Thursday, 7 March 2024

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

 ಮಂಜುನಾಥ ಗದಗಿನ

--
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು ಎಂದರೆ ಇಂದಿನ ದಿನಮಾನಗಳಲ್ಲಿ ತಪಸ್ಸು ಮಾಡಬೇಕು. ಆದರೆ, ಇಲ್ಲೊಬ್ಬರು ತಮ್ಮ ದೈಹಿಕ ನ್ಯೂನತೆಯ ನಡುವೆಯೂ ಆರು ಸರ್ಕಾರಿ ನೌಕರರಿಗೆ ಆಯ್ಕೆಯಾಗಿ ಎಲ್ಲರಿಗೂ ಮಾದರಿ ಆಗಿದ್ದಾರೆ.
ಹೌದು, ಅಥಣಿ ತಾಲ್ಲೂಕಿನ ಕೊಡಗಾನೂರು ಗ್ರಾಮದ ಪದ್ಮಾವತಿ ಹರಗೆ ಆ ಸಾಧಕಿ. ಎಲ್ಲವೂ ಇದ್ದು ಏನು ಇಲ್ಲದವರಂತೆ ಕಾಲ ಕಳೆಯುವ ಜನರ ಮಧ್ಯೆ ಇಂತಹ ಸಾಧಕರು ಇರುವುದು ಹೆಮ್ಮೆಯ ಸಂಗತಿ.
ಬಡತನದಲ್ಲೇ ಆರು ನೌಕರಿ:
ಪದ್ಮಾವತಿ ಅವರದ್ದು ತೀರಾ ಬಡತನದಿಂದ ಬಂದ ಕುಟುಂಬ. ಇವರ ತಂದೆ ತಾಯಿ ಕೂಲಿ ಮಾಡಿ ಮಕ್ಕಳನ್ನು ಸಾಕಿ ಸಲಹಿದ್ದಾರೆ. ಪದ್ಮಾವತಿ ಅವರಿಗೆ ಐವರು ಅಕ್ಕ-ತಂಗಿಯರು, ತಮ್ಮ ಇದ್ದಾನೆ. ಇವರೆಲ್ಲರಿಗೂ ಕೂಲಿ ಮಾಡಿಯೇ ಶಿಕ್ಷಣ ಕೊಡಿಸಿದ್ದಾರೆ ಪದ್ಮಾವತಿ ಪಾಲಕರು. ಪದ್ಮಾವತಿ ಅವರು ಐದು ವರ್ಷದವರು ಇದ್ದಾಗ ಇವರಿಗೆ ಪೋಲಿಯೋ ತಗುಲಿತು. ಇದರಿಂದ ವಿಚಲಿತರಾದ ಪದ್ಮಾವತಿ ಪಾಲಕರು ದೇವರನ್ನು ಶಪಿಸುತ್ತಾ ಕುಳಿತುಕೊಂಡರು. ಆದರೆ, ಪದ್ಮಾವತಿ ಶಾಲೆಯಲ್ಲಿ ಜಾಣೆ ಆಗಿದ್ದಾಳೆ ಮಗಳಿಗೆ ಶಿಕ್ಷಣ ಕೊಡಿ ಅವಳು ಮುಂದೆ ಇತರರಿಗೆ ಮಾದರಿ ಆಗುತ್ತಾ ಎಂದು ಜನರು ಅವರಿಗೆ ತಿಳಿ ಹೇಳಿದರು. ಹೀಗಾಗಿ ಪದ್ಮಾವತಿ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಮುಂದಾದರು. ಪದ್ಮಾವತಿ ಹರಗೆ ಕೂಡ ತನ್ನ ನ್ಯೂನ್ಯತೆಯನ್ನೇ ಶಕ್ತಿಯನ್ನಾಗಿಸಿಕೊಂಡು ಮುನ್ನಡೆದಳು. ಹೀಗಾಗಿ ಡಿಎಡ್ ಶಿಕ್ಷಣಪಡೆದುಕೊಂಡರು.
ಆರು ಸರ್ಕಾರಿ ನೌಕರಿ ಪಡೆದು ಮಾದರಿ:
ಈಗಿನ ಒಂದು ಕಾಲದಲ್ಲಿ ಸರ್ಕಾರಿ ನೌಕರರು ಕಷ್ಟಸಾಧ್ಯವಾಗಿರುವಾಗ ಪದ್ಮಾವತಿ ಅವರು ತಮ್ಮ ಕಠಿಣ ಶ್ರಮದಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆರು ಸರ್ಕಾರಿ ನೌಕರಿ ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. 2017ರಲ್ಲೇ ಪ್ರಥಮ ದರ್ಜೆ ಸಹಾಯಕ(ಎಸ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ(ಎಫ್‌ಡಿಎ)ಗೆ ಆಯ್ಕೆ, 2018ರಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ಸೆಕ್ರೆಟ್ರಿ ಗ್ರೇಡ್-1 ಅಧಿಕಾರಿ, 2019ರಲ್ಲಿ ಹಾಸ್ಟೆಲ್ ವಾರ್ಡ್‌ನ, ಸುಪರ್ ಇಂಡೆಂಟ್ ಅಧಿಕಾರಿಯಾಗಿ ಆಯ್ಕೆಯಾಗಿದ್ದರು. ಆದರೆ, ಇವರು PDO ಹುದ್ದೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.
ಕೆಇಎಸ್ ಮೇನ್ಸ್ ಆಯ್ಕೆ:
ಕರ್ನಾಟಕ ಉನ್ನತ ಮಟ್ಟದ ಪರೀಕ್ಷೆಗಳಲ್ಲಿ ಒಂದಾದ ಕೆಎಎಸ್ ಪರೀಕ್ಷೆ 2017ರಲ್ಲಿ ಇವರು ಬರೆದಿದ್ದಾರೆ. ಮೊದಲ ಪ್ರಯತ್ನದಲ್ಲೇ ಇವರು ಕೆಎಸ್‌ಎಸ್‌ ಮೇನ್ಸ್‌ ಪರೀಕ್ಷೆಗೂ ಆಯ್ಕೆ ಆಗಿದ್ದರು. ಆದರೆ, ಕೆಲವೇ ಅಂಕಗಳಲ್ಲಿ ಅನುತೀರ್ಣ ಆದರು.
ಸಮಯ ಪಾಲನೆ ಮುಖ್ಯ:
ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಒಂದು ಸರ್ಕಾರಿ ನೌಕರರು ಪಡೆಯುವುದು ಕಷ್ಟಕರವಾದ ಇಂದಿನ ದಿನಮಾನಗಳಲ್ಲಿ ಇವರು ದೈಹಿಕ ನ್ಯೂನ್ಯತೆಯ ನಡುವೆ ಆರು ನೌಕರರು ಪಡೆದಿರುವ ಪದ್ಮಾವತಿ ಅವರು ಎಲ್ಲರಿಗೂ ಮಾದರಿ ಪದ್ಮಾವತಿ ಸಮಯ ಪಾಲನೆಗೆ ಹೆಚ್ಚು ಮಹತ್ವವನ್ನು ಕೊಡುತ್ತಾರೆ. ಇದಷ್ಟೇ ಅಲ್ಲದೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಲಾಗಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಾತ್ರ ಮೊಬೈಲ್ ಬಳಕೆ ಮಾಡಿಕೊಳ್ಳುತ್ತಿದ್ದರು. ಹೀಗಾಗಿ ಸಮಯ ಪಾಲನೆ ಮಾಡಿಕೊಂಡು ಟೈಂ ಟೇಬಲ್ ಹಾಕಿಕೊಂಡು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಯಶ್ ಕಂಡಿದ್ದಾರೆ. ( ಪದ್ಮಾವತಿ ಅವರ ಜೊತೆ ಮಾತನಾಡಲು ಕರೆ ಮಾಡಿ . ಮೊ . ನಂ . 9845796774
---
ಕೋಟ್
ನಾನು ಐದನೇ ಆದಾಗಲೇ ನನಗೆ ಪೋಲಿಯೋ ತಗುಲಿತು. ವರ್ಷಗಳು ಕಳೆದಂತೆ ನನಗೆ ಜನರ ಮಧ್ಯೆ ಹೋಗಲು ಮುಜುಗರ ಉಂಟಾಯಿತು. ಆದರೆ, ಇಂತಹ ಸಮಯದಲ್ಲಿ ನಾನು ಕೂಡ ಅಧಿಕಾರಿ ಆಗಬೇಕು. ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು ಎಂದುಕೊಂಡೆ ಇದೇ ಛಲದಲ್ಲೇ ಓದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸತತ ಪ್ರಯತ್ನ ಮಾಡಿದೆ. ಇದರ ಫಲವಾಗಿ ನಾನು ಇಂದು ಸರ್ಕಾರಿ ನೌಕರಳಾಗಿದ್ದೇನೆ.
-ಪದ್ಮಾವತಿ ಹರಗೆ. ವಿಕಲಚೇತನ ಸಾಧಕಿ.

Saturday, 29 July 2023

ಜಂತಿ ಮನೆ ಮತ್ತು ಮಳೆ-೧


ಮಳೆಗಾಲ ಬರೈತಿ ಅನ್ನೋ ತಿಂಗ್ಲ ಮುಂಚಿತವಾಗಿಯೇ ಜಂತಿ ಮನೆ ರಿಪೇರಿ ಕಾಮಗಾರಿ ಚಾಲೋ ಆಗತಿತ್ತ. ಯಾಕಂದ್ರ ನೆಮ್ಮದಿಯಿಂದ ಮಳೆಗಾಲ ಮುಗಿಸಬೇಕಲ್ಲ ಅದ್ಕ. ಮಳೆ ಆರಂಭಕ್ಕೂ ಮುನ್ನ ಜಂತಿ ಮನಿ ಮಾಳಿಗಿಗೆ ಮಣ್ಣ ಹಾಕಿ ಮನೆಯನ್ನ ಸದೃಢವನ್ನಾಗಿಸುವುದು ಮೊದಲ ಕಾರ್ಯ. ಹೀಗಾಗಿ ಅಪ್ಪ ಮಟ್ಟಿ ಮಣ್ಣು ಅಥವಾ ಹೆಂಟಿ ಮಣ್ಣು ಹಾಕಿಸಲು ಆಡರ್ರ್ ಕೊಡ್ತಾ ಇದ್ದ. ಅದು ಒಂದು ಎತ್ತಿ ಬಂಡಿ ಎಷ್ಟು ಮಣ್ಣು. ಈ ಮಣ್ಷು ಹಾಕಿಸಲು ಅದೇಷ್ಟೋ ಬಾರೀ ಚೌಕಾಸಿ ಬೇರೆ. ಕೊನೆಗೆ ೧೦, ೨೦ ರುಪಾಯಿ ಕಡಿಮೆ ಮಾಡಿ ಮನೆಯ ಅಂಗಳಕ್ಕೆ ಮಣ್ಣು ಬಿದ್ದಿರುತಿತ್ತು. 

ಹೀಗೆ ಬಿದ್ದ ಮಣ್ಣಮ್ನ ಜಂತಿ ಮನಿಯ ಮಾಳಿಗೆ ಕಾಣಿಸುವುದೇ ಹರ ಸಾಹಸವಾಗಿತ್ತು. ಯಾಕಂದ್ರೆ ನಮ್ಮ ಮನೆಗೆ ಮಾಳಿಗೆಗೆ ಹೋಗಲು ಮೆಟ್ಟಿಲು ಇರಲಿಲ್ಲ. ಇದರ ಬದಲಾಗಿ ಏಣಿ ಸಹಾಯದಿಂದ ಮಾಳಿಗೆಗೆ ಮಣ್ಣು ಹಾಕುವ ಕಾರ್ಯ ಮಾಡಬೇಕಾಗಿತ್ತು. ಅದೊಂದು ವರ್ಷ ನಾನು, ಅವ್ವ, ಅಪ್ಪ ಮೂವರೇ ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಏಕಾಏಕಿ ಏಣಿಯ ಹಲ್ಲು ಮುರಿದು ಅಪ್ಪನ ಕಾಲಿಗೆ ಗಾಯವಾಗಿತ್ತು. ಇದಾದ ನಂತರದ ಏಣಿಯ ಕಾಲು ಹಿಡಿದು ಮಾಳಿಗೆಗೆ ಮಣ್ಣು ಹಾಕುತಿದ್ದೇವು. ಇನ್ನು ಕೆಲವು ಸಾರಿ ಓಣಿಯ ಎರಡ್ಮೂರು ಜನರನ್ಮು ಕರೆದು ಮಾಳಿಗಿಗೆ ಮಣ್ಣು ಹಾಕುತಿದ್ದೇವು.

ಮಾಳಿಗೆ ಮಣ್ಣು ಕಂಡರೆ ಮುಗಿತು ಎನ್ನುವಂತಿಲ್ಲ. ಅದರ ಅಸಲಿಯತ್ತು ನಂತರ ತಿಳಿತಾಯಿತ್ತು. ಯಾಕಂದ್ರ ಹಾಕಿದ ಮಣ್ಣು ಸರಿ ಇದ್ರ ಮಾಳಗಿ ಗಟ್ಟಿ ಆಗ್ತಾ ಇತ್ತು. ಇಲ್ಲಂದ್ರ ಮಾಳಿಗಿ ತುಂಬ ಕಾಂಗ್ರೆಸ ಕಸ ಬೆಳೆದು ಅದನ್ನು ಕೀಳುವುದೇ ಕಾಯಕವಾಗಿ ಬಿಡುತಿತ್ತು. ಒಂದು ವೇಳೆ ಮಣ್ಣು ಸರಿ ಇಲ್ಲದೇ ಮಾಳಿಗೆ ಮೇಲೆ ಕಸ ಬೆಳೆದರೆ ಆ ವರ್ಷದ ಮಳೆಗಾಲ ಆ ದೇವರಿಗೆ ಪ್ರೀತಿ ಅನ್ನುವಂತಾಗುತಿತ್ತು. ಯಾಕಂದ್ರೆ, ಕಸ ಕಿತ್ತು ವಾರದಲ್ಲೇ ಮತ್ತೆ ಕಸ ಬೆಳೆಯಲು ಆರಂಭಿಸುತಿತ್ತು. ಹೀಗೆ ಕಸ ಕಿತ್ತು ಕಿತ್ತು ಮಾಳಿಗೆ ಸಡಿಲಗೊಂಡು ಮಳೆಯಾದರೆ ಮನೆಯಲ್ಲ ಸೂರಿ ಜೀವನ ನರಕವಾಗಿ ಬಿಡುತಿತ್ತು. ಮಾಳಿಗೆ ಹತ್ತಿ ಆ ಮಣ್ಣನ್ನು ಕಾಲಿಲೇ ತುಳಿದು ಭದ್ರ ಮಾಡುವುದರಲ್ಲೇ ಕಣ್ಣಿರೇ ಮಳೆಯಾಗಿ ಸುರಿದು ಬಿಡುತಿದ್ದವು..

ಮಳೆಗಾಲ ಆರಂಭವಾದೊಡನೆ ಮನೆಗೆ ಗೋಡೆ, ಜಂತಿಗಳು ಕಣ್ಣೀರು ಸುರಿಸಲು ಆರಂಭ ಮಾಡುತಿದ್ದವು.....


-ಮಂಜುನಾಥ ಗದಗಿನ

ಮುಂದುವರೆಯುವುದು...

Tuesday, 11 July 2023

ಜಂತಿಮನೆ ಮತ್ತು ಇಲಿ...



ಗಾಗ ಉದುರಿ ಬೀಳುವ ಮಣ್ಣಿನ ನಡುವೆ ಬದುಕು ಸಾಗಿವುದು ಅದೇಷ್ಟು ಕಷ್ಟ. ಆದರೆ, ಹಳ್ಳಿಗರಿಗೆ ಇದೇ ಜೀವನ. ಯಾಕಂದರೆ ಹಳ್ಳಿಗಳಲ್ಲಿ ಈಗಲೂ ಬಹುತೇಕ ನಾವುಗಳು ಜಂತಿಮನೆಗಳನ್ನೇ ಕಾಣುತ್ತಿವೆ. ಇವುಗಳಿಗೆ ಜಂತಿಮನೆಗಳು ಎಂದರೆ ಕರೆಯಲು ಕಾರಣವು ಇದೆ. ಇವುಗಳನ್ನು ನಮ್ಮ ಹಿರಿಕರು ಜಂತಿ ಕಟ್ಟಿಗೆಯಿಂದ ಮನೆಗಳನ್ನು ಕಟ್ಟುತ್ತಿದ್ದರು. ಈ ಜಂತಿ ಕಟ್ಟಿಗೆಯಲ್ಲೇ ಮನೆಗಳನ್ನು ಕಟ್ಟಲು ಒಂದು ಸಕಾರಣವೂ ಇತ್ತು. ಜಂತಿ ಕಟ್ಟಿಗೆಗಳಿಗೆ ಹುಳು ಹಿಡಿಯುವುದಿಲ್ಲ. ಹೀಗಾಗಿ ಅವುಗಳು ಹೆಚ್ಚುಕಾಲ ಬಾಳಿಕೆ ಬರುತ್ತವೆ ಎಂಬ ಒಂದು ವೈಜ್ಞಾನಿಕ ಕಾರಣಗಳನ್ನು ಹಿನ್ನೆಲೆಯಲ್ಲೇ ನಮ್ಮ ಹಿರಿಯರು ಮನೆಗಳನ್ನು ಕಟ್ಟುವಾಗ ಈ ಜಂತಿ ಕಟ್ಟಿಗೆಗಳನ್ನು ಬಳಕೆ ಮಾಡಿದ್ದಾರೆ. ಹೀಗಾಗಿ ನಾವುಗಳು ಇಂದು ಈ ಮನೆಗಳನ್ನು ಜಂತಿ ಮನೆಗಳನು ಎಂದು ಕರೆಯುತ್ತಿವೆ. 

ಜಂತಿಮನೆಗಳಿಗೆ ಜಂತಿಕಟ್ಟಿಗೆ ಒಂದಿಷ್ಟು ಗಿಡದ ತಪ್ಪಲು ಹಾಕಿ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. ಹೀಗೆ ನಿರ್ಮಾಣ ಮಾಡಿದ ಮನೆಗಳು ನೂರಾರು ವರ್ಷಗಳು ಕಳೆದರೂ ಹಾಗೇ ಇವೆ. ಅದೇಷ್ಟೋ ತಲೆಮಾರುಗಳಿಗೆ ಆಶ್ರಯಗಳನ್ನು ನೀಡಿವೆ. ಆದರೆ, ಈ ಜಂತಿಮನೆಗಳಲ್ಲಿ ವಾಸ ಮಾಡುವುದೇ ಒಂದು ರಣರೋಚಕ.

ಹೌದು, ಜಂತಿಮನೆಗಳು ಮನುಷ್ಯರಿಗೆ ಮಾತ್ರ ಆಶ್ರಯ ನೀಡುತಿರಲಿಲ್ಲ. ಮೇಲಿನ ಜಂತಿಯಲ್ಲಿ ಹಾವು, ಹೆಗ್ಗಣ್ಣ, ಚೇಳು, ಇಲಿ ಹೀಗೆ ಅನೇಕ ಪ್ರಾಣಿಗಳಿಗೂ ಪಾಲಕನಾಗಿತ್ತು ಜಂತಿಮನೆ. ಹೀಗಾಗಿ ಈ ಮನೆಗಳಲ್ಲಿ ವಾಸ ಮಾಡಿದವರು ಗಟ್ಟಿಗರೇ ಸೈ. ನಾನು ಕೂಡಾ ಜಂತಿಮನೆಯಲ್ಲೇ ಹುಟ್ಟಿ ಬೆಳೆದವ. ರಾತ್ರಿ ಆಯಿತು ಎಂದರೆ ಸಾಕು ಮನೆಯ ಮೇಲಿಂದ ಅದೇನೋ ಒಂದು ತರಹ ಸದ್ದು ಸದಾ ಕೇಳಿಬರುತಿತ್ತು. ಅದೇಷ್ಟೇ ಪ್ರಯತ್ನ ಮಾಡಿದರೂ ಆ ಸದ್ದಿನ ದಾರಿ ಕಂಡು ಹಿಡಿಯಲು ಅಸಾಧ್ಯವಾಗಿತ್ತು. ಒಂದು ಸಾರಿ ಈ ಕಡೆ ಕೇಳಿದರೆ ಮತ್ತೊಂದು ಸಾರಿ ಆ ಕಡೆ ಕೇಳಿ ಬರುತ್ತಿತ್ತು. ಹೀಗಾಗಿ ನಾನು ಆಗ ಚಿಕ್ಕವನಿಂದ ಕಾರಣಕ್ಕೆ ಇದು ದೆವ್ವದ ಇರಬಹುದು ಎಂದು ಭಾವಿ ಅರ್ಧ ಹೊದ್ದ ಚಾದರನ್ನು ಪೂರ್ಣ ಹೊದ್ದು ಮಲಗಿದ ರಾತ್ರಿಗಳಿಗೆ ಲೆಕ್ಕವೇ ಇಲ್ಲ. ಇದಕ್ಕೆ ಕಾರಣವೂ ಇತ್ತು. ನಮ್ಮ ಮನೆಯ ಹಿಂದೆ ಒಂದು ದೊಡ್ಡದಾದ ಹುಣಸೆ ಮರ ಇದೆ. ಆ ಮರದಲ್ಲಿ ದೆವ್ವಗಳು ಕುಳಿತುಕೊಂಡಿರುತ್ತವೆ ಎಂಬ ಮಾತು ಆಗಾಗ ಕೇಳಿ ಬರುತ್ತಿದ್ದವು. ನಾನು ಕೂಡಾ ಅದೇ ದೆವ್ವಗಳು ಬಂದು ನಮ್ಮ ಮನೆಯ ಮೇಲೆ ಓಡಾಡುತ್ತವೆ ಎಂದು ಭಾವಿಸಿದ್ದೆ. ಆದರೆ, ಅದೊಂದು ದಿನ ಅಪ್ಪ ಇಲಿ ಹಿಡಿಯುವ ಯಂತ್ರ ತಂದು ಅದರಲ್ಲಿ ಒಂದು ಫೀಸ್ ಬಜ್ಜೆಯನ್ನು ಹಾಕಿ ಜಂತಿಯ ಮೇಲೆ ಇಟ್ಟು ಮಲಗಿದ. ನಾನು ಯಾಕೆಂದು ಕೇಳಿದ್ದಕ್ಕೆ ನಾಳೆ ಗೊತ್ತಾಗುತ್ತದೆ ಎಂದು ಸುಮ್ಮನಾಗಿಸಿದ. ಆದರೆ, ಮರುದಿನ ಬೆಳಗಾಗುವಷ್ಟರಲ್ಲಿ ಅಪ್ಪ ಆ ಇಲಿ ಹಿಡಿಯುವ ಯಂತ್ರವನ್ನು ಹೊರಗೆ ತೆಗೆದಾಗ ಅದಲ್ಲಿ ಬರೋಬ್ಬರಿ ನಾಲ್ಕು ಇಲಿಗಳು ಒಂದೇ ಚಾಳಿಗೆಯಲ್ಲಿ ಸಿಕ್ಕಿ ಹಾಕಿಕೊಂಡಿದ್ದವು. ಅದು ಆ ಬಜ್ಜಿ ಆಸೆಗಾಗಿ ಎಂಬ ವಿಷಯ ಬೇರೆ. ಆದರೆ, ಅಪ್ಪ ಆಗಾ ಹೇಳಿದ ರಾತ್ರಿ ಈ ಇಲಿಗಳೇ ರಾತ್ರಿಯಲ್ಲ ಸದ್ದು ಮಾಡಿ ನಿದ್ದೆ ಹಾಳು ಮಾಡುತ್ತಿದ್ದವು ಎಂದು. ನಾನು ಅರೇಕ್ಷಣ ನಿಟ್ಟುಸಿರು ಬಿಟ್ಟು ದೆವ್ವ ಎಂಬ ಭ್ರಮೆಯಿಂದ ಹೊರ ಬಂದು ನೆಮ್ಮದಿಯಿಂದ ನಿದ್ದೆ ಮಾಡಲು ಆರಂಭಿಸಿದೆ. 

-ಮಂಜುನಾಥ ಗದಗಿನ.

ಮುಂದುವರೆಯುವುದು....

(ಜಂತಿಮನೆ ಮತ್ತು ಮಳೆ)

Tuesday, 16 August 2022

ಶಿಕ್ಷಣಕ್ಕೆ ವಿದಾಯ ಹೇಳಿದ್ದೆ...

 ಬಡತನಕ್ಕೆ ಮೂರು ಬಾರಿ ಶಿಕ್ಷಣ ನಿಲ್ಲಿಸಿದ್ದೆ > ಮತ್ತೆ ಮೇಲೆದ್ದು ಬಂದೆ



ಸದಾ ಸಿಂಡರಿಸಿಕೊಂಡುತ್ತಿದ್ದ ಅಪ್ಪನನ್ನು ಏನು ಕೇಳುವುದು ಎಂಬ ಮನೋಭಾವಕ್ಕಿಂತ ದುಡಿದ ದುಡ್ಡು ಬದುಕಿಗೆ ಸಾಕಾಗುತ್ತಿಲ್ಲ ಎಂಬ ಬಡತನವೇ ನನ್ನ ಬಾಲ್ಯದ ಅದೇಷ್ಟೋ ಕನಸು, ಆಸೆಗಳನ್ನ ಕಿತ್ತುಕೊಂಡು ಬಿಟ್ಟಿತ್ತು. ಈ ಬಡತನ ನನ್ನ ಶಿಕ್ಷಣವನ್ನೇ ಕಸಿದುಕೊಂಡು ದುಡಿಮೆಗೆ ಹಚ್ಚಿದ್ದು ನೆನೆಸಿಕೊಂಡರೇ ಭಯವಾಗುತ್ತದೆ. “ಸಾಲಿ ಕಲ್ತ ಏನ ಮಾಡ್ತಿ ಮಗ್ಗಾ ನೇಯ್ಯಾಕ ಹೋಗ ಇನ್ನ’ ಎಂಬ ಅಪ್ಪನ ಆ ಮಾತುಗಳು ನನ್ನಲ್ಲಿ ಇನ್ನು ಮಾರ್ದನಿಸುತ್ತಿವೆ. ಹೀಗೆ ಅಪ್ಪನ ಹಠಕ್ಕೆ ಶಿಕ್ಷಣಕ್ಕೆ ವಿದಾಯ ಹೇಳಿ ಮಗ್ಗ ನೇಯಲೂ ಆರಂಭಿಸಿದೆ. 

“ಒಬ್ಬ ಮಗಾ ಅದಾನ ಅವನರ ಚಲೋತಂಗ ಸಾಲಿ ಕಲ್ಸಬಾರದಾ’ ಎಂಬ ಜನರ ಮಾತು ಅಪ್ಪನಿಗೆ ನಾಟಿದ್ದವು ಅನ್ಸುತ್ತೆ. ಮತ್ತೆ ಶಾಲೆಗೆ ಕಳುಹಿಸಲು ಅಣಿಯಾದ. ಆದರೆ, ಅದಾಗಲೇ ಒಂದು ವರ್ಷದ ನನ್ನ ಶಿಕ್ಷಣ ಇತಿಹಾಸದ ಗರ್ಭ ಸೇರಿ ಆಗಿತ್ತು. ಮತ್ತೆ ಶಾಲೆಗೆ ಹೋಗಲು ಮನಸು ಚಡಪಡಿಸುತ್ತಿತ್ತು. ಮತ್ತೆ ಶಾಲೆ ಆರಂಭವಾಯಿತು. ಮತ್ತದೇ ಕಾಯಿಪಲ್ಲೆ ತರುವ ಚೀಲ, ಪಾಠಿ ಜೊತೆಯಾಗಿ ಹೆಜ್ಜೆ ಹಾಕಿದವು. ಅದಾಗಲೇ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕೆ ಹೆಜ್ಜೆ ಇಟ್ಟಿದ್ದೆ. ಆಗ ಗೊತ್ತಾಗಿದ್ದು ಓಡುವ ಕಾಲದ ಎದುರು ನಾವೇಷ್ಟು ಸಣ್ಣವರು ಎಂದು. ನೂರೆಂಟು ವಿಚಾರ, ಚಿಂತೆ, ವೈದ್ಯರ ಮಾತಿನ ನಿರ್ಲಕ್ಷ್ಯ ಮಾಡಿದ್ದರಿಂದ ಅಪ್ಪನಿಗೆ ಪಾರ್ಶ್ವವಾಯು ಹೊಡೆಯಿತು. ಆಗ ನಾನು ಏಂಟನೇ ತರಗತಿ ಪ್ರವೇಶ ಪಡೆದುಕೊಂಡಿದ್ದೇ ಅಷ್ಟೇ. ಅಪ್ಪನಿಗೆ ಹೀಗಾಗಿದ್ದರಿಂದ ನಾನು ಒಬ್ಬನೇ ಮಗ. ಮನೆಯ ಜವಾಬ್ದಾರಿ ನನ್ನ ಮೇಲೆ ಬಿತ್ತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಿ ಮನೆಯ ನೊಗ ಹೊರಬೇಕು ಎಂದು ನಿರ್ಧರಿಸಿದೆ. ಹೀಗಾಗಿ ಒಂದೆರೆಡು ತಿಂಗಳು ಶಾಲೆಯನ್ನು ಬಿಟ್ಟು ಮಗ್ಗದ ಕಡೆ ಮುಖ ಮಾಡಿದೆ. ಆದರೆ, ಅಕ್ಕ “ನಾನು ನೇಯುತ್ತೇನೆ ನೀನು ಶಾಲೆಗೆ ಹೋಗು’ ಎಂದು ಹೇಳಿದ್ಲು. ಮನಸ್ಸು ಸುತಾರಾಮ ಒಪ್ಪಲಿಲ್ಲ. ಆದರೆ, ಓದಬೇಕು ಎಂಬ ಆಸೆ ಮತ್ತೆ ಶಾಲೆ ಕಡೆಗೆ ಕರೆದುಕೊಂಡು ಹೋಯಿತು. ಬೆಳಿಗ್ಗೆ ಬೇಗ ಎದ್ದು ಮಗ್ಗ ನೇಯ್ದು ಮತ್ತೆ ಶಾಲೆಗೆ ಹೋಗುತ್ತಿದೆ. ಮತ್ತೆ ಶಾಲೆಯಿಂದ ಬಂದ ಮೇಲೆ ನೇಯುತ್ತಿದೆ. ಹಾಗೋ ಹೀಗೋ ಮಾಡಿ ಪ್ರೌಢ ಶಿಕ್ಷಣ ಮುಗಿಸುವ ಹಂತಕ್ಕೆ ಬಂದು ನಿಂತೆ. ಆಗ ಅಕ್ಕನ ಮದುವೆ ಕೂಡಾ ಆಗಿ ಹೋಯಿತು. ಇದೀಗ ನಾನು, ಪಾರ್ಶ್ವವಾಯು ಪೀಡಿತ ಅಪ್ಪ, ಮತ್ತ ಅವ್ವ್ಪ ಅಷ್ಟೇ ಬದುಕಾಯಿತು. 

       ಪ್ರಾಪಂಚಿಕ ಜ್ಞಾನವಿಲ್ಲದ ಅವ್ವ, ಮಾತು ಬಾರದ ಅಪ್ಪ. ನಾನು ಹೇಗೆ ಕಾಲೇಜಿಗೆ ಹೋಗಲಿ ಎಂದು ಮನಸ್ಸು ಚಿಂತಿಸಲು ಆರಂಭಿಸಿತು. ಮತ್ತೆ ಶಿಕ್ಷಣಕ್ಕೆ ವಿದಾಯ ಹೇಳಬೇಕು ಎಂದುಕೊಂಡು ಸಂಪೂರ್ಣವಾಗಿ ಮಗ್ಗದ ಕಡೆ ವಾಲಿದೆ. ಆದರೆ, ಕೆಲವು ಜನರ ಮಾತು ಮತ್ತೆ ಮನಸ್ಸು ಬದಲಿಸಿತು. ಖಾಸಗಿ ಕಾಲೇಜಿಗೆ ದುಡ್ಡು ಕಟ್ಟಲು ಆಗದ ಕಾರಣ ಆಗ ತಾನೇ ಊರಿನಲ್ಲಿ ಸ್ಥಾಪನೆಯಾಗಿದ್ದ ಸರ್ಕಾರಿ ಕಾಲೇಜಿಗೆ ಪ್ರವೇಶ ಪಡೆದುಕೊಂಡೆ. ಆಗ ಕಾಲೇಜಿನಲ್ಲಿ ಶಿಕ್ಷಕರು ಇಬ್ಬರೇ, ಅವರು ಎರವಲು ಬೇರೆ. ಊರಿಂದ ಬಂದು ವಾರದಲ್ಲಿ ಎರಡು ಸಾರಿ ಪಾಠ ಮಾಡುತ್ತಿದ್ದರು. ಕಾಲೇಜು ಹಂತದಲ್ಲಿಯೂ ಅದೇ ಮಗ್ಗ ಮತ್ತು ಪಾಠವೇ ನನ್ನ ಬದುಕಾಗಿತ್ತು. ಆಟಕ್ಕೆ ವಿದಾಯ ಹೇಳಿ ಅದೇಷ್ಟೋ ವರ್ಷಗಳೆ ಗತಿಸಿ ಹೋಗಿದ್ದವು. ನಿರೀಕ್ಷೆಗಳು ಹೆಚ್ಚಾದಂತೆ ಪರೀಕ್ಷೆಗಳು ಹೆಚ್ಚಾಗುತ್ತವೆ ಎಂಬುವುದನ್ನು ಅರಿತುಕೊಂಡೆ. ಅದಕ್ಕೆ ಬದುಕಿನಲ್ಲಿ ಹೆಚ್ಚು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡು ಪರೀಕ್ಷೆಗಳನ್ನು ಪಾಸು ಮಾಡುತ್ತಾ ಸಾಗಿದೆ. ಓದಿದೆ. ಇದೇ ಕಾರಣಕ್ಕೆ ಕಾಲೇಜಿಗೆ ಪ್ರಥಮ ಬಂದೆ. ಆಗ ಪೇಪರ್‌ನಲ್ಲಿ ಪೋಟೋ ಬಂದದ್ದು ನೋಡಿ, ಅಪ್ಪ, ಅವ್ವ ಸಂತಸಕೊಂಡರು.

ಮುಂದೆ....ನಡೆದದ್ದು ಬದುಕು ಕಟ್ಟಿಕೊಳ್ಳುವ ದೊಡ್ಡ ಹೋರಾಟ. ಅಪ್ಪ-ಅವ್ವನನ್ನು ಬಿಟ್ಟು ದೂರದ ಹುಬ್ಬಳಿಯತ್ತ ಪಯಣ.....

ನಿರೀಕ್ಷಿಸಿ......!                                        -ಮಂಜುನಾಥ ಗದಗಿನ


Sunday, 14 August 2022

ಹೋರಾಟಗಾರಲ್ಲಿ ಜಾಗೃತಿ ಮೂಡಿಸಿದ ನಾಟಕ ಕಂಪನಿ

ಮಹಾದೇವಪ್ಪ ಪಟ್ಟಣ ಸ್ಥಾಪಿಸಿದ್ದ ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ



-ಮಂಜುನಾಥ ಗದಗಿನ
ಸ್ವಾತಂತ್ರ್ಯ ಹೋರಾಟ ತೀವ್ರಗತಿಯಲ್ಲಿ ಸಾಗಿದ್ದ ಸಮಯ. ಈ ವೇಳೆ ಬ್ರಿಟಿಷರು ಹೆಚ್ಚಿಸಿದ್ದ ಕಂದಾಯಕ್ಕಿಂತ ಜನರ ಮೇಲೆ ಹೆಚ್ಚಿನ ಕಂದಾಯ ಹೇರಿದ್ದ ಸಂಸ್ಥಾನಿಕರ ವಿರುದ್ಧ ಜನರನ್ನು ಒಗ್ಗೂಡಿಸಿ ಬ್ರಿಟಿಷರಿಗೆ ಪರೋಕ್ಷವಾಗಿ ನಡುಕ ಹುಟ್ಟಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ಸ್ಥಾಪನೆ ಮಾಡಿ ಜನರ ಮನಪರಿವರ್ತನೆ ಮಾಡಿ ಜನರಿಗೆ ಮನರಂಜನೆಯ ಜತೆಗೆ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಿದ್ದು ರಾಮದುರ್ಗದ ಮಹಾದೇವಪ್ಪ ಪಟ್ಟಣ.
ಮಹಾದೇವಪ್ಪ ಪಟ್ಟಣನವರು ಬಾಯಿಯಲ್ಲಿ ಬಂಗಾರ ಚಮಕ ಇಟ್ಟುಕೊಂಡು ಹುಟ್ಟಿದರು. ಮನೆಯಲ್ಲಿ ಸಾಕಷ್ಟು ಆಸ್ತಿ ಇತ್ತು. ಕುಳಿತು ಉಂಡರೂ ಕರಗದಷ್ಟು ಶ್ರೀಮಂತಿಕೆ ಅವರ ಬಳಿ ಇತ್ತು. ಆದರೆ, ಇದ್ಯಾವುದಕ್ಕೂ ಪಟ್ಟಣ ಅವರು ಮಾರು ಹೋಗದೇ ದೇಶಕ್ಕಾಗಿ, ತಮ್ಮ ಜನರಿಗೆ ಒಳಿತಾದರೆ ಸಾಕು ಎಂಬ ಒಂದೇ ಒಂದು ಮನೋಭಾವ ಅಲ್ಲರಲ್ಲಿತ್ತು. ಇದೇ ಕಾರಣಕ್ಕೆ ಅವರು ತಮ್ಮ ಶ್ರೀಮಂತಿಕೆ ತ್ಯಜಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು.
೧೯೩೪ ರಿಂದ ೧೯೩೭ರ ಅವಧಿಯಲ್ಲಿ ತೀವ್ರ ಬರಗಾಲ ತಲೆದೋರಿತ್ತು. ದುಡಿದು ಹೊಟ್ಟೆ ತುಂಬಿಸಿಕೊಳ್ಳುವುದೇ ದುಸ್ತರವಾಗಿತ್ತು. ಇಂತಹ ಸನ್ನಿವೇಶದಲ್ಲಿ ಜನರ ಕಷ್ಟಗಳಿಗೆ ಮುಂದಾಗುವುದು ಬಿಟ್ಟು ಸಂಸ್ಥಾನದ ರಾಜ ಬ್ರಿಟಿಷ್ ಹದ್ದಿಗಿಂತ ಒಂದೂವರೆ ಪಟ್ಟು ಹೆಚ್ಚಿಗೆ ಭೂಕಂದಾಯ ವಸೂಲಿ ಮಾಡುತ್ತಿದ್ದ. ಸಂಸ್ಥಾನಿಕರ ಹಾಗೂ ಜನರ ಹೋರಾಟಕ್ಕೆ ಹಾದಿ ಮಾಡಿಕೊಟ್ಟಿತು.
ಇಂತಹ ಸಂದರ್ಭದಲ್ಲಿ ಸಂಸ್ಥಾನಿಕರ ವಿರುದ್ಧ ಹೋರಾಟ ನಡೆಸಲು ಜನರು ಮುಂದಾದರು. ಈ ವೇಳೆ ಮಹಾದೇವಪ್ಪ ಪಟ್ಟಣ ಅವರು ಮುಂಚೂಣಿಗೆ ಬಂದು ಬಂಡಾಯದ ನಾಯಕತ್ವ ವಹಿಸಿಕೊಂಡರು. ಇದಾದ ನಂತರ ಪಟ್ಟಣ ಅವರು ಸಂಸ್ಥಾನಿಕ ರಾಜನ ಕೆಂಗಣ್ಣಿಗೆ ಗುರಿಯಾದರು. ಈ ವೇಳೆ ಪಟ್ಟಣ ಅವರನ್ನು ರಾಜ ಬಗ್ಗು ಬಡಿಯಲು ನೋಡಿದ. ಆದರೆ, ಇದ್ಯಾವುದಕ್ಕೂ ಸೊಪ್ಪು ಹಾಕದ ಮಹಾದೇವಪ್ಪನವರು ನ್ಯಾಯವಾದಿ ಬಿ.ಎನ್.ಮುನವಳ್ಳಿ ಅವರ ಜತೆಗೂಡಿ ಜನಜಾಗೃತಿ ಮಾಡಿದರು.
ಸ್ಫೂರ್ತಿಗಾಗಿ ರಾಜ ಬೀದಿಯಲ್ಲಿ ಕಾಂಗ್ರೆಸ್ ಧ್ವಜ ಕಂಬ ನೆಟ್ಟರು. ಸ್ವಯಂ ಸೇವಕರ ಪಡೆ ಕಟ್ಟಿದರು. ಬಂಡಾಯದಲ್ಲಿ ಪಾಲ್ಗೊಂಡ ಹೋರಾಟಗಾರರ ಖರ್ಚು-ವೆಚ್ಚ ನೋಡಿಕೊಂಡರು. ಇದೇ ವೇಳೆ ಜನರನ್ನು ಒಂದುಗೂಡಿಸಲು ಶ್ರೀಭಕ್ತಿವರ್ಧಕ ಸಂಗೀತ ನಾಟಕ ಕಂಪನಿ ರಚಿಸುವ ಮೂಲಕ ಜನರಲ್ಲಿ ಬಂಡಾಯ ಹಾಗೂ ಸ್ವಾತಂತ್ರ್ಯ ಹೋರಾಟ ಬಗ್ಗೆ ಜಾಗೃತಿ ಮೂಡಿಸಿ ಜನರು ಹೋರಾಟಕ್ಕೆ ಕರೆತಂದರು. ಏನಾದರೂ ನಿರ್ಧಾರಗಳನ್ನು ಮಾಡಲು, ಚರ್ಚಿಸಲು ಈ ನಾಟಕ ಕಂಪನಿ ಬಳಸಿಕೊಂಡರು. ನಾಟಕ ನೋಡಲು ಬರುವ ಜನರಿಗೆ ಅರಿವು ಮೂಡಿಸಿದರು.
ಹೋರಾಟದ ಕಾವು ಹೆಚ್ಚಾದಂತೆ ಇವರನ್ನೆಲ್ಲ ಮಟ್ಟ ಹಾಕಲು ರಾಜ ಕೊಲ್ಲಾಪುರದಲ್ಲಿದ್ದ ಬ್ರಿಟಿಷ್ ಪೊಲಿಟಿಕಲ್ ಏಜೆಂಟ್‌ನನ್ನು ಸಂಪರ್ಕಿಸಿ ಸೈನ್ಯ ಕಳುಹಿಸಲು ಕೇಳಿಕೊಂಡ. ಆದರೆ, ಚಳವಳಿ ತೀವ್ರ ಸ್ವರೂಪ ಕಂಡ ಬ್ರಿಟಿಷರು ರಾಜನಿಗೆ ಬುದ್ಧಿವಾದ ಹೇಳಿ ಕಳಹಿಸಿದರು. ಇನ್ನು ಪಟ್ಟಣ ಹಾಗೂ ಮುನವಳ್ಳಿ ಅವರನ್ನು ಕೊಂದರೆ ಬಂಡಾಯ ಶಮನವಾಗುವುದು ಎಂದು ಯೋಚಿಸಿದ್ದ ರಾಜ ಅವರನ್ನು ಕೊಲ್ಲಲು ೧೯೩೯ರಲ್ಲಿ ತೇರ ಬಜಾರದಲ್ಲಿದ್ದ ಕಾಂಗ್ರೆಸ್ ಧ್ವಜ ಸ್ತಂಭ ತೆರವುಗೊಳಿಸಿದ.
ಇದು ಸಂಘರ್ಷಕ್ಕೆ ಕಾರಣವಾಗಿ ಲಾಠಿ ಜಾರ್ಜ್, ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ವೇಳೆ ಪರಿಸ್ಥಿತಿ ಗಂಭೀರತೆ ಅರಿತ ಪಟ್ಟಣ ಅವರು ಮನೆಗೆ ಬಂದು ಮನೆಯಲ್ಲಿದ್ದ ಹಣ ತೆಗೆದುಕೊಂಡು ಊರು ಬಿಟ್ಟು ಭೂಗತರಾದರು. ತದನಂತರ ಮುನವಳ್ಳಿ ಅವರ ಬಂಧನವಾಗಿ ಅದು ಹಿಂಸಾಚಾರಕ್ಕೆ ತಿರುಗಿ ಪೊಲೀಸರು, ಹೋರಾಟಗಾರರ ಹತ್ಯೆಯಾಯಿತು. ಈ ಸುದ್ದಿ ತಿಳಿದ ಮಹಾದೇವಪ್ಪ ಪಟ್ಟಣ ಅವರು ನೊಂದುಕೊಂಡರು. ಪಟ್ಟಣ ಅವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ಕೂಡವಾಯಿತು. ಅಲ್ಲದೆ, ಹಿಡಿದು ಕೊಟ್ಟವರಿಗೆ ₹೧೦ ಸಾವಿರ ಕೊಡುವುದಾಗಿ ತಿಳಿಸಲಾಯಿತು. ಇದರಿಂದ ಪಟ್ಟಣ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿದರು. ತಮ್ಮ ಸ್ಥಳಗಳನ್ನು ಬದಲಿಸುತ್ತಾ ಅಲೆದಾಡಿದರು. ಇದೇ ವೇಳೆ ಪಟ್ಟಣ ಅವರು ಶರಣಾಗಬೇಕು. ಇಲ್ಲದಿದ್ದರೆ ಅವರ ಆಸ್ತಿ ಜಪ್ತಿ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಲಾಯಿತು. ಆದರೆ, ಪಟ್ಟಣ ಅವರು ಶರಣಾಗದೇ ಇದ್ದ ಕಾರಣ ಅವರ ೪೦೦ ಎಕರೆ ಜಮೀನನ್ನು ಸಂಸ್ಥಾನಿಕರು ವಶಪಡಿಸಿಕೊಂಡರು. ನಂತರ ದೇಶದ ವಿವಿಧೆಡೆ ಭೂಗತರಾಗಿ ಚಲೇಚಾವ್ ಚಳವಳಿಯಲ್ಲಿ ಪಾಲ್ಗೊಂಡರು.
ಜೈಲು ಸುಟ್ಟು, ಪೊಲೀಸರ ಹತ್ಯೆ ಮಾಡಿದ ಕಾರಣಕ್ಕೆ ಅನೇಕರಿಗೆ ಶಿಕ್ಷೆಯಾಯಿತು. ಈ ವೇಳೆ ಶಿಕ್ಷೆಗೊಳಗಾಗಿದ್ದ ಎಲಿಗಾರ ಬಸಪ್ಪ ನೇಣಿಗೇರುವ ಮುನ್ನ ಕೊನೆಯ ಆಸೆ ಕೇಳಿದಾಗ, ಮಹಾದೇವಪ್ಪ ಹೋರಾಟ ಮುಂದುವರಿಸುತ್ತಾನೆ. ಗುರಿ ಸಾಧಿಸಿ ನಮ್ಮೆಲ್ಲರ ಸಾವಿನ ಸೇಡು ತೀರಿಸಿಕೊಳ್ಳುತ್ತಾನೆ’ ಎಂದು ರಣೋತ್ಸಾಹ ಹೊರಗೆಡವಿದ್ದ. ಅದು ಜನರ ಹೋರಾಟವನ್ನು ಜೀವಂತವಾಗಿ ಇಟ್ಟಿತ್ತು. ಮಹಾತ್ಮ ಗಾಂಧೀಜಿ ಈ ಗಲ್ಲು ಶಿಕ್ಷೆ ರದ್ದುಪಡಿಸಲು ಕೇಳಿದ್ದರು. ರಾಜ ಮನ್ನಿಸಲಿಲ್ಲ. ೧೯೪೬ರಲ್ಲಿ ಮಹಾದೇವಪ್ಪ ಪಟ್ಟಣ ಅವರ ಮೇಲಿದ್ದ ವಾರೆಂಟ್ ಅನ್ನು ಹಿಂಪಡೆಯಲಾಯಿತು. ನಂತರ ಅನೇಕ ಮಹನೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಮಹಾದೇವಪ್ಪ ಪಟ್ಟಣವರು ಬಂಡಾಯವೆದ್ದು ಸಂಸ್ಥಾನಿಕರಿಗೆ ಸಿಂಹಸ್ವಪ್ನವಾಗಿ ಪರಿಣಿಮಿಸಿದ್ದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇವರ ಕಿಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರೇರಣೆ ನೀಡಿತ್ತು. ಅವರು ಸ್ಥಾಪಿಸಿದ್ದ ನಾಟಕ ಕಂಪನಿ ಕೂಡಾ ಬಂಡಾಯದಲ್ಲಿ ಅನನ್ಯ ಪಾತ್ರ ನಿರ್ವಹಿಸಿತ್ತು.

Saturday, 6 August 2022

 ಕರ ಹೆಚ್ಚಳ ವಿರೋಧಿಸಿ ಹೋರಾಟ | ಜೈಲು ಸುಟ್ಟು, ಎಂಟು ಪೊಲೀಸರ ಹತ್ಯೆ| ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿ ನೀಡಿದ ಬಂಡಾಯ


-ಮಂಜುನಾಥ ಗದಗಿನ 
ಜೈಲು ಧ್ವಂಸ ಮಾಡಿ, ಎಂಟು ಜನ ಪೊಲೀಸರನ್ನು ಕೊಚ್ಚಿಕೊಂದರು. ನಂತರ ಪೊಲೀಸರ ಗೋಲಿಬಾರ್‌ಗೆ ನಾಲ್ಕು ಜನ ಹೋರಾಟಗಾರರು ಪ್ರಾಣ ತ್ಯಾಗ ಮಾಡಿ ಆಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟಕ್ಕೆ, ಚಳವಳಿಗಾರರಿಗೆ ಹುಮ್ಮಸ್ಸು, ಕಿಚ್ಚು ತುಂಬಿದ್ದು ರಾಮದುರ್ಗ ಸಂಸ್ಥಾನದ ಬಂಡಾಯ. ಈ ಬಂಡಾಯ ನಡೆದದ್ದು ಪ್ರಜಾಸಂಘದ ನೇತೃತ್ವದಲ್ಲಿ ಎನ್ನುವುದು ಸ್ವಾರಸ್ಯಕರ.
ದೇಶದಲ್ಲಿ ಬ್ರಿಟಿಷರು ವಿಧಿಸಿದ ಕರ ನಿರಾಕಣೆ ಸತ್ಯಾಗ್ರಹ ನಂತರ ಸಂಸ್ಥಾನವೊಂದರ ಕರನಿರಾಕಣೆ ಬಂಡಾಯ ಸ್ವಾತಂತ್ರ್ಯ ಹೋರಾಟದ ಕಾವಿಗೆ ಮತ್ತಷ್ಟು ಇಂಬು ನೀಡಿತ್ತು. ಅದು ೧೯೩೭ರ ಸಮಯ. ದೇಶದಲ್ಲಿ ಕಾನೂನು ಭಂಗ ಚಳವಳಿ ನಡೆಯುತ್ತಿತ್ತು. ಈ ವೇಳೆ ರಾಮದುರ್ಗ ಸಂಸ್ಥಾನದ ಆಳ್ವಿಕೆ ಮಾಡುತ್ತಿದ್ದ ರಾಜಾಸಾಹೇಬರು ದೇಶದಲ್ಲಿದ್ದ ತೆರಿಗೆಗಿಂತ ಹೆಚ್ಚಿನ ತೆರಿಗೆಯನ್ನು ಸಂಸ್ಥಾನದ ಜನರ ಮೇಲೆ ಹೇರಿದ್ದರು. ಆಗ ಬರಗಾಲ ಎದುರಾಗಿತ್ತು. ಹೀಗಾಗಿ ಜನರು ತೆರಿಗೆ ಕಡಿತಗೊಳಿಸಿ ಎಂದು ರಾಜಾಸಾಹೇಬರ ಹತ್ತಿರ ವಿನಂತಿಸಿಕೊಂಡರು. ಇದಕ್ಕೆ ರಾಜಾಸಾಹೇಬರು ಸೊಪ್ಪು ಹಾಕಲಿಲ್ಲ. ಹೀಗಾಗಿ ರಾಮದುರ್ಗ ಸಂಸ್ಥಾನದಲ್ಲಿ ಕರನಿರಾಕರಣೆ ಸತ್ಯಾಗ್ರಹ ಆರಂಭಗೊಂಡಿತು. ಈ ವೇಳೆ ಪ್ರಜಾಸಂಘ ಹುಟ್ಟಿಕೊಂಡಿತು. ಇದರ ಅಧ್ಯಕ್ಷರಾಗಿ ವಕೀಲ ಬಿ.ಎನ್.ಮುನವಳ್ಳಿಯವರು ಆಯ್ಕೆಯಾದರು.
ಪ್ರಜಾಸಂಘ ಸ್ಥಾಪನೆಯಾದ ನಂತರ ರಾಮದುರ್ಗ ಗ್ರೂಪ್, ಸುರೇಬಾನ ಗ್ರೂಪ್, ಮೆಣಸಗಿ ಗ್ರೂಪ್ ಎಂದು ಮೂರು ಸ್ವಯಂ ಸೇವಕರ ಸಂಘಟನೆಗಳನ್ನು ಮಾಡಿಕೊಂಡು ಒಂದೊಂದು ಸಂಘಟನೆ ವಸ್ತ್ರಸಂಹಿತೆ ಮಾಡಿಕೊಂಡು ಹಳ್ಳಿಹಳ್ಳಿಗಳಲ್ಲಿ ತಿರುಗಾಡಿ ಪೊಲೀಸರು ಊರೊಳಗೆ ಹೋಗದಂತೆ ಬಹಿಷ್ಕಾರ ಹಾಕಿದರು. ಪೊಲೀಸರು ಊರಲ್ಲಿ ಬಂದರೆ ಚಹ ಸಹ ನೀಡದಂತೆ ತಿಳಿಸಿ ತಡೆದು ಬಂದರು. ಹಳ್ಳಿಗಳಲ್ಲಿಯ ಸಮಸ್ಯೆಗಳನ್ನು ಪ್ರಜಾಸಂಘದ ಸ್ವಯಂ ಸೇವಕರೇ ಪರಿಹರಿಸುತ್ತಿದ್ದರು. ಕಾನೂನುಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ಕೂಡ ನೀಡುತ್ತಿದ್ದರು. ಈ ಹೋರಾಟ ಸ್ವಾತಂತ್ರ್ಯ ಚಳವಳಿಗೆ ಸ್ಫೂರ್ತಿ ನೀಡಿತು. ನಾ.ಸು.ಹರ್ಡಿಕರ, ಗಂಗಾಧರರಾವ್ ದೇಶಪಾಂಡೆ ಅವರು ಇಲ್ಲಿಗೆ ಬಂದು ಅವಲೋಕನ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ತಮ್ಮ ಸ್ವಾತಂತ್ರ್ಯ ಹೋರಾಟದಲ್ಲಿಯೂ ಇದನ್ನು ಅನುಸರಿಸುತ್ತಿದ್ದರು.
ಸಂಸ್ಥಾನವೂ ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದಾಗ ಪ್ರಜಾಸಂಘ ಉಗ್ರ ಹೋರಾಟಕ್ಕೆ ಅಣಿಯಾಯಿತು. ಈ ವೇಳೆ ಕೆಲವು ಬೇಡಿಕೆಗಳನ್ನು ಮುಂದಿಟ್ಟಿತು. ಭೂ ಕಂದಾಯವನ್ನು ಅರ್ಧದಷ್ಟು ಹಿಂದಕ್ಕೆ ಪಡೆಯಬೇಕು. ಆಡಳಿತದಲ್ಲಿ ಕನ್ನಡ ಭಾಷೆ ಬಳಸಬೇಕು. ಕನ್ನಡ ಬಾರದ ಅಧಿಕಾರಿಗಳನ್ನು ಕಿತ್ತುಹಾಕಬೇಕು. ವರಮಾನ ತೆರಿಗೆ ತಗ್ಗಿಸಬೇಕು. ಅನವಶ್ಯಕ ತೆರಿಗೆ ಹಿಂಪಡೆಯಬೇಕೆಂದು ಷರತ್ತು ಹಾಕಿತು. ಇದಕ್ಕೆ ಸಂಸ್ಥಾನಿಕರು ಒಪ್ಪಲಿಲ್ಲ. ಸಂಸ್ಥಾನದಲ್ಲಿ ೧೪೪ ಸೆಕ್ಷನ್ ಜಾರಿ ಮಾಡಿದರು. ಇದನ್ನು ಉಲ್ಲಂಘಿಸಿ ಪ್ರಜಾಸಂಘದವರು ಜೈಲು ಸೇರಿದರು.
ಅದೊಂದು ದಿನ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರನ್ನು ಪೊಲೀಸರು ಬಂಧಿಸಿದರು. ಅವರನ್ನು ಬಿಡುಗಡೆ ಮಾಡಬೇಕು ಎಂದು ಹೋರಾಟಗಾರರು ಜೈಲಿಗೆ ಮುತ್ತಿಗೆ ಹಾಕಿದರು. ಆದರೆ, ಪೊಲೀಸರು ಮಾತ್ರ ಮುನವಳ್ಳಿ ಅವರನ್ನು ನೋಡುವುದಕ್ಕೂ ಅವಕಾಶ ಕೊಡಲಿಲ್ಲ. ಇದರಿಂದ ರೊಚ್ಚಿಗೆದ್ದ ಹೋರಾಟಗಾರರು ಜೈಲಿಗೆ ಬೆಂಕಿ ಇಟ್ಟು, ಅಲ್ಲಿದ್ದ ಎಂಟು ಜನ ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದರು. ಇದರಿಂದ ರೊಚ್ಚಿಗೆದ್ದ ಪೊಲೀಸರು ಗೋಲಿಬಾರ್ ಮಾಡಿದರು. ಈ ವೇಳೆ ನಾಲ್ಕು ಜನ ಹೋರಾಟಗಾರರು ಅಸುನೀಗಿದರು. ಆನಂತರ ಈ ಸಂಬಂಧ ವಿಚಾರಣೆ ನಡೆಯಲ್ಪಟ್ಟು ಎಂಟು ಜನಕ್ಕೆ ಫಾಶಿ (ಗಲ್ಲು) ಶಿಕ್ಷೆಯಾಗಿ, ಅನೇಕರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಇನ್ನೂ ಕೆಲವರು ಜೈಲಿನಲ್ಲೇ ಸಾವನ್ನಪ್ಪಿದರು.
ದೇಶದ ಸ್ವಾತಂತ್ರ್ಯದ ಹೋರಾಟಕ್ಕೆ ಸ್ಫೂರ್ತಿ ತುಂಬಿದ ಪ್ರಜಾಸಂಘದ ಹೋರಾಟದಲ್ಲಿ ಮಹಾದೇವಪ್ಪ ಪಟ್ಟಣ, ಲಿಂಗನಗೌಡ ಪಾಟೀಲ, ಮರುಳಾರಾಧ್ಯ ಶಾಸ್ತ್ರಿಗಳು, ಮಹಾದೇವಪ್ಪ ಬಡಕಲಿ, ಗಿರಿಧರಲಾಲ ಲಾಠಿ, ಸಿದ್ಧಪ್ಪ ಮೇಟಿ, ರಾಮಪ್ಪ ಶಾಡ್ಲಗೇರಿ, ಈರಪ್ಪ ಡೋಣಿ, ನಿಂಗಪ್ಪ ಮೇಟಿ, ಮರಿಯಪ್ಪ ಪೂಜಾರಿ, ಟೀಕಪ್ಪ ಜಾಲೋಜಿ, ಫಕೀರಸಾಬ ಅಗಸರ, ಮಾನಪ್ಪ ಕೊಳ್ಳಿ, ಲಕ್ಕಪ್ಪ ಮುರುಡಿ, ಮಲ್ಲಪ್ಪ ಕುಂಬಾರ, ಮಹಾಲಿಂಗಯ್ಯ ಹಿರೇಮಠ ಹೀಗೆ ಅನೇಕ ಜನರು ಪಾಲ್ಗೊಂಡು ಸಂಸ್ಥಾನ ನಡುಗಿಸಿದ್ದು ಅಲ್ಲದೇ ಸ್ವಾತಂತ್ರ್ಯ ಹೋರಾಟಗಾರರಿಗೆ ಧೈಯ, ಸ್ಥೈರ್ಯ, ಕಿಚ್ಚು ತುಂಬಿದರು. ಇವರೆಲ್ಲರ ಸ್ಮರಣೆ ನಿಮಿತ್ತವಾಗಿ ಪ್ರಜಾಸಂಘದ ಅಧ್ಯಕ್ಷ ಬಿ.ಎನ್.ಮುನವಳ್ಳಿ ಅವರ ಪುತ್ಥಳಿಯನ್ನು ರಾಮದುರ್ಗದ ತೇರು ಬಜಾರ್‌ನಲ್ಲಿ ಪುತ್ಥಳಿಯನ್ನು ನಿರ್ಮಿಸಲಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ರಾಮದುರ್ಗ ೧೧೦ ಕಿಮೀ ಇದೆ. ಬೆಳಗಾವಿಯಿಂದ ನೇರವಾಗಿ ರಾಮದುರ್ಗಕ್ಕೆ ಬಸ್ ಸೌಲಭ್ಯವಿದೆ. ರಾಮದುರ್ಗ ಬಸ್ ನಿಲ್ದಾಣದಿಂದ ೨ ಕಿಮೀ ದೂರದಲ್ಲಿ ಈ ಪುತ್ಥಳಿ ಇದೆ.

ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ ಹಿಂಡಲಗಾ ಜೈಲ್

೧೯೨೩ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡ ಜೈಲು | ಕರ್ನಾಟಕದ ಅನೇಕ ಹೋರಾಟಗಾರರು ಇಲ್ಲಿ ಬಂಧಿಸಿ ಇಡಲಾಗಿತ್ತು



-ಮಂಜುನಾಥ ಗದಗಿನ 

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡುತ್ತಿದ್ದ ಹೋರಾಟಗಾರರನ್ನು ಹತ್ತಿಕ್ಕಲು ಅವರನ್ನು ಬಂಧಿಸಿ ಸೆರೆವಾಸ ನೀಡುತ್ತಿದ್ದರು. ಆದರೆ, ಇದಕ್ಕೂ ಬಗ್ಗದೇ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲೇಬೇಕು ಎಂದು ಹೋರಾಡಿ ಪ್ರಾಣಬಿಟ್ಟ ವೀರರು ನಮ್ಮ ರಾಜ್ಯದಲ್ಲಿ ಅನೇಕರಿದ್ದಾರೆ. ಹೀಗೆ ಬಂಧಿಸಲ್ಪಟ್ಟ ಹೋರಾಟಗಾರರನ್ನು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹ ಹಾಗೂ ಕರ್ನಾಟಕದ ನೆರೆಯ ರಾಜ್ಯ ಮಹಾರಾಷ್ಟ್ರದ ಪುಣೆಯ ಯರವಾಡ ಜೈಲಿನಲ್ಲಿ ಇಡುತ್ತಿದ್ದರು.

ಬಂಧನ, ಸೆರೆವಾಸ ಇವು ಭಾರತದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲು ಬ್ರಿಟಿಷರು ಅನುಸರಿಸಿದ ಅಸ್ತ್ರಗಳು. ದೇಶದಲ್ಲಿ ಆಂಗ್ಲರು ತಮ್ಮ ಅಧಿಪತ್ಯ ವಿಸ್ತರಿಸಬೇಕು ಎಂಬ ಉದ್ದೇಶದಿಂದ ತಮಗೆ ತಿಳಿದಂತೆ ಕಾಯ್ದೆ, ಕಾನೂನುಗಳನ್ನು ಜಾರಿಗೆ ತಂದು ಜನರ ಮೇಲೆ ಹೇರಲು ಆರಂಭಿಸಿದರು. ಹೀಗೆ ಜನರ ಮೇಲೆ ವಿಧಿಸಲ್ಪಟ್ಟ ಜನವಿರೋಧಿ ನೀತಿಗಳನ್ನು ವಿರೋಧಿಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿ ಜೈಲಿಗೆ ಅಟ್ಟಿ, ಅವರಿಗೆ ದಂಡ ವಿಧಿಸುತ್ತಿದ್ದರು. ಆದರೆ, ನಮ್ಮ ಹೋರಾಟಗಾರರು ಮಾತ್ರ ಇದ್ಯಾವುಕ್ಕೂ ಜಗ್ಗದೇ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು.

ಹಿಂಡಲಗಾ ಜೈಲು:

ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ದಿನದಿಂದ ದಿನಕ್ಕೆ ಹೆಚ್ಚಾಗ ತೊಡಗಿತ್ತು. ಹೀಗಾಗಿ ಜೈಲಿಗೆ ಸೇರುವವರ ಸಂಖ್ಯೆ ಕೂಡ ಹೆಚ್ಚಾಯಿತು. ಹೀಗಾಗಿ ೧೯೨೩ರಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿ ಜೈಲು ನಿರ್ಮಾಣ ಮಾಡಿದರು. ಈ ಸಮಯದಲ್ಲಿ ಭಾರತದಲ್ಲಿ ಅಸಹಕಾರ ಹಾಗೂ ಉಪ್ಪಿನ ಸತ್ಯಾಗ್ರಹ ಚಳವಳಿಗಳ ಕಾವು ಜೋರಾಗಿತ್ತು. ಈ ವೇಳೆಯಲ್ಲಿ ಬ್ರಿಟಿಷರ ಸರ್ಕಾರಿ ಕಚೇರಿಗಳ ಲೂಟಿ, ಪಿಕೆಟಿಂಗ್, ರೈಲ್ವೆ ಹಳಿಗಳನ್ನು ಕೀಳುವುದು ಹೀಗೆ ನಾನಾ ಬಗೆಯ ಹೋರಾಟಗಳು ನಡೆದಿದ್ದವು. ಹೀಗೆ ಬ್ರಿಟಿಷರ ವಿರೋಧದಿಂದ ರಾಜ್ಯದ ಮೈಲಾರ ಮಹಾದೇವಪ್ಪ, ಅಂದಾನೆಪ್ಪ ದೊಡ್ಡಮೇಟಿ, ಮಹಾತ್ಮ ಗಾಂಧೀಜಿ ಅವರ ಕಾರ್ಯದರ್ಶಿಯಾಗಿದ್ದ ಮಹಾದೇವ ದೇಸಾಯಿ, ಕೊಟ್ಟೂರಿನ ಭದ್ರಶೆಟ್ಟಿಸಣ್ಣ ರುದ್ರಪ್ಪ, ಅಡವಿ ಬಸಪ್ಪ, ಅಣ್ಣು ಗುರೂಜಿ, ವೆಂಕೋಸಾ ಭಾಂಡಗೆ, ಹಳೇ ಹಗರಿಬೊಮ್ಮನಹಳ್ಳಿ ಹಾಲ್ದಾಳ್ ಕೊಟ್ರಪ್ಪ, ತಮ್ಮಾಜಿ ಮಿರಜಕರ, ವಾಲಿ ಚೆನ್ನಬಸಪ್ಪ ಹೀಗೆ ರಾಜ್ಯದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಹಿಂಡಲಗಾ ಕಾರಾಗೃಹದಲ್ಲಿ ಸೆರೆವಾಸ ಅನುಭವಿಸಿದ್ದಾರೆ. ಸ್ವಾತಂತ್ರ್ಯ ನಂತರ ವೀರ ಸಾರ್ವಕರ್ ಅವರನ್ನು ಇದೇ ಜೈಲಿನಲ್ಲಿ ಬಂಧಿಯಾಗಿಸಿದ್ದರು. ಗಲ್ಲು ಶಿಕ್ಷೆ ವಿಧಿಸುವ ರಾಜ್ಯದ ಏಕೈಕ ಜೈಲು ಎಂಬ ಖ್ಯಾತಿಗೆ ಈ ಕಾರಾಗೃಹ ಪಾತ್ರವಾಗಿದೆ. ಈ ಜೈಲು ಅಂದಾಜು ೯೯ ಎಕರೆ ಇದ್ದು, ೧೧೬೨ ಕೈದಿಗಳನ್ನು ಇಲ್ಲಿ ಇಡಬಹುದಾಗಿದೆ. ೧೯೨೩ರಿಂದ ಇಲ್ಲಿವರೆಗೂ ೧೩೭ ಜನರನ್ನು ಇಲ್ಲಿ ಗಲ್ಲಿಗೇರಿಸಲಾಗಿದೆ. ಇದೀಗ ಈ ಜೈಲು ಶತಮಾನೋತ್ಸವದ ಸಂಭ್ರಮದಲ್ಲಿದೆ.

ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ದೇಶ ಹಾಗೂ ಕರ್ನಾಟಕ ಅನೇಕ ಹೋರಾಟಗಾರರನ್ನು ಮಹಾರಾಷ್ಟ್ರದ ಯರವಾಡ ಜೈಲಿನಲ್ಲೂ ಇರಿಸಲಾಗಿತ್ತು. ಇದು ೧೮೭೧ರಲ್ಲಿ ಬ್ರಿಟಿಷರು ಈ ಕಾರಾಗೃಹವನ್ನು ಸ್ಥಾಪನೆ ಮಾಡಿದ್ದರು. ಕರ್ನಾಟಕ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ಈ ಜೈಲಿನಲ್ಲಿ ಬಂಧಿಯಾಗಿ ಇಡಲಾಗಿತ್ತು. ಮಹಾತ್ಮ ಗಾಂಧೀಜಿ, ಜವಾಹರಲಾಲ್ ನೆಹರೂ, ಬಾಲಗಂಗಾಧರ ತಿಲಕ, ಸುಭಾಷಚಂದ್ರ ಭೋಸ್, ವೀರ ಸಾರ್ವಕರ ಹೀಗೆ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು ಈ ಕಾಗಾಗೃಹದಲ್ಲಿ ಬಂಧಿಯಾಗಿದ್ದಿರು. ಈ ಜೈಲಿನಲ್ಲಿ ಐದು ಸಾವಿರಕ್ಕೂ ಅಧಿಕ ಕೈದಿಗಳನ್ನು ಇಡಬಹುದಾಗಿದೆ. 

---

ತಲುಪುವುದು ಹೇಗೆ?

ಹಿಂಡಗಾ ಕಾಗಾಗೃಹ ಬೆಳಗಾವಿ ನಗರದಿಂದ ೭ ಕಿಮೀ ಇದೆ. ಬೆಳಗಾವಿ ಬಸ್ ನಿಲ್ದಾಣದಿಂದ ಬಸ್ ವ್ಯವಸ್ಥೆ ಇದೆ.

---

ಪೋಟೋ 

ಹಿಂಡಲಗಾ ಜೈಲ್

 

ಸ್ವಾಂತಂತ್ರ್ಯ ಸಂಗ್ರಾಮಕ್ಕೆ ಶಿಸ್ತು ತುಂಬಿದ ಸೇವಾದಳ

 -ಮಂಜುನಾಥ ಗದಗಿನ



ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ನಾ.ಸು.ಹರ್ಡೀಕರ(ನಾರಾಯಣ ಸುಬ್ಬರಾವ್ ಹರ್ಡೀಕರ) ಅವರ ಹೆಸರು ಚಿರಸ್ಥಾಯಿ. ಒಂದು ಉತ್ತಮವಾದ ಸಂಘಟನೆ, ಬಲ, ಶಿಸ್ತು ಇಲ್ಲದೇ ಮುನ್ನುಗ್ಗುತ್ತಿದ್ದ ಹೋರಾಟಕ್ಕೆ ಸೇವಾದಳ ಎಂಬ ಸಂಘಟನೆ ಹುಟ್ಟು ಹಾಕಿ ಆ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದರು ನಾ.ಸು.ಹರ್ಡೀಕರ.

ಅದು ೧೯೨೧ರ ಸಮಯ. ರಾಷ್ಟ್ರಾದ್ಯಂತ ಸ್ವಾತಂತ್ರ್ಯದ ಹೋರಾಟದ ಕಾವು ಏರ ತೊಡಗಿತ್ತು. ಬ್ರಿಟಿಷರ ಸರ್ಕಾರ ಕಾಯ್ದೆ, ಕಾನೂನುಗಳನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆಯುತ್ತಿದ್ದವು. ಇದೇ ಸಮಯದಲ್ಲಿ ಅಂದರೆ, ೧೯೨೧ರಲ್ಲಿ ಧಾರವಾಡದಲ್ಲಿ ಪಿಕೆಟಿಂಗ್ ಮಾಡುವ ಸಂದರ್ಭದಲ್ಲಿ ಬ್ರಿಟಿಷರು ಪೈರಿಂಗ್ ಮಾಡಿದರು. ಈ ವೇಳೆ ಮೂವರು ಅಸುನೀಗಿದರು. ಇದರಿಂದ ೧೯೨೩ರಲ್ಲಿ ನಾಗಪುರದಲ್ಲಿ ರಾಷ್ಟ್ರಧ್ವಜ ಕಟ್ಟುವುದಕ್ಕೆ ಪ್ರತಿಬಂಧಕ ವಿಧಿಸಲಾಯಿತು. ಈ ಆಜ್ಞೆಯನ್ನು ಉಲ್ಲಂಘನೆ ಮಾಡುವುದಕ್ಕೆ ನಾ.ಸು.ಹರ್ಡೀಕರ ಅವರು ನೇತೃತ್ವದಲ್ಲಿ ಜನರ ಗುಂಪು ನಾಗಪುರಕ್ಕೆ ತೆರಳಿ ಆಜ್ಞೆ ಉಲ್ಲಂಘಿಸಿ ಜೈಲು ಸೇರಿದರು. ಈ ವೇಳೆ ಸ್ವಾತಂತ್ರ್ಯ ಹೋರಾಟಗಾರರಿಗೆ ಬ್ರಿಟಿಷರು ಚಿತ್ರಹಿಂಸೆ ನೀಡುತ್ತಿದ್ದರು. ಹೀಗಾಗಿ ಜೈಲಿಂದ ಹೋಗಬೇಕಾದರೆ ಇನ್ಮುಂದೆ ಯಾವುದೇ ಚಳವಳಿ, ಸತ್ಯಾಗ್ರಹ ಮಾಡುವುದಿಲ್ಲ ಎಂದು ಕ್ಷಮಾಪಣಾ ಪತ್ರ ಬರೆದುಕೊಟ್ಟು ಹೋಗಬೇಕು ಎಂದು ಹೇಳಿದರು. ನಾ.ಸು.ಹರ್ಡೀಕರ ಅವರು ನಾನು ಬರೆದುಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿದರು. ಈ ಸುದ್ದಿ ರಾಷ್ಟ್ರವ್ಯಾಪ್ತಿ ಹರಡಿತು.
೧೯೨೩ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ ಮಹಮ್ಮದ ಅಲಿ ಅವರ ಅಧ್ಯಕ್ಷಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಈ ಅಧಿವೇಶನದಲ್ಲಿ ನಾ.ಸು.ಹರ್ಡೀಕರ ಅವರು ಪಾಲ್ಗೊಂಡು, ಸಾತಂತ್ರ್ಯ ಹೋರಾಟಕ್ಕೆ ಅಪ್ಪಟ್ಟ ದೇಶಪ್ರೇಮಿಗಳನ್ನು ನಿರ್ಮಾಣ ಮಾಡುವ ಒಂದು ಶಿಸ್ತಿನ ಸಂಘಟನೆಬೇಕು. ಅದಕ್ಕೆ ಅವರು ಹಿಂದೂಸ್ತಾನ ಸೇವಾದಳ ಆರಂಭ ಮಾಡಬೇಕು ಎಂದು ಸೂಚನೆ ನೀಡಿದರು. ಇದಕ್ಕೆ ಮನ್ನಣೆ ಕೊಟ್ಟು ಆ ಅಧಿವೇಶನದಲ್ಲಿ ಹಿಂದೂಸ್ಥಾನ ಸೇವಾದಳ ಸ್ಥಾಪನೆ ಮಾಡಲಾಯಿತು. ಸೇವಾದಳದ ಪ್ರಥಮ ಅಧ್ಯಕ್ಷರಾಗಿ ಜವಾಹರಲಾಲ್ ನೆಹರು ಆಯ್ಕೆಯಾಗಿದರು. ಸಂಸ್ಥಾಪಕ ಸಂಚಾಲಕರಾಗಿ ನಾ.ಸು.ಹರ್ಡೀಕರ ಅವರು ಆಯ್ಕೆಯಾದರು. ನಂತರ ಇದೇ ಸೇವಾದಳ ಆಗಿ ಮುಂದುವರೆಯಿತು.
ಸೇವಾದಳದ ಪಾತ್ರ:
ಸೇವಾದಳ ಸ್ಥಾಪನೆಯಾದ ನಂತರ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಬಲ ಬಂದಿತು. ಸಂಘಟನೆ ಮತ್ತು ಶಿಸ್ತು ಇಲ್ಲದೇ ಸಾಗುತ್ತಿದ್ದ ಹೋರಾಟಕ್ಕೆ ಒಂದು ಶಿಸ್ತು ಬಂದಿತು. ನಾ.ಸು.ಹರ್ಡೀಕರ ಅವರು ದೇಶದ ಅನೇಕ ಹಳ್ಳಿಗಳಿಗೆ ತೆರಳಿ ಸೇವಾದಳ ಹುಟ್ಟು ಹಾಕಿ ಯುವ ಜನಾಂಗದಲ್ಲಿ ಸ್ವಾತಂತ್ರ್ಯದ ಬಗ್ಗೆ ಕಿಚ್ಚು ಮೂಡಿಸಿದರು. ಅವರನ್ನು ಸೇವಾದಳಕ್ಕೆ ಕರೆ ತಂದು ರಾಷ್ಟ್ರಪ್ರೇಮ, ಶಿಸ್ತು, ಸಂಘಟನೆ ಹಾಗೂ ದೈಹಿಕ, ಮಾನಸಿಕವಾಗಿ ಸದೃಢಗೊಳಿಸುವ ಕಾರ್ಯ ಮಾಡಿದರು. ಹೀಗೆ ಹಿಂದೂಸ್ಥಾನ ಸೇವಾದಳ ವ್ಯಾಪಕವಾಗಿ ಬೆಳೆಯಿತು. ಸೇವಾದಳದಲ್ಲಿ ತಯಾರಾದ ಯುವಪಡೆ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿತು.
೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನದಲ್ಲಿ ಸೇವಾದಳದ ಪಾತ್ರ ದೊಡ್ಡದಾಗಿದೆ. ಈ ಅಧಿವೇಶನದ ಅಧ್ಯಕ್ಷತೆಯನ್ನು ಗಾಂಧೀಜಿ ವಹಿಸಿಕೊಂಡಿದ್ದರು. ಅಧಿವೇಶನದ ಸಕಲ ಸಿದ್ಧತೆಗಳನ್ನು ಗಂಗಾಧರರಾವ್ ದೇಶಪಾಂಡೆ ಹಾಗೂ ನಾ.ಸು.ಹರ್ಡೀಕರ ಅವರ ನೇತೃತ್ವದ ಸೇವಾದಳ ನೋಡಿಕೊಂಡಿತ್ತು. ಅಧಿವೇಶನ ತುಂಬಾ ಅಚ್ಚುಕಟ್ಟಾಗಿ ನಡೆಯಿತು. ಇದರಿಂದ ಸಂತಸಗೊಂಡ ಗಾಂಧೀಜಿ ಅವರು ಸೇವಾದಳದ ಕಾರ್ಯವನ್ನು ಮುಕ್ತಕಂಠದಿಂದ ಹೊಗಳಿ ‘ಸೇವಾದಳ’ ಇನ್ನಷ್ಟು ರಾಷ್ಟ್ರವ್ಯಾಪ್ತಿಯಾಗಿ ಬೆಳೆಯಲಿ ಎಂದು ಹಾರೈಸಿದರು.
ಇನ್ನೂ ಉಪ್ಪಿನ ಮೇಲೆ ಬ್ರಿಟಿಷರು ವಿಧಿಸಿದ ಕರ ವಿರೋಧಿಸಿ ಗಾಂಧೀಜಿ ಅವರು ದಂಡಿಯಾತ್ರೆ ಆರಂಭಿಸಿದರು. ಇದರ ಹಿನ್ನೆಲೆಯಲ್ಲಿ ಕಾರವಾರ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಾ.ಸು.ಹರ್ಡೀಕರ ಅವರು ತಮ್ಮ ಸೇವಾದಳದ ಸಿಬ್ಬಂದಿಯೊಂದಿಗೆ ಅಂಕೋಲಾಕ್ಕೆ ಹೋಗಿ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾನೂನು ಭಂಗ ಚಳವಳಿ, ಪಿಕೆಟಿಂಗ್, ಅಸಹಕಾರ ಚಳವಳಿ ಹೀಗೆ ಸಾತಂತ್ರ್ಯ ಹೋರಾಟದಲ್ಲಿ ಸೇವಾದಳದ ಕಾರ್ಯಕರ್ತರು ಪಾಲ್ಗೊಂಡು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.
ಆದರೆ, ೧೯೩೧ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಒಂದೇ ಸಂಘಟನೆ ಇರಲಿ ಎಂಬ ಉದ್ದೇಶದಿಂದ ಗಾಂಧೀಜಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೇವಾದಳವನ್ನು ವಿಲೀನ ಮಾಡಿದರು. ನಂತರದ ದಿನಗಳಲ್ಲಿ ಸೇವಾದಳ ಒಂದು ಪಕ್ಷಕ್ಕೆ ಸೀಮಿತವಾಗಬಾರದು ಎಂಬ ಉದ್ದೇಶದಿಂದ ನಾ.ಸು.ಹರ್ಡೀಕರ ಅವರು ೧೯೫೦ರಲ್ಲಿ ಭಾರತೀಯ ಸೇವಾದಳ ಸ್ಥಾಪನೆ ಮಾಡಿದರು. ೧೮೮೯ರಲ್ಲಿ ಧಾರವಾಡದಲ್ಲಿ ಜನಿಸಿದರಾದ್ರು ಸ್ವಾತಂತ್ರ್ಯಾನಂತ ಹರ್ಡೀಕರ ಅವು ಬೆಳಗಾವಿ ಜಿಲ್ಲೆಯ ಘಟಪ್ರಭಾಕ್ಕೆ ಬಂದು ನೆಲೆಸಿದರು. ಇಲ್ಲಿ ಅವರು ಕರ್ನಾಟಕ ಆರೋಗ್ಯ ಸಂಸ್ಥೆಯನ್ನು ಸ್ಥಾಪನೆ ಮಾಡಿದರು. ಸೇವಾನಿರತ ಇರುವಾಗಲೇ ನಾ.ಸು.ಹರ್ಡೀಕರ ಅವರು ಆಗಸ್ಟ್ ೨೬ ೧೯೭೫ರಲ್ಲಿ ಅಸ್ತಗಂತರಾದರು. ಘಟಪ್ರಭಾದಲ್ಲಿ ಅವರ ಸಮಾಧಿ ಇದ್ದು, ಇದು ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ.

ರಾಯಣ್ಣನ ಕಥೆ ಹೇಳುವ ನಂದಗಡ

 ಮಂಜುನಾಥ ಗದಗಿನ



‘ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು’ ಹೀಗೆಂದು ತಾನು ಗಲ್ಲಿಗೇರುವ ಮುನ್ನ ಬಿಟ್ರಿಷರ ವಿರುದ್ಧ ಘರ್ಜಿಸಿ ತಾಯ್ನಾಡಿ ಗಾಗಿ ಪ್ರಾಣ ತ್ಯಾಗ ಮಾಡಿದ ದ ಏಕೈಕ ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

ರಾಯಣ್ಣ ಎಂಬ ಹೆಸರು ಕೇಳಿದರೆ ಸಾಕು ಬ್ರಿಟಿಷ ಸರ್ಕಾರವೇ ನಡಗುತ್ತಿತ್ತು. ಯಾಕೆಂದರೆ ರಾಯಣ್ಣ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ. ತನ್ನ ಗೆರಿಲ್ಲಾ ಯುದ್ಧ ತಂತ್ರದ ಮೂಲಕ ಆಂಗ್ಲರ ನಿದ್ದೆಗೇಡಿಸಿದ್ದ ವೀರ ಪರಾಕ್ರಮಿ, ಕಿತ್ತೂರು ರಾಣಿ ಚೆನ್ನಮ್ಮನ ಬಲಗೈಬಂಟ ಸಂಗೊಳ್ಳಿ ರಾಯಣ್ಣ.
ಇಡೀ ದೇಶದಲ್ಲಿ ಆಂಗ್ಲರ ಅಧಿಪತ್ಯ ಸ್ಥಾಪನೆಯಾಗಿ, ಸಣ್ಣಪುಟ್ಟ ಸಂಸ್ಥಾನಗಳನ್ನು ತಮ್ಮ ಅಧೀನಕ್ಕೆ ಪಡೆಯಬೇಕೆಂದು ಬ್ರಿಟಿಷರು ಕಾಯ್ದುಕುಳಿತ್ತಿದ್ದರು. ಇದೇ ವೇಳೆ ಸಮೃದ್ಧಭರಿತವಾಗಿದ್ದ ಕಿತ್ತೂರು ಸಂಸ್ಥಾನದ ಮೇಲೆ ಅವರ ಕಣ್ಣು ಬೀದಿತು. ಚೆನ್ನಮ್ಮನಿಗೆ ಗಂಡು ಸಂತಾನ ಇಲ್ಲದ ಕಾರಣ ದತ್ತು ತೆಗೆದುಕೊಂಡಿದ್ದಳು. ಇದನ್ನು ತಿಳಿದು ಬ್ರಿಟಿಷರು ದತ್ತುಪುತ್ರನಿಗೆ ಉತ್ತರಾಧಿಕಾರ ಹಕ್ಕಿಲ್ಲ ಎಂಬ ಕಾಯ್ದೆಯಡಿ ನೀವು ನಮಗೆ ಕಪ್ಪ ಕೊಟ್ಟು ಶರಣಾಗಬೇಕು ಎಂದು ತಿಳಿಸಿದಾಗ ಚೆನ್ನಮ್ಮ ನಾವೇಕೆ ನಿಮಗೆ ಕೊಡಬೇಕು ಕಪ್ಪ ಎಂದು ಘರ್ಜಿಸಿದ್ದಳು. ಇದರಿಂದ ಕುಪಿತರಾದ ಆಂಗ್ಲರು ಅಕ್ಟೋಬರ್ ೨೧, ೧೮೨೪ರಂದು ಬ್ರಿಟಿಷ ಅಧಿಕಾರಿ ಥ್ಯಾಕರೆ ಮುಂದಾಳತ್ವದಲ್ಲಿ ಕಿತ್ತೂರಿನ ಮೇಲೆ ದಂಡೆತ್ತಿ ಬಂದರು. ವೀರ ವನಿತೆ ರಾಣಿ ಚೆನ್ನಮ್ಮ ಕೋಟೆ ಬಾಗಿಲು ತೆರೆಯಿಸಿ ತನ್ನ ಪಡೆಯನ್ನು ಆಂಗ್ಲರ ಮೇಲೆ ಬಿಟ್ಟಳು. ರಾಯಣ್ಣ, ಚೆನ್ನಬಸವಣ್ಣ, ಬಾಳಪ್ಪರ ನೇತೃತ್ವದಲ್ಲಿ ಕಿತ್ತೂರಿನ ವೀರ ಸೈನಿಕರು ಮುನ್ನುಗ್ಗಿದ್ದರು. ಇದೇ ವೇಳೆ ಅಮಟೂರು ಬಾಳಪ್ಪನವರು ತಮ್ಮ ಖಡ್ಗದಿಂದ ಥ್ಯಾಕರೆ ರುಂಡ ಚಂಡಾಡಿದರು. ಭಯಗೊಂಡ ಆಂಗ್ಲರು ಅಲ್ಲಿಂದ ಕಾಲ್ಕಿತ್ತರು. ಇಷ್ಟಕ್ಕೆ ಸುಮ್ಮನಾಗದ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ಯುದ್ಧ ಸಾರಿದರು. ಆದರೆ ತಮ್ಮವರ ಮೋಸದಿಂದಲೇ ಕಿತ್ತೂರಿಗೆ ಸೋಲಾಯಿತು. ರಾಯಣ್ಣ, ಚನ್ನಮ್ಮ ಬ್ರಿಟಿಷರ ವಶವಾದರು. ಆದರೆ, ಕೆಲವು ದಿನಗಳ ನಂತರ ರಾಯಣ್ಣ ಬಿಡುಗಡೆಯಾದ.
ಬಂಡಾಯವೆದ್ದ ರಾಯಣ್ಣ:
ಬಡವರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದ ಬ್ರಿಟಿಷರ ವಿರುದ್ಧವೇ ರಾಯಣ್ಣ ಸಿಡಿದೆದ್ದಿದ್ದ. ಸ್ವತಃ ಅವನ ಜಮೀನನ್ನು ಕೂಡ ಬ್ರಿಟಿಷರು ಕಿತ್ತುಕೊಂಡಿದ್ದರು. ಇದಷ್ಟೇ ಅಲ್ಲದೇ ಭೂಮಿಯ ಮೇಲಿನ ಕರಭಾರವನ್ನು ಹೆಚ್ಚಿಸಿದ್ದರು. ಇದರ ವಿರುದ್ಧ ರಾಯಣ್ಣ ತನ್ನದೊಂದು ಸೈನ್ಯ ಕಟ್ಟಿಕೊಂಡು ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ, ಬ್ರಿಟಿಷರ ಜೊತೆ ಕೈಜೋಡಿಸಿದ್ದ ಭೂಮಾಲೀಕರ ವಿರುದ್ಧ ಬಂಡಾವೆದ್ದ. ತನ್ನ ಯುದ್ಧ ತಂತ್ರಗಳಲ್ಲಿ ಒಂದಾದ ಗೆರಿಲ್ಲಾ ತಂತ್ರಗಾರಿಕೆ(ಶತ್ರುವಿಗೆ ಸಿಗದೇ, ಶತ್ರುಗಳ ಚಲನವಲನ ಅರಿತು ಯುದ್ಧ ಮಾಡುವ ತಂತ್ರ) ಬಳಸಿ ಭೂಮಾಲೀಕರ ಜಮೀನುಗಳ ಕಾಗದಪತ್ರಗಳನ್ನು ವಶಪಡಿಸಿಕೊಂಡು ಸುಟ್ಟುಹಾಕಿದ. ಅಲ್ಲದೇ, ಅವರಿಂದ ಕಿತ್ತುಕೊಂಡ ಹಣವನ್ನು ನಿರ್ಗತಿಕರಿಗೆ ಹಂಚತೊಡಗಿದ.
ಬೆಟ್ಟ ಗುಡ್ಡಗಳೇ ಅಡಗುತಾಣ:
ತನ್ನ ಗೆರಿಲ್ಲಾ ಯುದ್ಧದ ಮೂಲಕವೇ ಬ್ರಿಟಿಷ ಸರ್ಕಾರ ಬಿದ್ದೆಗೇಡಿಸಿದ್ದ ರಾಯಣ್ಣ ಚೆನ್ಮಮ್ಮನ ದತ್ತುಪುತ್ರನನ್ನು ಕಿತ್ತೂರಿನ ಉತ್ತರಾಧಿಕಾರಿಯನ್ನಾಗಿಸುವ ಛಲ ಹಾಗೂ ಬ್ರಿಟಿಷ ಸರ್ಕಾರ ಸೊಕ್ಕಡಗಿಸಲು ತನ್ನ ಸೈನ್ಯದೊಂದಿಗೆ ದಟ್ಟಡವಿಯಲ್ಲಿ ಅಡಗಿಕೊಂಡು ಬ್ರಿಟಿಷ ವಿರುದ್ಧ ರಣತಂತ್ರ ಹೆಣೆದು ಯುದ್ಧ ಸಾರುತ್ತಿದ್ದ. ಅದರಲ್ಲೂ ಖಾನಾಪುರ ತಾಲೂಕಿನ ಹಂಡಿಭಡಗನಾಥ, ಸಂಪಗಾಂವ, ನಂದಗಡ ಕಾನನದಲ್ಲಿ ರಾಯಣ್ಣ ಬಿಡಾರ ಹೂಡಿ ಬ್ರಿಟಿಷರ ವಿರುದ್ಧ ಯುದ್ಧ ಸಾರುತ್ತಿದ್ದ. ಅದರಲ್ಲೂ ರಾತ್ರಿ ಹೊತ್ತಿನಲ್ಲಿ ರಾಯಣ್ಣ ಸೈನ್ಯ ಹೆಚ್ಚು ಕಾರ್ಯಾಚರಣೆ ಮಾಡುತ್ತಿತ್ತು. ಇದು ಕೂಡಾ ಗೆರಿಲ್ಲಾ ಯುದ್ಧದ ಒಂದು ತಂತ್ರವಾಗಿತ್ತು.
ಮೋಸದಿಂದ ರಾಯಣ್ಣ ಸೆರೆ:
ಯುದ್ಧ ಮಾಡಿ ರಾಯಣ್ಣನ್ನು ಗೆಲಲ್ಲು ಅಸಾಧ್ಯವೆಂದು ತಿಳಿದ ಬ್ರಿಟಿಷರು ಕುತಂತ್ರ ಬುದ್ಧಿ ಪ್ರಯೋಗ ಮಾಡಿದರು. ರಾಯಣ್ಣನ ಸ್ವಂತ ಮಾವನಾಗಿದ್ದ ಲಕ್ಷ್ಮಣನನ್ನು ತಮ್ಮ ಕುತಂತ್ರದ ದಾಳವನ್ನಾಗಿ ಬಳಸಿಕೊಂಡರು. ರಾಯಣ್ಣ ಚೆಣಚಿ ಹಳ್ಳದಲ್ಲಿ ಸ್ನಾನ ಮಾಡುತ್ತಿದ್ದಾಗ ಆತನ ಮೇಲೆ ಬ್ರಿಟಿಷ ಸೈನಿಕರು ಆಕ್ರಮಣ ಮಾಡಿದರು. ಆಗ ರಾಯಣ್ಣ ಖಡ್ಗ ಮಾವ ಲಕ್ಷ್ಮಣನ ಬಳಿಯಿತ್ತು. ರಾಯಣ್ಣ ಖಡ್ಗ ಕೊಡು ಎಂದು ಕೇಳಿದರೂ ಲಕ್ಷ್ಮಣ ಕೊಡದೆ ಮೋಸ ಮಾಡಿದ್ದ. ಹೀಗಾಗಿ ರಾಯಣ್ಣ ಮೋಸದಿಂದ ಬ್ರಿಟಿಷರ ವಶವಾದನು.
ನಂದಗಡದಲ್ಲಿ ರಾಯಣ್ಣ ಸಮಾಧಿ:
ಸೆರೆಯಾಗಿದ್ದ ರಾಯಣ್ಣ ಆಶಯದಂತೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ೧೮೩೧ರ ಜನವರಿ ೨೬ರಂದು ರಾಯಣ್ಣನನ್ನು ಗಲ್ಲಿಗೇರಿಸಲಾಯಿತು. ಗೆಲ್ಲಿಗೇರಿಸುವ ಮುನ್ನ ನಿನ್ನ ಕೊನೆಯಾಸೆ ಏನು ಎಂದು ಕೇಳಿದಾಗ ರಾಯಣ್ಣ ’ಭಾರತದಲ್ಲಿಯೇ ಮತ್ತೆ ಹುಟ್ಟಿಬರಬೇಕು. ಪರದೇಶಿ ಬ್ರಿಟಿಷರ ವಿರುದ್ಧ ಹೋರಾಡಿ ಅವರನ್ನು ಭಾರತದಿಂದ ಒದ್ದು ಓಡಿಸಬೇಕು ಎಂದು ಘರ್ಜಿಸಿದ್ದ. ರಾಯಣ್ಣನನ್ನು ಗಲ್ಲಿಗೇರಿಸಿದ ನಂತರ ನೆಟ್ಟ ಆಲದ ಮರ ಇನ್ನೂ ಇದ್ದು, ಇಲ್ಲಿಗೆ ನಿತ್ಯ ನೂರಾರು ಜನರು ಬಂದು ರಾಯಣ್ಣನ ಸಮಾಧಿ ದರ್ಶನ ಪಡೆದು ನಮಗೂ ರಾಯಣ್ಣನತಹ ಮಗ ಹುಟ್ಟಲಿ ಎಂದು ಬೇಡಿಕೊಳ್ಳುತ್ತಿದ್ದಾರೆ.

Wednesday, 20 July 2022

ಸ್ವಾತಂತ್ರ್ಯ ಸಿಗೋವರೆಗೂ ಲಗ್ನ ಒಲ್ಲೆ ಎಂದ ಅಣ್ಣೂ ಗುರೂಜಿ

 -


ಮಂಜುನಾಥ ಗದಗಿನ

ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ಮಹನೀಯರು ಹಲವರು. ಆದರೆ, ದೇಶಕ್ಕೆ ಸ್ವಾತಂತ್ರ್ಯ ಸಿಗೋವರೆಗೂ ನಾನು ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿ ಸ್ವಾತಂತ್ರಾನಂತರೂ ಮದುವೆಯಾಗದೇ ದೇಶಕ್ಕಾಗಿ ದುಡಿದು ಮಡಿದ ಅಪರೂಪದ ಸ್ವಾತಂತ್ರ್ಯ ಹೋರಾಟಗಾರ ಅಣ್ಣು ಗುರೂಜಿ(ಬಾಳಕೃಷ್ಣ).
ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಎಲ್ಲೆಡೆ ವ್ಯಾಪಕವಾಗಿತ್ತು. ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಸೇರಿದಂತೆ ಅನೇಕ ನಾಯಕರು ಸ್ವಾತಂತ್ರ್ಯದ ಕಿಚ್ಚನ್ನು ಹೆಚ್ಚಿಸುವ ಭಾಷಣಗಳನ್ನು ಅಲ್ಲಲ್ಲಿ ಮಾಡುತ್ತಿದ್ದರು. ಹೀಗಾಗಿ ಗಾಂಧೀಜಿ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಇಲ್ಲಿಂದ ಅವರು ಖಾದಿಯನ್ನೇ ಉಡಲು ಆರಂಭಿಸಿದರು. ಅವರ ತಾಯಿ ಕೂಡಾ ಖಾದಿ ಸೀರೆ ಮಾತ್ರ ಉಡುತ್ತಿದ್ದರು. ಇವರು ೧೯೦೫ರಲ್ಲಿ ಹುಕ್ಕೇರಿ ತಾಲೂಕಿನ ಪಾಶ್ಚಾಪುರ ಗ್ರಾಮದಲ್ಲಿ ಜನಿಸಿದರು. ೧೫ನೇ ವಯಸ್ಸಿನಲ್ಲೇ ತಂದೆ ಕಳೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳಲು ಬೆಳಗಾವಿಗೆ ಆಗಮಿಸಿದರು. ಇಲ್ಲಿ ಮರಾಠಿ ಭಾಷೆ ಕಲಿತು ೧೨ ರು.ಗೆ ಕಾರಕೂನ ಆಗಿ ಕೆಲಸ ಆರಂಭಿಸಿದರು. ಇದೇ ವೇಳೆಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಕರ್ನಾಟಕ ಗಂಗಾಧರರಾವ್ ದೇಶಪಾಂಡೆ ಅವರನ್ನು ಬ್ರಿಟಿಷ್ ಸರ್ಕಾರ ಬಂಧಿಸಿತು. ಇದರಿಂದ ಕೂಪಿತರಾದ ಅಣ್ಣು ಗುರೂಜಿ ಅವರು ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮಿಕಿದರು.

ರಾಷ್ಟ್ರೀಯ ಶಾಲೆ ಆರಂಭ:
                                                                                                                                        

ಸಾತಂತ್ರ್ಯ ಹೋರಾಟಗಾರರಿಗೆ ಧೈರ್ಯ ಹಾಗೂ ರಾಷ್ಟ್ರೀಯ ಮನೋಭಾವ, ನೈತಿಕಗುಣಮಟ್ಟ ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಶಾಲೆಯೊಂದನ್ನು ಆರಂಭಿಸಿದರು. ಈ ಶಾಲೆಗೆ ಅವರೇ ಪಾಠ ಮಾಡುತ್ತಿದ್ದರು. ಈ ಶಾಲೆ ಬರೋಬ್ಬರಿ ಮೂರು ವರ್ಷ ಕಾಲ ನಡೆದು ನಂತರ ಸ್ಥಗಿತಗೊಂಡಿತು. ಅಲ್ಲಿವರೆಗೂ ಅನೇಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದೆ. ಈ ಶಾಲೆಯಿಂದಲೇ ಬಾಳಕೃಷ್ಣ ಇದ್ದ ಅವರು ಹೆಸರು ಅಣ್ಣು ಗುರೂಜಿ ಎಂದಾಯಿತು. ೧೯೨೪ರಲ್ಲಿ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಕಾರ್ಯಕರ್ತರಾಗಿ ಪಾಲ್ಗೊಂಡಿದ್ದರು. ನಂತರದ ದಿನಗಳಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿ ಭಾಗವಹಿಸಿದರು.

ಜೈಲುವಾಸ:

ಬ್ರಿಟಿಷ್ ಸರ್ಕಾರದ ನಡೆಗಳನ್ನು ವಿರೋಧಿಸಿದಕ್ಕಾಗಿ ಅಣ್ಣು ಗುರೂಜಿ ಅವರು ಹಿಂಡಲಗಾ, ಯರವಾಡ ಸೇರಿದಂತೆ ಅನೇಕ ಜೈಲುಗಳಲ್ಲಿ ಬಂಧಿಯಾಗಿದ್ದರು. ಇನ್ನೂ ಉಪ್ಪಿನ ಸತ್ಯಾಗ್ರಹಕ್ಕೆ ಗಾಂಧೀಜಿ ಅವರು ಕರೆ ನೀಡಿದಾಗ ಇವರು ಮುಂಚೂಣಿಯಲ್ಲಿ ನಿಂತು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಈ ವೇಳೆ ಬಂಧನಕ್ಕೊಳಗಾಗಿ ಒಂಬತ್ತು ತಿಂಗಳು ಸೆರೆವಾಸ ಕೂಡಾ ಅನುಭವಿಸಿದರು. ಜೈಲಿನಲ್ಲೇ ಇದ್ದುಕೊಂಡು ಇಂಗ್ಲಿಷ್ ಕೂಡಾ ಕಲಿತರು.ನಂತರ ದಿನಗಳಲ್ಲಿ ಬ್ರಿಟಿಷ್ ಸರ್ಕಾರದ ಪ್ರತಿಯೊಂದು ದುರಾಡಳಿತ ನೀತಿಗಳನ್ನು ವಿರೋಧಿಸುತ್ತಾ ಜನಜಾಗೃತಿ ಮೂಡಿಸಲು ಆರಂಭಿಸಿದರು.

ಯುವಕರಲ್ಲಿ ಕಿಚ್ಚು ಹೆಚ್ಚಿಸಿದರು:

ಗಾಂಧೀಜಿ ಅವರ ಅನುಯಾಯಿ ಆಗಿದ್ದ ಇವರು ಗಾಂಧೀಜಿ ಅವರು ಕರೆ ನೀಡುತ್ತಿದ್ದ ಪ್ರತಿಯೊಂದು ಚಳವಳಿಯಲ್ಲೂ ಮುಂದಾಳತ್ವ ವಹಿಸಿಕೊಂಡು ಯಶಸ್ವಿಯಾಗಿಸುತ್ತಿದ್ದರು. ಸ್ವದೇಶಿ ವಸ್ತುಗಳ ಪ್ರಚಾರ, ವಿದೇಶಿ ವಸ್ತುಗಳ ಬಹಿಷ್ಕಾರ, ಶೆರೆ ಅಂಗಡಿಗಳ ಮುಂದೆ ಪಿಕೆಟಿಂಗ್, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ನಾ.ಸು.ಹರ್ಡೇಕರ ಮಂಜಪ್ಪ ಅವರು ಆರಂಭಿಸಿದ್ದ ಹಿಂದುಸ್ತಾನ ಸೇವಾದಳ ಸೇರಿದರು. ಈ ಮೂಲಕ ಯುವಕರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಬಲತುಂಬಿದರು.ಇಷ್ಟೇ ಅಲ್ಲದೇ ೧೯೩೭ರಲ್ಲಿ ಹುದಲಿ  ಗ್ರಾಮದಲ್ಲಿ ಗಾಂಧಿ ಸೇವಾ ಸಂಘವನ್ನು ಸ್ಥಾಪಿಸಿ ಅಸ್ಪಶತೆ ನಿವಾರಣೆಗೆ ಶ್ರಮಿಸಿದರು.

ಪಿತೂರಿ ಮೂಲಕ ಬಂಧನ:

೧೯೪೭ರ ಚಲೇಚಾವ ಚಳವಳಿ ಮೂಲಕ ದೇಶದ ಸ್ವಾತಂತ್ರ್ಯದ ಹೋರಾಟ ವೇಗ ಪಡೆದುಕೊಂಡಿತು. ಈ ವೇಳೆ ಸರ್ಕಾರಿ ಕಚೇರಿ, ಪೊಲೀಸ್ ಠಾಣೆಗಳನ್ನು ಸುಡುವುದು, ರೈಲುಗಳ ಧ್ವಂಸ, ಸರ್ಕಾರಿ ಖಜಾನೆ ಲೂಟಿ ಹೀಗೆ ಕಿಚ್ಚು ಹೆಚ್ಚಿತು. ಈ ವೇಳೆ ಅಣ್ಣು ಗುರೂಜಿ ಅವರು ಭೂಗತರಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಈ ವೇಳೆ ಅವರ ಕಾರ್ಯಕ್ಷೇತ್ರ ಪಾಶ್ವಾಪುರದಲ್ಲಿ ಅವರ ತಂಡ ಅಡಗಿದೆ ಎಂಬ ಸುದ್ದಿ ತಳಿದು ಬ್ರಿಟಿಷರು ಗುಂಡಿನ ಮಳೆಗರೆದರು. ಈ ವೇಳೆ ಕೆಲವು ಮೃತಪಟ್ಟರು. ಇವರಲ್ಲಿ ಅಣ್ಣು ಗುರೂಜಿ ಅವರು ಮೃತಪಟ್ಟರು ಎಂದು ಬ್ರಿಟಿಷರು ಸಂತಸಪಟ್ಟರು. ಆದರೆ, ಅಣ್ಣು ಗುರುಜಿ ಮತ್ತಿತ್ತರು ಅಲ್ಲಿಂದ ಪರಾರಿಯಾಗಿದ್ದರು. ಈ ಸುದ್ದಿ ತಿಳಿದ ಬ್ರಿಟಿಷರು ಅಣ್ಣು ಗುರೂಜಿ ಹಾಗೂ ಅವರ ಜೊತೆ ಇದ್ದರನ್ನು ಹಿಡಿದುಕೊಟ್ಟರೆ ₹೫ ಸಾವಿರ ಕೊಡುವುದಾಗಿ ಘೋಷಣೆ ಮಾಡಿದರು. ಅನ್ಯರ ಪಿತೂರಿ ಮೂಲಕ ವಿಜಯಪುರದಲ್ಲಿ ಅಣ್ಣು ಗುರೂಜಿ ಬ್ರಿಟಿಷರ್ ಸೆರೆಯಾಗಿ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದರು. ನಂತರ ಬಿಡುಗಡೆಯಾಗಿ ಕೃಷಿ, ಕರ್ನಾಟಕ ಏಕೀಕರಣ, ಕನ್ನಡ ಸಂಘಟನೆ ಮಾಡಿ ೨೪-೦೭-೧೯೯೦ರಲ್ಲಿ ನಿಧನರಾದರು.

Wednesday, 16 December 2020

ಕುಂದಾನಗರಿಯೇ...😍

ಅನುಭವ ತುಂಬಿರೋ ಮನಸ್ಸಿನ ಭಾವನೇ..

ನಾ ಹಾಡುವೇ...ನಾ ಹಾಡುವೇ..

ಕುಂದಾನಗರಿಯೇ..ಕುಂದಾನಗರಿಯೇ..ಕುಂದಾನಗರಿಯೇ..


ಕುಂದಾನಗರಿ ಬಗ್ಗೆ ಹೇಳಲು ನಾ ಹಾಡುತೀರುವೇನು..

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತೀರುವೇನೂ, ಕುಂದಾನಗರಿ ಬಗ್ಗೆ ನಾ ಹೇಳಲು ನಾ ಹಾಡುತ್ತೀರುವೇನು,

ನನಗೆ ವಂಚನೆ ಮಾಡಿಕೊಳ್ಳದೇ ನಾ ಹಾಡುತ್ತೀರುವೇನೂ..

ಹೇಳುವೆ ನಾನಿನ್ನು ಹಾ ಭಾವನೆಗಳನು,

ಕುಂದಾನಗರಿಯೇ...ಕುಂದಾನಗರಿಯೇ...


ಕೇಳಿ ನೀವು ನನ್ನ ಹಾಡನು,

ಭಾವನೆಗಳ ತುಂಬಿ ನಾ ಹಾಡುತಿರುವೇನು,

ಕೇಳಿ ನೀವು ನನ್ನ ಹಾಡನ್ನು, ಭಾವನೆಗಳ ತುಂಬಿ ನಾ ಹಾಡುತೀರುವೇನು..


ಚೆನ್ನಮ್ಮ, ರಾಯಣ್ಣ ಹೆಸರು ಕೇಳಲು

ಕೆಚ್ಚದಿ ನಾ ಹಾಡುತೀರುವೇನು ಆ ಹಾಡನ್ನು..

ಅವರ ನೆನೆಯುವೆ, ನೆನೆದು ಹಾಡುವೆ.

ಕುಂದಾನಗರಿಯೇ.. ಕುಂದಾನಗರಿಯೇ...


ಅನುಭವ ತುಂಬಿರೋ ಮನಸ್ಸಿನ ಭಾವನೆ

ನಾ ಹಾಡುವೆ...ನಾ ಹಾಡುವೆ...


ಭಾವನೆಗಳ ನದಿಯು ಹರಿಯುವ ಸಮಯ, 

ಭಕ್ತಿಯಿಂದ ಹಾಡಿ, ನಾ ಎಲ್ಲ ಮರೆಯುವೆ....


ಕನಸನು ಕಂಡೆ, ಕನ್ನಡಿಗರು ಒಂದೆ.

ನಗು ಮೊಗದಿ ನಾ ಕನ್ನಡಿಗ ಎಂದೇ,

ಕನ್ನಡ ಎಂದು ಈ ಜಗದಲಿ ಸಾಯಬಾರದು,

ಕನ್ನಡಿಗರಿಗೂ ಕಿಚ್ಚಿದೆ, ತಿಳಿಯಿರಿ ನೀವಿನ್ನು...

ಕುಂದಾನಗರಿಯೇ... ಕುಂದಾನಗರಿಯೇ...


ಅನುಭವ ತುಂಬಿರೋ, ಮನಸಿನ ಭಾವನೆ, ನಾ ಹಾಡುವೆ..ನಾ ಹಾಡುವೆ....🇮🇳🇮🇳🙏🏼


*ಸಾಹಿತ್ಯ..ಮಂಜುನಾಥ ಗದಗಿನ*

Saturday, 26 September 2020

ಕೊಳ್ಳಗಳ ನಾಡು ಕಣ್ತುಂಬಿಕೊಳ್ಳ ಬನ್ನಿ



ಮಂಜುನಾಥ ಗದಗಿನ

ರಾಮದುರ್ಗ ಹಲವು ಐತಿಹಾಸಿಕ ಸ್ಥಳಗಳ ತವರೂರು. ಕೊಳ್ಳಗಳ ನಾಡು ರಾಮದುರ್ಗ. ಹಲವಾರು ಪೌರಾಣಿಕ ಸ್ಥಳಗಳನ್ನು ಹಾಗೂ ಪ್ರೇಕ್ಷಣಿಯ ಸ್ಥಳಗಳನ್ನು ತನ್ನೊಡಲೊಳಗೆ ಇಟ್ಟುಕೊಂಡಿರುವ ರಾಮದುರ್ಗ ಎಲ್ಲರ ಗಮನ ಸೆಳೆಯುತ್ತಿದೆ. ನೋಡ ಬಯಸಿದಷ್ಟು ಕೌತುಕಗಳು ಇಲ್ಲಿ ಕಾಣ ಸಿಗುತ್ತವೆ.
 ಶಬರಿಕೊಳ್ಳ:
ಬೆಳಗಾವಿ ಅರೆ ಮಲೆನಾಡು. ಸರ್ವಕಾಲಕ್ಕೂ ತಂಪು ಸೂಸುವ ನೆಲ. ಇನ್ನೂ ಮಳೆಗಾಲ ಬಂತೆಂದ್ರೆ ಸಾಕು ಪ್ರಕೃತಿ ತನ್ನ ಒಯ್ಯಾರದಿಂದಲ್ಲೇ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಾಳೆ. ಇದಕ್ಕೆ ಕಾರಣ ಸುತ್ತಲ ಇರುವ ಅನೇಕ ಜಲಧಾರೆಗಳು. ಇವುಗಳಲ್ಲಿ ಸುರೇಬಾನದ ಶಬರಿಕೊಳ್ಳವು ಒಂದು.
ಹೌದು! ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದಲ್ಲಿ ಇಂತಹದ್ದೊಂದು ಜಲಧಾರೆ ಇದೀಗ ಎಲ್ಲರನ್ನು ತನ್ನತ್ತ ಸೆಳೆಯುತ್ತಿದೆ. ಸುರೇಬಾನ ಗ್ರಾಮ ಧಾರ್ಮಿಕ, ಆಧ್ಯಾತ್ಮಿಕ ಹಾಗೂ ಪೌರಾಣಿಕ, ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದು. ಶಬರಿ ದೇವಿ ರಾಮನಿಗಾಗಿ ಕಾಯ್ದಳು ಎಂಬ ಪ್ರತೀತಿ ಇದೆ. ಶಬರಿ ರಾಮನಿಗಾಗಿ ಕಾಯ್ದದ್ದು ಇದೇ ಶಬರಿಕೊಳ್ಳದಲ್ಲಿ. ಇದೇ ಕಾರಣಕ್ಕೆ ಈ ಕ್ಷೇತ್ರಕ್ಕೆ ಶಬರಿಕೊಳ್ಳ ಎಂಬ ಹೆಸರು ಬಂದಿದ್ದು.೨೦೦ ಅಡಿಯಿಂದ ಧುಮ್ಮಿಕ್ಕು ಅಂತರಗಂಗೆಯೊಂದ ಈ ಸ್ಥಳದಲ್ಲಿ ಇದೇ ಎಂಬ ಮಾಹಿತಿ ಬಹುತೇಕ ಜನರಿಗೆ ತಿಳಿದಯ ವಿಷಯವಾಗಿದೆ. ಆದರೆ, ಇಲ್ಲೊಮ್ಮಿ ಭೇಟಿ ನೀಡಿದರೆ ಸಾಕು ಎಂಬ ವ್ಯಕ್ತಿ ಕೂಡಾ ಇಲ್ಲಿಯ ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗದೇ ಇರನು. ಏಕೆಂದ್ರೆ ಸುತ್ತಲು ಬೆಟ್ಟಗುಡ್ಡ, ಇದರೊಟ್ಟಿಗೆ ಝಳು,ಝುಳು ಹರಿವ ಜಲಧಾರೆ. ಒಟ್ಟಿನಲ್ಲಿ ಶಬರಿಕೊಳ್ಳ ಸೌಂದರ್ಯ ಮಾತ್ರ ಅನನ್ಯ.
ಇಲ್ಲಿಯ ಶಬರಿ ದೇವಿ ಸುರೇಬಾನ ಗ್ರಾಮದ ಗ್ರಾಮದೇವತೆ. ಶಬರಿ ದೇವಿ ಸುರೇಬಾನ ಗ್ರಾಮದ ಪಶ್ಚಿಮಕ್ಕೆ ಇರುವ ಎರಡು ಬೆಟ್ಟಗಳ ಸಂಧಿಸುವ ಕಣಿವೆ ಪ್ರದೇಶದಲ್ಲಿ ಇರುವ ಸುಂದರ ಪ್ರಾಕೃತಿಕ ತಾಣದಲ್ಲಿ ನೆಲೆಸಿದ್ದಾಳೆ. ಈ ಕಣಿವೆಯಲ್ಲಿ ವಿವಿಧ ಜಾತಿ ಗಿಡಗಳು, ಇದರೊಟ್ಟಿಗೆ ಹಕ್ಕಿಗಳ ಚಿಲಿಪಿಲಿ ಕೇಳಿಸುತ್ತದೆ. ಪ್ರಸಿದ್ಧ ಶಿಲ್ಪಿ ಜಕಣಾಚಾರಿ ಕೆತ್ತನೆಯ ಸುಂದರ ಮಂದಿರವಿದೆ. ಎರಡು ಹೊಂಡ (ಪುಷ್ಕರಣಿ)ಗಳು ನೋಡುಗರ ಮನ ಸೆಳೆಯುತ್ತಿವೆ. ಆದರೆ ಬೇಸಿಗೆಕಾಲದಲ್ಲಿ ಈ ಎರಡು ಹೊಂಡಗಳ ನೀರು ನೆಲಕಚ್ಚಿದ್ದವು. ಆದರೆ ಇದೀಗ ಅಧಿಕ ಮಳೆಯಾಗಿದ್ದರಿಂದ ಅಂತರಗಂಗೆ ಹಾಗೂ ಹೊಂಡಗಳು ಭರಪೂರ ನೀರಿನಿಂದ ಕಂಗೊಳಿಸುತ್ತಿವೆ.
ತೋರಗಲ್ಲ ಕೋಟೆ:
ಚಿತ್ರದುರ್ಗದ ಏಳು ಸುತ್ತಿನ ಕೋಟೆ ಬಗ್ಗೆ ನಾವೆಲ್ಲ ಕೇಳಿದ್ದೇವೆ, ನೋಡಿದ್ದೇವೆ. ಆದರೆ ಈ ಕೋಟೆ ಕೂಡ ಏಳು ಸುತ್ತಿನ ಕೋಟೆ ಆಗಿತ್ತು ಎಂದು ಹೇಳಲಾಗುತ್ತದೆ. ಇದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಿಲ್ಲಾ ತೋರಗಲ್ ಕೋಟೆಯ ಕಥೆ. ಏಳು ಸುತ್ತಿನ ಕೋಟೆ ಇದಾಗಿತ್ತಂತೆ. ಈಗ ಐದು ಆವರಣಗಳನ್ನು ಮಾತ್ರ ಕಾಣಲು ಸಾಧ್ಯ. ನಾಲ್ಕು ದಿಕ್ಕಿನಲ್ಲೂ ಒಂದೊಂದು ಬುರುಜು (ಗೊಮ್ಮಟ) ಇದೆ. ಕೋಟೆ ಪ್ರವೇಶಕ್ಕೆ ಮೊದಲು ನಾಲ್ಕು ದ್ವಾರಗಳು ಇದ್ದವಂತೆ. ಸದ್ಯ ಪೂರ್ವದ ದ್ವಾರ ಮಾತ್ರ ಬಳಕೆಯಲ್ಲಿದೆ. ಒಳಭಾಗದಲ್ಲಿ ಕಟ್ಟೆಯಿದ್ದು, ದಣಿದು ಬಂದವರು ಅರೆಕ್ಷಣ ಕುಳಿತರೆ ಸಾಕು, ಜೋಂಪು (ನಿದ್ರೆ) ಆವರಿಸುತ್ತದೆ. ಒಳಗಿನ ಕಟ್ಟಡವೊಂದರ ಮೇಲೆ ಇಬ್ಬರು ಡುಮ್ಮಣ್ಣರ ಕೆತ್ತನೆಗಳಿವೆ. ಕೋಟೆಯ ಒಳಭಾಗ ಸುಮಾರು ನೂರು ಎಕರೆಯಷ್ಟು ವಿಸ್ತಾರವಾಗಿದೆ. ಮಧ್ಯದಲ್ಲಿರುವ ರಾಜವಾಡೆ ಪ್ರದೇಶವೇ ಐದು ಎಕರೆಗಳಷ್ಟು ದೊಡ್ಡದಾಗಿದೆ. ಪಕ್ಕದಲ್ಲೇ ಭೂತಂಕುಶ ಅರಸ ನಿರ್ಮಿಸಿದ ಭೂತನಾಥ ದೇವಾಲಯ ಇಲ್ಲಿನ ಆಕರ್ಷಣೆ. ಇದು ಚಾಲುಕ್ಯ ಶೈಲಿಯಲ್ಲಿದೆ. ವಿಶಾಲ ಪ್ರಾಂಗಣ, ಗರ್ಭಗುಡಿ, ಸುಖಾಸನ ಸಭಾಮಂಟಪ, ೧೨ ಕಂಬಗಳ ನವರಂಗ, ಗರ್ಭಗೃಹದಲ್ಲಿರುವ ಶಿವಲಿಂಗ ಅದರ ಎದುರಿಗೆ ನಂದಿ, ಸುತ್ತಲಿನ ಗೋಡೆಯ ಮೇಲಿನ ಶಿಲ್ಪಕಲೆ ಮನಸೂರೆಗೊಳ್ಳುತ್ತವೆ. ಶಿವ ದೇವಾಲಯ, ದುರ್ಗಾದೇವಾಲಯ, ಗಣಪತಿ ವಿಜಯನಗರ ವಾಸ್ತು ಶೈಲಿಯ ಮಾದರಿಯಲ್ಲಿವೆ. ಕೋಟೆಯ ಸುತ್ತಲೂ ಆಳವಾದ ಕಂದಕವಿದೆ. ಈ ಕೋಟೆಯಲ್ಲಿ ಕನ್ನಡ ಹಾಗೂ ಪರ್ಶಿಯನ್ ಭಾಷೆಯ ಶಾಸನಗಳನ್ನು ಕಾಣಬಹುದಾಗಿದೆ. ಸುತ್ತಲ ಪರಿಸರವನ್ನು ಮಲಪ್ರಭೆ ಸುಂದರವನ್ನಾಗಿಸಿದ್ದಾಳೆ.
ಮೇಗುಂಡೇಶ್ವರಕೊಳ್ಳ:
ಇದು ಕೂಡಾ ರಾಮದುರ್ಗ ತಾಲೂಕಿನ ಐತಿಹಾಸಿಕ ಪ್ರೇಕ್ಷಣಿಯ ಸ್ಥಳವಾಗಿದೆ. ರಾಮದುರ್ಗ ಪಟ್ಟಣದಿಂದ ೫-೬ ಕಿಮೀ ದೂರದಲ್ಲಿದೆ ಈ ಸ್ಥಳ. ಇಲ್ಲಿಯೂ ಸರ್ವ ಕಾಲಕ್ಕೂ ಬತ್ತದ ಹೊಂಡವೊಂದಿದೆ. ಇದಕ್ಕೆ ಮೇಗುಂಡೇಶ್ವರಕೊಳ್ಳ ಎಂದು ಕರೆಯುತ್ತಾರೆ. ಇಲ್ಲಿಯ ಜಲವನ್ನು ತೀರ್ಥರೂಪವಾಗಿ ಜನರಿಗೆ ನೀಡಲಾಗುತ್ತಿದೆ. ಇದಷ್ಟೇ ಅಲ್ಲದೇ ಇಲ್ಲಿಗೆ ಬಂದ ಜನತೆ ಈ ನೀರನ್ನು ಕೊಡ ಅಥವಾ ಬಾಟಲ್ ಗಳಲ್ಲಿ ತುಂಬಿಕೊಂಡು ತೀರ್ಥ ರೂಪದಲ್ಲಿ ನಿತ್ಯ ಸೇವಿಸುತ್ತಾರೆ.
ಸಿದ್ಧೇಶ್ವರಕೊಳ್ಳ:
ಇಲ್ಲಿರುವ ದೇವಾಲಯ ಚಾಲುಕ್ಯರ ಕಾಲದ್ದು ಎಂದು ಹೇಳಲಾಗುತ್ತಿದೆ. ಹಲವಾರು ಪವಾಡಗಳು ನಡೆದ ಸ್ಥಳ ಇದು. ದೇವಸ್ಥಾನದ ಹಿಂದಗಡೆ ಒಂದು ಜಲಮೂಲವಿದೆ. ಈ ಜಲಮೂಲ ಅನಾದಿ ಕಾಲದಿಂದಲೂ ಬತ್ತಿಲ್ಲ. ಈ ಜಲಮೂಲಕ್ಕೆ ಸಿದ್ದಪ್ಪಜ್ಜನಕೊಳ್ಳ, ಮೇಗುಂಡಪ್ಪನಕೊಳ್ಳ ಎಂದು ಕರೆಯಲಾಗುತ್ತಿದೆ. ಇಲ್ಲಿಯ ನೀರನ್ನೇ ದೇವರ ಅಭಿಷೇಕ, ತೀರ್ಥವನ್ನಾಗಿ ನೀಡಲಾಗುತ್ತಿದೆ.
ಗೊಡಚಿ ವೀರಭದ್ರೇಶ್ವ:
ಬೆಳಗಾವಿಯಿಂದ ೮೦ ಕಿಮೀ ದೂರದ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ದೇವಾಲಯ ನಾಡಿನ ಮನೆ,ಮನದ ಮಾತಾಗಿದೆ. ನಾಡಿನ ಅನೇಕ ಪುಣ್ಯಕ್ಷೇತ್ರಗಳ ಪೈಕಿ ಈ ಗೊಡಚಿ ಕ್ಷೇತ್ರವು ಒಂದು. ತನ್ನದೇ ಇತಿಹಾಸ, ಪರಂಪರೆಯ ಮೂಲಕ ರಾಜ್ಯಾದ್ಯಂತ ಭಕ್ತವೃಂದವನ್ನು ಹೊಂದಿ ಗಮನ ಸೆಳೆಯುತ್ತಿದೆ.ಉತ್ತರಕರ್ನಾಟಕದಲ್ಲಿ ಹಲವಾರು ಪ್ರಮುಖ ಜಾತ್ರೆಗಳು ನಡೆಯುತ್ತಿವೆ ಅವುಗಳಲ್ಲಿ ಉತ್ತರ ಕರ್ನಾಟಕದ ಧರ್ಮಸ್ಥಳ ಎಂದು ಖ್ಯಾತಿ ಪಡೆದಿರುವ ಬೆಳಗಾವಿ ಜಿಲ್ಲೆಯ ಗೋಡಚಿಯ ವೀರಭದ್ರೇಶ್ವರ ಜಾತ್ರೆಯು ಡಿಸೆಂಬರ ೨೨ರಿಂದ ೫ ದಿನಗಳ ಕಾಲ ನಡೆಯಲಿದೆ. ಗೊಡಚಿ ಕ್ಷೇತ್ರವು ಕರ್ನಾಟಕದ ಐತಿಹಾಸಿಕ ಕ್ಷೇತ್ರಗಳಲ್ಲಿ ಒಂದಾಗಿದ್ದು ಈ ಕ್ಷೇತ್ರದ ಇತಿಹಾಸವನ್ನು ಒಮ್ಮೆ ಅವಲೋಕಿಸಿದಾಗ ಅದು ನಮ್ಮ ಅರಿವಿಗೆ ಬರುತ್ತದೆ. ಅದಕ್ಕಾಗಿ ಜಾತ್ರೆಯ ವಿಷಯಕ್ಕಿಂತ ಮೊದಲು ಗೋಡಚಿ ಕ್ಷೇತ್ರದ ಬಗ್ಗೆ ತಿಳಿಸದೆ ಹೋದರೆ ಪ್ರಮಾದವಾಗುತ್ತದೆ. ಗೋಡಚಿ ಕ್ಷೇತ್ರವು ಬಾದಾಮಿ ಚಾಲುಕ್ಯರ ಕೀರ್ತಿವರ್ಮನಿಂದ ಹಿಡಿದು ಕೊಲ್ಹಾಪೂರ ಸಂಸ್ಥಾನದ ಭಾಗಕ್ಕೆ ಶಿ ಕರವೀರಷಿರ ನಾಡೆಂದು ಹೆಸರು ಬಂದಿದೆ ಎಂದು ಗೋಡಚಿ ಗ್ರಾಮದಲ್ಲಿ ದೊರೆತ ತಾಮ್ರಪಟದಲ್ಲಿ ಶಿಕೆತ್ತಿಅರಸಷಿ ಎಂಬುದರಿಂದ ಬಂದಿದೆ ಎಂಬುದು ಇತಿಹಾಸಕಾರರ ಅನಿಸಿಕೆಯಾಗಿದೆ. ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾಧಿಗಳು ಸೇರುವ ಗೋಡಚಿಯ ವೀರಭದ್ರೇಶ್ವರ ಜಾತ್ರೆಯ ವಿಶೇಷವೆಂದರೆ ಬೆಳವಲು(ಬಳೂಲ)ಕಾಯಿ, ಬೋರೆ (ಬಾರಿ) ಹಾಗೂ ಬಾಳೆಹಣ್ಣುಗಳ ಮಾರಾಟ ಈ ಜಾತ್ರೆಯ ವಿಶೇಷವಾಗಿದೆ.
ಶಿವನಮೂರ್ತಿ:
ರಾಮದುರ್ಗ ತಾಲೂಕಿನ ಮೂಳ್ಳೂರ ಬೆಟ್ಟದಲ್ಲಿ ಮೇಲೆ ನಿರ್ಮಾಣ ಗೊಂಡ ೭೮ ಅಡಿ ಎತ್ತರದ ಶಿವನ ಮೂರ್ತಿ ರಾಜ್ಯದ ಎರಡನೇ ದೊಡ್ಡ ಶಿವನಮೂರ್ತಿಯಾಗಿದೆ. ಮುರಡೇಶ್ವರ ಮಾದರಿಯಲ್ಲಿ೧.೫ ಕೋಟಿ ವೆಚ್ಚದಲ್ಲಿ ಬೃಹತ ಶಿವನಮೂರ್ತಿ ಹಾಗೂ ಉದ್ಯಾನವನ ನಿರ್ಮಿಸಿ  ೨೦೧೮ರ  ಶಿವರಾತ್ರಿ ದಿನದಂದು ಲೋಕಾರ್ಪಣೆ ಮಾಡಲಾಗಿದೆ.ಶಿವನಮೂರ್ತಿ ಕೆಳ ಮಹಡಿಯಲ್ಲಿ ಈಶ್ವರಲಿಂಗುವನ್ನು ಮಧ್ಯಪ್ರದೇಶದ ನರ್ಮಾದ ನದಿಯ ದಡದಲ್ಲಿರುವ ಓಂಕಾರೇಶ್ವರ ದೇವಸ್ಥಾನದಿಂದ ತಂದು ಕೂಡಿಸಲಾಗಿದೆ. ಇದು ಕೂಡಾ ಉತ್ತಮ ಪ್ರೇಕ್ಷಣಿಯ ಸ್ಥಳವಾಗಿದೆ.
---
ಹೋಗುವುದು ಹೇಗೆ?
ಬೆಳಗಾವಿಯಿಂದ ೧೧೦ ಕಿಮೀ ರಾಮದುರ್ಗ ಇದೆ. ಅಲ್ಲಿಂದ ಶಬರಿಕೊಳ್ಳ ೧೪ ಕಿಮೀ ಇದೆ. ರಾಮದುರ್ಗದಿಂದ ಸುರೇಬಾನಕ್ಕೆ ಬಸ್ ಮೂಲಕ ಹಾಗೂ ಬೈಕ್ ಮೂಲಕವೂ ಹೋಗಬಹುದು. ರಾಮದುರ್ಗದಿಂದ ಸುರೇಬಾನದಿಂದ ಶಬರಿಕೊಳ್ಳಕ್ಕೆ ಟಂಟಂ ಇರುತ್ತವೆ. ಆದರೆ, ಶಬರಿಕೊಳ್ಳದಲ್ಲಿ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಇಲ್ಲ. ಊಟದ ವ್ಯವಸ್ಥೆ ಕೂಡಾ ಇಲ್ಲ. ಇನ್ನೂ ರಾಮದುರ್ಗದಿಂದ ತೋರಗಲ್ಲ ಕೋಟೆ ೧೫ ಕಿಮೀ ಇದೆ. ಗೊಡಚಿ ಕೂಡಾ ೧೭ ಕಿಮೀ ಆಗುತ್ತದೆ. ಸಿದ್ಧೇಶ್ವಕೊಳ್ಳ, ಮೇಗುಂಡೇಶ್ವರಕೊಳ್ಳ ೧೦ ಕಿಮಿ ಆಗುತ್ತದೆ. ಆದರೆ, ಎಲ್ಲಿವೂ ಉಳಿದುಕೊಳ್ಳುವ ಹಾಗೂ ಊಟದ ವ್ಯವಸ್ಥೆ ಇಲ್ಲ.

Tuesday, 29 October 2019

ಸರಿಗಮಪದಲ್ಲಿ "'ಓಂಕಾರ''



ಮಂಜುನಾಥ ಗದಗಿನ
ಯಾವುದೇ ದೊಡ್ಡ ಮಟ್ಟದ ವೇದಿಕೆ ಅಲಂಕರಿಸದೇ ಘಟಾನುಘಟಿ ಸ್ಪರ್ಧಾಳುಗಳ ಮಧ್ಯೆ ಹಾಡಿ ವಿಜೇತರಾಗುವುದು ಸಾಮಾನ್ಯದ ಮಾತಲ್ಲ. ಆದರೆ, ಶ್ರದ್ಧೆ ಮತ್ತು ಗೆಲ್ಲಬೇಕು ಎಂಬ ಹಂಬಲ ಇದ್ದರೆ ಯಾವುದು ಅಸಾಧ್ಯವಲ್ಲ ಎಂದು ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರನ್ನು ಗೆದ್ದು ಸಾಧಿಸಿ ತೋರಿಸಿದ್ದಾನೆ ಈ ಬಾಲಕ.
ಹೌದು! ಆತ ಗೋಕಾಕದ, ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್-೧೬ರ ವಿಜೇತ ಓಂಕಾರ ಪತ್ತಾರ. ಮನೆಯಲ್ಲಿ ಯಾರಿಗೂ ಸಂಗೀತದ ಗಂಧ ಗಾಳಿಯು ಗೊತ್ತಿಲ್ಲ. ಆದರೆ, ಈತ ಮಾತ್ರ ಸಂಗೀತ ದಿಗಜ್ಜರನ್ನು ಮೆಚ್ಚಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದು ಮಾತ್ರ ಆಶ್ಚರ್ಯವೇ ಸರಿ.
ಶಿಕ್ಷಕರೇ ಕಾರಣ:
ಓಂಕಾರ ಪತ್ತಾರ ಮೂರನೇ ತರಗತಿಯಲ್ಲಿ ಓದುತ್ತಿರಬೇಕಾದರ, ಅದೇ ಶಾಲೆ ಶಶಿಕಲಾ ಎಂಬ ಶಿಕ್ಷಕರು ಓಂಕಾರ ಅವರಲ್ಲಿರುವ ಸಂಗೀತ ಪ್ರತಿಭೆಯನ್ನು ಮೊಟ್ಟಮೊದಲ ಬಾರಿ ಗುರುತಿಸಿದರು. ಅದು ಓಂಕಾರ ಅದೊಂದು ಕಾರ್ಯಕ್ರಮದಲ್ಲಿ ಅಮೋಘವಾಗಿ ಹಾಡಿ ಎಲ್ಲರಿಂದಲೂ ಸೈ ಅನಿಸಿಕೊಂಡಿದ್ದನು. ಶಶಿಕಲಾ ಮೇಡಂ ಓಂಕಾರನಲ್ಲಿ ಏನೊಂದು ವಿಶೇಷವಾದ ಪ್ರತಿಭೆಯಿದೆ. ಅದನ್ನು ಸೂಕ್ತವಾಗಿ ಗುರುತಿಸಬೇಕು ಎಂದುಕೊಂಡು ಈ ವಿಷಯವನ್ನು ಓಂಕಾರ ಪಾಲಕರಿಗೆ ತಿಳಿಸಿದರು. ಆದರೆ, ಓಂಕಾರ ಪಾಲಕರು ಇದನ್ನು ಅಷ್ಟೊಂದು ತಲೆಗೆ ಹಾಕಿಕೊಳ್ಳದೇ ಅಸಡ್ಡೆ ತೋರಿದರು. ಆದರೆ, ಶಶಿಕಲಾ ಮೇಡಂ ಮಾತ್ರ ಓಂಕಾರನಲ್ಲಿ ಇರುವ ಪ್ರತ್ರಿಭೆಯನ್ನು ಗಮನಿಸುತ್ತಾ ಅವನ ಪಾಲಕೆ ಮೇಲೆ ಒತ್ತಡ ಹಾಕಿದರು. ಇದರಿಂದ ಓಂಕಾರ ಪಾಲಕರು ಸಂಗೀತ ಶಾಲೆಗೆ ಸೇರಿಸಿದರು. ಆವಾಗಿನಿಂದ ಓಂಕಾರ ಶಿಸ್ತು ಬದ್ಧ ಸಂಗೀತ ಮಾಡಲು ಪ್ರಾರಂಭಿಸಿದ. ಹೀಗಾಗಿ ಗೋಕಾಕ ಸುತ್ತಲ ಅನೇಕ ಕಡೆಗಳಲ್ಲಿ ಸಣ್ಣಪುಟ್ಟ ಕಾರ್ಯಕ್ರಮಗಳನ್ನು ನೀಡುತ್ತಾ ಸಾಗಿದ.
ಸಿದ್ಧಾರೂಡರ ಕೃಪೆ:
ಓಂಕಾರ ತಾಯಿ ಊರು ಹುಬ್ಬಳ್ಳಿ. ಸಿದ್ಧಾರೂಡ ಮಠದ ಹಿಂದೆ ಇವರ ಮನೆ ಇದ್ದ ಕಾರಣ ಓಂಕಾರ ಹುಬ್ಬಳ್ಳಿಗೆ ಭೇಟಿ ನೀಡಿದಾಗೊಮ್ಮೆ ಸಿದ್ಧಾರೂಢರ ಮಠಕ್ಕೆ ಭೇಟಿ ನೀಡುತ್ತಿದ್ದ. ಈ ವೇಳೆ ಅಲ್ಲಿಯೇ ಕೆಲವು ಗಂಟೆಗಳ ಕಾಲ ಇರುತ್ತದ್ದ. ಈ ವೇಳೆ ಅಲ್ಲಿ ನಡೆಯುವ ಸಂಗೀತ ಕಾರ್ಯಕ್ರಮ ಹಾಗೂ ಪ್ರವಚನಗಳನ್ನು ಆಲಿಸುತ್ತಾ ಸಂಗೀತದಲ್ಲಿ ಆಸಕ್ತಿ ಬೆಳೆಸಿಕೊಂಡ. ಹೀಗಾಗಿ ಶಾಲೆಯಲ್ಲಿ ಅತ್ಯುತ್ತಮವಾಗಿ ಹಾಡಲು ಆರಂಭಿಸಿ ಪ್ರಥಮ ಸ್ಥಾನ ಪಡೆದುಕೊಳ್ಳುತ್ತಿದ್ದ.
ದೊಡ್ಡ ವೇದಿಕೆ ಇಲ್ಲ:
ಓಂಕಾರ ಒಬ್ಬ ಉತ್ತಮ ಹಾಡುಗಾರ ಎಂದು ಎಲ್ಲರಿಗೂ ತಿಳಿದಿತ್ತು. ಹೀಗಾಗಿ ಗೋಕಾಕ ಸುತ್ತಲ ಕಾರ್ಯಕ್ರಮಗಳು ನಡೆದರೆ ಓಂಕಾರನನ್ನು ಹಾಡುಗಾರನನ್ನಾಗಿ ಕರೆಸುತ್ತಿದ್ದರು. ಆದರೆ, ಈತ ಪಾಲ್ಗೊಳ್ಳುತ್ತಿದ್ದದ್ದು ಜಾತ್ರಾ ಮಹೋತ್ಸವ, ಬೀಳ್ಕೊಡುಗೆ ಸಮಾರಂಭಗಲ್ಲಿ ಮಾತ್ರ ಹಾಡುತ್ತಿದ್ದ. ಅತೀ ದೊಡ್ಡ ವೇದಿಕೆ ಎಂದರೆ ಪ್ರತಿ ವರ್ಷ ನಡೆಯುವ ಸತೀಶ ಶುಗರ್ಸ್‌ ಅವಾರ್ಡ್. ಈ ಕಾರ್ಯಕ್ರಮದಲ್ಲಿ ಹಲವು ಬಾರಿ ವಿಜೇತ ಕೂಡಾ ಆಗಿದ್ದಾರೆ.
ದೊಡ್ಡ ಗೆಲವು:
ಗೋಕಾಕನಲ್ಲಿ ನಡೆದ ಆಡಿಷನ್‌ನಲ್ಲಿ ಓಂಕಾರ ಪಾಲ್ಗೊಂಡಾಗ ಅವನಿಗೆ ಗೊತ್ತಿರಲಿಲ್ಲ. ನಾನು ಸೆಲೆಕ್ಷನ್ ಆಗುತ್ತೇನೆ ಎಂದು. ಆದರೆ, ಎರಡು ಸುತ್ತಗಳನ್ನು ಯಶಸ್ವಿಯಾಗಿ ಪೂರೈಸಿ ಕೊನೆಗೆ ಸರಿಗಮಪಕ್ಕೆ ಆಯ್ಕೆಯಾದ. ನಂತರ ಸರಿಗಮಪದಲ್ಲಿ ಪ್ರತಿಸಾರಿಯೂ ಗೊಲ್ಡನ್ ಬಜರ್ ಪಡೆದುಕೊಳ್ಳಲು ಪ್ರಾರಂಭಿಸಿದ. ಅಲ್ಲಿ ಎಲ್ಲರೂ ದೊಡ್ಡ ದೊಡ್ಡ ಸಂಗೀತ ಗುರುಗಳಿಂದ ಕಲಿತವರೇ ಇದ್ದರೂ, ನಾನು ಮಾತ್ರ ಅಷ್ಟೊಂದು ಸಂಗೀತ ಕಲಿತಿರಲ್ಲಿ. ಆದರೆ, ನನ್ನಲ್ಲಿ ಕಲಿಬೇಕು ಎಂಬ ಛಲ ಇತ್ತು. ಹೀಗಾಗಿ ನಾನು ದಿನನಿತ್ಯ ಸರಿಗಮಪ ವೇದಿಕೆಯಲ್ಲೇ ಅಭ್ಯಾಸ ಮಾಡಿ ವೇದಿಕೆ ಮೇಲೆ ದೃಢವಾಗಿ ಹಾಡುತ್ತಿದ್ದೇ ಹೀಗಾಗಿ ಈ ಸಾರಿಯ ಚಾಂಪಿಯನ್ ಆಗಲು ಕಾರಣವಾಯಿತು ಎಂದು ಹೇಳುತ್ತಾನೆ ಓಂಕಾರ.
ಪೈನಲನಲ್ಲಿ ತೀವ್ರವಾದ ಪೈಪೋಟಿ ಇತ್ತು. ಆದರೆ, ಕರುನಾಡಿನ ಜನರ ಓಂಕಾರ ಕೈ ಹಿಡಿದಿದ್ದರಿಂದ ಪೈನಲ್‌ನಲ್ಲಿ ವಿಜೇತದ ಮಾಲೆ ಧರಿಸಿ ₹೩೦ ಲಕ್ಷ ಬೆಲೆ ಬಾಳುವ ಸೈಟ್ ತನ್ನದಾಗಿಸಿಕೊಂಡ. ಗುರು ಕಿರಣ್ ಎರಡನೇ ಸ್ಥಾನ ಪಡೆದುಕೊಂಡ.ಸುನಾದ್ ಮೂರನೇ ಸ್ಥಾನ ಪಡೆದುಕೊಂಡ. ಒಟ್ಟಿನಲ್ಲಿ ತಂದರೆ ಪತ್ತಾರಿಕೆ, ತಾಯಿ ಗೃಹಣಿ ಇದ್ದರೂ, ಓಂಕಾರ ಪಾತ್ರ ಸಂಗೀತದಲ್ಲಿ ಚಾಂಪಿಯನ್ ಆಗಿದ್ದು ಮಾತ್ರ. ಇತರೆ ಬಾಲಕರಿಗೆ ಸ್ಫೂರ್ತಿಯಾಗಿದೆ. ಓಂಕಾರನ ಸಂಗೀತನ ನಿನಾನ ಇನ್ನಷ್ಟು ಹೊರ ಹೊಮ್ಮಲಿ ಎಂಬ ಆಶಯ ಎಲ್ಲರದ್ದು.

Saturday, 26 October 2019

ನೋಡ ಬನ್ನಿ ಬೆಳಗಾವಿ ರಾಜ್ಯೋತ್ಸವ!


ಮಂಜುನಾಥ ಗದಗಿನ
ರಾಜಕೀಯ ಶಕ್ತಿ ಎಂದೇ ಬಿಂಬಿತವಾಗಿರುವ ಬೆಳಗಾವಿ ಭಾಷೆ ಹಾಗೂ ಗಡಿ ವಿವಾದಿಂದ ಒಂದಿಲ್ಲವೊಂದು ರೀತಿಯಲ್ಲಿ ರಾಜ್ಯದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಆದರೆ, ನವೆಂಬರ್ ೧ ಬಂತೆಂದರೆ ಸಾಕು ರಾಜ್ಯದ ಮನೆ, ಮನದ ಮಾತಾಗಿ ಬಿಡುತ್ತದೆ ಕುಂದಾನಗರಿ ಬೆಳಗಾವಿ. ಇದಕ್ಕೆ ಕಾರಣ ಅದ್ಧೂರಿ ರಾಜ್ಯೋತ್ಸವ.
ಹೌದು! ಇಡೀ ರಾಜ್ಯದಲ್ಲೇ ಕನ್ನಡ ರಾಜ್ಯೋತ್ಸವವನ್ನು ಒಂದು ದೊಡ್ಡ ಹಬ್ಬ ಎಂಬಂತೆ ಆಚರಿಸುವುದು ಅದು ಬೆಳಗಾವಿಯಲ್ಲಿ ಮಾತ್ರ. ಪ್ರತಿ ವರ್ಷ ಬರುವ ಹಬ್ಬಗಳನ್ನು ಕೂಡಿ ಆಚರಿಸುತ್ತಾರೋ ಇಲ್ಲ, ಆದ್ರೆ ರಾಜ್ಯೋತ್ಸವ ಬಂತು ಎಂದರೆ ಸಾಕು ಜಿಲ್ಲೆಯಲ್ಲಿ ಕನ್ನಡ. ಕನ್ನಡ ಎಂಬುವುದು ಘೋಷ ವ್ಯಾಕ್ಯವಾಗಿ ಬಿಡುತ್ತದೆ. ಅಷ್ಟರ ಮಟ್ಟಿಗೆ ಬೆಳಗಾವಿ ರಾಜ್ಯೋತ್ಸವ ಎಲ್ಲರ ಹಬ್ಬವಾಗಿ ಬಿಟ್ಟಿದೆ.
ಯಾಕೆ ಇಷ್ಟೊಂದು ಅದ್ಧೂರಿ?:
ಬೆಳಗಾವಿ ಗಡಿ ಪ್ರದೇಶ. ಇದೇ ಕಾರಣಕ್ಕ ನೆರೆ ಮಹಾರಾಷ್ಟ್ರ ಪದೇಪದೇ ಕಾಲು ಕೆದರಿಕೊಂಡು ಗಡಿ ವಿವಾದ ಹುಟ್ಟು ಹಾಕಿ ತನ್ನ ಅಸ್ತಿತ್ವವನ್ನು ಸಾಬೀತುಪಡಿಸುತ್ತಲೇ ಇರುತ್ತದೆ. ಇನ್ನು ಭಾಷಾವಾರು ರಾಜ್ಯ ರಚನೆ ಮುಂದಾದಾಗ ನಮ್ಮನ್ನು ಕಡೆಗಣಿಸಿ ರಾಜ್ಯ ರಚನೆ ಮಾಡಲಾಗಿದೆ ಎಂದು ಬೆಳಗಾವಿಯ ಮರಾಠಿ ಭಾಷಿಕರು ಎಂಇಎಸ್ (ಮಹಾರಾಷ್ಟ್ರ ಏಕೀಕರಣ ಸಮಿತಿ) ವತಿಯಿಂದ ರಾಜ್ಯೋತ್ಸವ ದಿನದಂದು ಪ್ರತಿವರ್ಷ ಕಪ್ಪು ಪಟ್ಟಿ ಧರಿಸಿಕೊಂಡು ಕರಾಳ ದಿನ ಆಚರಿಸುತ್ತಾ ಬಂದಿದ್ದಾರೆ. ಆದರೆ, ಜಿಲ್ಲಾಡಳಿತ ಮಾತ್ರ ಹಲವು ಕಟ್ಟುನಿಟ್ಟಿನ ಸೂಚನೆ ಮೇರೆ ಅನುಮತಿ ನೀಡುತ್ತಾ ಬಂದಿದೆ. ಆದರೆ, ಎಂಇಎಸ್ ಮಾತ್ರ ಕೆಲವು ಸಾರಿ ಜಿಲ್ಲಾಡಳಿತದ ಷರತ್ತುಗಳನ್ನು ಮುರಿದು ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿದೆ. ಎಂಇಎಸ್ ಹಾಗೂ ಮಹಾರಾಷ್ಟ್ರಕ್ಕೆ ಸೆಡ್ಡು ಹೊಡೆಯಬೇಕೆಂಬ ಕಾರಣ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅದ್ಧೂರಿಯಾಗಿ ಆಚರಿಸುತ್ತಾ ಬಂದಿವೆ.
ಕನ್ನಡಮಯ:                                                                              
ನವೆಂಬರ್ ೧ ಬೆಳಗಾವಿಗರ ಪಾಲಿಗೆ ಅವಿಸ್ಮರಣೀಯ ದಿನ. ರಾಜ್ಯೋತ್ಸವ ಒಂದು ತಿಂಗಳು ಇರುವಾಗಲೇ ಕನ್ನಡ ರಾಜ್ಯೋತ್ಸವದ ತಯಾರಿಗಳು ಆರಂಭಗೊಂಡಿವೆ. ಹಲವು ಕನ್ನಡಪರ ಸಂಘಟನೆಗಳು ಯೋಜನೆಗಳನ್ನು ಹಾಕಿಕೊಂಡು ಕನ್ನಡಹಬ್ಬಕ್ಕೆ ತಯಾರಿ ನಡೆಸಿವೆ. ಇನ್ನು ನಗರದ ತುಂಬೆಲ್ಲ ಕನ್ನಡದ ಬಾವುಟಗಳು, ಕನ್ನಡಕ್ಕಾಗಿ ದುಡಿದ ಮಹನೀಯರ ಕಟೌಟ್‌ಗಳನ್ನು ಹಾಕಿ ಕನ್ನಡತನ ಮೆರೆಯುತ್ತಾರೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿ ಹೃದಯ ಭಾಗ ಚೆನ್ನಮ್ಮ ಸರ್ಕಲ್ ರಾಜ್ಯೋತ್ಸವದ ಪ್ರಮುಖ ಕೇಂದ್ರವಾಗಿ ಬಿಟ್ಟಿದೆ.
ರಿಯಾಯಿತಿ, ಕಲಾತಂಡ:
ರಾಜ್ಯದ ಜನತೆಗೆ ದಸರಾ ನಾಡ ಹಬ್ಬವಾದರೆ ಬೆಳಗಾವಿಗರಿಗೆ ರಾಜ್ಯೋತ್ಸವ ನಾಡಹಬ್ಬವಾಗಿ ಮಾರ್ಪಟ್ಟಿದೆ. ಇದೇ ಕಾರಣಕ್ಕೆ ನ.೧ರಂದು ನಗರದ ಬಹುತೇಕ ಅಂಗಡಿ, ಮಾಲಗಳು ರಿಯಾಯಿತಿಗಳನ್ನು ಘೋಷಿಸಿ ಕನ್ನಡ ರಾಜ್ಯೋತ್ಸಕ್ಕೆ ತಮ್ಮ ಕೊಡುಗೆ ನೀಡುತ್ತಿವೆ. ಕಳೆದ ಸಾರಿ ಶೇ.೨೦ರಷ್ಟು ರಿಯಾಯಿತಿ ಘೋಷಿಸುವ ಮೂಲಕ ರಾಜ್ಯೋತ್ಸವಕ್ಕೆ ಇಂಬು ನೀಡಿದ್ದರು. ಇನ್ನೂ ರಾಜ್ಯೋತ್ಸವ ಚೆನಮ್ಮ ಸರ್ಕಲ್‌ನಲ್ಲಿ ಜನಜಾತ್ರೆ ನೆರೆದಿರುತ್ತದೆ. ಎಲ್ಲರ ಬಾಯಲ್ಲೂ ಕನ್ನಡದ ಮಾತು, ಕನ್ನಡದ ಬಾವುಟಗಳು ರಾರಾಜಿಸುತ್ತಿರುವುತ್ತವೆ. ಮತ್ತೊಂದೆಡೆ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳ ಮೆರೆವಣಿಗೆ ರಾಜ್ಯೋತ್ಸವಕ್ಕೆ ಕಳೆ ತಂದಿರುತ್ತದೆ. ಜಿಲ್ಲಾಡಳಿತ ಮುಂಚಿತವಾಗಿವೆ. ತಾಲೂಕುವಾರು ಸ್ತಬ್ಧ ಚಿತ್ರ ಹಾಗೂ ಕಲಾತಂಡಗಳಿಗೆ ಆಹ್ವಾನ ನೀಡಿರುತ್ತದೆ. ಅಂದಾಜು ೫೦ಕ್ಕೂ ಅಧಿಕ ಕಲಾ ತಂಡಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡಿಗರ ಮನ ತಣಿಸುತ್ತವೆ. ಮೆರವಣಿಗೆಯಲ್ಲಿ ಪಾಲ್ಗೊಂಡ ಉತ್ತಮ ಸ್ತಬ್ಧ ಚಿತ್ರ ಹಾಗೂ ಕಲಾ ತಂಡಗಳಿಗೆ ಸೂಕ್ತ ಬಹುಮಾನ ಕೂಡ ನೀಡಲಾಗುತ್ತಿದೆ.
ಸಂಗೀತ, ಹೋಳಿಗೆ, ಡ್ರೋಣ:
ಗಣೇಶ ಹಬ್ಬ ಬಿಟ್ಟರೆ ಮತ್ತೆ ಡಿಜೆ ಸದ್ದು ಕೇಳುವುದು ರಾಜ್ಯೋತ್ಸವ ದಿನದಂದು. ನಗರದ ಪ್ರಮುಖ ಓಣಿಯಿಂದ ಡಿಜೆಗಳನ್ನು ಟ್ರ್ಯಾಕ್ಟರ್‌ಗಳಲ್ಲಿ ಹಚ್ಚಿಕೊಂಡು ಬರುತ್ತಾರೆ. ಇದರೊಟ್ಟಿ ಪ್ರತಿಯೊಬ್ಬರ ಕನ್ನಡ ಧ್ವಜ ಹಿಡಿ ಕನ್ನಡ ಹಾಡುಗಳಿಗೆ ಹುಚ್ಚೆದ್ದು ಹೆಜ್ಜೆ ಹಾಕುತ್ತಾ ಕನ್ನಡ ಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಾರೆ. ಇದಷ್ಟೇ ಅಲ್ಲದೇ ಹುಕ್ಕೇರಿ ಹಿರೇಮಠದಿಂದ ಪ್ರತಿ ವರ್ಷದ ರಾಜ್ಯೋತ್ಸವದ ದಿನದಂದು ಹೋಳಿಗೆ ಊಟವನ್ನು ಊಣಬಡಿಸಲಾಗುತ್ತಿದೆ. ಇನ್ನೂ ರಾಜ್ಯೋತ್ಸವನ್ನು ಸೆರೆ ಹಿಡಿಯಲೂ ಡ್ರೋಣ ಕ್ಯಾಮೆರ್‌ಗಳು ಹದ್ದಿನಂತೆ ಆಕಾಶದಲ್ಲಿ ತೇಲುತ್ತಿರುತ್ತವೆ.
ಟೀ ಶರ್ಟ್, ಸ್ಲೋಗನ್:
ಬೆಳಗಾವಿ ರಾಜ್ಯೋತ್ಸವ ಸಾಮಾಜಿಕ ಜಲತಾಣದಲ್ಲೂ ಭಾರಿ ಸದ್ದು ಮಾಡುತ್ತಿದೆ. ಕಳೆದ ಸಾರಿ ನಮ್ಮ ಬೆಳಗಾವಿ ಫೇಸ್ಬುಕ್ ಪೇಜ್‌ನಿಂದ ಯಾರಪ್ಪಂದ ಏನೈತಿ ಬೆಳಗಾವಿ ನಮ್ದೈತಿ ಅನ್ನುವ ಟೀಶರ್ಟ್ ಹಾಗೂ ಹಾಡು ಭಾರಿ ಸದ್ದು ಮಾಡುತ್ತಿದೆ. ಅಂದಾಜು ೩ ಸಾವಿರಕ್ಕೂ ಅಧಿಕ ಜನರು ಈ ಟೀ ಶರ್ಟ್ ಖರೀದಿಸಿ ರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಕೂಡಾ ‘ಏನ್ ಮಾಡ್ಕೋತಿ ಮಾಡ್ಕೋ, ಬೆಳಗಾವಿ ನಮ್ದೈತಿ ಬರ್ಕೋ’ ಎಂಬ ಸ್ಲೋಗನ್ ಸದ್ದು ಮಾಡುತ್ತಿದೆ. ಈಗಾಗಲೇ ಈ ಸ್ಲೋಗನ್ ಟೀಶರ್ಟ್‌ಗಳು ತಯಾರಿದ್ದು ರಾಜ್ಯೋತ್ಸವ ದಿನದಂದು ರಾರಾಜಿಸಲು ಅಣಿಯಾಗಿವೆ.
ರಾಜ್ಯೋತ್ಸವದ ಸವಿ ಸವಿಯ ಬೇಕಾದರೆ ನೀವು ರಾಜ್ಯೋತ್ಸವ ದಿನದಂದು ಬೆಳಗಾವಿಗೆ ಬರಲೇ ಬೇಕು. ಯಾಕಂದ್ರೆ ಇಲ್ಲಿಯ ರಾಜ್ಯೋತ್ಸವ ಸಂಭ್ರಮ ಮತ್ತೇಲ್ಲೂ ಕಾಣ ಸಿಗುವುದಿಲ್ಲ. ಈ ಬಾರೀ ರಾಜ್ಯೋತ್ಸವಕ್ಕೂ ಬೆಳಗಾವಿ ಮಂದಿ ಸನ್ನದ್ಧರಾಗಿ ಕನ್ನಡ ಡಿಂಡಿಂ ಬಾರಿಸಲು ಕಾಯ್ದು ಕುಳಿತಿದ್ದಾರೆ. 

Wednesday, 25 September 2019

"ಪೈಲ್ವಾನ್" ಅಖಾಡದಲ್ಲಿ ರಾಮದುರ್ಗ ನಗೆ ಟಾನಿಕ್


"ಪೈಲ್ವಾನ್" ಕಿಚ್ಚ ಸುದೀಪ ಅಭಿನಯದ ಸದ್ಯದ ಬಾಕ್ಸ್ ಆಫೀಸನಲ್ಲಿ ಧೂಳ್ ಎಬ್ಬಿಸುತ್ತಿರುವ ಚಿತ್ರ. ಇಂತಹ ದೊಡ್ಡ ಚಿತ್ರದಲ್ಲಿ ಹಳ್ಳಿಯಿಂದ ಬಂದ ಪ್ರತಿಭೆಯೊಂದು ಕರುನಾಡಿನ ಜನರನ್ನು ತನ್ನ ಅಮೋಘ ಅಭಿನಯದ ಮೂಲಕ ನಗೆಗಡಲಿ ತೇಲುವಂತೆ ಮಾಡಿದೆ.
ಹೌದು!ಅವರೇ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅಪ್ಪಟ ಗ್ರಾಮೀಣ ಪ್ರತಿಭೆ ಅಪ್ಪಣ್ಣ(ಅಪ್ಪು) ರಾಮದುರ್ಗ.
ರಂಗಭೂಮಿಯಿಂದ ಬಂದ ಪ್ರತಿಭೆಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ ಅಭಿನಯದ ಮೂಲಕ ಛಾಪು ಮೂಡಿಸುತ್ತಿದೆ ಅಂದ್ರೆ ಸಣ್ಣ ಮಾತಲ್ಲ. ಪೈಲ್ವಾನ್ ಚಿತ್ರದಲ್ಲಿ ಸುದೀಪ ಪ್ರಥಮ ಹಿರೋ ಆಗಿ ನಟಿಸಿದ್ದರೆ, ಅಪ್ಪಣ್ಣ ಆ ಚಿತ್ರದ ಎರಡನೇ ಹಿರೋ ಆಗಿ ಎಲ್ಲರ ಮನಸ್ಸು ಗೆದ್ದು ನಾಡಿನ ಮನೆ ಮನದ ಮಾತಾಗಿದ್ದಾರೆ. "ಪಂಚ ಡೈಲಾಗ್ ಮೂಲಕ ಚಿತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ನಿರ್ದೇಶಕ ಕೃಷ್ಣ ಅವರು ನನಗೆ ಅವಕಾಶ ಕೊಟ್ಟು ಬೆನ್ನು ತಟ್ಟಿದ್ದು, ಸುದೀಪ್ ಸರ್, ಸುನೀಲ್ ಶೆಟ್ಟಿ, ಶರತ್ ಲೋಹಿತಾಶ್ವ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿದ್ದು ನನ್ನ ಬದುಕಿನ ಸಾರ್ಥಕತೆ ಅಂತಾ ಭಾವಿಸುತ್ತೇನೆ ಎನ್ನು ಇವರ ಮಾತುಗಳೇ ಹೇಳುತ್ತವೆ ಇವರ ಹೃದಯ ವೈಶಾಲತೆ ಹಾಗೂ ಅದ್ಭುತ್ ನಟ ಎಂದು.
ಅಪ್ಪಣ್ಣ ನಾಲ್ಕು ವರ್ಷವರಿದ್ದಾಗ ಅವರ ತಂದೆ ತೀರಿಕೊಂಡರು. ಆವಾಗ ಅಪ್ಪಣ್ಣ ಅವರ ತಾಯಿಗೆ ಪ್ರಪಂಚ ಎಂದರೆ ಏನು ಎಂಬ ಅರಿವೇ ಇರಲಿಲ್ಲ. ಇಂತಹ ಸಮಯದಲ್ಲೂ ಆ ತಾಯಿ ನಾಲ್ಕು ಜನರ ಮನೆಯ ಮುಸುರೆ ತಿಕ್ಕಿ ತನ್ನ ಇಬ್ಬರು ಗಂಡು ಹಾಗೂ ಒಂದು ಹೆಣ್ಣು ಮಗಳನ್ನು ಸಾಕಿ ಸಲುಹಿದರು. ಆದರೆ, ಅಪ್ಪಣ್ಣ ಮಾತ್ರ ತರ‌್ಲೆ ಮಾಡಿಕೊಂಡು, ಅವರಿವರನ್ನು ನಗಿಸುತ್ತಾ ಇದ್ದರು. ಆದರೆ, ಅಪ್ಪಣ್ಣ ಅವರ ತಾಯಿಗೆ ಮಾತ್ರ ಇದು ಇಷ್ಟವಾಗದೇ ಪ್ರತಿದಿನ ಬೈಯುತ್ತಿದ್ದರು. ಆದರೆ, ರಾಮದುರ್ಗ ಕಲಾವಿದರಾದ ಅಂತಾಪುರ ಬಾಬು ಹಾಗೂ ಅಶೋಕ ಗೋನಬಾಳ ಅವರು, ಅಪ್ಪಣ್ಣವರ ಈ ತರ‌್ಲೆ ತುಂಟಾಟದಲ್ಲಿ ಇದ್ದ ಆ ಒಂದು ಹಾಸ್ಯವನ್ನು ಗುರುತಿಸಿ, ಅಪ್ಪಣ್ಣನ ನಿನ್ನಲ್ಲಿ ಒಂದು ಅಗಾಧ ಹಾಸ್ಯ ಕಲೆ ಇದೆ. ಈ ಕಲೆಯನ್ನು ಹಾಳು ಮಾಡಿಕೊಳ್ಳಬೇಡ ಎಂದು ಪ್ರೋತ್ಸಾಹಿಸಿದರು. ಆವಾಗ ಅಪ್ಪಣ್ಣ ಅವರಿಗೆ ಒಳಿತು ಎಂದು ಕಾಣಿಸಿತು. ನಂತರ ಗುರುಗಳಾದ ಅಂತಾಪುರ ಬಾಬು ಅವರ ಸಹಾಯದಿಂದ 2015ರಲ್ಲಿ ನಿನಾಸಂನಲ್ಲಿ ಡಿಪ್ಲೋಮಾ ಇನ್ ಆರ್ಟ್ ತರಬೇತಿಗೆ ಸೇರಿಕೊಂಡರು. ಅಲ್ಲಿ ಉತ್ತಮ ತರಬೇತಿ ಪಡೆದುಕೊಂಡು ಅದ್ಭುತ ಕಲಾವಿದರಾಗಿ ಹೊರಹೊಮ್ಮಿದರು. ನಂತರ ಆಟಮಾಟ ಆಶ್ರಯದಲ್ಲಿ ಅಕ್ರಮ ಸಂತಾನ ಎಂಬ ನಾಟಕ ಪ್ರದರ್ಶನ ಮಾಡಿದರು. ಇದು ಭರ್ಜರಿ ಹಿಟ್ ಆಗಿ ಅಪ್ಪಣ್ಣ ಅವರಿಗೆ ಹೆಸರು ತಂದು ಕೊಟ್ಟಿತು. ಅನಂತರ ಅಪ್ಪು ಅವರ ಹಿಂದೆಯೇ ಅದೃಷ್ಟದ ಬಾಗಿಲು ತೆರೆಯುತ್ತಾ ಬಂದಿತು. ಇದು ಸಾಧ್ಯವಾಗಿದ್ದು ಕಲಾ ದೇವತೆಯಿಂದ ಎನ್ನುತ್ತಾರೆ ಅಪ್ಪು ರಾಮದುರ್ಗ. ಆದರೆ, ಯಾವ ವಿಶ್ವ ವಿದ್ಯಾಲಯವು ಕಲಿಸದ ಪಾಠವನ್ನು ಬಡತನ ಕಲಿಸುತ್ತದೆ ಎಂಬ ಮಾತು ಅಪ್ಪಣ್ಣ ಅವರಿಗೆ ಒಪ್ಪುವಂತಹದ್ದು, ಯಾಕಂದರೆ ಇವರು ಬಡತನದಲ್ಲಿ ಬೆಳೆದ ಪ್ರತಿಭೆ.

ಧಾರಾವಾಹಿ, ಸಿನಿಮಾದಲ್ಲಿ ನಟನೆ:

ತರ‌್ಲೆ ತುಂಟಾಟಗಳಿಂದ ಎಲ್ಲರ ಕಾಲೆಳೆಯುತ್ತಾ, ಎಲ್ಲರಿಂದಲೂ ತಿರಸ್ಕಾರಕ್ಕೊಳಗಾಗಿದ್ದ ಒಬ್ಬ ಯುವಕ ಧಾರವಾಹಿ, ಸಿನಿಮಾದಲ್ಲಿ ನಟನೆ ಮಾಡುವುದು ಎಂದರೆ ಸಾಮಾನ್ಯದ ಮಾತಲ್ಲ. ಆದರೆ, ಅಪ್ಪಣ್ಣ ಮಾತ್ರ ಇದಕ್ಕೆ ವಿರುದ್ಧ. ತನ್ನ ಋಣಾತ್ಮಕ ಶಕ್ತಿಯನ್ನೇ ಧನಾತ್ಮಕ ಶಕ್ತಿಯನ್ನಾಗಿಸಿಕೊಂಡು ಪ್ರಿನ್ಸ್‌ನಂತೆ ಮೇಲೆದ್ದು ಇಂದು ಸಿನಿಮಾ, ಧಾರಾವಾಹಿಗಳಲ್ಲಿ ಮಿಂಚು ಹರಿಸುತ್ತಾ, ಎಲ್ಲರನ್ನು ನಕ್ಕು ನಗಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಾಮಿಡಿ ಕಿಲಾಡಿಗಳಲ್ಲಿ ರಾಮದುರ್ಗದ ಕೀರ್ತಿ ಪತಾಕೆಯನ್ನು ಬಾನೆತ್ತಕ್ಕೆ ಹಾರಿಸುತ್ತಿದ್ದಾರೆ. ಅಪ್ಪಣ್ಣ ಆಕಾಶದೀಪ, ಮೀನಾಕ್ಷಿ ಮದುವೆ, ಪಾರ್ವತಿ ಪರಮೇಶ್ವರ ಎಂಬ ಸಿರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧ್ವಜ, ರವಿಹಿಸ್ಟ್ರಿ ಮತ್ತೊಂದು ಹೆಸರಿಡದ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಮ್ಮ ಕಲೆಯನ್ನು ಪ್ರದರ್ಶನ ಮಾಡಿದ್ದಾರೆ. ಆದರೆ, ಈ ಮೂರು ಚಿತ್ರಗಳು ಮುಂದಿನ ತಿಂಗಳು ಬಿಡುಗಡೆಯಾಗಲಿವೆ.

ಈಗಲು ತಾಯಿ ಬಾಳೆಹಣ್ಣ ಮಾರಾಟ:

ಅಪ್ಪಣ್ಣ ಅವರ ತಾಯಿ ಖಾಲಿ ಕುಳಿತುಕೊಳ್ಳುವವರು ಅಲ್ಲ. ಸದಾ ಒಂದಿಲ್ಲೊಂದು ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವವರು. ಅಪ್ಪಣ್ಣ ದೊಡ್ಡ ಕಲಾವಿದರಾಗಿದ್ದು ಸಹಿತ ಅವರ ಬಡತನ ಮಾತ್ರ ದೂರವಾಗಿಲ್ಲ. ತಾಯಿ ಮಾತ್ರ ಈಗಲೂ ರಾಮದುರ್ಗದಲ್ಲಿ ಬಾಳೇಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ತಮ್ಮ(ಸಹೋದರ) ಗೌಂಡಿ ಕೆಲಸ ಮಾಡುತ್ತಿದ್ದಾರೆ. ಆದರೆ, ಅಪ್ಪಣ್ಣ ಅವರು ಮಾತ್ರ ಕಲಾ ಪೋಷಕರಾಗಿ ಎಲ್ಲರನ್ನು ನಕ್ಕು-ನಗಿಸುತ್ತಾ ಬಣ್ಣದ ಬದುಕಿನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಇವರ ಈ ನಟನೆ ಇನ್ನು ಹೆಚ್ಚು ಬೆಳೆಯಲಿ ಕುಂದಾನಗರಿಯ ಹೆಸರು ಪಸರಿಸಲಿ ಎಂಬುವುದು ಕಲಾಪ್ರೇಕ್ಷಕರ ಆಶಯ. ಚಿತ್ರರಂಗದಲ್ಲಿ ಇನ್ನಷ್ಟು ಅವಕಾಶಗಳು ಅಪ್ಪಣ್ಣ ಅಪ್ಪಟ ಪ್ರತಿಭೆಗೆ ಅರಸಿ ಬರಲಿ.

Tuesday, 3 September 2019

ಕಂಡಕ್ಟರ್ ಮೂಗಿನಿಂದ ಕೊಳಲು ನಾದ!!!!

ಮಂಜುನಾಥ ಗದಗಿನ
 ಇವರು ಕೊಳಲು ವಾದನದಲ್ಲಿ ಎತ್ತಿದ ಕೈ. ಆದರೆ, ಎಲ್ಲರಂತೆ ಇವರು ಬಾಯಿಯಲ್ಲಿ ಕೊಳಲು ನುಡಿಸಿ ಸೈ ಅನಿಸಿಕೊಂಡವರಲ್ಲ. ಬದಲಾಗಿ ಮೂಗಿನಿಂದ ಕೊಳಲು ನುಡಿಸಿ ಎಲ್ಲರಿಂದಲೂ ಭೇಷ್ ಅನಿಸಿಕೊಂಡವರು.
ಹೌದು! ಅವರೇ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೆಳವಿ ಗ್ರಾಮದ ನಿವಾಸಿ, ಸದ್ಯ ಸಂಕೇಶ್ವರ ಕೆಎಸ್‌ಆರ್‌ಟಿಸಿಯಲ್ಲಿ ಕಂಡಕ್ಷರ್ ಆಗಿ ಕಾರ್ಯ ನಿರ್ವಹಿ

ಸುತ್ತಿರುವ ಡಿ.ಆರ. ನದಾಫ್. ವೃತ್ತಿಯಲ್ಲಿ ಕಂಡಕ್ಷರ್ ಆದರೂ ನಾಸಿಕ ಕೊಳಲು ವಾದನ ಮೂಲಕ ಇದೀಗ ನಾಡಿನ ಮನೆ, ಮನದ ಮಾತಾಗಿದ್ದಾರೆ.
೩ನೇ ವಯಸಲ್ಲೆ ಆಸಕ್ತಿ:
ಅದೊಂದು ದಿನ ಮನೆಗೆ ಇವರ ಅಣ್ಣ ಕೊಳಲು ತಂದು ಕೊಳಲು ಕಲಿಯಲು ಪ್ರಯತ್ನ ಪಟ್ಟರು. ಆದರೆ, ಅದರಲ್ಲಿ ಅವರು ವಿಫಲರಾದರೂ, ಆದರೆ, ದಸ್ತಗಿರಿ ಅವರು ದನ, ಕುರಿ ಕಾಯುತ್ತಲೆ ಅದೇ ಕೊಳಲಿನಿಂದ ಪ್ರತಿದಿನ ಆಟವಾಡುತ್ತಾ, ಕೊಳಲು ನುಡಿಸುವುದನ್ನು ಕಲಿತುಕೊಂಡರು. ಆಗ ಅವರಿಗೆ ಕೇವಲ ಮೂರು ವರ್ಷ. ನಂತರ ದಿನಗಳಲ್ಲಿ ಕೊಳಲಿನಲ್ಲಿ ಪಾರಂಗತರಾಗಿ ಕೊಳಲು ವಾದನದಲ್ಲಿ ಮಿಂಚುತ್ತಿದ್ದಾರೆ. ಆದರೆ, ಕಳೆದ ೧೫ ವರ್ಷಗಳಿಂದ ಮೂಗಿನಿಂದ ಅದ್ಭುತ್ ನಾದ ಮೊಳಗಿಸುವ ಮೂಲಕ ಕಂಡಕ್ಟರ್‌ಕ್ಕೂ ಸೈ, ಕೊಳಲು ನುಡಿಸಲು ಜೈ ಅನ್ನುತ್ತಾರೆ, ಸಾಧನೆಯ ಶಿಖರ ಹತ್ತಿದ್ದಾರೆ.
ಚಿತ್ರಿಗೀತೆಗಳ ನಾದ:
ಈಗ ಮೂಗಿನಿಂದ ಚಿತ್ರಗೀತೆ, ಭಕ್ತಿ, ಜನಪದ, ತತ್ವ್ವಪದಗಳನ್ನು ನುಡಿಸುವುದೆಂದರೆ ಅತೀ ಸಲಿಸು. ಅಷ್ಟರ ಮಟ್ಟಿಗೆ ನೆರೆದ ಜನತೆರನ್ನು ನಾದಲೋಕಕ್ಕೆ ಕೊಂಡೈಯುವ ಶಕ್ತಿ ಇವರ ನಾಸಿಕ ಕೊಳಲು ನಾದಕ್ಕೆ ಇದೆ. ಇದೇ ಕಾರಣಕ್ಕೆ ಇವರು ನಾಡಿನ ಹಲವು ಕಡೆಗಳಲ್ಲಿ ಹೋಗಿ ನಾಸಿಕ ಕೊಳಲು ನಾದ ಪ್ರದರ್ಶನ ನೀಡಿ ಶಬ್ಬಾಷ ಅನಿಸಿಕೊಂಡಿದ್ದಾರೆ.
ಮೂಗಿನ ಒಂದು ಹೊಳ್ಳೆ ಮುಚ್ಚಿ, ಇನ್ನೊಂದು ಹೊಳ್ಳೆಯಿಂದ ನಾದ ಹೊರಡಿಸುವುದು ಎಂದರೆ ಸಾಮಾನ್ಯದ ಮಾತಾಲ್ಲ. ಆದರೆ, ದಸ್ತಗಿರಿ ಅವರಿಗೆ ಅದು ಕರಗತವಾಗಿದೆ. ಹೀಗಾಗಿಯೇ ಅವರು ಸಲಿಸಾಗಿ ಡಾ. ರಾಜಕುಮಾರ ಅವರ ಆಡಿಸಿ, ನೋಡು, ಬೀಳಿಸಿ ನೋಡು, ಹುಟ್ಟಿದರೆ ಕನ್ನಡ ನಾಡಲ್ಲಿ, ನಾನಿರುವುದು ನಿಮಗಾಗಿ ಇತ್ಯಾದಿ ಜನಪ್ರಿಯ ಚಲನಚಿತ್ರ ಗೀತೆಯ ಸಾಲುಗಳಾದ ಕಾಣದಂತೆ ಮಾಯವಾದನೋ, ನಮ್ಮ ಶಿವಾ, ನಾನಿರುವುದೇ ನಿಮಗಾಗಿ ಹೀಗೆ ರಾಜಕುಮಾರರ ಬಹುತೇಕ ಚಿತ್ರಗೀತೆಗಳನ್ನು ಕೊಳಲನ್ನು ನಾಸಿಕದ ಮೂಲಕ ನುಡಿಸುತ್ತಾರೆ.
ಭಕ್ತಿ, ದೇಶಪ್ರೇಮ ನಾದ:
ಸಂತ ಶಿಶುನಾಳ ಶರೀಫ ತತ್ವ ಪದಗಳನ್ನು ಅತೀ ಮಾರ್ಮಿಕವಾಗಿ ಭಕ್ತಿಯ ಅಲೆಯಲ್ಲಿ ತೇಲುವ ಹಾಗೇ ನುಡಿಸುತ್ತಾರೆ ಕಂಡಕ್ಟರ್ ನದಾಫ್ ಸರ್. ಅಷ್ಟೇ ಅಲ್ಲದೇ ನಂಬಿದೆ ನಿನ್ನಾ ನಾಗಾಭರಣ, ಕಾಯೋ ಹರಣ, ಗುಡಿಯ ನೋಡಿರಣ್ಣ, ದೇಹದ ಗುಡಿಯ ನೋಡಿರಣ್ಣ ಎಂಬಿತ್ಯಾದಿ ಭಕ್ತಿಗೀತೆ, ಹಾವು ತುಳಿದೀನಿ, ಬಿದ್ದಿಯಬ್ಬೇ ಮುದುಕಿ, ಹಾವು..ತರವಲ್ಲ ತಗಿ ನಿನ್ನ ತಂಬೂರಿ ಎಂಬ ಇತ್ಯಾದಿ ಇತ್ಯಾದಿ ಜನಪ್ರಿಯ ಗೀತೆಗಳು ಇವರು ನಾಸಿಕದ ಧ್ವನಿಯಲ್ಲಿ ಕೇಳುಗಳು ಕರ್ಣಗಳು ಪಾವನಗೊಳ್ಳುತ್ತವೆ. ನಾಡಗೀತೆ, ದೇಶಭಕ್ತಿ ಹಾಗೂ ರಾಷ್ಟ್ರಗೀತೆಗಳನ್ನು ಸಹಿತ ಇವರು ಕೊಳಲನ್ನು ನಾಸಿಕದ ಮೂಲಕ ನುಡಿಸಿ ನೆರೆದ ಜನರಲ್ಲಿ ದೇಶ ಪ್ರೇಮ ಉಕ್ಕಿಸುವ ಕೆಲವನ್ನು ಇವರು ಮಾಡುತ್ತಿದ್ದಾರೆ.
ಕನ್ನಡದೊಟ್ಟಿಗೆ ಹಿಂದಿ ಚಲನಚಿತ್ರ ಗೀತೆಗಳಾದ ಮನ್ ಡೋಲಿರೆ, ಆನೆ ಸೇ ಉಸ್ಕೆ ಆಯೆ ಬರ್ಹಾ, ತೆರೆ, ಮೇರೆ ಬೀಚ್ ಮೇ ಕೈಸಾ ಹೈ ಬಂಧನ್ ಸೇರಿದಂತೆ ಇತರೆ ಹಿಂದಿ ಚಿತ್ರಗೀತೆಗಳನ್ನು ನುಡಿಸುತ್ತಾರೆ.
ಎಲ್ಲೆಲ್ಲಿ ಪ್ರದರ್ಶನ:
ಇವರ ನಾಸಿಕ ಕೊಳಲು ವಾದನ ಸದ್ದು ನಾಡು, ಹೊರ ರಾಜ್ಯದ ವಿವಿಧೆಡೆ ಪಸರಿಸಿದೆ. ಬೆಳಗಾವಿ, ರಾಯಚೂರು, ಬೆಂಗಳೂರು, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಗೋವಾ, ಮಹಾರಾಷ್ಟ್ರ, ಆಂದ್ರಪ್ರದೇಶ ಹೀಗೆ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಅಷ್ಟೇ ಅಲ್ಲದೇ  ಮೈಸೂರು ದಸರಾ, ಕನ್ನಡ ಸಾಹಿತ್ಯ ಸಮ್ಮೇಳನ, ಕಿತ್ತೂರ ಉತ್ಸವ, ಧಾರವಾಡದ ಕೃಷಿ ವಿವಿಯ ಕೃಷಿ ಮೇಳ ಇದೀಗ ಧಾರವಾಡದಲ್ಲಿ ನಡೆಯುತ್ತಿರುವ ೮೪ನೇ ಅಖಿಲ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಅಲ್ಲಿಯು ನಮ್ಮ ನಾಸಿಕ ಕೊಳಲು ನಾದದ ನಿನಾದವರನ್ನು ಹರಡಲು ಸನ್ನದ್ಧರಾಗಿದ್ದಾರೆ.
ನಾಸಿಕ ನಾದಕ್ಕೆ ಬಂದ ಪ್ರಶಸ್ತಿಗಳು:
ಚಿಕ್ಕೋಡಿ ತಾಲೂಕಿನ ದುಳಗನವಾಡಿಯ ರಂಗದರ್ಶನ ಗ್ರಾಮೀಣ ವಿಕಾಸ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದ ಕೊಳಲು ಕಿಶೋರ ಪ್ರಶಸ್ತಿ ಹಾಗೂ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯು ಕರ್ನಾಟಕ ರತ್ನಶ್ರೀ ಪ್ರಶಸ್ತಿಗಳು ಇವರ ನಾದಕ್ಕೆ ಮನಸೋತು ಬಂದಿವೆ. ಹೀಗೆ ಇವರ ನಾದ ಅರಸಿ ಮತ್ತಷ್ಟು ಪ್ರಶಸ್ತಿಗಳು ಬರಲಿ ಎಂಬುವುದು ಎಲ್ಲರ ಆಶಯ. ಇವರ ಈ ಕಲೆಗೆ ಸಾರಿಗೆ ಇಲಾಖೆ ಕೂಡಾ ಸಾಥ್ ನೀಡುತ್ತಿದ್ದು, ಬೇಕೆಂದಾಗ ರಜೆ ನೀಡಿ ಕಳುಹಿಸುತ್ತಾರೆ, ಕಲೆಗೆ ಪ್ರೋತ್ಸಾಹ ತುಂಬುತ್ತಿದೆ. ಕಂಡಕ್ಟರ್ ವೃತ್ತಿ ಒತ್ತಡದ ವೃತ್ತಿ. ಈ ಒತ್ತಡ ವೃತ್ತಿಯ ಮಧ್ಯೆಯೂ ಒಂದು ವಿಶಿಷ್ಟ ಕಲೆಯ ಮೂಲಕ ನಾಡಿನಲ್ಲಿ ಮಾತಾಗಿರುವುದು ವಿಶಿಷ್ಟವೇ ಸರಿ.

Sunday, 28 July 2019

ಅಂಗವೈಕಲ್ಯತೆ ಶಾಪವಲ್ಲ



ಮಂಜುನಾಥ ಗದಗಿನ
ಅಂಗವೈಕಲ್ಯತೆ ಶಾಪವಲ್ಲ, ಅದು ವರ ಎಂಬ ಮಾತು ಈ ಮಕ್ಕಳಿಗೆ ಅನ್ವಯಿಸುತ್ತದೆ. ಸಾಧಿಸುವ ಆತ್ಮಸ್ಥೈರ್ಯವೊಂದಿದ್ದರೆ ಎಂಬತಹ ಕಷ್ಟಗಳು ತಲೆಬಾಗುತ್ತವೆ. ಈ ಮಾತಿಗೆ ನಿದರ್ಶನ ಎಂಬಂತೆ ಈ ಅಂಧ ಮಕ್ಕಳು ನಮ್ಮ ಕಣ್ಮುಂದೆ ಸಾಧಿಸಿ ನಿಂತಿದ್ದಾರೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರಿನ ಜ್ಞಾನ ಸಿಂಧು ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ನಾವ್ಯಾರಿಗೂ ಕಮ್ಮಿ ಇಲ್ಲ ಎಂಬಂತಹ ಸಾಧನೆ ಮಾಡಿ ತೋರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ದೇಶದ ಪ್ರಥಮ ಶಾಲೆ:
ಅದು ೨೦೧೦ನೇ ಇಸ್ವಿ. ಈ ವರ್ಷದಲ್ಲೆ ದೇಶದ ಪ್ರಥಮ ಅಂಧ ಮಕ್ಕಳ ಯೋಗ ಶಾಲೆ ಆರಂಭವಾಯಿತು. ಸ್ಥಳೀಯ ಯಚ್ಚರೇಶ್ವರ ಮಠದ ಸ್ವಾಮೀಜಿ ಪ್ರೇರಣೆ ಹಾಗೂ ಬೆಂಗಳೂರಿನ ನೆಸ್ಟ್ ಸಂಸ್ಥೆಯ ನೆರವಿನಿಂದ ಕೆಲೂರ ಕುಟುಂಬದಿಂದ ಆರಂಭಗೊಂಡಿತು. ಈ ಶಾಲೆ ಆರಂಭಕ್ಕೆ ಯೋಗಪಟು ಶಿವಾನಂದ ಕೆಲೂರ, ಅವರ ತಾಯಿ ತುಳಸಮ್ಮ ಸೇವೆ ಸ್ಮರಣೀಯ. ಶಾಲೆ ಆರಂಭಿಸಿದಾಗ ೫ ವಿದ್ಯಾರ್ಥಿಗಳು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಈಗ ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು, ೧೪ ಬೋಧಕ ಸಿಬ್ಬಂದಿ ಇದ್ದಾರೆ. ಎಲ್ಲ ಅಂಧ ಮಕ್ಕಳ ಶಾಲೆಯಲ್ಲಿರುವಂತೆಯೇ ಇಲ್ಲೂ ಮಕ್ಕಳಿಗೆ ಬ್ರೈಲ್ ಆಧಾರಿತ ಓದು-ಬರಹ, ಕಂಪ್ಯೂಟರ್ ತರಬೇತಿ, ಚಲನವಲನ ತರಬೇತಿ, ಕರಕುಶಲ, ಕ್ರೀಡೆ, ಸಂಗೀತ ಶಿಕ್ಷಣದ ಜೊತೆಗೆ ಯೋಗ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ೬ರಿಂದ ೧೮ ವರ್ಷ ವಯಸ್ಸಿನ ವಿಕಲಚೇನ ಮಕ್ಕಳು ಈ ಶಾಲೆಯಲ್ಲಿ ಇದ್ದಾರೆ. ೧ರಿಂದ ೯ನೇ ತರಗತಿಗಳು ಇಲ್ಲಿ ನಡೆಯುತ್ತಿವೆ. ಶಾಲೆಯಲ್ಲಿ ಮಕ್ಕಳಿಗೆ ಸ್ಪರ್ಶಾನುಭವದ ಮೂಲಕ ಯೋಗ ಹಾಗೂ ಮಲ್ಲಕಂಬ ತರಬೇತಿ ಕೊಡುತ್ತಿದ್ದಾರೆ.
ಉತ್ತಮ ಸಾಧನೆ:
೨೦೧೦, ೨೦೧೧ ಮತ್ತು ೨೦೧೨ರಲ್ಲಿ ನಿರಂತರವಾಗಿ ಮೂರು ಬಾರಿ ಮೈಸೂರು ದಸರಾದಲ್ಲಿ ಪಾಲ್ಗೊಂಡ ಗರಿಮೆ ಈ ಮಕ್ಕಳದ್ದು,  ೨೦೧೪ ಮತ್ತು ೨೦೧೫ರಲ್ಲಿ ಚಾಲುಕ್ಯ ಉತ್ಸವದಲ್ಲಿ, ೨೦೧೨ರಲ್ಲಿ ರನ್ನ ಉತ್ಸವದಲ್ಲಿ, ೨೦೧೬ರಲ್ಲಿ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ೨೦೧೫ರಲ್ಲಿ ಮತ್ತು ೨೦೧೭ರಲ್ಲಿ ನಡೆದ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ಸಾಧಕ ವಿದ್ಯಾರ್ಥಿಗಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸಿದ್ದರು. ದೆಹಲಿಯಲ್ಲಿ ವಿಶ್ವ ಯೋಗ ದಿನ, ಯೋಗ ಸಪ್ತಾಹ ಮತ್ತು ಅಂತಾರಾಷ್ಟ್ರೀಯ ಯೋಗ ಹಬ್ಬದಲ್ಲಿ ಈ ಶಾಲೆ ಮಕ್ಕಳು ಪ್ರದರ್ಶನ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಹೊರ ನಾಡು ಕನ್ನಡಿಗರ ಸಮ್ಮೇಳನ, ಯೋಗ ಒಲಿಂಪಿಯಾಡ, ೨೦೧೭ರಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಾಗೂ ಉದಯ ವಾಹಿನಿಯ ಲಿಟಲ್ ಚಾಂಪ್ಸ್ ವೇದಿಕೆಯಲ್ಲಿ ಶಾಲೆಯ ಮಕ್ಕಳು ಯೋಗ ಮತ್ತು ಮಲ್ಲಕಂಬ ಪ್ರದರ್ಶನ ನೀಡಿದ್ದಾರೆ. ೨೦೧೨ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಶಾಲೆಯ ಮಕ್ಕಳು ದ್ವಿತೀಯ ಮತ್ತು ತೃತೀಯ ಬಹುಮಾನ ಗಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ೪೦ ದೇಶಗಳಿಂದ ಬಂದಿದ್ದ ಸಾಮಾನ್ಯ (ಕಣ್ಣು ಕಾಣುವ) ಸ್ಪರ್ಧಾಳುಗಳುಗಳ ಎದುರು ಜ್ಞಾನಸಿಂಧು ಶಾಲೆಯ ೮ ಅಂಧ ವಿದ್ಯಾರ್ಥಿಗಳು ಈ ಸಾಧನೆ ಮೆಚ್ಚುವಂತಹದ್ದು.
ಪ್ರಶಸ್ತಿಗಳ ಗರಿ:
೨೦೧೦ರಲ್ಲಿ ವಿದ್ಯಾರ್ಥಿಗಳಾದ ಸರಸ್ವತಿ ಕಬಾಡರ, ಭೀಮಸಿ ಕಬಾಡರ, ಅಯ್ಯಪ್ಪ ಅಂತಕನವರಗೆ ಯೋಗ ಸಿರಿ’ ಪ್ರಶಸ್ತಿ ಲಭಿಸಿದೆ. ೨೦೧೧ರಲ್ಲಿ ಶಿರಡಿ ಸಾಯಿಬಾಬಾ ಟ್ರಸ್ಟ್ ರಾಷ್ಟ್ರೀಯ ಪ್ರಶಸ್ತಿ, ಬಾಗಲಕೋಟೆ ಹಬ್ಬ ಉತ್ಸವ ಸಮಿತಿಯಿಂದ ಕಲಾ ಭೂಷಣ ಪ್ರಶಸ್ತಿ ಹಾಗೂ ಬಸವರಾಜ ಹೊರಟ್ಟಿ ಅವರ ಅವ್ವ ಟ್ರಸ್ಟ್ ಪ್ರಶಸ್ತಿಗಳು ಸಂದಿವೆ. ೨೦೧೬ರಲ್ಲಿ ಶಾಲೆಯ ಸಂಚಾಲಕಿ ತುಳಸಮ್ಮ ಕೆಲೂರ ಅವರಿಗೆ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ೨೦೧೬ರಲ್ಲಿ ಕಲಬುರ್ಗಿಯ ದಿಗ್ಗಾಂವಿ ಸ್ಮರಣಾರ್ಥ ಟ್ರಸ್ಟ್‌ನ ₹೫ ಲಕ್ಷ ಮೊತ್ತದ ರಾಷ್ಟ್ರೀಯ ಕಾಯಕ ಸಿರಿ ಪ್ರಶಸ್ತಿ. ₹೫೦ ಸಾವಿರ ಮೊತ್ತದ ಕಾಯಕ ಯೋಗಿ ಪ್ರಶಸ್ತಿ ಶಾಲೆಯ ಸಂಚಾಲಕಿ ತುಳಸಮ್ಮ ಅವರಿಗೆ ಲಭಿಸಿದೆ. ವಿದ್ಯಾರ್ಥಿ ಮಣಿಕಂಠನಿಗೆ ೨೦೧೭ರ ಮಕ್ಕಳ ಸಮ್ಮೇಳನದಲ್ಲಿ ಮುಖ್ಯ ಅತಿಥಿ ಸ್ಥಾನ ನೀಡಿ, ಚಿಣ್ಣರ ಚಿನ್ನ ಪ್ರಶಸ್ತಿ, ೨೦೧೭ರ ಜುಲೈನಲ್ಲಿ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಮಣಿಕಂಠನಿಗೆ ಒಲಿದಿದೆ. ದೆಹಲಿಯಲ್ಲಿರುವ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ೨೦೧೮ರಲ್ಲಿ ಈ ಶಾಲೆಗೆ ಪ್ರಶಂಸಾ ಪತ್ರ ನೀಡಿದೆ. ಈಚೆಗೆ ಪುಟ್ಟಪತಿ ಶಿರಡಿ ಸಾಯಿ ಬಾಬಾ ಸಂಸ್ಥೆಯಿಂದ ಪ್ರಶಸ್ತಿ ಕೂಡಾ ದೊರೆತಿದೆ.
ಕರೆ ತರುತ್ತಾರೆ:
ಈ ಶಾಲೆ ವತಿಯಿಂದ ಹಳ್ಳಿ ಹಳ್ಳಿಗಳಿಗೆ ಹೋಗಿ ನಿಮ್ಮಲ್ಲಿ ಅಂಧ ಮಕ್ಕಳು ಇದ್ದರೆ ಅವರನ್ನು ನಮ್ಮ ಶಾಲೆಗೆ ಕರೆದುಕೊಂಡು ಬನ್ನಿ ನಾವು ವಿದ್ಯಾಭ್ಯಾಸ ಕೊಡುತ್ತೇವೆ ಎಂದು ಪ್ರಚಾರ ಮಾಡಿ ಮಕ್ಕಳನ್ನು ಕರೆತರುವ ಕೆಲಸವನ್ನು ಈ ಶಾಲೆಯ ಸಿಬ್ಬಂದಿ ಮಾಡುತ್ತಿದೆ. ಅಷ್ಟೇ ಅಲ್ಲದೇ ಜಾತ್ರೆ, ಮತ್ತೀತ್ತರ ಸಭೆ ಸಮಾರಂಭಗಳಲ್ಲೂ ಪ್ರಚಾರ ಮಾಡಿ ಅಂಧ ಮಕ್ಕಳನ್ನು ಕರೆ ತಂದು ಉಚಿತ ಶಿಕ್ಷಣ ನೀಡಿ ಸಾಧಕ ಮಕ್ಕಳನ್ನಾಗಿ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಅದೇಷ್ಟೋ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಪ್ರದರ್ಶನ ನೀಡಿ ಸೈ ಅನಿಕೊಂಡಿದ್ದಾರೆ. ಪ್ರತಿಯೊಬ್ಬರಲ್ಲೂ ಒಂದೊಂದು ಕಲೆ ಇರುವುದು ವಿಶೇಷ.
ನಿಮ್ಮ ಕಾರ್ಯಕ್ರಮಗಳಿಗೆ ಸ್ಟಾರ್ ನಟರನ್ನು ಕರೆ ತರುವ ಬದಲು, ಈ ಮಕ್ಕಳನ್ನು ಕರೆಸಿ ಪ್ರದರ್ಶನ ನೀಡಿ, ಆ ಮಕ್ಕಳಿಗೆ ಆರ್ಥಿಕ ಸಹಾಯವೂ ಆಗುತ್ತದೆ. ಮಕ್ಕಳ ಕಲೆ ಪ್ರದರ್ಶನಕ್ಕೆ ಒಂದು ವೇದಿಕೆಯೂ ದೊರೆಯುತ್ತವೆ ಎಂಬ ಮಾತು ಜನ ಸಾಮಾನ್ಯರದ್ದು.

Monday, 22 July 2019

ಕರ್ ನಾಟಕಾ ಡ್ರಾಮಾ

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..
ಸರ್ಕಾರ ಉಳಿಸೋಣು..ಮೇಲೆ ಕುಂತವನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು...
ಲಗಾಮು ಸ್ಪೀಕರ್ ಕೈಲಿ..ನಾವೇನ ಮಾಡೋಣ..
ಎಲ್ಲಾರು ಕಿವಿ ಮುಚ್ಕೊಂಡ ಟಿವಿ ನೋಡೋಣ...😀

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ವಿಪಗೆ ರೂಲಯಾವುದು ಯಾವ್ದು, ಸದನಕ್ಕೆ ಮಿತಿಯಾವ್ದು..
ಆರೋಪದಲ್ಲಿ ನಿಜ ಯಾವ್ದು..ಮಾತಾಡೋದ್ರಲ್ಲಿ ಕರೇ ಯಾವ್ದು..
ಅತೃಪ್ತರು ಮನೆಮಾತು..ವಿಪ್ ಕಾರಾಬಾತು..
ಸದನ ಕುರುಕ್ಷೇತ್ರ ಆಯ್ತು?
ಆರೋಪ ಮಾಡಿದ ಮೇಲೆ ಬಿಪಿ ಬರ್ದೇ ಇರ್ತದ..
ನಮ್ಮ ಶಾಕರು ಹಿಂಗೆ ಅಂತ ಅವ್ನ ಕೈ ಬಿಡೋಕಾಯ್ತದ..
ನಾಲಿಗೆನ ಅವರ ಕೈಲಿಲ್ಲ ನಾವೇನ್ ಮಾಡೋಣ..
ಸ್ಪೀಕರು ಹೇಳಿದಾಕ್ಷಣ ಡ್ರಾಮಾ ಆಡೋರ ಡ್ರಾಮಾ ನೋಡೋಣ....

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಒಂದು ಬಾಯಲ್ಲೂ ನೂರೆಂಟು ಸುಳ್ಲೂ...
ಇಲ್ಲೊಬ್ಬ ಸೂಪರ್ರು, ಅಲ್ಲೊಬ್ಬ ಪಾಪಲ್ರು..
ವಿಧಾನಸೌಧದ ಮೆಟಾಡೋರ್ರು..ಚಾನೆಲೂ ಓಡಿಸುತ್ತಾವ್ರು..ನೋಡಿ ಸುಸ್ತಾಗಿ ಮಲ್ಗವ್ನೆ..
ಯಾರಪ್ಪ ಎಬ್ಸೋರು..?
ಕೆಂಗಲ್ಲ ಹನಮಂತಯ್ಯ ಕಟ್ಸಿದ ಹಳೇ ವಿಧಾನಸೌಧದಲ್ಲೇ ಈ ಕಾರಬಾರು...
ಏನಾರೂ ನೋಡ್ಕೊಂಡ ಹೋಗು ಮತದಾರನೇ..ನಿಲ್ಲ ನಿನೆಲ್ಲೂ..
ಅತೃಪ್ತರು ರಾಜೀನಾಮೆ ಕೊಟ್ರೆ ನಾವೇನ್ ಮಾಡಾಣ..
ಅವರಿಗೂ ಅನರ್ಹತೆ ಬಣ್ಣ ಹಚ್ಚಿ ಆಟಾ ಆಡೋಣ...

ಸರ್ಕಾರ ಆಡ್ಸೋಣು..ಮೇಲೆ ಕುಂತೋನು..
ನಮ್ಗೆ ನಿಮಗೆ..ಯಾಕೆ ಟೆನ್ಷನ್ನು..

ಶಾಸಕ ಸ್ಥಾನಾನೆ ಟೆಂಪರ್ವರಿ ನಾವೇನ ಮಾಡಾಣ..ನಮ್ದೆ ಸರ್ಕಾರ ಉಳಿಯುಗಂಟ..ಡ್ರಾಮಾ ಆಡಾಣ...

*ಮಂಜು ಗದಗಿನ*❤

Sunday, 14 July 2019

ಖಾಸಗಿ ಶಾಲೆ ಮೀರಿಸುವ ಸರ್ಕಾರಿ ಶಾಲೆ!

ಮಂಜನಾಥ ಗದಗಿನ

ಸರ್ಕಾರಿ ಕನ್ನಡ ಶಾಲೆಗಳೋ, ಅಲ್ಲೇನ ಕಲ್ಸ್ತಾರ, ಮಾಸ್ತಗೊಳಗೆ ಏನು ಬರಂಗಿಲ್ಲ, ಇನ್ನ ನಮ್ಮ ಮಕ್ಕಳಿಗೆ ಕಲ್ಸೋದ್ರಾಗ ಅಷ್ಟ ಐತಿ ಎಂದು ಸರ್ಕಾರಿ ಕನ್ನಡ ಶಾಲೆಗಳ ಬಗ್ಗೆ ಮೂಗು ಮುರಿದು ಮಾತನಾಡುವ ಜನರೇ ಹೆಚ್ಚು. ಆದರೆ, ಇಲ್ಲೊಂದು ಶಾಲೆ ಮಾತ್ರ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ಹಾಗೆ ಸ್ಮಾರ್ಟ್ ಆಗಿ, ರಾಜ್ಯದ ಮನೆ, ಮನದ ಮಾತಾಗಿದೆ.
ಹೌದು! ಅದೇ ರಾಯಬಾಗದ ತಾಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ. ಈ ಶಾಲೆ ಇಡೀ ರಾಜ್ಯದಲ್ಲೇ ಗಮನ ಸೆಳೆಯುವಂತೆ ಮಾಡಿದ ಕೀತಿ ಸಾಹಿತಿ ಹಾಗೂ ಶಾಲೆಯ ಶಿಕ್ಷಕ ವೀರಣ್ಣ ಮಡಿವಾಳರ ಎಂಬ ಅಸಾಧಾರಣ ವ್ಯಕ್ತಿ ಸಲ್ಲುತ್ತದೆ.
ಶಾಲೆಯೊಂದು ಭಾಷಾ ಪ್ರಯೋಗಾಲಯವಾಗಬೇಕು ಎಂಬ ಅಭಿಲಾಸೆಯಿಂದ ಮಡಿವಾಳ ಅವರು ಹಲವು ವರ್ಷಗಳಿಂದ ಶ್ರಮಿಸುತ್ತಾ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳೂ ಖಾಸಗಿ ಪಬ್ಲಿಕ್ ಶಾಲೆಗಳಿಗೆ ಪೈಪೋಟಿ ನೀಡಬೇಕು ಎಂಬ ಮಹತ್ತ ಕನಸನ್ನು ಕಟ್ಟಿಕೊಂಡು ಅದೊಂದು ದಿನ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮನದಾಳವನ್ನು ಹಂಚಿಕೊಂಡರು. ಇದನ್ನು ನೋಡಿದ ಸಹೃದಯಿಗಳು ಮಡಿವಾಳರ ಕನಸಿನ ಶಾಲೆಯ ಆರಂಭಕ್ಕೆ ಕೈ ಜೋಡಿಸಿದರು. ನಂತರ ಮಡಿವಾಳ ಅವರಿಂದ ನಡೆದದ್ದು ಸ್ಮಾರ್ಟ್ ಪ್ಲಸ್ ಕ್ಲಾಸ್ ಎಂಬ ಹೊಸ ಕಲ್ಪನೆಯ ಶಾಲೆಯ ಆರಂಭ.

ಏನುದು ಸ್ಮಾರ್ಟ್ ಪ್ಲಸ್ ಕ್ಲಾಸ್:

ನಾವೇಲ್ಲ ಸ್ಮಾರ್ಟ್ ಕ್ಲಾಸ್‌ಗಳ ಬಗ್ಗೆ ಕೇಳಿದ್ದೇವೆ. ಆದರೆ, ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ಪರಿಕ್ಪನೆ ಮಡಿವಾಳ ಅವರದ್ದು. ಸ್ಮಾರ್ಟ್ ಕ್ಲಾಸ್‌ನಲ್ಲಿ ಮಕ್ಕಳಿಗೆ ಪಿಪಿಟಿ(ಪ್ರಜಂಟೆಶನ್ ಪವರ್ ಪಾಯಿಂಟ್) ಮೂಲಕ ಮಕ್ಕಳಿಗೆ ಪಾಠ ಭೋದನೆ ಮಾಡಲಾಗುತ್ತಿದೆ. ಆದರೆ, ಸ್ಮಾರ್ಟ್ ಪ್ಲಸ್ ಕ್ಲಾಸ್‌ನಲ್ಲಿ ಒಂದು ಟಿವಿ ಹಾಗೂ ವೈರಲೇಸ್ ಇಂಟರ್ನೆಟ್ ಬಳಕೆ ಮಾಡಲಾಗುತ್ತಿದೆ. ಅಂದರೆ, ನಿಡಗುಂದಿ ಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ೪೦ ಇಂಚಿನ ಟಿವಿಯನ್ನು ಹಾಕಲಾಗಿದೆ. ಇದಕ್ಕೆ ಮೊಬೈಲ್ ಮೂಲಕ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗಿದೆ. ಈ ಮೂಲಕ ಟಿವಿಯಲ್ಲಿ ಇಂಟರ್ನೆಟ್ ಸಂಪರ್ಕ ಪಡೆದುಕೊಂಡು ಯ್ಯೂಟೂಬ್ ನಲ್ಲಿ ಮಕ್ಕಳಿಗೆ ಬೇಕಾಗ ಪಠ್ಯಗಳನ್ನು ತೋರಿಸಿ ಪಾಠ ಭೋದನೆ ಮಾಡಲಾಗುತ್ತಿದೆ. ಇದು ಪರಿಣಾಮಕಾರಿ ಕೂಡಾ ಆಗಿದೆ. ಇದೇ ಕಾರಣಕ್ಕೆ ಮಕ್ಕಳು ಬೇಸರ, ಆಯಾಸ ಮಾಡಿಕೊಳ್ಳದೇ ಉತ್ಸಾಹದಿಂದ ಕಲಿಯುತ್ತಿದ್ದಾರೆ.


ಗ್ರೀನ್ ಬೋರ್ಡ್:


ಈ ಶಾಲೆಯಲ್ಲಿ ೧ರಿಂದ ೫ನೇ ತರಗತಿ ಇದೆ. ಇಬ್ಬರೇ ಶಿಕ್ಷಕರು ಇದ್ದು, ೧೨೦ ಮಕ್ಕಳು ಕಲಿಯುತ್ತಿದ್ದಾರೆ. ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಎಲ್ಲ ಮಕ್ಕಳಿಗೂ ಗ್ರೀನ್ ಬೋರ್ಡ್‌ಗಳನ್ನು ಒದಗಿಸಲಾಗಿದೆ. ಈ ಸ್ಮಾಟ್ ಬೋರ್ಡ್ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಹೆಚ್ಚಾಗುತ್ತಿದೆ. ಈ ಶಾಲೆಯ ಮಕ್ಕಳು ಪಾಠಿ, ಪೆನ್ಸಿಲ್ ತರದೇ ಇದ್ದರೂ ನಡೆಯುತ್ತಿದೆ. ಏಕೆಂದರೆ ಗ್ರೀನ್ ಬೋರ್ಡ್ ಬಳಕೆ ಇದೆ.
ಪ್ರತಿ ಮಕ್ಕಳಿಗೂ ಖುರ್ಚಿ:
ಸರ್ಕಾರಿ ಶಾಲೆಗಳು ಯಾವುದೇ ವಿಷಯಗಳಲ್ಲೂ ಹಿಂದೆ ಬಿದ್ದಿಲ್ಲ ಎಂಬುವುದಕ್ಕೆ ಈ ಶಾಲೆ ನಿದರ್ಶನವಾಗಿದೆ. ಕನ್ನಡಾಭಿವೃದ್ಧಿ ಪ್ರಾಧಿಕಾರದವರು ನೀಡಿದ ೧ ಲಕ್ಷ ಹಣದಿಂದ ಈ ಶಾಲೆಯ ಮಕ್ಕಳಿಗೆ ಖುರ್ಚಿ ಹಾಗೂ ರೌಂಡ್ ಟೇಬಲ್‌ಗಳನ್ನು ತರಲಾಗಿದೆ. ಮಕ್ಕಳು ಈ ಖುರ್ಚಿ ಮೇಲೆ ಕುಳಿತು ಆರಾಮಾಗಿ ಪಾಠ ನೋಡಿ ಕಲಿಬಹುದಾಗಿದೆ. ಇದಷ್ಟೇ ಅಲ್ಲದೇ, ಶಾಲೆಯಲ್ಲಿ ಮಕ್ಕಳಿಗೆ ಆಗಾಗ ಚರ್ಚಾ ಸ್ಪರ್ಧೆಗಳನ್ನು ಏರ್ಪಾಡು ಮಾಡಿದಾಗ ಈ ರೌಂಡ್ ಟೇಬಲ್ ಸುತ್ತಲೂ ಖುರ್ಚಿ ಹಾಕಿ ಸುಂದವಾರ ಚರ್ಚೆಗಳು ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ. ಇದಷ್ಟೇ ಅಲ್ಲೇ ಈ ಶಾಲೆ ಮುಖ್ಯೋಪಾಧ್ಯಾಯ ಕೊಠಡಿ ಕೂಡಾ ಹೈಟೆಕ್ ಮಾಡಲಾಗಿದೆ.
ಮನರಂಜನೆಯೊಂದಿಗೆ ಭೋದನೆ:
ಸ್ಮಾರ್ಟ್ ಪ್ಲಸ್ ಕ್ಲಾಸ್ ಮೂಲಕ ಈ ಶಾಲೆಯಲ್ಲಿ ಮನರಂಜನೆಗೂ ಅವಕಾಶ ಇದೆ. ಪಾಠ ಬೋಧನೆ ಆರಂಭಕ್ಕೂ ಮುನ್ನ ೧೦ರಿಂದ ೧೫ ನಿಮಿಷಗಳ ಕಾಲ ಮಕ್ಕಳಿಗೆ ಇಷ್ಟವಾದ ಹಾಡುಗಳನ್ನು ಟಿವಿಯಲ್ಲಿ ಹಾಕಿ ಅವರಿಂದ ನೃತ್ಯ ಮತ್ತೀತ್ತರ ಚಟುವಟಿಕೆಗಳನ್ನು ಮಾಡಿಸುವ ಮೂಲಕ ಮಕ್ಕಳ ಮನಸ್ಸನ್ನು ಸಂತಸ ಪಡಿಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಈ ಮೂಲಕ ಮಕ್ಕಳು ಕಲಿಕೆಯಲ್ಲಿ ಆಸಕ್ತಿ ಹೊಂದುತ್ತಿದ್ದಾರೆ. ನಂತರ ಕಲಿನಲಿ-ನಲಿಕಲಿ ಯೋಜನೆ ಮೂಲಕ ಮಕ್ಕಳಿಗೆ ಬೋಧನೆ ಮಾಡಲಾಗುತ್ತಿದೆ. ಇನ್ನೂ ತಿಂಗಳಿಗೆ ಮಕ್ಕಳ ಚಿತ್ರಗಳನ್ನು ಇಲ್ಲಿ ತೋರಿಸಲಾಗುತ್ತಿದೆ. ಹೀಗಾಗಿ ಈ ಶಾಲೆಯಲ್ಲಿ ಜಾಗತಿಕ ಮಕ್ಕಳ ಶಿಕ್ಷಣ ನೀಡಲಾಗುತ್ತಿದೆ.ಇದರಿಂದ ಈ ಶಾಲೆ ರಾಜ್ಯದಲ್ಲೇ ಮಾದರಿ ಶಾಲೆಯಾಗಿ ಹೊರ ಹೊಮ್ಮಿದೆ.
ಎರಡನೇ ಯೂನಿಟ್ ಆರಂಭ:
ಸ್ಮಾರ್ಟ್ ಪ್ಲಸ್ ಕ್ಲಾಸ್‌ನಡಿಯಲ್ಲಿ ಎರಡು ಯೂನಿಟ್‌ಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಬೆಂಗಳೂರಿನ ಶಶಿಧರ ಟಿ.ಎಂ ಹಾಗೂ ಚನ್ನಪಟ್ಟಣದ ಯತೀಶ ಚಂದ್ರ ಅವರು ಕೊಟ್ಟ ಆರ್ಥಿಕ ನೆರವಿನಿಂದ ಪ್ರಥಮ ಯೂನಿಟ್ ಕ್ಲಾಸ್‌ನಡಿಯಲ್ಲಿ ಡಿಜಿಟಲ್ ಪಾಠ ಬೋಧನೆ ಮಾಡಲಾಗುತ್ತಿದೆ. ಒಂದನೆ ಯೂನಿಟ್‌ನಲ್ಲಿ ೪೦ ಇಂಚಿನ ಟಿವಿ ಹೊಂದಲಾಗಿದ್ದು, ಎರಡನೇ ಯುನಿಟ್‌ನಲ್ಲಿ ೫೦ ಇಂಚಿನ ಟಿವಿ ತರಲಾಗುತ್ತಿದೆ. ಈ ಟಿವಿಯಲ್ಲಿ ಇನ್ನಷ್ಟು ಹೆಚ್ಚಿ ಎಚಡಿ ಹಾಗೂ ಬಹು ಆಯ್ಕೆಗಳು ಇರಲಿದ್ದು, ಮತ್ತಷ್ಟು ಸ್ಮಾರ್ಟ್ ಪ್ಲಸ್ ಕ್ಲಾಸ್ ನಡೆಸಲು ಅನುಕೂಲವಾಗಲಿದೆ ಎನ್ನುತ್ತಾರೆ ವೀರಣ್ಣ ಮಡಿವಾಳ ಅವರು. ಇದಷ್ಟೇ ಅಲ್ಲದೇ ಈ ಶಾಲೆ ಮೂರು ವರ್ಷದಲ್ಲಿ ಅದ್ಭುತ್‌ವಾಗಿ ಬೆಳೆದು ಖಾಸಗಿ ಶಾಲೆಗಳ ಮಕ್ಕಳು ಈ ಶಾಲೆಗೆ ಬರುವಂತಾಗಿದೆ. ವರ್ಷದಿಂದ ವರ್ಷಕ್ಕೆ ಈ ಶಾಲೆಗಳ ಮಕ್ಕಳ ಸಂಖ್ಯೆ ಕೂಡಾ ವೃದ್ಧಿಸುತ್ತಿದೆ. ಇಂತಹ ಶಾಲೆಗಳನ್ನು ರಾಜ್ಯದಲ್ಲೇ ಎಲ್ಲೆಡೆ ನಿರ್ಮಾಣವಾದರೆ, ಸರ್ಕಾರಿ ಶಾಲೆಗಳನ್ನು ಉಳಿಸಿ ಎಂಬ ಮಾತು ತಾನಾಗಿಯೇ ಮಾಯವಾಗಿ, ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚುವುದು ಎಂಬುವುದು ಶಿಕ್ಷಣ ಪ್ರೇಮಿಗಳ ಆಶಯ.
--

ಸರ್ಕಾರಿ ಶಾಳೆಗಳಲೂ ಕೂಡಾ ಖಾಸಗಿ ಶಾಲೆಗಳನ್ನು ಮೀರಿಸಬೇಕು ಎಂಬ ಕನಸು ನನ್ನದಾಗಿತ್ತು. ಈ ಕನಸಿನಡಿಯಲ್ಲೇ ನಾನು ಸ್ಮಾರ್ಟ್ ಪ್ಲಸ್ ಕ್ಲಾಸ್ ಆರಂಭಿಸಿದ್ದೇನೆ. ನನ್ನ ಈ ಪರಿಕ್ಪನೆ ನೋಡಿ ನಾಲ್ಕು ಸರ್ಕಾರಿ ಶಾಲೆಗಳು ಈ ಸ್ಮಾರ್ಟ್ ಪ್ಲಸ್ ಕ್ಲಾಸ್ ನಿರ್ಮಾಣಕ್ಕೆ ಮುಂದಾಗಿವೆ. ರಾಜ್ಯದಲ್ಲ ಎಲ್ಲ ಶಾಲೆಗಳು ಈ ರೀತಿ ನಿರ್ಮಾಣವಾಗಬೇಕು ಎಂಬ ಆಶಯ ನನ್ನದು.
-ವೀರಣ್ಣ ಮಡಿವಾಳರ, ಶಿಕ್ಷಕ.

ಆರು ಸರ್ಕಾರಿ ನೌಕ್ರಿ ಪಡೆದ ವಿಕಲಚೇತನ ಸಾಧಕಿ

  ಮಂಜುನಾಥ ಗದಗಿನ -- ಇಂದಿನ ಸ್ಪರ್ಧಾ ತ್ಮಕ ಯುಗದಲ್ಲಿ ಸರ್ಕಾರಿ ನೌಕರಿ ಪಡೆದುಕೊಳ್ಳುವುದು ಎಲ್ಲರ ಕನಸು ಹಾಗೂ ಗುರಿ ಹೌದು. ಆದರೆ, ಸರ್ಕಾರಿ ನೌಕರಿ ಪಡೆಯಬೇಕು...