣನಾದನು. ಆಗ ಅವನ ತಾಯಿಗೆ ಮಾತ್ರ ಎಲ್ಲವನ್ನು ಗೆದ್ದ ಸಂತಸ. ಮಗನ ಆ ಸಾಧನೆಯಿಂದ ಅವನ ತಾಯಿ ಹೆಚ್ಚಿನ ಓದಿಗಾಗಿ ಶಹರಕ್ಕೆ ಕಳುಹಿಸಿದಳು. ಅಲ್ಲಿಯೋ ಆ ಹುಡುಗ ಚನ್ನಾಗಿ ಓದಿ. ಉತ್ತಮ ಪಲಿತಾಂಶದೊಂದಿಗೆ ತನ್ನ ಓದನ್ನು ಮುಗಿಸಿದನು. ನಂತರ ಒಳ್ಳೇಯ ಕೆಲಸ ಹುಡುಕಿಕೊಂಡು. ಉತ್ತಮ ಸಂಭಳ ಪಡೆದುಕೊಳ್ಳುವಂತಾದ , ಅಷ್ಷರಲ್ಲಾಗಲೇ ತಂದೆ ಅಕಾಲಿಕ ಮರಣ ಹೊಂದಿದ್ದರಿಂದ , ತನ್ನ ತಾಯಿಯನ್ನು ಶಹರಕ್ಕೆ ಕರೆದುಕೊಂಡು ಹೋಗಿ, ರಾಣಿಯ ಹಾಗೆ ನೋಡಿಕೊಂಡನು
  ತಾಯಿಯೇ ದೇವರು"

ಮಂಜುನಾಥ ಗದಗಿನ
ಪೋನ ನಂ ; 8050753148

Monday, 11 April 2016

ಕನಸಾಗಿಕಾಡಿ ಬದುಕಾಗಿರುವ ಪತ್ರಿಕೋದ್ಯಮ


ಕನಸುಗಳೇ ಹಾಗೆ! ಕಾಡುತ್ತವೆ. ಕೆರಳುತ್ತವೆ. ಕೆಣಕುತ್ತವೆ.. ಕೊನೆಗೆ ಸಾಕಾರಗೊಂಡೋ..ಸಾಕಾರಗೊಳ್ಳದೇನೋ..ಮನಸ್ಸಿನಾಳದಿಂದ ಸರಿದು ಮಾಯವಾಗುತ್ತವೆ.ಹ್ಞೂ! ನನಗೂ ಸಾವಿರ ಕನಸುಗಳ ಮಧ್ಯ ಒಂದು ಚಿಕ್ಕ ಕನಸು ಮೂಡಿತ್ತು. ಆ ಕನಸು ಈಡೇರಿಕೆಗೆ ನಾನಾ ಕಸರತ್ತುಗಳು. ಇವುಗಳೊಂದಿಗೆ ಅನೇಕ ಸವಾಲುಗಳನ್ನು ದಾಟಿ ಕನಸಾಗಿ ಕಾಡಿದ್ದ ಪತ್ರಿಕೋದ್ಯಮ ಅಣಿ ಇಟ್ಟೆ.
ಸಮಾಜ ಅಂಕುಡೊಂಕುಗಳನ್ನು ತಿದ್ದಿ ತಿಡುವ ಗುತರುತರ ಜವಾದ್ದಾರಿ ಪತ್ರಿಕೋದ್ಯಮದ್ದು. ಒಳ್ಳೆ ಕಾರ್ಯ ಮಾಡಿದಾಗ ಶಬ್ಬಾಶಗಿರಿ ನೀಡುತ್ತಾ, ತಪ್ಪು ಮಾಡಿದಾಗ ಚಾಟಿ ಏಟು ನೀಡುತ್ತಾ ಯಾರ ಅಚಿಜು ಅಳುಕು ಇಲ್ಲದೇ,ತನ್ನದೇ ಹಮ್ಮು ಬಿಮ್ಮಿನಲ್ಲಿ ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವಾಗಿ ಕಾರ್ಯನಿರ್ವಹಿಸುತ್ತಿವೆ. ಬದುಕು ಎಂಬುದು ಅಮೂಲ್ಯವಾದದ್ದು, ಬದುಕಬೇಕಾದರೆ ಕನಸುಗಳು ಅಷ್ಟೇ ಮುಖ್ಯ. ಕನಸುಗಳು ಬದುಕನ್ನು ರೂಪಿಸುತ್ತವೆ ಹಾಗೇ ನಾ ಕಂಡ ಪತ್ರಿಕೋದ್ಯಮದ ಕನಸು ಮುಂದಿನ ನನ್ನ ಬದುಕಾಗಿರುವುದು ಈಗ ಇತಿಹಾಸ.
ಪತ್ರಿಕೋದ್ಯಮ ಒಂದು ಗ್ಲಾಮರ್ ಲೋಕ ಎನ್ನುವುದು ಒಂದು ಮಾತಾದಾರೆ, ಅದರ ಒಳಗಿರುವ ಲೋಕ ನಮ್ಮನ್ನು ದಂಕು ಬಡಿಸುತ್ತವೆ. ಕ್ಷಣ ಕ್ಷಣಕ್ಕೂ ಹೊಸ ವಿಷಗಳು, ಹೊಸ ಮಾಹಿತಿಗಳನ್ನು ಹೆಕ್ಕಿ ತಗೆಯುವ ಕಸರತ್ತು ಅಲ್ಲಿ ಸದ್ದಿಲ್ಲದೇ ನಡೆಯುತ್ತಿರುತ್ತದೆ. ಆದರೆ ನಿಂತು ಓದುವವರಿಗೆ, ಕುಳಿತು ನೋಡುವವರಿಗೆ ಇದರ ಬಗ್ಗೆ ಕಿಂಚಿತ್ತು ಮಾಹಿತಿ ಇರುವುದಿಲ್ಲ.ಆದರೆ ಅದರ ಸುಳಿಗೆ .ಸಿಲುಕಿದಾಗಲೇ ಅದರ ಅರಿವು ಗೊತ್ತಾಗುವುದು. ಪತ್ರಿಕೋದ್ಯಮದಲ್ಲಿ ಸಾವಿರಾರು ಕನಸುಗಳನ್ನು ಕಂಡು ಅದೇಷ್ಟೋ ಜನ ಸಾಗಿದ್ದಾರೆ, ಸಾಧಿಸಿದ್ದಾರೆ, ಸಾಧಿಸಲಾಗದೇ ಸೋತು ಅದರ ಸಹವಾಸದಿಂದ ದೂರ ಸರಿದವರು ಇದ್ದಾರೆ.
 ಸುದ್ದಿಮನೆಯಲ್ಲಿ ಸದ್ದು ಮಾಡಬೇಕು, ಸಾವಿರ ಸಾವಿರ ಸಮಸ್ಯೆಗಳನ್ನು ಹೆಕ್ಕಿ ಸಮಾಜ ಸುಧಾರಿಸಬೇಕು ಎಂಬ ಕನಸು ನನ್ನದಾಗಿತ್ತು. ಒಬ್ಬ ವ್ಯಕ್ತಿ ಪತ್ರಕರ್ತನಾಗಲು ಓದು ಬರಹವಷ್ಟೇ ಇದ್ದರೆ ಸಾಲದು ಜನರ ಪ್ರತಿಧ್ವನಿಯಾಗಿ, ಸತ್ಯವನ್ನು ಹೇಳುವ, ಅನ್ಯಾಯದ ಪರ ನಿಲ್ಲುವ ಗಟ್ಟಿತನ ಬೇಕು ಹಾಗೇ ಕ್ರೀಯಾಶೀಲತೆಯು ಇರಬೇಕು. ಪತ್ರಿಕೋದ್ಯಮ ಸೇರಿದ ಕೆಲವೇ ದಿನಗಳನ್ನಿ ಈ ಸತ್ಯ ಅರಿವಾಯಿತು.
ಪತ್ರಿಕೋದ್ಯಮದಲ್ಲಿ ಕ್ಷಣ ಕ್ಷಣಕ್ಕೂ ಎದುರಾಗುವ ಅಪಾಗಳು, ಸಮಸ್ಯಗಳನ್ನು ಕಂಡು ಈ ವೃತ್ತಿಯೇ ಬೇಡ ಎಚಿದು ತೀರ್ಮಾನಿಸಿದ್ದು ಇದೆ. ಆದರೆ, ನನ್ನ ಕನಸು ಇಲ್ಲಿ ನಿಲ್ಲ ಬಾರದು, ಅದು ಕೂಡಾ ಪತ್ರಿಕೋದ್ಯಮದ ನೀರಿನೊಂದಿಗೆ ಹರಿಯಬೇಕು ಎಂದುಕೊಂಡು ಅದರ ಆಳ, ಅಗಲಗಳನ್ನು ತಿಳಿದುಕೊಳ್ಳಲು ಮುಂದಡಿ ಇಟ್ಟೆ.
ನಾವು ವಿದ್ಯಾರ್ಥಿಗಳಾಗಿದ್ದರು ಸಹ ನಮ್ಮ ಗುರುಗಳ ಹಲವು ವರ್ಷದ ಅನುಭವಗಳು ನಮ್ಮ ಬದುಕಿನ ಅನುಭವಗಳಿಗೆ ಸೇರುತ್ತವೆ. ಅವರು ಎದುರಿಸಿದ ಸಮಸ್ಯೆಗಳು ಕಂಡುಕೊಂಡ ಪರಿಹಾರಗಳು ನಮ್ಮ ಮುಂದಿನ ಬದುಕಿಗೆ ದಾರಿದೀಪವಾಗುತ್ತವೆ ನಮ್ಮ ಕನಸುಗಳಿಗೆ ನೀರೆರೆಯುತ್ತವೆ.
ಮತ್ತೊಬ್ಬರ ಭುಜದ ಮೇಲೆ ಬಂದುಕಿಟ್ಟು ಗುಂಡು ಹೊಡೆಯುವುದು ತುಂಬಾಜಾಣತನದ ಕೆಲಸ.  ಇದು ಕಷ್ಟದ ಕೆಲಸ ಎಂದುಕೊಳ್ಳುವವರ ಮುಂದೆ ನಾವು ಎಲ್ಲರಂತೆ ಎಂತಹ ಕಷ್ಟವಿದ್ದರು ಎದುರಿಸುವ ಶಕ್ತಿ ಮತ್ತು ಅಗತ್ಯವಾದ ಯುಕ್ತಿ ನಮ್ಮಲ್ಲೂ ಇದೆ ಎಂದು ತಿಳಿಸುವ ಕನಸು ನನ್ನದು.ಈ ಕನಸು ಹೊತ್ತ ಕಂಗಳು ಪತ್ರಿಕೊದ್ಯಮದಲ್ಲಿ ಬದುಕನ್ನು ರೂಪಿಸುತ್ತಿವೆ. ಕನಸಿಗೂ ಬದುಕಿಗೂ ಹಗಲು-ರಾತ್ರಿಯ ವ್ಯತ್ಯಾಸ ಬಿಟ್ಟರೆ ಎರಡು ಒಂದೇ. ಬದುಕು ಹಗಲು ಗನಸಾದರೆ, ಕನಸು ರಾತ್ರಿಯ ಬದುಕು. ಒಬ್ಬ ಒಳ್ಳೆಯ ಪತ್ರಕರ್ತೆಯಾಗಬೇಕು ಎಂಬುದು ನನ್ನ ಬದುಕಿನ ದೊಡ್ಡಕನಸು. ಕನಸಾಗಿ ಕಾಡಿದ ಕನಸು ಕಂಡ ಕನಸು ಸಾಕಾರಕ್ಕಾಗಿ ಶ್ರಮದಿಂದ ಕಲಿಯುತ್ತಿದ್ದೇನೆ.
manjunath gadgin

Wednesday, 6 April 2016

ಬಾಳಿಗೊಂದು ಯುಗಾದಿ!



ಹೊಸತನ-ವಿನೂತ ಬಾಳಿಗೊಂದು ಹಿರಿತನ ತಂದುಕೊಡುವುದೇ, ಈ ಯುಗಾದಿ. ಅದಕ್ಕೆಂದೇ ಭಾರತೀಯರಾದ ನಾವು ಇದನ್ನು ಹೊಸವರುಷ ಎಂದು ಸಂಭ್ರಮ, ಸಡಗರದಿಂದ ಆಚರಿಸುತ್ತೇವೆ. ಅದೇ ಯುಗಾದಿ ನನ್ನ ಜೀವನದಲ್ಲೂ ಹೊಸತನ ತರುತ್ತಿತ್ತು.
   ಹೌದು! ಯುಗಾದಿ ಹೊಸತನದ ಸಂಕೇತ, ಈ ಹೊಸತನಕ್ಕಾಗಿ ನಾನು ಮತ್ತು ನನ್ನಕ್ಕ ಕ್ಯಾಲೆಂಡರನ್ನು ತಿರುವಿ ಹಾಕುತ್ತಾ ಪದೇ ಪದೇ ಯುಗಾದಿ ಹಬ್ಬ ಬರುವಿಕೆಗಾಗಿ ಜಾತಕ ಪಕ್ಷಿಯಂತೆ ದಿನಗಳನ್ನು ಕಳೆಯುತ್ತಿದ್ದೇವು. ಯಾಕೆಂದ್ರೆ ಯುಗಾದಿ ಹಬ್ಬ ಬಂತೆಂದ್ರೆ  ನಮ್ಮಪ್ಪ ನಮ್ಗೆಲ್ಲಾ ಹೊಸ ಬಟ್ಟೆ ಕೊಡಿಸುತ್ತಿದ್ದ. ನಾವು ಕೂಡಾ ಯುಗಾದಿ ಒಂದು ತಿಂಗಳು ಇರುವಾಗಲೇ  ಯಪ್ಪಾ ಯಪ್ಪಾ ಹೊಸ ಅರ‌್ವಿ ಕೊಡ್ಸಾ ಎಂದು ಗಂಟು ಬಿಳುವುದು ಮಾಮೂಲಾಗಿತ್ತು.
  ಯುಗಾದಿ ಸಮೀಪಿಸುತ್ತಿದ್ದಂತೆ ನಮ್ಮ ಆಸೆಗಳಿಗೆ ರೆಕ್ಕೆ-ಪುಕ್ಕಗಳು ಬಂದು ಹಾರಾಡುತ್ತಿದ್ದವು. ನಮ್ಮ ಗೆಳೆಯರಿಗೆಲ್ಲಾ  ಲೇ ನಮ್ಮಪ್ಪ ಈ ಸಾರಿ ಯುಗಾದಿಗೆ ಜರ್ಬದಸ್ತ್ ಅಂಗಿ-ಚಡ್ಡಿ ಕೊಡಿಸ್ತಾನಂತ ಎಂದು ಓಣಿಯ ಗೆಳೆಯರಿಗಿಲ್ಲಾ ಹೇಳಿ ವರ್ಚಸ್‌ಮೆಂಟ ಮಾಡುತ್ತಿದ್ದೆ.
  ಮಿರ, ಮಿರ್ ಮಿಂಚುವ ಬಣ್ಣದ ತೋಳಂಗಿ, ಸಣಕಲು ಕಾಲುಗಳಿಗೆ ದಪ್ಪ ಜಿನ್ಸ ಪ್ಯಾಂಟು, ಅದಕ್ಕೊಪ್ಪುವ ಬೂಟುಗಳು, ವ್ಹಾ! ಏನ್ ಸ್ಟೈಲ್, ಏನ್ ಲುಕ್, ಅಂತಾ ಇರೋ ಗೆಳೆಯರು. ಅಷ್ಟರಲ್ಲೇ ನಮ್ಮವ್ವಾ ಏಳ್ಲಾ, ಇನ್ನ ಟೈಮ್ ಆತು, ಎಂದು ಗೊಣಗುವದು ನೋಡಿ ನನಗೆ ಎಚ್ಚರವಾಗಿ ಬಿಡುತ್ತಿತ್ತು. ಎದ್ದು ಕುಂತು ಇದು ಕನಸಾ! ಎಂದು ಪೆಚ್ಚು ಮೊರೆಹಾಕಿಕೊಳ್ಳುತ್ತಿದ್ದೆ. ಏಸ್! ಯುಗಾದಿ ಸುತ್ತ ಇಂತಹ ಕನಸುಗಳು ಸಾಮಾನ್ಯವಾಗಿ ಬಿಟ್ಟಿದ್ದವು.
  ಒಂದು ವಾರ ಮುಂಚಿತವಾಗಿಯೇ, ಅಪ್ಪ ಅಂಗಿ ತರಲು ಹೋಗುತ್ತಿದ್ದ, ಆದರೆ ಅವನಿಗೆ ನಮ್ಮನ್ನು ಬಿಟ್ಟು ಹೋಗುವ ಖಯಾಲಿ. ಹೇಗಾದ್ರು ಮಾಡಿ ಇವರನ್ನು ಬಿಟ್ಟು ಹೋಗಬೇಕೆಂದುಕೊಳ್ಳುತ್ತಿದ್ದ, ಆದರೆ ಅದು ಅಸಾದ್ಯವಾದ ಕೆಲಸವಾಗಿತ್ತು. ಏಕೆಂದರೆ ನಮ್ಮಪ್ಪ ನಮ್ಮನ್ನು ಬಿಟ್ಟು ಮಾರುದ್ದು ದೂರ ಹೋದಾಗ, ನಾನು ನಮ್ಮಕ್ಕ ಯಾವುದೇ ಸಂಧಿಯಿಂದ ಅಪ್ಪನನ್ನು ಹಿಂಭಾಲಿಸಿ ಬಿಡುತ್ತಿದ್ದೆವು. ಈ ರೀತಿಯಾಗಿ ಅಪ್ಪನ ದುಂಬಾಲು ಬಿದ್ದು ನಮ್ಮಗೆ ಇಷ್ಟವಾದ ಅಂಗಿಗಳನ್ನು ಖರೀದಿ ಮಾಡಿಕೊಂಡು ಬರುತ್ತಿದ್ದೇವು. ಆದರೆ ಆ ಹೊತ್ತಿದೆ ನಮ್ಮಪ್ಪನ ಕಿಸೆ ಖಾಲಿ-ಖಾಲಿಯಾಗುತ್ತಿತ್ತು.
  ಇನ್ನೂ ಯುಗಾದಿ ದಿನಾ, ಸೂರ್ಯ ಹುಟ್ಟುವ ಮುನ್ನವೇ ಎದ್ದು ಬೇವಿನ ಮರ ಹುಡುಕಿಕೊಂಡು ಅಲೆಯುತ್ತಿದ್ದೇವು. ಅದೆಲ್ಲೂ ಮರ ಕಂಡಿತೆಂದ್ರ ದಾವಂತ ಹೊಡಿಹೋಗುತ್ತಿದ್ದೇವು. ಅಷ್ಟರಲ್ಲಾಗಲೆ ಜನ ಬಂದು ಹೋಗುತ್ತಿದ್ದರು. ನಮ್ಗೆ ಗಿಡ ಹತ್ತಲು ಬರುತ್ತಿರಲಿಲ್ಲ. ಆದ್ದರಿಂದ ಅಲ್ಲೇ ಇದ್ದ ಜನಕ್ಕೆ  ಅಣ್ಣಾರ ನಮ್ಮಗು ಸ್ವಲ್ಪ ಹರದಕೊಡ್ರಿ ಎಂದು ಬೇಡಿಕೊಳ್ಳುತ್ತಿದ್ದೇವು. ಅವ್ರ ಪಾಪಾ ಅಂತಾ ಕಿತ್ತು ಕೊಡುತ್ತಿದ್ದರು. ಹೀಗೆ ತಂದ ಬೇವನ್ನು ನಮ್ಮವ್ವನ ಕೈಯಲ್ಲಿ ಕೊಟ್ಟಾಗ ಅವಳು ಅದನ್ನು, ನೀರಿಗೆ ಹಾಕಿ ಕಾಯಿಸುತ್ತಿದ್ಳು. ಯಾಕ ಹಾಕ್ತಿ ಬೇ.. ಅಂತಾ ಕೇಳಿದರೆ  ಬೇವನ್ನು ಹಾಕಿ ಸ್ನಾನ ಮಾಡಿದ್ರ  ಯಾವುದೇ ರೋಗಾ-ರುಜಿನಾ ಬರೋದಿಲ್ಲ ಅಂತಾ ಹೇಳುತ್ತಿದ್ದಳು. ಅದರಿಂದ ನಾವು ಖುಷಿಯಾಗಿ ಹಾಕಬೇ ಇನ್ನಷ್ಟ ಹಾಕ ಎಂದು ಹೇಳುತ್ತಿದೇವು.
 ಸ್ನಾನವಾದ ನಂತರ ತಂದೆ-ತಾಯಿ ಮತ್ತು ನಮ್ಮಕ್ಕನ ಕಾಲುಗಳಿಗೆ ಬಿದ್ದು ಆರ್ಶಿವಾದ ಪಡೆಯುತ್ತಿದ್ದೆ ಹಾಗೂ ಬೇವು-ಬೆಲ್ಲ ತಿನ್ನಿಸುತ್ತಿದ್ದೆ. ಆ ಪ್ರತಿವರ್ಷ ನಮ್ಮವ್ವ ಒಂದು ಮಾತು ಹೇಳುತ್ತಿದ್ದಳು  ಮಗಾ ಇವತ್ತ ಯಾರ ಕೂಡಾನು ಜಗ್ಲಾ ಮಾಡಬೇಡಾ ಎಂದು ತಪ್ಪದೇ ಹೇಳಿ ಕಳುಹಿಸುತ್ತಿದ್ದಳು.  ನಂತರ ದೇವರು, ದಿಂಡ್ರು ಅಂತಾ ಕಂಡ ಕಂಡ ದೇವರಿಗೆಲ್ಲಾ ಹೋಗಿ ನಮಸ್ಕಾರ ಮಾಡುತ್ತಿದ್ದೇನು.  ಈ ರೀತಿ ಯುಗಾದಿ ನನ್ನ ಜೀವನದಲ್ಲಿ ಕಹಿಗಿಂತ ಸಿಹಿಯನ್ನೆ ಹೆಚ್ಚಾಗಿ ನೀಡಿದೆ.

  ಮಂಜುನಾಥ ಗದಗಿನ
8050753148

Friday, 18 March 2016

ರಂಗಭೂಮಿಯ ರಂಗತೋರಣ (ಬಳ್ಳಾರಿಯ ರಂಗತೋರಣ)






    ಭಾರತ ಸಂಗೀತ, ಸಾಹಿತ್ಯ,ಸಿನಿಮಾ, ಜಾನಪದ,ಕಲೆ, ಸಾಹಿತ್ಯ ಹೀಗೆ ಹಲವಾರು ರೀತಿಯ ಬಹುಮುಖಿ ಸಂಸ್ಕೃತಿಯನ್ನು ಹೊಂದಿರುವ ದೇಶ,ಅದರಲ್ಲಿ ರಂಗಭೂಮಿಯು ಹೊರತಗಿಲ್ಲ. ರಂಗಭೂಮಿ ಕೇವಲ ನಾಟಕವಾಗಿ ಪರಿವರ್ತನೆಗೊಳ್ಳದೇ, ಸ್ವಾತಂತ್ರ್ಯದ ಕಲ್ಪನೆ ಮೂಡಿಸಲು ಮತ್ತು ನಾಗರಿಕ ಸಮಾಜವನ್ನು ಬೆಳೆಸಲು ಧಾರ್ಮಿಕ ಪೌರಣಿಕ ನಾಟಕಗಳನ್ನು ಆಡಿ ಜನರ ಪರಿವರ್ತನೆ ಮಾಡುವುದರಲ್ಲಿ ರಂಗಭೂಮಿ ಸಾಕಷ್ಟು ಯಶಸ್ವಿಯಾಗಿದೆ. ಇಂದಿನ ದಿನಗಳಲ್ಲಿ ಅವಸಾನದ ಹಾದಿ ಹಿಡಿದಿರುವ ರಂರಭೂಮಿಗೆ ರಂಗು ತರಲು ಹೊರಟಿದೆ ಬಳ್ಳಾರಿಯ ರಂಗತೋರಣ ಬಳಗ.
   ಹೌದು! ಬಳ್ಳಾರಿಯ ರಂಗತೋರಣ ಸಂಸ್ಥೆ ಕಳೆದ ಒಂದು ದಶಕಗಳಿಂದ ತನ್ನ ರಂಗಭೂಮಿಯ ಸೇವೆಯನ್ನು ನಿರಂತರವಾಗಿ ಮಾಡುತ್ತಿದೆ. ವಿಶೇಷವಾಗಿ ವಿದ್ಯಾರ್ಥಿ ಯುವ ಜನರಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ, ಕಾಳಜಿ, ಹುರುಪು, ಹುಮ್ಮಸ್ಸು, ಚೈತನ್ಯ ಮೂಡಿಸಲು ವಿವಿಧ ರಂಗ ಚಟುವಟಿಗಳನ್ನು ನಡೆಸಿಕೊಂಡು ಹಲವಾರು ಯುವ ರಂಗ ಪ್ರತಿಭೆಗಳ ಹುಟ್ಟಿಗೆ ಕಾರಣವಾಗಿದೆ.

ವಿವಿಧ ರಂಗ ಚಟುವಟಿಕೆಗಳು

ಯುವ ಜನರರಲ್ಲಿ ಸೃಜನಶೀಲ ರಂಗಾಸಕ್ತಿಯನ್ನು ಬೆಳೆಸುವ ಸಲುವಾಗಿ ಬಳ್ಳಾರಿಯ ರಂಗತೋರಣ ಬಳಗ ವರ್ಷವೀಡಿ ಹಲವಾರು ರಂಗ ಚಟುವಟಿಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ರಂಗಭೂಮಿಯಲ್ಲಿ ಆಸಕ್ತಿ ಇದ್ದವರಿಗೆ ರಂಗ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಅವರಿಗೆ ರಂಗಭೂಮಿಯ ನಟನೆಯ ಬಗ್ಗೆ ತರಬೇತಿಯನ್ನು ನೀಡುತ್ತಿದೆ. ರಂಗ ಸವಾರಿ, ಸಂಕ್ರಾಂತಿ ರಂಗ ಸಂಭ್ರಮ, ರಂಗ ಚಾವಡಿ, ರಂಗ ಕಮ್ಮಟ, ರಂಗ ಮುಂಗಾರು ಹೀಗೆ ರಂಗಭೂಮಿಗೆ ಸಂಬಂಧಪಟ್ಟಂತೆ ಅನೇಕ ಹೊಸ ಹೊಸ ಪ್ರಯೋಗಗಳನ್ನು ಮಾಡಿಕೊಂಡು ರಂಗಭೂಮಿಗೆ ಮತ್ತೆ ರಂಗನ್ನ ತರಲು ಹೊರಟಿದೆ.

ರಂಗತೋರಣದಲ್ಲಿ ಹೊಸ ರಂಗು.

 ರಂಗತೋರಣ ಬಳಗ ರಂಗಭೂಮಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ರಂಗಭೂಮಿಯನ್ನು ಉಳಿಸುವ ಕಾರ್ಯದಲ್ಲಿ ತಲ್ಲೀಣವಾಗಿದೆ. ಇದೇ ಕಾರಣಕ್ಕೆ ಪ್ರತಿ ವರ್ಷ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸುತ್ತಾ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ. ಈ ಬಾರಿ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 10ನೇ ರಾಜ್ಯಮಟ್ಟದ ವಿದ್ಯಾರ್ಥಿ ನಾಟಕೋತ್ಸವನ್ನು ಆಯೋಜಿಸಿ ಯಶಸ್ವಿಯಾಗಿದೆ.  ಈ ನಾಟಕೋತ್ಸವದಲ್ಲಿ ವಿನೂತನ ಪ್ರಯೋಗಳನ್ನು ರಂಗಾಸಕ್ತರು ಕಾಣಬಹುದು.

ಕಲಾತೋರಣ..

ಇದು ರಂಗಭೂಮಿಗೆ ಸಂಬಂಧಪಟ್ಟಂತಹ ವಸ್ತು ಪ್ರದರ್ಶನ. ಪ್ರತಿವರ್ಷವೂ ರಂಗತೋರಣದ ಆವರಣದಲ್ಲಿ ಈ ಕಲಾತೋರಣವನ್ನು ಆಯೋಜಿಸುತ್ತಾರೆ. ಅಷ್ಟೇ ಅಲ್ಲದೇ ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ. ಇನ್ನೊಂದು ಈ ಕಲಾತೋರಣ ವೈಶಿಷ್ಟತೆ ಎಂದರೆ ಇಲ್ಲಿ ವಿದ್ಯಾರ್ಥಿಗಳು ರಂಗಭೂಮಿಗೆ ಸಂಬಂಧಿಸಿದ ಪುಸ್ತಕಗಳನ್ನು ಈ ಕಲಾತೋರಣದಲ್ಲಿ ಪ್ರದರ್ಶನಗೊಂಡರೆ ಅವರಿಗೆ 1000ರೂ ಗಳನ್ನು ಬಹುಮಾನವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ರಂಗಭೂಮಿಯ ಕಡೆಗೆ ಆಸಕ್ತಿ ತೋರಲಿ ಎಂಬುದೇ  ಈ ಪ್ರದರ್ಶನದ ಸದಾಶಯ.
  ರಂಗಚಾವಡಿ..
ವೇದಿಕೆಯ ಮೇಲೆ ನಟನೆ ಮಾಡಿದ ನಟನಾಕಾರರು, ತಮ್ಮ ನಟನೆಯ ಬಗ್ಗೆ ಹಾಗೂ ರಂಗಭೂಮಿಯ ಬಗ್ಗೆ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳುವ ವೇದಿಕೆಯೆ ರಂಗಚಾವಡಿ. ಇದರ ಒಂದು ವಿಶೇಷತೆ ಎಂದರೆ ವೇದಿಕೆಯ ಮೇಲೆ ತಮ್ಮ ನಟನೆ ಮುಗಿದ ನಂತರ ಅದೇ ಉಡುಪಿನಲ್ಲಿ ಈ ವೇದಿಕೆಗೆ ಬಂದು ತಮ್ಮ ಅನುಭವನ್ನು ಹಂಚಿಕೊಳ್ಳಬೇಕು. ಬಣ್ಣ ಮಾಸುವ ಮುನ್ನ ಒಂದು ಅನುಭವ.

ರಂಗಬೆಳದಿಂಗಳು..

ನಾಟಕ ನೋಡಿ ದಣಿದ ಮನಸ್ಸುಗಳಿಗೆ ಒಂದು ಹುಮ್ಮಸ್ಸು ತರಲು ಹಾಗೂ ಪಾತ್ರಧಾರಿಗಳ ಬಹುಮುಖ ಪತ್ರಿಭೆಗಯನ್ನು ತೋರ್ಪಡಿಸಲು ರಂಗತೋರಣದ ಆವರಣದಲ್ಲಿ ಇಳಿಸಂಜೆಯಲ್ಲಿ ಆಯೋಜಿಸುವ ಫೈರಕ್ಯಾಂಫ್. ಇಲ್ಲಿ ಹಾಡು, ನೃತ್ಯ, ಅಭಿನಯ, ಮಿಮಿಕ್ರಿಯೆ, ಕವನಗಳು, ಹೀಗೆ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಸುತ್ತಲೂ ನೆರೆದಿದ್ದ ಜನರ ನಡುವೆ ಬೆಂಕಿಯನ್ನು ಹಾಕಿ ಅದರ ಸುತ್ತ ಈ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.

ವೈಭವ ಯಾತ್ರೆ.

ನಾಟಕೋತ್ಸವದ ಸರ್ವಾಧ್ಯಕ್ಷರನ್ನು ಆನೆ ಅಂಬಾರಿಗಳ ಮೂಲಕ ನಾನಾ ಕಲಾತಂಡಗಳ ಮೂಲಕ ಅವರನ್ನು ಕರೆ ತರುವ ಒಂದು ಯಾತ್ರೆಯೇ ವೈಭವ ಯಾತ್ರೆ. ನಾಟಕೋತ್ಸವದಲ್ಲಿ ಭಾಗವಹಿಸಿದ ಎಲ್ಲ ತಂಡಗಳು ಈ ಯಾತ್ರೆಗಳಲ್ಲಿ ನಾನಾ ವೇಷಭೂಷಣಗಳನ್ನು ತೊಟ್ಟುಕೊಂಡು ಸುತ್ತಲೂ ನೆರೆದಿದ್ದ ಜನರನ್ನು ರಂಜಿಸುತ್ತಾರೆ. ವೈಭವ ಯಾತ್ರೆಯಲ್ಲಿ ಯಾವ ತಂಡ ಉತ್ತಮ ಪ್ರದರ್ಶನ ತೊರುತ್ತದೆಯೋ ಆ ತಂಡಕ್ಕೆ ಬಹುಮಾನವನ್ನು ನೀಡಲಾಗುತ್ತದೆ. ಇದರ ಆಯ್ಕೆಯನ್ನು ನೆರೆದಿದ್ದ ಜನರೆ ಮಾಡುತ್ತಾರೆ. ಈ ಯಾತ್ರೆಯನ್ನು ನೋಡುವುದು ಒಂದೇ ಮೈಸೂರು ದಸರೆಯನ್ನು ನೋಡುವುದು ಒಂದೆ.
    ಒಟ್ಟಾರೆಯಾಗು ರಂಗತೋರಣ ಬಳಗ ರಂಗಭೂಮಿಯಲ್ಲಿ ವಿಭಿನ್ನ , ವಿಶಿಷ್ಟ ಪ್ರಯೋಗಳನ್ನು ಮಾಡುತ್ತಾ, ಹೊಸ ಪ್ರತಿಭೆಗಳನ್ನು ಹುಟ್ಟು ಹಾಕಿ, ರಂಗ ಕಲೆಯನ್ನು ಉಳಿಸಿ ಬೆಳೆಸುತ್ತಿದೆ.  ಈ ಕಾರ್ಯದ ಹಿಂದೆ ಅದೇಷ್ಟೂ ಕೈಗಳು ಅವಿರತವಾಗಿ ಶ್ರಮಿಸುತ್ತಿವೆ. ಅಂತಹ ಕಾಣದ ಕೈಗಳಿಗೆ ನಮ್ಮದೊಂದು ನಮನ. ಇವರ ಈ ಕಲಾ ಸೇವೆ ಹೀಗೆ ನಿರಂತರವಾಗಿ ಮುಂದುವರೆದು ನಮ್ಮ ರಂಗಭೂಮಿ ಮತ್ತೆ ರಂಗಾಗಲಿ ಎಂಬುದೇ ಜನರ ಆಶಯ.
ಮಂಜುನಾಥ ಗದಗಿನ
8050753148

Tuesday, 8 March 2016

ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳು..!


ಇಷ್ಟ್ಯಾಕ ಕಾಡ್ತಿ ನನ್ನ- 


ಎದೆಯಾಳದಲ್ಲಿ ಇಳಿದ ನೆನಪುಗಳೇ ಹಾಗೆ, ಬೇಡವೆಂದರೂ, ಕೆದಕಿ, ಕೆಣಕಿ, ಕಾಡುತ್ತವೆ, ಕೆರಳಿಸುತ್ತವೆ. ಧೋ..ಎಂದು ನೆನಪಿನ ಮಳೆಯನ್ನೆ ಸುರಿಸಿ, ಕಣ್ಣಂಚನ್ನು ಒದ್ದೆಯಾಗಿಸುತ್ತವೆ. ಅಂತಹ ನೆನಪೊಂದು ಸದ್ದಿಲ್ಲದೇ ಎದೆಯಾಳದಲ್ಲಿ ಸರಿದಾಡುತ್ತಿದೆ, ನೆನಪುಗಳೊಂದಿಗೆ ಸರಸವಾಡುತ್ತಾ, ಬೇಂದ್ರೆ ನಾಡಿನ ಅರೆ, ಬರೆ ಬೆಂದ ನೆನಪುಗಳನ್ನು ಎಳೆಎಳೆದು ಹೊಸ ಮನ್ಮಂತರವನ್ನು ಸೃಷ್ಠಿಸುತ್ತಿದೆ.
ನಾನು ನನ್ನ ಕೆಲಸ ಎಂದು ನನ್ನದೆ ಲೋಕದಲ್ಲಿ ಹೊರ ಜಗತ್ತಿನ ಗಂಧ ಗಾಳಿಯು ಗೊತ್ತಿಲ್ಲದೆ ಇದ್ದ ಹಳ್ಳಿ ಹೈದನಾಗಿದ್ದೆ. ನನಗಾಗ ಧಾರವಾಡ  ಹೊಸ ಪ್ರಪಂಚ. ನಮ್ಮ ಊರಿನಿಂದ ಅಲ್ಲಿಗೆ ಕಲಿಯಲು ಹೋದವರು, ಆವಾಗ ಆವಾಗ ಊರಿಗೆ ಬಂದು ಧಾರವಾಡ ಎಂಬ ಹೊರ ಜಗತ್ತಿನ ಬಗ್ಗೆ ರೋಚಕ ಹಾಗೂ ಸ್ವಾರಸ್ಯಕರ ವಿಷಯಗಳನ್ನು ಹೇಳುತ್ತಿದ್ದರು. ಆಗ್ಲೆ ನನ್ಗೆ ಗೊತ್ತಾಗಿದ್ದು, ಧಾರವಾಡ ಎಂಬ ಸುಂದರ ನಗರಿಯ ತುಸು ಮಾಹಿತಿ. ವಿದ್ಯಾಕಾಶಿ, ನಿವೃತ್ತರ ಸ್ವರ್ಗ, ಕವಿಗಳ ನಾಡು ಎಂಬಿತ್ಯಾದಿ ಹೆಸರುಗಳನ್ನು ಕೇಳುತ್ತಿದ್ದೆ. ಇದೇ ಕಾರಣಕ್ಕೆ ಧಾರವಾಡ ಎಂದರೆ, ಅದೇನೋ ಮೈ-ಮನ ಫುಳಕಿತ್ತವಾಗುತ್ತಿದ್ದವು, ಅದನ್ನು ನೋಡಬೇಕು ಎಂಬ ಆಸೆ  ಹೆಮ್ಮರವಾಗಿ ಬೆಳೆದಿತ್ತು.
   ಇದೇ ಸಮಯಕ್ಕೆ ಪಿಯುಸಿ ಮುಗಿಯಿತು. ರೋಗಿ ಬಯಸಿದ್ದು, ಹಾಲು ಅನ್ನ ವೈದ್ಯ ಹೇಳಿದ್ದು ಹಾಲು ಅನ್ನ ಎಂಬಂತೆ. ನನ್ನ ಕನಸಿನ ಧಾರಾವಾಡದಲ್ಲಿ ಉನ್ನತ ಶಿಕ್ಷಣ ಕಲಿಯಲು ಅವಕಾಶ ದೊರೆಯಿತು. ಹೊಸ ಕನಸು, ಹೊಸ ಭರವಸೆ, ಹೊಸ ಉತ್ಸಾಹ, ಹೊಸ ಛಲಗಳೊಂದಿಗೆ ಧಾರವಾಡ ಎಂಬ ಮೋಹಕ ನಗರಿಗೆ ಪುಟ್ಟ ಮಗುವಾಗಿ ಅಂಬೆಗಾಲಿಟ್ಟೆ. ದಿಟ್ಟ ಹಜ್ಜೆಗಳ ಅಡಿಯಲ್ಲಿ ಧಾರವಾಡವನ್ನು ಅಚ್ಚರಿಯ ಕಣ್ಗಳಲ್ಲಿ ಆಶ್ವಾಧಿಸಲು ಪ್ರಾರಂಭಿಸಿದೆ. ಇಷ್ಟು ಬೇಗ ಧಾರವಾಡ ನನ್ನನ್ನು ತನ್ನೊಡಲಿನ ಮಗುವಾಗಿ ಸ್ವೀಕರಿಸುತ್ತದೆ ಎಂಬ ಕಲ್ಪನೆ ಕೂಡಾ ನನಗೆ ಇರಲಿಲ್ಲ. ಆವಾಗ್ಲೆ ಗೊತ್ತಾಗಿದ್ದು ಧಾರವಾಡಕ್ಕೆ ಎಲ್ಲವನ್ನೂ, ಎಲ್ಲರನ್ನೂ ಒಗ್ಗಿಸಿ, ತಗ್ಗಿಸುವ ತಾಕತ್ತಿದೆ ಎಂದು.
ಧಾರವಾಡದ ಮಳೆ, ಆ ಹಚ್ಚ ಹಸಿರು, ಎಳೆ ಬಿಸಿಲು, ಖಡಕ್ ರೊಟ್ಟಿ, ಜುಬ್ಲಿ ಸರ್ಕಲ್, ಬೇಂದ್ರೆ ಅಜ್ಜನ ಸಾಧನಕೇರಿ, ಶಾಲ್ಮಲೆಯ ಒಡಲು, ಶ್ರೀನಗರ ಸರ್ಕಲ್, ರೈಲ್ವೆ ಟ್ರ್ಯಾಕ್ ಮೇಲೆ ತೆಗೆಸಿದ ಸೆಲ್ಪಿ, ಒಂದೇ ಎರಡೆ ಧಾರಾನಗರಿಯ ನೆನಪುಗಳು, ಬಿಚ್ಚಿಟ್ಟು ಹಂಚಿಕೊಳ್ಳಲಾಗದಷ್ಟು ಎದೆಯಾಳದಲ್ಲಿ ಆಳವಾದ ಕಂದಕವನ್ನು ಸೃಷ್ಠಿಸಿವೆ.
ನಾವು ಯಾವುದೇ ಒಂದು ಸ್ಥಳದಲ್ಲಿ ಇದ್ದಾಗ, ಆ ಸ್ಥಳದ ಮಹಿಮೆ ಗೊತ್ತಾಗುವುದಿಲ್ಲ. ಇದ್ದಾಗ ’ಅಲ್ಲೆನ ಐತಿ ಬಿಡ್’ ಎಂಬ ಉದಾಸೀನ ಮನೋಭಾವನೆಯಿಂದ ಎಲ್ಲವನ್ನು ಅಲಗಳೆಯುತ್ತೆವೆ. ನಾವು ಆ ವಸ್ತು ಅಥವಾ ಸ್ಥಳ ನಮ್ಮನ್ನು ಬಿಟ್ಟು ದೂರ ಹೋದಾಗಲೇ, ಅದರ ನೈಜ ಮಹತ್ವ ಅರಿವಾಗುವುದು. ಇದು ನನ್ನನೊಬ್ಬನ ಮಾನಸಿಕ ಸ್ಥಿತಿ ಅಲ್ಲ. ಇದು ಪ್ರತಿಯೊಬ್ಬ ಮನುಷ್ಯನ ನೈಜ ಸ್ಥಿತಿಯಾಗಿದೆ. ಈಗ ಆಗಿರುವುದು ಅದೇ, ಧಾರವಾಡದಲ್ಲಿ ಇದ್ದಾಗ ಎಲ್ಲವನ್ನು ಉದಾಸಿನ ಮಾಡುತ್ತಾ, ಬರೀ ವಿನಾಃಕಾರಣ ಕಾಲಹರಣ ಮಾಡಿ ವಿದ್ಯಾರ್ಥಿ ಜೀವನ ಮುಗಿಸಿದೆ.
ಇದ್ದ ಅಷ್ಟು ದಿನಗಳು ಧಾರವಾಡ, ಸುಂದರ ಅನುಭವಗಳನ್ನು, ಬದುಕಿನ ಪಾಠವನ್ನು, ಸಮಾಜ ಎದುರಿಸುವ ರೀತಿಗಳನ್ನು ಕಲಿಸಿಕೊಟ್ಟಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಒಬ್ಬ ಗೆಳೆಯಂತೆ, ನಿಂತು ನನ್ನ ತಪ್ಪು-ಒಪ್ಪುಗಳಿಗೆ ಸಲಹೆ ಸೂಚನೆ ನೀಡುತ್ತಾ. ನನ್ನನ್ನು ತಿದ್ದಿ, ತಿಡಿ ಪೋಷಿಸಿದೆ. ಅವ್ವನಂತೆ ಸಾಕಿದೆ, ಅಪ್ಪನಂತೆ ಬೇಕು ಬೇಡಗಳನ್ನು ಆಲಿಸಿ, ಸರಿದಾರಿಯಲ್ಲಿ ಸಾಗುವಂತೆ ಎಚ್ಚರಿಕೆ ನೀಡಿದೆ. ಏನೆಂದು, ಹೇಳಲ್ಲಿ ನನ್ನ ಧಾರಾನಗರಿಯ ಬಗ್ಗೆ. ಏಷ್ಟು ಹೇಳಿದರೂ, ಅದೊಂದು ಮುಗಿಯದ ಕಥೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದ್ರೆ, ಊರು ಬಿಟ್ಟು ಬಂದಾಗ ನನ್ನನ್ನು ಸಾಕಿ ಸಲುಹಿದ್ದು ಇದೇ ನನ್ನ ಧಾರವಾಡ.
      ಜೀವನದಲ್ಲಿ ಎಡವದಂತೆ ಎಚ್ಚರಿಸಿದ ಆ ಕಿತ್ತೋದ ರಸ್ತೆಗಳು, ಸದಾ ಹಸಿರು ಹೊದ್ದು ಮಲಗಿ, ಮನಕ್ಕೆ ತಂಪು ನೀಡುತ್ತಿದ್ದ ಕ್ಯಾಂಪಸ್‌ನ ಸಸ್ಯಶಾಲ್ಮಲೆ, ಮೈ-ಕೈಗೆ ಚಳಿ ಬೀಡಿಸಿದ ಆ ಪತ್ರಿಕೋದ್ಯಮದ ದಾರಿ, ಉತ್ಸಾಹ ಮತ್ತು ಪ್ರೋತ್ಸಾಹ ತುಂಬಿದ ಗೆಳೆಯರು, ವೃತ್ತಿ ಬದುಕಿನ ಪಾಠ ಕಲಿಸಿದ ಗುರುಗಳು, ಎಲ್ಲವೂ ಧಾರಾನಗರಿ ಕಟ್ಟಿಕೊಟ್ಟ ಬದುಕಿನ ಅವಿಸ್ಮರಣಿಯ ಕ್ಷಣಗಳು. ಮೊನ್ನೆ ಜಿಟಿ ಮಳೆಗೆ ಹುಡಿಯದ್ದ ಆ ಮಣ್ಣಿನ ಸುವಾಸನೆಯಲ್ಲಿ ಧಾರವಾಡದ ನೆನಪು ಕೂಡಾ ತೇಲಿ ಬಂತು. ಅದು ನನ್ನವಳ ನೆನಪಿನ ಹಾಗೆ.
ಮಂಜುನಾಥ ಗದಗಿನ
ಮೊ,8050753148

Monday, 8 February 2016

ಸಾವಿರ ವರ್ಷದ ಇತಿಹಾಸದ ಹಳೆಹುಬ್ಬಳ್ಳಿ ದೇಗುಲ


ಬರಹ: ಮಂಜುನಾಥ ಗದಗಿನ
ರಾಜ್ಯದ ಪ್ರಮುಖ ನಗರಿಗಳಲ್ಲೊಂದಾಗಿರುವ ಹುಬ್ಬಳ್ಳಿಯಲ್ಲಿ ಐತಿಹಾಸಿಕ ದೇವಾಲಯಗಳು ಅಗೋಚರವಾಗಿ ಉಳಿದಿರುವುದು ಇತಿಹಾಸ ಪ್ರಜ್ಞೆಯ ಬಗ್ಗೆ ಚರ್ಚೆಗೆ ಗ್ರಾಸವಾಗಿದೆ. ಹುಬ್ಬಳ್ಳಿಯಲ್ಲಿಯೂ ಇಷ್ಟೊಂದು ಹಳೇಯದಾದ ದೇಗುಲಗಳು ಇವೆ ಎಂಬುದು ಬಹುತೇಕ ಜನರಿಗೆ ಅರಿವು ಇದ್ದರೂ ಅವುಗಳ ಬಗ್ಗೆ ಯುವ ಪೀಳಿಗೆಗೆ ತಿಳಿಸಿಕೊಡುವಲ್ಲಿ ಅಡಳಿತ ಮತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.
ಸಾವಿರ ವರ್ಷಗಳ ಇತಿಹಾಸವುಳ್ಳ ದೇವಾಲಯವೊಂದು ಹುಬ್ಬಳ್ಳಿಯ ಮೂಲಸ್ಥಾನವಾದ ಹಳೇಹುಬ್ಬಳ್ಳಿಯ ಕಿಲ್ಲೆಯಲ್ಲಿ ಇದೆ ಎಂಬುದು ಅಲ್ಲಿರುವ ಜನರಿಗೆ ತಿಳಿಯದ ಸಂಗತಿಯಾಗಿದೆ.
ಹುಬ್ಬಳ್ಳಿಯ ಹಳೇಬಸ್ ನಿಲ್ದಾಣದಿಂದ 3ಕಿ.ಮೀ ದೂರದಲ್ಲಿರುವ ಹಳೇಹುಬ್ಬಳ್ಳಿಯ ಇಂಡಿಪಂಪ ಸರ್ಕಲ್ ಹತ್ತಿರದ ದಿಡ್ಡಿ ಓಣಿ ಪ್ರವೇಶಿಸಿ ಸ್ಪಲ್ಪ ಮುಂದೆ ಸಾಗಿದರೆ, ಕಾಣಸಿಗುವುದೇ ಸಾವಿರ ವರ್ಷ ಇತಿಹಾಸವುಳ್ಳ ಭವಾನಿಶಂಕರ ಎಂಬ ಭವ್ಯ ದೇವಾಲಯ.
ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಈ ದೇವಾಲಯವನ್ನು ಸಂರಕ್ಷಿತ ಪ್ರದೇಶ ಎಂದು ಘೋಷಿಸಿದರೂ ಈ ದೇವಾಲಯವನ್ನು ಗಮನಿಸಿದರೆ  ಇದು ಪ್ರಾಚ್ಯವಸ್ತು ಇಲಾಖೆಗೆ ಸೇರೆದೇಯೇ? ಎಂಬ ಅನುಮಾನ ಕಾಡುತ್ತದೆ. ಇಲ್ಲಿ ‘ಇಲ್ಲ’ಗಳದ್ದೇ ದರ್ಬಾರು. ಒಂದು ಕೌಂಪೌಂಡ್ ಇಲ್ಲ, ದೇವಾಲಯದ ರಕ್ಷಣೆಗೆ ಯಾವುದೇ ಸಿಬ್ಬಂದಿ ಇಲ್ಲ, ಸೂಕ್ತ ನಿರ್ವಹಣೆ ಹಾಗೂ ಸೌಲಭ್ಯಗಳು ಇಲ್ಲದೇ ದೇವಾಯಲ ಹಾಳುಕೊಂಪೆಯಾಗಿರುವುದೇ ಇದಕ್ಕೆ ಸಾಕ್ಷಿ.
ಮಾರ್ಗಸೂಚಿಗಳಿಲ್ಲ..
ದೇವಾಲಯ ಇರುವಿಕೆಯನ್ನು ತೋರಿಸಬೇಕಾದ ಮಾರ್ಗಸೂಚಿಗಳೆ ಈ ದೇವಾಲಯಕ್ಕೆ ಇಲ್ಲದೇ ಇರುವಾಗ, ಈ ದೇವಾಲಯ ಹೊರ ಜಗತ್ತಿಗೆ ಹೇಗೆ ಪರಿಚಯವಾಗಬೇಕು? ಮಾರ್ಗಸೂಚಿ ಫಲಕ ಹಾಕಿ ಐತಿಹಾಸಿಕ ದೇವಾಲಯವೊಂದು ಈ ಪ್ರದೇಶದಲ್ಲಿದೆ ಎಂದು ತಿಳಿಸಬೇಕಾದ ಮಹಾನಗರ ಪಾಲಿಕೆ, ಪ್ರಾಚ್ಯವಸ್ತು ಇಲಾಖೆ ಜಾಣಮೌನ ವಹಿಸಿರುವುದು ಐತಿಹಾಸಿಕ ದೇವಾಲಯ ನೇಪಥ್ಯಕ್ಕೆ ಸರಿದಿದೆ.
ಎಲ್ಲೆಂದರಲ್ಲಿ ಕಸ..
ಇತಿಹಾಸ ಸಾರಬೇಕಾದ ದೇವಾಲಯಕ್ಕೆ ಅನಾಥ ಪ್ರಜ್ಞೆ ಕಾಡುತ್ತಿದೆ. ಸೂಕ್ತ ನಿರ್ವಹಣೆ ಇಲ್ಲದೇ, ದೇವಾಸ್ಥನ ಆವರಣ ಕಸದಿಂದ ತುಂಬಿಕೊಂಡು ಮಲಿನವಾಗಿದೆ. ಇನ್ನೂ ಕಂಪೌಂಡ್ ಇಲ್ಲದೇ ಇರುವುದರಿಂದ ಹಂದಿ, ನಾಯಿಗಳಿಗೆ ಇಲ್ಲಿ ಮುಕ್ತ ಪ್ರವೇಶವಿದೆ. ಅವುಗಳು ಕೂಡ ತಮ್ಮ ಕ್ರಿಯೆಗಳನ್ನು ಆವರಣದಲ್ಲೆ ಮಾಡತ್ತಿವೆ. ಆವರಣದ ಸುತ್ತಲೂ ಗಿಡ ಗಂಟೆಗಳು ಬೆಳೆದು ನಿಂತಿರುವುದು ದೇವಾಲಯ ಅಸ್ತಿತ್ವಕ್ಕೆ ಧಕ್ಕೆ ಬಂದಿದೆ ಎಂಬುದನ್ನು ಸಷ್ಟಪಡಿಸುತ್ತದೆ.
ಅವಶೇಷಗಳ ಅವ್ಯವಸ್ಥೆ
ಇತಿಹಾಸವನ್ನು ಅನಾವರಣ ಮಾಡುವ  ಈ ದೇವಾಲಯದ ಅವಶೇಷಗಳು ಗಿಡ-ಗಂಟೆಗಳಲ್ಲಿ ಅನಾಥವಾಗಿ ಬಿದ್ದಿವೆ. ಈ ಅವಶೇಷಗಳನ್ನು ಸಂರಕ್ಷಿಸುವ ಕೆಲಸವನ್ನು ಯಾರು ಮಾಡುವರು ಎಂದು ಆ ಭವಾನಿ ಶಂಕರನನ್ನೇ ಕೇಳಬೇಕು.  ದೇವಾಲಯವು ತನ್ನದೇ ಟ್ರಸ್ಟ್ ಹೊಂದಿದ್ದು, ಅದು ಹೆಸರಿಗೆ ಮಾತ್ರ ಟ್ರಸ್ಟ ಎಂಬಂತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.
ವಿಶಿಷ್ಟ ದೇವಾಲಯ
ಸುಮಾರು 1000 ವರ್ಷಗಳ ಹಿಂದೆ ಬಾದಾಮಿ ಚಾಲುಕ್ಯರ ಭುವನೇಕ ಮಲ್ಲನೆಂಬಅರಸ ಈ ದೇವಾಲಯಕ್ಕೆ ಭೂಮಿಧಾನ ಮಾಡಿದ್ದಾನೆ ಎಂದು ಶಿಲಾಶಾಸನವೊಂದು ಉಲ್ಲೇಖಿಸಿದೆ(ಈಗ ಈ ಶಾಸನ ಮುಂಬಯಿನ ಪ್ರಿನ್ಸ್ ಆಫ್‌ವೇಲ್ಸ ವಸ್ತು ಸಂಗ್ರಹಾಲಯದಲ್ಲಿ ಇದೆಯಂತೆ). ಈ ದೇವಾಯಲವನ್ನು ಯಾರು? ಯಾವಾಗ? ಕಟ್ಟಿಸಿದರು ಎಂಬ ಮಾಹಿತಿಗಳು ದೊರಕಿಲ್ಲ. ಇದು ಮೂರು ಶಿಖರಗಳುಳ್ಳ ತ್ರಿಕೂಟ ಹಾಗೂ ಪಂಚಾಯತನ್(ಈಶ್ವರ, ನಾರಾಯಣ, ವಿಷ್ಣು, ಗಣಪತಿ, ಸೂರ್ಯ, ಪಾರ್ವತಿ ಇರುವ) ದೇವಾಲಯದ ತ್ರಿಕೂಟದ ಕೆಳಗೆ ಮೂರು ಗರ್ಭಗಳಿದ್ದು ಅಲ್ಲಿ ಈಶ್ವರ, ನಾರಾಯಣ, ಗಣಪತಿ ದೇವರುಗಳನ್ನು  ಪ್ರತಿಪ್ಠಾಪಿಸಲಾಗಿದೆ. ಸಪ್ತ ಮಾತೃಕೆಯರಾದ ಬ್ರಾಹ್ಮಿ, ವೈಷ್ಣವಿ, ಮಹೇಶ್ವರಿ, ಇಂದ್ರಾಣಿ, ಕಾತ್ಯಾಯನಿ, ಚಾಮುಂಡಿ ಶಕ್ತಿ ದೇವತೆಗಳನ್ನು ಒಂದೇ ಸೂರಿನಲ್ಲಿ ಕಾಣಬಹುದು.  ದೇಶದಲ್ಲೆ ಅಪರೂಪವಾದ ಸೂರ್ಯ ದೇವರ ಮೂರ್ತಿಯನ್ನು ಇಲ್ಲಿ ಕಾಣಬಹುದಾಗಿದೆ. ಗರ್ಭಗುಡಿಯ ಬಾಗಿಲುಗಳ ಮೇಲೆ ರಂಜು(ಹಗ್ಗ), ರತ್ನ,ಮಧ್ಯದಲ್ಲಿ ಗಜಲಕ್ಷ್ಮಿಯರನ್ನು ಸುಂದರವಾಗಿ ಕೆತ್ತಲಾಗಿದೆ. ಇದೇ ಕಾರಣಕ್ಕೆ ಈ ದೇವಾಲಯವನ್ನು ಜಕಣಾಚಾರ್ಯ ಶೈಲಿ ಎಂದು ಕರೆಯುತ್ತಾರೆ. ಎರಡು ವರ್ಷಗಳ ಹಿಂದೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಈ ದೇವಾಯಲಕ್ಕೆ 11ಲಕ್ಷ ರೂ. ಗಳನ್ನು ನೀಡಿ ಜೀರ್ಣೋದ್ದಾರ ಮಾಡಿಸಿದ್ದಾರೆ. ವರ್ಷದ ಹಿಂದೆ ಪ್ರಾಚ್ಯವಸ್ತು ಇಲಾಖೆ 40 ಲಕ್ಷ ರೂ ವೆಚ್ಚದಲ್ಲಿ ಮುಖಮಂಟಪ, ದ್ವಾರ ನಿರ್ಮಿಸಿದೆ ಎಂದು ಸ್ಥಳೀಯ ಹಿರಿಯರಾದ ಲಕ್ಷ್ಮೇಶ್ವರ ಅವರು ಹೇಳುತ್ತಾರೆ.
ನೋಟಿ ನೀಡಲಾಗಿದೆ
ದೇವಸ್ಥಾನ ಸುತ್ತಲೂ ಇರುವ ಜಾಗೆಯನ್ನು ಅನೇಕರು ಅತಿಕ್ರಮಿಸಿಕೊಂಡಿದ್ದಾರೆ.  ಇವರಿಗೆ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಎರಡು ವರ್ಷಗಳ ಹಿಂದೆ, ಅತಿಕ್ರಮಣ ಮಾಡಿರುವ ಜಾಗೆಯನ್ನು ತೆರವುಗೊಳಿಬೇಕೆಂದು ಸಂಬಂಧಿಸಿದವರಿಗೆ ನೋಟಿಸ ನೀಡಿದೆ.  ನೋಟಿಸ್ ನೀಡಿ ಎರಡು ವರ್ಷಗಳು ಗತಿಸಿದರು, ಅತಿಕ್ರಮಣಕಾರರು ತೆರವುಗೊಳಿಸದೇ ಇರುವುದು ಮತ್ತು ಇಲಾಖೆ ಮೌನ ಜನರ  ಅನುಮಾನಗಳಿಗೆ ಕಾರಣವಾಗಿದೆ.
ಉತ್ಸವಗಳ ಮೂಲಕ ಬೆಳಕಿಗೆ ಬರಲಿ
ಲಕ್ಷಾಂತರ ಹಣ ಖರ್ಚು ಮಾಡಿ ಪ್ರತಿ ವರ್ಷ ಜಿಲ್ಲಾಡಳಿತ ಜಿಲ್ಲಾ ಉತ್ಸವವನ್ನು ಗಾರ್ಡ್‌ನ್‌ಗಳು , ರಂಗಮಂದಿರಗಳಲ್ಲಿ, ಕೆಸಿಡಿ ಕಾಲೇಜು, ಮಠಗಳಲ್ಲಿ ಮಾತ್ರ ಆಯೋಜಿಸುತ್ತಿದೆ. ಇತಿಹಾಸ ಬಂಬಿಸುವ ಚಂದ್ರಮೌಳೇಶ್ವರ, ಭವಾನಿ ಶಂಕರ ದೇವಾಲಯ ಸೇರಿದಂತೆ ಹಲವು ಐತಿಹ್ಯದ ದೇವಾಲಯಗಳನ್ನು ಉತ್ಸವದ ಕಾರ್ಯಕ್ರಮಗಳಿಗೆ ಆಯ್ಕೆ ಮಾಡದೇ ಇರುವುದ ಜಿಲ್ಲಾಡಳಿತ ಮತು ಕನ್ನಡ ಸಂಸ್ಕೃತಿ ಇಲಾಖೆ ಉದ್ದೇಶಪೂರ್ವಕ ನಿರ್ಲಕ್ಷಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಮುಂಬರುವ ಉತ್ಸವದಲ್ಲಿ ಈ ದೇವಾಲಯಗಳನ್ನೂ ಆಯ್ಕೆ ಮಾಡಿ ಸುಸಜ್ಜಿತ ಕಾರ್ಯಕ್ರಮ ಆಯೋಜಿಸಿದರೆ ಉತ್ಸವ ಸಾರ್ಥಕತೆ ಪಡೆಯುವುದಲ್ಲದೇ ಇತಿಹಾಸಕ್ಕೆ ಹೊಸ ಮೆರಗು ತರುವುದರಲ್ಲಿ ಎರಡು ಮಾತಿಲ್ಲ.
----
ಹಂಪಿ ಗುಡಿಗಳ ಸಾಲಿಗೆ ಸೇರಿದ ಈ ದೇವಾಯಲವು, ಮೂರು ಶಿಖರ ಹಾಗೂ ಪಂಚಾಯತನ್ ದೇವರುಗಳನ್ನು ಹೊಂದಿರುವ ರಾಜ್ಯದ ಅಪರೂಪ ದೇವಾಲಯವಾಗಿದ್ದು, ದೇಶದಲ್ಲೆ ವಿರಳವಾಗಿ ಕಾಣಸಿಗುವ ಸೂರ್ಯ ದೇವರನ್ನು ಇಲ್ಲಿ ಕಾಣಬಹುದಾಗಿದೆ.

Sunday, 7 February 2016

ಅನಿವಾರ್ಯತೆ ಕಲಿಸಿದ ಪಾಠ!

  ಅನಿವಾರ್ಯತೆಗಳು ಮನುಷ್ಯನ ಜೀವನವನ್ನು ಏಷ್ಟೊಂದು ಬದಲಾಯಿಸುತ್ತವೆ ಅಲ್ವಾ? ಈ ಶಿಕ್ಷಣವೆಂಬ ಅನಿವಾರ್ಯತೆಗೆ ಕಟ್ಟು ಬಿದ್ದು, ತಿಂದುಂಡು, ಆಡಿ ಬೆಳೆದ ಮನೆ, ಪಾರ್ಶ್ವವಾಯು ಪೀಡಿತ ಅಪ್ಪ, ಕಷ್ಟಗಳಲ್ಲೇ ಕೈತೊಳೆಯುತ್ತಿರುವ ಅವ್ವ, ನನ್ನ ಕಷ್ಟಕ್ಕೆ ಹೆಗಲೊಡ್ಡಿ ಸಾಂತ್ವಾನ ಹೇಳುತ್ತಿದ್ದ ಗೆಳೆಯರು, ಅಕ್ಕರೇಯ ಪ್ರೀತಿ ತೋರಿದ ಚಿಗವ್ವ, ಕಾಕಾನನ್ನು ಬಿಟ್ಟು  ಶಹರದಲ್ಲಿ ಎಲ್ಲವೂ ಇದ್ದು ಏನು ಇಲ್ಲ ಎಂಬಂತೆ ಬದುಕಿದ್ದೇನೆ.
   ನೂರಾರು ಆಸೆ, ಆಕಾಂಕ್ಷೆಗಳನ್ನು ಬೆನ್ನಿಗೆ ಕಟ್ಟಿಕೊಂಡು ಪ್ಯಾಟೆ ಎಂಬ ಪರದೇಶಕ್ಕೆ ಪ್ರವೇಶಿಸಿದೆ. ಶಹರ ಜೀವನ ಬಡವರಿಗಲ್ಲ, ಅದು ದುಡ್ಡಿದ್ದವರ ದುನಿಯಾ ಎಂಬ ಮಾತು ನಮ್ಮ ಹಳ್ಳಿಯಲ್ಲಿ ಪದೇ ಪದೇ ಕೇಳಿ ಬರುತ್ತಿತ್ತು. ಆದರೆ ಆ ಮಾತುಗಳಿಗೆ ಜೀವ ಬಂದದ್ದು, ಶಹರದ ಆರಂಭದ ದಿನಗಳಲ್ಲೆ. ಹಳ್ಳಿಯಲ್ಲಿ ಒಂದು ರೂಪಾಯಿ ಕೊಟ್ಟು ಟೀ ಕೂಡಿಯುತ್ತಿದ್ದ ನಾನು ಶಹರದಲ್ಲಿ ಐದು ರೂಪಾಯಿ ಕೊಟ್ಟು ಟೀ ಕುಡಿಯಲು ಪ್ರಾರಂಭಿಸಿದೆ. ಇನ್ನೂ ಒಂದೊತ್ತಿನ ನಾಸ್ಟಾ, ಊಟಗಳಗಳ ಬೆಲೆ ನಮ್ಮೂರಿನ ಒಂದು ವಾರದ ಸಂತೆಯ ಖರ್ಚಿಗೆ ಸಮವಾಗಿತ್ತು. ಆದರೂ ಒಂದು ಇದ್ದೋ, ಇನ್ನೊಂದು ಇಲ್ಲದೇಯೇ ಶಹರ ಜೀವನಕ್ಕೆ ಒಗ್ಗಿಕೊಂಡೆ. ಯಾಕಂದ್ರೆ ಇದು ಬದುಕಿನ ಅನಿವಾರ್ಯತೆ.
   ಇನ್ನೂ ದಿನ ಬೆಳಗಾದ್ರೆ ಸಾಕು, ಕಾಲೇಜು, ಪ್ರಯಾಣ, ಆ ದೂರದ ದಾರಿ, ಲೆಕ್ಚರ ಹೇಳುವ ಕ್ಲಾಸುಗಳಲ್ಲಿ ಏನಿಲ್ಲವೆಂದರೂ ಹಾಜರಾತಿಗಾಗಿ ಕುಳಿತು ಕೇಳಬೇಕಾದ ಪರಸ್ಥಿತಿ. ಕಾಡು ದೇವರ ಕಾಟ ಕಳೆಯುವ ಹಾಗೆ ಮಾಡುವ ಸಮೀನಾರಗಳು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಬರೆಯುವ ಟೆಸ್ಟಗಳು, ಕಾರಣಗಳೇ ಇಲ್ಲದೇ ಗೆಳೆಯರೊಂದಿಗೆ ಮಾಡುವ ತರ‌್ಲೆಗಳು, ವಿನಾಃ ಕಾರಣ ಕಾಲು ಕೆದರಿ ಜಗಳಕ್ಕೆ ನಿಲ್ಲುವ ಪರಸ್ಥಿತಿಗಳು, ಗೊತ್ತಿದ್ದೋ..ಗೋತ್ತಿಲ್ಲದೇಯೋ.. ಹುಡ್ಗಿಯನ್ನು ಹಿಂಬಾಲಿಸುವ ಮನಸ್ಸು, ಪ್ರತಿದಿನ ಕಣ್ಣಂಚಲಿ ಮೂಡುವ ಅವ್ವ ನೆನಪುಗಳು ನನ್ನ ಬದುಕು ಸೃಷ್ಠಿಸಿರುವ ಅನಿವಾರ್ಯತೆಗಳು.
  ರಜೆಗೆಂದು ಊರಿಗೆ ಹೋದಾ, ಇನ್ನೂ ನಿಂದು ಸಾಲಿ ಕಲಿಯೋದು ಮುಗಿದಿಲ್ಲ, ಏನ್. ಹಂಗ್ ಎಷ್ಟ ವರಷ ಸಾಲಿ ಕಲ್ತಿ. ಪಾಪಾ ನಿಮ್ಮ ಅವ್ವ ಹಂಗ್ ಎಷ್ಟ ವರುಷ ನಿಮ್ಮಪ್ಪ ಚಾಕರಿ ಮಾಡ್ಕೊಂತ ಇರ‌್ಬೇಕು. ಪಾಪಾ ಆ ಜೀವಕ್ಕ ಸುಖ ಅನ್ನೋದೆ ಇಲ್ಲ. ನಿಮ್ಮಪ್ಪ ನೋಡಿದ್ರ ದಿನ ಬೆಳಗಾದ್ರ ಸಾಕ, ಅವಳ್ನ ಕಾಡ್ತಾಯಿರ‌್ತಾನ. ಇನ್ನ ನಿಮ್ಮವ್ವ ಅತ್ತಗ ನಿಮ್ಮಪ್ಪನ ಚಾಕರಿನು ಮಾಡ್ಬೇಕು. ಇತ್ತಾಗ ದುಡಕಿನು ಮಾಡ್ಬೇಕು. ಎಂದು ಜನರ ಹೇಳಿದಾಗ ಕಣ್ಣುಗಳು ಒದ್ದೆಯಾಗುತ್ತವೆ. ಅವರ ಪ್ರಶ್ನೆಗಳಿಗೆ ಉತ್ತರಿಸದೇ ಸುಮ್ಮನಾಗುತ್ತೇನೆ ಯಾಕಂದ್ರೆ ಇದು ನನ್ಗೆ ನಾನೇ ತಂದುಕೊಂಡ ಅನಿವಾರ್ಯತೆ.
  ಇನ್ನೂ ಕೆಲವೇ ದಿನಗಳಲ್ಲಿ ವಿದ್ಯಾರ್ಥಿ ಜೀವನ ಕೊನೆಯಾಗುತ್ತಿದೆ. ಇನ್ನೇನಿದ್ದರೂ ಬದುಕು ಕಲಿಸುವ ಪಾಠ ಕಲಿಯಲು ಸಿದ್ಧವಾಗಬೇಕಾಗಿದೆ. ಅಷ್ಟೇ ಅಲ್ಲದೇ ಭವಿಷ್ಯದ ಬಗೆಗಿನ ಸಾವಿರಾರು ಆಸೆಗಳು, ಆಕಾಂಕ್ಷೆಗಳು ಕೈಗೂಡುವ ಸಮಯ. ಆದರೆ ಈಗ ನನ್ನ ಬದುಕಿಗೆ ಅನಿವಾರ್ಯವಾದದ್ದು ಒಂದು ಉತ್ತಮ ಕೆಲಸ ಅದು ಸುದ್ದಿ ಮನೆಯಲ್ಲಿ ಸದ್ದು ಮಾಡುವ ಕೆಲಸ.ಈ  ಕೆಲಸಕ್ಕಾಗಿ ಎಂತಹ ಅನಿವಾರ್ಯತೆಗಳನ್ನು ಸೃಷ್ಠಿಸಲು ಸಿದ್ಧ, ಎದುರಿಸಲು ಸಿದ್ಧ ಯಾಕಂದ್ರೆ ಅನಿವಾರ್ಯತೆಗಳು ನನ್ನನ್ನು ಗಟ್ಟಿಯಾಗಿಸಿವೆ.
ಮಂಜುನಾಥ ಗದಗಿನ
8050753148





ಜಟ್ಟು ಬೀಡುವದು ಈಗ ಫ್ಯಾಶನ್ ಕಣ್ರೀ!!


ಇದು ಮೊದಲೇ ಆಧುನಿಕತೆಯ ಕಾಲ. ಇಲ್ಲಿಯ ಆಚಾರ, "ಚಾರಗಳಲ್ಲಿ , ಉಡುಗೆ-ತೊಡುಗೆಗಳಲ್ಲಿ ಫ್ಯಾಶನ್ ಎಂಬ ಮಾಯಾ" ಹೊಕ್ಕಿಕೊಂಡಿದೆ. ಅದು ಹುಡುಗಿ ಹುಡುಗರ ಡ್ರೆಸ ಹಾಕ್ಕೊಂಡು ಹುಡ್ಗುರ ಕುಲವೇ ನಾಚಿಸುವ ಹಾಗೆ ರಸ್ತೆ ಮಧ್ಯ ಹೋಗ್ತಾುದ್ರೆ. ಇದು ಹುಡ್ಗಾನಾ!? ಹುಡ್ಗಿನಾ!? ಎಂಬ ಅನುಮಾನ ಕಾಡುವುದು ಇಂದಿನ ಫ್ಯಾಶನ ಖದರ. ಇನ್ನೂ ಹುಡಗಿಯರಿಗೆ ಅಷ್ಟೇ ಸೀ"ುತವಾಗಿದ್ದ ಕಿ"ಯೊಲೆ, ಕೈಬಳೆ, ಹಾರಗಳು ಇಂದು ಹುಡ್ಗರ ಫ್ಯಾಶನ ವಸ್ತುಗಳಾಗಿವೆ.
  ಹ್ಞೂ! ಇಲ್ಲೇಲ್ಲಾ ಬಂದು ಹಳೇಯ ಮಾತಾದವು. ಈಗಿನ ಯುವ ಸಮುದಾಯ ಪ್ರತಿದಿನ ಅಫಡೇಟ್ ಆಗುತ್ತಿದ್ದಾರೆ. ಪ್ರಪಂಚಕ್ಕೆ ಯಾವುದಾದರೂ ಹೊಸತು ಪರಿಚಯವಾದ್ರೆ ಸಾಕು ಅದು ನನ್ನದಾಗಬೇಕು, ನಾನು ನನ್ನ ಗೆಳೆಯ/ಗೆಳತಿಯರ ಮುಂದೆ ಅದನ್ನು ತೊರ‌್ಬೇಕು ಎಂಬ ಕ್ರೇಜ್ ಹೆಚ್ಚಾಗಿದೆ. ಅಂತಹ ಹೊಸ ಕ್ರೇಜೊಂದು ನಮ್ಮ ಯುವಕರ ಮಧ್ಯ ಸದ್ದಿಲ್ಲದೇ ಸುದ್ದಿಯಾಗುತ್ತಿದೆ.
   ಗಡ್ಡ,  ಫ್ಯಾಶನ ಮಾಡುವುದು ಈಗ ಓಲ್ಡ, ಈಗೇನಿದ್ರು ಜುಟ್ಟು ಬೀಡುವ ಕ್ರೇಜ್. ಇದ್ದೇಂತಹ ಕ್ರೇಜ್ ಅಂತೀರಾ!? ಇದು ನಮ್ಮ ಯುವಕ ಹಾರ್ಟಫೇವರೇಟ್ ಪ್ಯಾಶನ ಆಗಿದೆ ಈಗ. ಎಲ್ಲಿ ನೋಡಿದರು ಇಂತಹ ಜುಟ್ಟು ಬಿಟ್ಟ ಹುಡ್ಗರು ಕಾಣಸಿಗುತ್ತಾರೆ.  ಹುಡ್ಗರಿಗೆ ತಲೆಯಲ್ಲಿ ಹೆಚ್ಚು ಕೂದಲುಗಳು ಇದ್ದರೆ ಸಾಕು ಮನೆ ಮಂದಿಯಲ್ಲಾ ಸೇರಿ ತೂ..! ನಿನ್ನಾ ಏನ್ ಅಸಯ್ಯಾ ಇದು ಹೆಣ್ಣ್ಮಕ್ಳ ಹಾಗೆ ಕೂದಲು ಬಿಟ್ಟಿದ್ದೀಯಾ ಎಂದು ಬೈಯುತ್ತಿದ್ದರು. ಅದು ತಲೆಯಲ್ಲಿ ಸ್ಪಲ್ಪವೇ ಕೂದಲು ಇದ್ದಾಗ. ಆದರೆ ಇಂದು ಹುಡ್ಗಿಯರ ಹಾಗೆ  ಸಣ್ಣದೊಂದು ಜಟ್ಟು ಬಿಟ್ಟುಕೊಂಡು ಓಡಾಡುವ ಹುಡ್ಗರಿಗೆ ಏನೇನ್ನಬೇಡಾ. ಇದಕ್ಕೆ ಪ್ಯಾಶನ ಅನ್ನಬೇಕೋ? ಹುಚ್ಚುತನ ಅನ್ನಬೇಕೋ? ಎಂಬುದು ಒಂದು ತಿಳಿತಾುಲ್ಲಾ.
  ಮೊನ್ನೆ ಕ್ಯಾಂಪಸನ ಬಸ್ಟಾಫನಲ್ಲಿ ಕುಳಿತುಕೊಂಡಿದ್ದೆ. ನನ್ನ ಎದುರಿಗೆ ನಾಲ್ಕೈದು ಹುಡುಗಿಯರು ಕುಳಿತುಕೊಂಡಿದ್ದರು. ಅಷ್ಟೋತ್ತಿಗಾಗಲೇ ಒಂದಿಬ್ಬರೂ ಹುಡ್ಗರು ಬರ್ತಾುದ್ರು. ಅದರಲ್ಲಿ ಒಬ್ಬ ತನ್ನ  ಜುಟ್ಟನ್ನು ತನ್ನ ಕೈಗಳಿಂದ ತಿರಗಿಸುತ್ತಾ. ಆ ಜಟ್ಟನ್ನು ಜಡೆಯ ಹಾಗೆ ಮಾಡಿಕೊಳ್ಳುತ್ತಾುದ್ದ ಅದನ್ನು ನೋಡಿದ ಆ ಹುಡ್ಗಿಯರು "ನೋಡಲೇ ಅಲ್ಲಿ, ಅವ್ನ ಜಟ್ಟು ಹೇಗಿದೇ" ಎನ್ನುತ್ತಾ ಮುಸಿಮುಸಿ ನಗ್ತಾುದ್ರು. ಮತ್ತೊಬ್ಬಳು "ಗಂಡು ರೂಪದ ಹೆಣ್ಣು ಹೋಗ್ತಾುದೆ" ಎಂದಳು. ನನ್ಗೆ ಆಗ್ಲೇ ಅನಿಸಿದ್ದು. ಇದು ಗಂಡು ಕುಲಕ್ಕೆ ಅವಮಾನ ಎಂದು.
ಗಂಡಿಗೆ  ಇರ‌್ಬೇಕು, ಹೆಣ್ಣಿಗೆ ಜಡೆುರ‌್ಬೇಕು ಎಂಬ ಮಾತು ಈಗ ಸುಳ್ಳಾಗಿದೆ. ಹೊತ್ತ ಗಂಡಸಿಗೆ ಡಿಂಮ್ಯಾಂಡಪ್ಪೋ ಡಿಮ್ಯಾಂಡೋ ಎಂಬುದನ್ನು ಬದಲಾುಸ್ಕೊಂಡು ಜುಟ್ಟು ಹೊತ್ತ ಗಂಡಸಿಗೆ ಡಿಮ್ಯಾಂಪ್ಪಪ್ಪೋ ಡಿಮ್ಯಾಂಡೋ ಎನ್ನುವಂತಾಗಿದೆ. ನಮ್ಮ ಹುಡ್ಗರು ಜುಟ್ಟು ಬೀಡುದೇ ಒಂದು ಪ್ಯಾಶನನಾಗಿ ತೆಗೆದುಕೊಂಡಿದ್ದಾರೆ. ಒಂದಿಷ್ಟು ದಿನಗಳು ಹೋದ್ರೆ ಆ ಜುಟ್ಟಿಗೆ ಮಲ್ಲಿಗೆ ಹೂವು ಮುಡಿದಕೊಳ್ಳೋದು ಒಂದು ಫ್ಯಾಶನ ಅಂದ್ರೆ ಆಶ್ಚರ್ಯ ಪಡಬೇಕಿಲ್ಲ. ಎಲ್ಲವೂ ಕಾಲಾಹೇ ತಸ್ಮೇಹೇ ನಮಃ ಎನ್ನಬೇಕಷ್ಟೇ.
ಮಂಜುನಾಥ ಗದಗಿನ
8050753148

Saturday, 6 February 2016

ಹೇಗಿದ್ದ ಹೇಗಾದ ಅಪ್ಪ!!


  ಅಪ್ಪ ಮೊದಲಿನ ಹಾಗಿಲ್ಲ. ನನ್ನ ಜೊತೆ ಮಾತನಾಡುವದಿಲ್ಲ, ನನ್ನ ಜೊತೆ ಹೆಜ್ಜೆ ಹಾಕುವದಿಲ್ಲ, ಬಾಯಿತುಂಬಾ ಮಗನೇ ಎಂದು ಕರಿಯೋದಿಲ್ಲ, ಅಪ್ಪಿ ಮುದ್ದಾಡುವುದಿಲ್ಲ, ತಪ್ಪು ಮಾಡಿದಾಗ ದಂಡಿಸುವದಿಲ್ಲ. ಆದರೆ ಒಳಗೊಳಗೆ ಅದೇನೋ! ಮಾತನಾಡುತ್ತಾನೆ, ತನ್ನ ಕೋಲಿನೊಂದಿಗೆ ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾನೆ. ತನ್ನ ಹಾಸಿಗೆಗಳಲ್ಲೆ ಬಿದ್ದು ಹೊರಳಾಡುತ್ತಿದ್ದಾನೆ. ಹೌದು! ಅಪ್ಪ ಮಾತನಾಡುವದಿಲ್ಲ, ಸರಿಯಾಗಿ ನಡೆದಾಡುವುದಿಲ್ಲ. ಯಾಕಂದ್ರೆ ದಶಕಗಳ ಹಿಂದೆ ಪಾರ್ಶ್ವವಾಯು ಎಂಬ ಹೆಮ್ಮಾರಿ ನನ್ನಪ್ಪನ ಕೈ, ಬಾಯಿಗಳನ್ನು ಕಿತ್ತುಕೊಂಡು, ಮೂಲೆಯಲ್ಲಿ


ಹೆಡೆಮುರಿ ಕಟ್ಟಿ ಮಲಗಿಸಿದೆ.
  ಅವು ಬಾಲ್ಯದ ದಿನಗಳು. ಅಪ್ಪ ಅಂದ್ರೆ ಸಾಕು ಅದೇಲ್ಲಿಂದಲ್ಲೋ! ಪ್ರತ್ಯಕ್ಷವಾಗಿ ಬೀಡುತ್ತಿದ್ದ. ನಾನು ರಚ್ಚೆ ಹಿಡಿದು ಅಳಲು ಪ್ರಾರಂಭಿಸಿದ್ರೆ ಅಪ್ಪ ತನ್ನ ಕಚ್ಚೆ ಸರಿ ಮಾಡಿಕೊಂಡು ಊರು ತುಂಬಾ ಹೆಗಲ ಮೇಲೇ ಕುಳರಿಸಿ, ಆನೆ ಅಂಬಾರಿಯ ಹಾಗೆ ಹೊತ್ತು ತೀರುಗುತ್ತಿದ್ದ. ಹ್ಞೂ! ನಾನು ಆ ದೇವರ ಏಕೈಕ ವರ ಪ್ರಸಾದ ನಮ್ಮಪ್ಪ ಅಮ್ಮನಿಗೆ. ನಾನು ಹುಟ್ಟಿದಾಗಲೇ ಅಪ್ಪ ಓಣಿ ಮಂದಿಗೇಲ್ಲಾ, ಕಡಬಿನ ಊಟ ಹಾಕಿ ಸಂಭ್ರಮಿಸಿದ್ದ. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ, ಮಾತಿನಲ್ಲೂ ಅಪ್ಪ ಹಿರಿ ಹಿರಿ ಹಿಗ್ಗಿ ಸಂಭ್ರಮಿಸುತ್ತಿದ್ದ ಅಂತ ಅವ್ವ ಪದೇ ಪದೇ ಹೇಳ್ತಾಯಿದ್ಳು. ಆದರೆ ಈಗ ಆ ಸಂಭ್ರಮ! ಮನೆಯ ಮೂಲೆಯಲ್ಲಿ ಹೊರ ಪ್ರಪಂಚದ ಅರಿವಿಲ್ಲದೇ ಬೆಚ್ಚಗೆ ಅವಿತುಕೊಂಡು ಕುಳಿತಿದೆ. 
  ಅಪ್ಪನದು ಊರಿನಲ್ಲಿ ದೊಡ್ಡ ಹೆಸರು. ಶುಭ ಕಾರ‌್ಯಗಳಿಂದ ಹಿಡಿದು ಅಶುಭಕಾರ‌್ಯಗಳೇಲ್ಲವು ಅಪ್ಪ ನೇತೃತ್ವದಲ್ಲೇ ನಡೆಯುತ್ತಿದ್ದವು. ಅಪ್ಪ ನೇಕಾರಿಕೆ, ಅಡುಗೆ, ಗುಡಿಗಳ ಪೂಜಾರಿಕೆ ಹೀಗೆ ಎಲ್ಲದರಲ್ಲೂ ಪಾರಂಗತನಾಗಿದ್ದ. ಆದರೆ ಅಪ್ಪನಿಗೆ ಹಣದ ವ್ಯಾಮೋಹ ಸ್ಪಲ್ಪ ಹೆಚ್ಚಾಗಿಯೇ ಇತ್ತು. ಇದೇ ಕಾರಣಕ್ಕೇನೆ ಅಪ್ಪ ಇಂದು ಮೂಲೆಗುಂಪಾಗಿ ಸೊಂಪಿಲ್ಲದೇ ಬದುಕಿನ ಕೊನೆಯ ದಿನಗಳನ್ನು ಏಣಿಸುತ್ತಾ ಕುಳಿತಿದ್ದಾನೆ.
  ಅಪ್ಪ ಅಂದ್ರೆ, ಆಕಾಶ ನೋಡಿದಷ್ಟು, ಹೇಳಿದಷ್ಟು ವಿಸ್ತಾರವಾಗುತ್ತಾ ಹೋಗುತ್ತಾನೆ. ಅಪ್ಪ ಅಂದ್ರೆ ಗುರು, ಮಾರ್ಗದರ್ಶಿ, ಹಿತೈಸಿ, ಎಲ್ಲದಕ್ಕಿಂತ ಹೆಚ್ಚಾಗಿ ಉತ್ತಮ ಗೆಳೆಯ. ಹೌದು! ನನ್ನಪ್ಪ ಕೂಡಾ ನನ್ಗೆ ಎಲ್ಲವೂ ಆಗಿದ್ದ. ನನ್ನ ಸುಖ, ದುಖಃಕ್ಕೆ ಹೇಗಲಾಗಿ, ಬಾಲ್ಯದ ಪ್ರತಿಯೊಂದು ಪ್ರತಿಯೊಂದು ಕ್ಷಣಗಳಿಗೂ ಜೀವ ತುಂಬುತ್ತಾ, ನನ್ನ ಜೀವನಕ್ಕೆ ಭದ್ರ ಬುನಾದಿ ಹಾಕಿದ್ದ ನನ್ನಪ್ಪ. ಇಂದು ನನ್ನನ್ನ ಯಾರಾದ್ರು, ಗುರುತಿಸುತ್ತಾರೆ, ಒಳ್ಳೆ ಹುಡುಗ, ವಿನಯವಂತ ಅಂತಾ ಕರೆಯುತ್ತಾರೆ ಎಂದ್ರೆ ಅದಕ್ಕೆ ಕಾರಣ ನನ್ನಪ್ಪ. 
 ಪ್ರಾರಂಭದಲ್ಲೇ ನನ್ಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿದ, ಒಳ್ಳೆಯ ಸಂಸ್ಕಾರ ತುಂಬಿದ, ಯಾರ ಜೊತೆ ಹೇಗೆ ಮಾತನಾಡಬೇಕು ಎಂದು ತಿಳಿಸಿದ. ಇದೇ ಕಾರಣಕ್ಕೆ ಇಂದು ನಾನೊಂದು ಸುಂದರ ಮೂರ್ತಿಯಾಗಿ ಜಗತ್ತಿಗೆ ತೆರೆದಿಕೊಂಡಿದ್ದೇನೆ.
ಮಂಜುನಾಥ ಗದಗಿನ, 
8050753148



ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...